ಹೊಸದು ಕಾಲಿರಿಸುವ ಸಮಯ


Team Udayavani, Apr 14, 2021, 12:26 PM IST

Untitled-1

“ಯುಗ’ ಎಂದರೆ ಶಕ, “ಆದಿ’ ಎಂದರೆ “ಆರಂಭ’ಎಂಬ ಅರ್ಥವನ್ನು ಯುಗಾದಿ ಕೊಡುತ್ತದೆ. ಪ್ರಸ್ತುತ ನಾವೆಲ್ಲರೂ ಕಲಿಯುಗದಲ್ಲಿ ಬದುಕುತ್ತಿದ್ದೇವೆ. ಶ್ರೀಕೃಷ್ಣ ಪರಮಾತ್ಮನು ತನ್ನ ಅವತಾರವನ್ನು ಮುಗಿಸಿ ಹೊರಟಂದಿನಿಂದ “ಕಲಿಯುಗ’ ಆರಂಭಗೊಂಡಿದೆ.

ಬ್ರಹ್ಮ ಸೃಷ್ಟಿಯನ್ನು ನಿರ್ಮಿಸಿದ ದಿನ, ಶ್ರೀರಾಮಚಂದ್ರ ವಾಲಿಯನ್ನು ಸಂಹರಿಸಿದದಿನ, ದುರುಳ ರಾವಣನನ್ನು ಕೊಂದುರಾಮನು ಅಯೋಧ್ಯೆಗೆ ಹಿಂದಿರುಗಿದ ದಿನವಾಗಿದೆ. ಯುಗಾದಿಯು ಭಾರತೀಯರದೃಷ್ಟಿಯಲ್ಲಿ ನೂತನ ವರ್ಷದ ಹೊಸದಿನ.ಈ ಹೊಸತನಕ್ಕೆ ಕಾಲವೇ ಸ್ಪಂದಿಸುತ್ತದೆ.ಹೊಸ ವರುಷಕ್ಕೆಸ್ವಾಗತ ಕೋರುವಂತೆ ಬೇವಿನಮರ ಚಿಗುರುತ್ತದೆ.

ಹೂ ಬಿಟ್ಟು ಫ‌ಲಭರಿತವಾಗುತ್ತದೆ. ಚಿಗುರೆಲೆಯನ್ನು ಸವಿದ ಕೋಗಿಲೆಯುಪಂಚಮದ ಇಂಚರದಿ ಸುಶ್ರಾವ್ಯ ಕಂಠದಿಂದಕೂಗುತ್ತದೆ. ವಸಂತ ಕಾಲದ ಆಗಮನದಿಂದಪ್ರಕೃತಿ ಹೂ ಹಣ್ಣು ಮೈದುಂಬಿ ತನ್ನೆಡೆಗೆಆಕರ್ಷಿಸುವ ಪರ್ವ ಕಾಲವಿದು.ಪ್ರಕೃತಿಯು ತನ್ನ ಮುಪ್ಪಾದ ಎಲೆಗಳನ್ನುಉದುರಿಸಿ ಚಿಗುರೆಲೆಗಳನ್ನು ತೋರುವಾಗಮನುಷ್ಯನು ಹೊಸ ವರುಷವನ್ನುಆಚರಿಸುತ್ತಾನೆ. ಪ್ರಕೃತಿಯ ಹೊಸ ಚೈತನ್ಯಮನುಷ್ಯನಿಗೂ ಚೈತನ್ಯದಾಯಕವಾಗಿದೆ.ವಸಂತನ ಆಗಮನವೆಂದರೆಸಂವತ್ಸರಾಧಿಪತಿಯ ಪಾತ್ರದ ಅನಾವರಣ.ಹೊಸ ಹಸಿರಿನ ಕಲಾ ನಾಯಕನಒಡ್ಡೋಲಗದ ಶುಭ ಮುಹೂರ್ತವೋಎಂಬಂತೆ ಯುಗಾದಿ ಸಾಗಿ ಬಂದಿದೆ.

ಚಾಂದ್ರಮಾನ ಯುಗಾದಿಯನ್ನು ಸಂವತ್ಸರಾರಂಭ ಎಂದು ಕರೆಯಲಾಗುತ್ತದೆ.ಯುಗಾದಿ ಹಬ್ಬವನ್ನು ಭಾರತದ ಆಂಧ್ರ ಪ್ರದೇಶ, ಕರ್ನಾಟಕ, ಮಹಾರಾಷ್ಟ್ರಗಳಲ್ಲಿ ಪ್ರಮುಖವಾಗಿ ಆಚರಿಸಲಾಗುತ್ತದೆ. ಆಂಧ್ರ ಪ್ರದೇಶದವರು ಚೈತ್ರ ಶುದ್ಧ ಪಾಡ್ಯಮಿಯಂದು ಯುಗಾದಿಯನ್ನು ಆಚರಿಸುತ್ತಾರೆ.

ಯುಗಾದಿಗೆ ವಿಶೇಷ ಭಕ್ಷ್ಯ :

ಯುಗಾದಿ ಹಬ್ಬಕ್ಕೆ ಕರ್ನಾಟಕದಲ್ಲಿ ವಿಶೇಷ ಭಕ್ಷ್ಯವಾಗಿ ಒಬ್ಬಟ್ಟು ಅಥವಾಹೋಳಿಗೆಯನ್ನು ಮಾಡಲಾಗುತ್ತದೆ. ಅದರಲ್ಲಿಯೂ ವಿವಿಧ ರುಚಿಯ ಒಬ್ಬಟ್ಟು ಇಲ್ಲಿನ ಮತ್ತೂಂದು ವಿಶೇಷ. ಕಾಯಿ ಹೋಳಿಗೆ, ಬೇಳೆ ಹೋಳಿಗೆ, ಸಕ್ಕರೆ ಹೋಳಿಗೆ, ಮಂಡಿಗೆ ಇತ್ಯಾದಿಗಳನ್ನುತಯಾರಿಸಿ ಸವಿದರೆ, ಆಂಧ್ರಪ್ರದೇಶದವರುಭಕ್ಷ್ಯಾಲು ಅಥವಾ ಬೊಬ್ಬಟ್ಲು (ಪೊಲೆಲು)”ಪಚ್ಚಡಿ’ಯನ್ನು ತಯಾರಿಸಿ ಸವಿಯುವ ಸಂಪ್ರದಾಯವಿದೆ.

ಆಚರಣಾ ಕ್ರಮ :

ಯುಗಾದಿ ಹಬ್ಬದ ಆಚರಣೆ ಚಾಂದ್ರಮಾನ ಮತ್ತು ಸೌರಮಾನಎಂಬ ಎರಡು ಪದ್ಧತಿಗಳನ್ವಯರೂಢಿಯಲ್ಲಿದೆ. ಈ ದಿನ ಉಷಃಕಾಲದಲ್ಲಿ ಪರಮಾತ್ಮನ ಸ್ಮರಣೆ ಮಾಡುತ್ತ, ದೇವರಮನೆ, ಮನೆಯ ಮುಖ್ಯ ದ್ವಾರಗಳನ್ನುರಂಗೋಲಿ ತೋರಣಗಳಿಂದ ಸಿಂಗರಿಸಿ,ಅಭ್ಯಂಜನ ಸ್ನಾನ ಮಾಡಿ, ಹೊಸಉಡುಗೆ-ತೊಡುಗೆಗಳನ್ನು ತೊಟ್ಟು,ಹೊಸ ವರ್ಷದ ಪಂಚಾಂಗವನ್ನು ದೇವರಸಮೀಪವಿಟ್ಟು ಪೂಜಿಸಿ, ಅನಂತರ ಬೇವು-ಬೆಲ್ಲ ಸೇವಿಸಿ, ಸನ್ಮಿತ್ರರು ಸೇರಿದಸಭೆಯಲ್ಲಿ ಪುರೋಹಿತರು ಪಠಣಮಾಡುವ ಪಂಚಾಂಗ ಶ್ರವಣವನ್ನುಆಲಿಸುವುದು ರೂಢಿಯಲ್ಲಿದೆ.

ಅಂದರೆನೂರು ವರ್ಷಗಳ ಆಯುಷ್ಯ, ದೃಢಆರೋಗ್ಯ ಸಕಲ ಸಂಪತ್ತಿನ ಪ್ರಾಪ್ತಿಗಾಗಿ, ಸಕಲಾರಿಷ್ಟ ನಿವಾರಣೆಗಾಗಿ ಬೇವು-ಬೆಲ್ಲ ಸೇವನೆ ಮಾಡುತ್ತೇನೆಂದು ಹೇಳಿ ಸೇವಿಸಬೇಕು ಎಂಬುದು ನಡೆದು ಬಂದ ಪದ್ಧತಿ. ಹಿಂದೆ ಅವಿಭಕ್ತ ಕುಟುಂಬಗಳಲ್ಲಿ ಯುಗಾದಿ ಆಚರಣೆ ಬಲು ಜೋರಾಗಿ ನಡೆಯುತ್ತಿತ್ತು. ಇಂದಿಗೂ ಕರ್ನಾಟಕದಕೆಲವೆಡೆ ಅತ್ಯಂತ ವಿಜೃಂಭಣೆಯಿಂದಆಚರಿಸಲಾಗುತ್ತದೆ. ಪ್ರಸ್ತುತ ಪೇಟೆಪಟ್ಟಣಗಳಲ್ಲಿ ಹಬ್ಬದ ವಾತಾವರಣಮಾಸಿ ಹೋಗಿದೆ. ಇಂದು ಆಧುನಿಕತೆಯ ಹೊಡೆತಕ್ಕೆ ಸಿಲುಕಿದ ಮನುಷ್ಯದಿನದಿನಕ್ಕೆ ಯಾವುದಕ್ಕೂ ಸಮಯ,ವ್ಯವಧಾನಗಳಿಲ್ಲದೆ ಹಬ್ಬದ ಸಂಭ್ರಮದಸವಿಯಿಂದ ವಂಚಿತನಾಗುತ್ತಿದ್ದಾನೆ. ಮುಂದೆ ಹಾಗಾಗದಿರುವಂತೆ ಮುಂದಿನಪೀಳಿಗೆಗೆ ಯುಗಾದಿಯಂತಹಹಬ್ಬಗಳ ಕುರಿತು ತಿಳಿಸಿ ಸಂಭ್ರಮದಿಂದಹಬ್ಬವನ್ನು ಆಚರಿಸುವ ಇರಾದೆಯನ್ನುಕಲಿಸಿಕೊಡಬೇಕಾಗಿದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಪ್ರಯತ್ನಿಸೋಣ.

ಯುಗಾದಿ ಮಹತ್ವ  : ಚೈತ್ರ-ವೈಶಾಖ ಮಾಸ ಕೇವಲ ಪ್ರಾಕೃತಿಕವಾಗಿ ಮಹತ್ವವುಳ್ಳಕಾಲವಲ್ಲದೆ ಐತಿಹಾಸಿಕ, ಸಾಂಸ್ಕೃತಿಕವಾಗಿಯೂ ಮಹತ್ವಹೊಂದಿದೆ. ಶ್ರೀರಾಮನ ಜನನಚೈತ್ರ ಶುದ್ಧ ನವಮಿಯಂದು,24ನೇ ತೀರ್ಥಂಕರ ಮಹಾವೀರ ಸ್ವಾಮಿಯ ಜನನ ಚೈತ್ರಶುದ್ಧ ತ್ರಯೋದಶಿಯಂದು,ಬುದ್ಧ ಜಯಂತಿ ವೈಶಾಖಪೂರ್ಣಿಮೆಯಂದು ಹೀಗೆಮಹಾನುಭಾವರು ಜನಿಸಿದ ಪುಣ್ಯ ಕಾಲವಾದ ಈ ಮಾಸವು ವೈಶಿಷ್ಟ್ಯದಿಂದ ಕೂಡಿದೆ.

ಚಾಂದ್ರಮಾನ ಯುಗಾದಿಕಳೆದ ನಂತರವೇ ಸೌರಮಾನಯುಗಾದಿ ಬರುತ್ತದೆ. ಇದುಸೌರಮಾನದ ಪ್ರಕಾರ ವರ್ಷದಆರಂಭ, ಸೌರಮಾನದಮೇಷ ಮಾಸಾರಂಭ,ರವಿಯು ಮೇಷ ರಾಶಿಯನ್ನುಪ್ರವೇಶಿಸುವುದರಿಂದ “ಮೇಷ ಸಂಕ್ರಮಣ’ ಎಂದು ಕರೆಯಲ್ಪಡುತ್ತದೆ. ಅಂದಿನಿಂದಸೌರ ವರ್ಷದ ಗಣನೆ ಆರಂಭ.ಆ ದಿನವನ್ನು “ವಿಷು’ವೆಂದು ಕರೆಯುತ್ತಾರೆ

ಟಾಪ್ ನ್ಯೂಸ್

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

voter

Vote ಮಾಡದಿದ್ದರೆ ಬ್ಯಾಂಕ್‌ ಖಾತೆಯಿಂದ 350 ರೂ. ಕಡಿತ?

gold

Gold 10 ಗ್ರಾಂ ಬೆಲೆ 74,100 ರೂ.: ಇದು ನೂತನ ದಾಖಲೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

April 17ರಂದು ಶ್ರೀರಾಮ ನವಮಿ: ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

Rama Navami 2024: April 17ರಂದು ಶ್ರೀರಾಮ ನವಮಿ- ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

Ram Ayodhya

Rama Navami 2024: ನವಮಿಗೆ ಬಾಲಕರಾಮನ ಹಣೆಗೆ ಸೂರ್ಯ ತಿಲಕ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

1-qweqwqe

Ban in Singapore; ಎವರೆಸ್ಟ್‌ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.