ಭಾರತದ ವಿಘ್ನ ಕಳೆದ ವಿನಾಯಕ


Team Udayavani, May 28, 2021, 6:30 AM IST

ಭಾರತದ ವಿಘ್ನ ಕಳೆದ ವಿನಾಯಕ

12 ವರ್ಷದ ಮಗು ಬೆಳಗ್ಗೆ ಅಮ್ಮ ಎಬ್ಬಿಸಿದಾಗ ಇಷ್ಟವಿಲ್ಲದಿದ್ದರೂ ಏಳುವುದು, ಅಮ್ಮ ಗದರಿಸಿದ್ದಕ್ಕಾಗಿ ಬ್ರಶ್‌ ಮಾಡುವುದು, ತಿಂಡಿ ತಿನ್ನುವುದು, ಶಾಲೆಯಲ್ಲಿ “ಮಿಸ್‌’ ಭಯಕ್ಕೆ ತನಗೆ ಅರ್ಥ ವಾಗದಿದ್ದರೂ ಓದಿ ಬರೆಯುವುದು, ಹೋಮ್‌ವರ್ಕ್‌ ಮಾಡುವುದು ಹೀಗೆ ತನಗೇನು ಬೇಕು ಎಂದು ಅರಿವಿಲ್ಲದ ಅಥವಾ ತನಗಿಷ್ಟವಿದ್ದಂತೆ ಇರಲು ಸ್ವಾತಂತ್ರ್ಯವಿಲ್ಲದ ವಯ ಸ್ಸದು. ಆದರೆ ಅದೇ ವಯಸ್ಸಿನಲ್ಲಿ ಆ ಹುಡುಗ ಸ್ವಾತಂತ್ರ್ಯ ಲಕ್ಷ್ಮೀಯ ಉಪಾಸನೆ ಮಾಡಿದ. ಸವಾಯಿ ಮಾಧವಸಿಂಗ್‌, ಚಾಪೇಕರ್‌ ಸಹೋದರರ ಬಗ್ಗೆ ಪ್ರೇರಣಾದಾಯಿ ಲೇಖನಗಳನ್ನು ಬರೆದ… “ಜನ್ಮಜಾತ ದೇಶಭಕ್ತ’, ಸ್ವಾತಂತ್ರ್ಯವೀರ ವಿನಾಯಕ ದಾಮೋದರ ಸಾವರ್ಕರ್‌. ಮೇ 28 ಈ ಅಸಾಮಾನ್ಯ ಪುರುಷನ ಜನ್ಮದಿನ.

ಬ್ರಿಟಿಷ್‌ ಅಧಿಕಾರಿ ರಾಂಡ್‌ನ‌ನ್ನು ವಧಿಸಿದ ಚಾಪೇಕರ್‌ ಸಹೋದರರನ್ನು ಇಡೀ ದೇಶದ ಜನ ಕೊಲೆಗಡುಕರು ಅಂತ ಕರೆದಾಗ ಇನ್ನೂ ಹದಿಹರೆಯದ ಆದಿಯಲ್ಲಿದ್ದ ಬಾಲಕ ಅದು ಕೊಲೆಯಲ್ಲ, ಸಂಹಾರ. ಚಾಪೇಕರ್‌ ಸಹೋದ ರರು ಮಾಡಿದ್ದು ರಾಕ್ಷಸನ ಸಂಹಾರ. ಅಂದಾಗ ಬ್ರಿಟಿಷ್‌ ಅಧಿಕಾರಿಗಳೇ ದಂಗಾಗಿದ್ದರು. ಆ ಪುಟ್ಟ ಬಾಲಕನ ಧೈರ್ಯ ಕಂಡು ಭಾರತೀಯರು ಮೂಕವಿಸ್ಮಿತರಾಗಿದ್ದರು. ಇವತ್ತು “ಧೈರ್ಯ’ ಅಂದಾಗ ಸಾವರ್ಕರ್‌ ನೆನಪಾಗುತ್ತಾರೆ.

ತಾಳ್ಮೆಯ ಸಾಕಾರ ಮೂರ್ತಿ…

ಆ ಅಂಡಮಾನಿನ “ಕರಿನೀರಿನ ಶಿಕ್ಷೆ’, ಐವತ್ತು ಮಂದಿ ಮಾತ್ರ ಕೂರಬಹುದಾದ ಜೈಲಿನಲ್ಲಿ ಇನ್ನೂರು ಮಂದಿಯನ್ನು ತುರುಕಿಸಿದಾಗ, ಕೈ ಮತ್ತು ಬಾಯಿಯಲ್ಲಿ ತೆಂಗಿನ ನಾರನ್ನು ಬಿಚ್ಚುವಾಗ, ಎತ್ತಿನ ಬದಲು ತನ್ನನ್ನೇ ಗಾಣಕ್ಕೆ ಕಟ್ಟಿ ದಿನಕ್ಕೆ ಮೂವತ್ತು ಪೌಂಡ್‌ (ಸುಮಾರು 13 ಲೀ.) ಗಳಷ್ಟು ಎಣ್ಣೆ ತೆಗೆ ಯುವಾಗ, ಎತ್ತರ ಮತ್ತು ಅಗಲ ಕಿರಿದಾದ ಜೈಲಿನ ಕೋಣೆಯೊಳಗೆ ಇದ್ದಷ್ಟು ದಿನ ಬಗ್ಗಿಯೇ ನಿಲ್ಲಬೇಕಾಗಿ ಬಂದಾಗ, ತಾನು ಯಾವ ದೇಶದ ಸ್ವಾತಂತ್ರ್ಯಕ್ಕಾಗಿ ತನ್ನ ಸಂಪೂರ್ಣ ಜೀವನವನ್ನೇ ಮುಡಿಪಾಗಿಟ್ಟೆನೋ ಅದೇ ದೇಶದ ಜನ ತನ್ನ ಸ್ವಂತ ತಮ್ಮ ನಾರಾಯಣ ಸಾವರ್ಕರರನ್ನು ಕಲ್ಲು ಹೊಡೆದು ಕೊಂದಾಗ, ತನ್ನನ್ನು ಕಲ್ಲು ಹೊಡೆದು ಗಂಭೀರ ಗಾಯಗೊಳಿಸಿದಾಗ, 1951ರಲ್ಲಿ ಪಾಕ್‌ ಪ್ರಧಾನಿ ಲಿಯಾಖತ್‌ ಆಲೀ ಖಾನ್‌ ಭಾರತ ಭೇಟಿಯ ಸಂದರ್ಭದಲ್ಲಿ ತನ್ನನ್ನು ಭಯೋತ್ಪಾದಕ ನೆಂಬಂತೆ ಬಿಂಬಿಸಿ ತನ್ನದೇ ದೇಶದ ಪ್ರಧಾನಿ ತನ್ನನ್ನು ಜೈಲಿಗಟ್ಟಿದಾಗ, ಮಾತ್ರವಲ್ಲ ಪಾಕ್‌ ಪ್ರಧಾನಿ ವಾಪಸ್‌ ಹೋಗಿ ಅನಂತರ 60 ದಿನಗಳ ವರೆಗೂ ಜೈಲಿನಿಂದ ಬಿಡುಗಡೆ ಮಾಡದೆ ಕೃತಘ್ನನಾಗಿ ಸೇಡು ತೀರಿಸಿಕೊಂಡಾಗ, ಬ್ರಿಟಿಷ್‌ ಪೊಲೀಸರು ಕೇಳದಂತಹ ಅಸಹ್ಯ ಪ್ರಶ್ನೆಗಳನ್ನು ನಮ್ಮ ದೇಶದ ಪೊಲೀಸರು ಕೇಳಿದಾಗ…ಅಬ್ಟಾ ಅದೆಂತಹ ತಾಳ್ಮೆ ಸಾವರ್ಕರರದ್ದು!! ತಾಳ್ಮೆ ಅಂದಾಗ ಸಾವರ್ಕರ್‌ ಹೊರತು ಇನ್ಯಾರು ಕಣ್ಮುಂದೆ ಬಂದಾರು?

ಅಸಾಮಾನ್ಯ ದೂರದೃಷ್ಟಿ :

ದೇಶಾದ್ಯಂತ ಇರುವ ಬ್ರಿಟಿಷರ ಮೂರ್ತಿಗಳನ್ನು ಧ್ವಂಸ ಮಾಡಬೇಕು ಅನ್ನುವ ಸಾಮಾನ್ಯ ಗುರಿ ಯಿಟ್ಟು ಕೊಂಡಿದ್ದ ನೇತಾಜಿ ಸುಭಾಷ್‌ ಚಂದ್ರ ಬೋಸ್‌ರಿಗೆ ರಾಸ್‌ ಬಿಹಾರಿ ಬೋಸ್‌ರ ಸಂಪರ್ಕ ಸಾಧಿಸುವಂತೆ ವ್ಯವಸ್ಥೆ ಮಾಡಿ,  ಜಪಾನಿಗೆ ಕಳುಹಿಸಿ INA ಗೆ ಪ್ರೇರಣೆ ನೀಡಿದ್ದು ಸಾವರ್ಕರ್‌. ಎರಡನೇ ಮಹಾಯುದ್ಧ ಸ್ಫೋಟವಾದಾಗ ಸಾವರ್ಕರ್‌ ಹೇಳುತ್ತಾರೆ ಎರಡನೇ ಮಹಾಯುದ್ಧ ಮುಗಿಯುವಷ್ಟರಲ್ಲಿ ಬ್ರಿಟಿಷ್‌ ಸರಕಾರ ತನ್ನ ಸಂಪೂರ್ಣ ಶಕ್ತಿಯನ್ನು ಕಳೆದುಕೊಂಡಿರುತ್ತದೆ. ಅನಂತರ ಅವರು ಭಾರತದಲ್ಲಿ ಆಡಳಿತ ನಡೆಸು ವಷ್ಟು ಶಕ್ತಿಯನ್ನು ಹೊಂದಿರುವುದಿಲ್ಲ. ಹಾಗಾಗಿ ಅವರು ಖಂಡಿತವಾಗಿಯೂ ಭಾರತವನ್ನು ಬಿಟ್ಟು ಹೋಗುತ್ತಾರೆ. ಅಂತಹ ಸಮಯದಲ್ಲಿ ನಮ್ಮ ಸೈನಿಕ ಶಕ್ತಿ ಅತ್ಯಂತ ಸಮೃದ್ಧವಾಗಿ ಬಲಶಾಲಿ ಯಾಗಿರಬೇಕು. ದೇಶಾದ್ಯಂತ ಯುವಕರು ಸೈನ್ಯಕ್ಕೆ ಸೇರುವಂತೆ ಪ್ರೇರಣೆ ನೀಡಬೇಕು. ಇದು ತೀರಾ ಅನಿವಾರ್ಯ ಅಂದಾಗ ಹಲವು ನಾಯಕರು ಸಾವರ್ಕರ್‌ ಮಾತನ್ನು ಅಪಹಾಸ್ಯ ಮಾಡುತ್ತಾರೆ. ಇದರಿಂದ ವಿಚಲಿತರಾಗದ ಸಾವರ್ಕರ್‌ ದೇಶಾದ್ಯಂತ ಪ್ರವಾಸ ಮಾಡಿ, ಯುವ ಕರನ್ನು ಸಂಘಟಿಸಿ, ಸೈನ್ಯಕ್ಕೆ ಸೇರುವಂತೆ ಪ್ರೇರಣೆ ನೀಡುತ್ತಾರೆ. ಪರಿಣಾಮ ಸಾವಿರಾರು ಸಂಖ್ಯೆಯಲ್ಲಿ ಯುವಕರು ಸೈನ್ಯ ಸೇರುತ್ತಾರೆ. ಇತಿಹಾಸಕಾರರು ಹೇಳುತ್ತಾರೆ ಸಾವರ್ಕರರ ಆ ದೂರದೃಷ್ಟಿಯ ಕಾರಣದಿಂದ ಭಾರತ ಸ್ವಾತಂತ್ರ್ಯ ಸಿಕ್ಕ ಅನಂತರವೂ ಭಾರತವಾಗಿ ಉಳಿಯಿತು. ಬ್ರಿಟಿಷರು ಭಾರತ ಬಿಟ್ಟು ಹೋಗುವಾಗ ಸುಮ್ಮನೆ ಹೋಗಲಾರರು, ಮತ ಆಧಾರಿತ ದೇಶವೊಂದನ್ನು ಹುಟ್ಟುಹಾಕಿ ಹೋಗುತ್ತಾರೆಂಬ ಸಂಗತಿ ಸಾವರ್ಕರರಿಗೆ ಮೊದಲೇ ತಿಳಿದಿತ್ತೆ? ಎಂಥ ದೂರದೃಷ್ಟಿ ಸಾವರ್ಕರರದ್ದು !!

ಸ್ವದೇಶಿ ಚಿಂತನೆಯ ಪ್ರಬಲ ಪ್ರತಿಪಾದಕ :

ವಾರವಿಡೀ ಪುಣೆಯ ಉದ್ದಕ್ಕೂ ಓಡಾಡಿ ವಿದೇಶಿ ವಸ್ತುಗಳನ್ನು ಸಂಗ್ರಹ ಮಾಡಿ ಶನಿವಾರ ದಂದು “ವಾಡಾ’ದ ಹತ್ತಿರ ತಿಲಕರ ಸಮ್ಮುಖದಲ್ಲಿ ಆ ವಿದೇಶಿ ವಸ್ತುಗಳಿಗೆ ಬೆಂಕಿ ಹಚ್ಚುವುದು, ಅಭಿನವ ಭಾರತ ಹೆಸರಿನ ಸಾವರ್ಕರ್‌ ಗುಂಪಿನ ಕೆಲಸ. “ಸುಡುವುದಕ್ಕಿಂತ ಬಡವರಿಗೆ ಹಂಚುವುದು ಒಳ್ಳೆಯ ದಲ್ಲವೇ? ಅಂದಿದ್ದರಂತೆ ಗಾಂಧೀಜಿ. ವಿದೇಶಿ ವಸ್ತುಗಳನ್ನು ಸುಡಬೇಕು ಎನ್ನುವುದು ನಮ್ಮ ಸಂಕಲ್ಪ ಅದನ್ನು ಹಂಚಬೇಕೆ!!  ಅನ್ನುವುದು ಸಾವರ್ಕರ್‌ ವಾದ. ಗಾಂಧೀಜಿ ಸ್ವದೇಶಿ ವ್ರತ ಸ್ವೀಕಾರ ಮಾಡು ವುದಕ್ಕಿಂತ 15 ವರ್ಷಗಳ ಮೊದಲೇ ಸಾವರ್ಕರ್‌ ಸ್ವದೇಶಿ ಚಿಂತನೆಯನ್ನು ದೇಶದಲ್ಲಿ ಬಿತ್ತಿದ್ದರು.

ಅಸಾಮಾನ್ಯ ಕವಿ :

ಅಂಡಮಾನಿನಲ್ಲಿ ಪೆನ್ನು, ಪೇಪರ್‌ ಬಳಕೆಗೆ ಅವಕಾಶ ಸಿಗದಿದ್ದಾಗ ಮೊಳೆಯಿಂದ ಕಲ್ಲಿನ ಗೋಡೆಯಲ್ಲಿ ಹತ್ತು ಸಾವಿರ ಸಾಲುಗಳ ಕಾವ್ಯಗಳನ್ನು ರಚಿಸಿ ಬರೆಯುತ್ತಾರೆ ಸಾವರ್ಕರ್‌!! ಕಮಲ, ಗೋಮಾಂತಕ, ಸಾಗರ್‌, ವಿಶ್ವಾಸ್‌ ಮುಂತಾದ ಕಾವ್ಯ- ನಾಟಕಗಳ ರಚನೆಯನ್ನು ಮಾಡುತ್ತಾರೆ ಮೊಳೆಯಿಂದ.. ಮತ್ತು ಅಷ್ಟನ್ನೂ ನೆನಪಿಟ್ಟುಕೊಂಡು ಜೈಲಿನಿಂದ ಬಿಡುಗಡೆಯಾಗಿ ಬಂದ ಅನಂತರ ಮತ್ತೆ ಬರೆದು ಸಮಾಜಕ್ಕೆ ಆ ಮಹಾನ್‌ ಕಾವ್ಯ ಸಾಹಿತ್ಯಗಳನ್ನು ಕೊಟ್ಟ ಜಗತ್ತಿನ ಅದ್ಭುತ ಕವಿ ಸಾವರ್ಕರ್‌.

ಸಾಮರಸ್ಯದ ಹರಿಕಾರ :

ಸಮಾಜದ ಒಡಕಿಗೆ ಬಹುಮುಖ್ಯ ಕಾರಣ ವಾಗಿದ್ದ ಮೇಲು-ಕೀಳು, ಸ್ಪೃಶ್ಯ-ಅಸ್ಪೃಶ್ಯ ಭಾವನೆ ಯನ್ನು ತೊಡೆದು ಹಾಕಲು ಸಾವರ್ಕರ್‌ ತಮ್ಮ ತನು-ಮನಗಳೆರಡನ್ನೂ ಮುಡಿಪಾಗಿಟ್ಟರು. “ಪತಿತ ಪಾವನ ಮಂದಿರ’ ವನ್ನು ನಿರ್ಮಿಸಿ ಆ ಮಂದಿರಕ್ಕೆ  ಎಲ್ಲ ಜಾತಿಯ ಜನರು ಯಾವುದೇ ಅಳುಕಿಲ್ಲದೆ ಪ್ರವೇಶಿಸಿ ಭಗವಂತನ ದರ್ಶನ ಪಡೆಯುವ ಅವಕಾಶವನ್ನು ಕಲ್ಪಿಸಿದರು. ಆಸ್ಟ್ರಿ ಯಾದ ಹಿಡಿತದಿಂದ ಇಟಲಿಯನ್ನು ಪಾರು ಮಾಡಿ ಇಟಲಿಗೆ ಸ್ವಾತಂತ್ರ್ಯ ಕೊಡಿಸಿದ ಮಹಾಪುರುಷ “ಜೋಸೆಫ್ ಮ್ಯಾಝಿನಿ’ಯಿಂದ ಪ್ರೇರಿತರಾದ ಸಾವರ್ಕರ್‌, ಆತನನ್ನು ಉತ್ಕೃಷ್ಟ ಶಬ್ಧಗಳಲ್ಲಿ ವರ್ಣಿಸಿ ಗ್ರಂಥವೊಂದನ್ನು ಬರೆದರು.

ಮರಾಠಿಯ ಖ್ಯಾತ ಕವಿ ಗೋವಿಂದ್‌ ಹೇಳು ವಂತೆ ಸಾವರ್ಕರ್‌ ಅಂದರೆ ತೇಜಸ್ಸು, ತ್ಯಾಗ, ತಪಸ್ಸು, ತಣ್ತೀ, ತರ್ಕ, ತಾರುಣ್ಯ, ಬಾಣದಂತೆ ವೇಗ, ತಲವಾರಿನಂತೆ ಹರಿತ, ಸಹನೆ, ಉನ್ನತವಾದ ಯಾವುದೇ ಗುಣಗಳು ಕಣ್ಮುಂದೆ ಬಂದರೂ ಆ ಗುಣಗಳಿಗೆ ಹೋಲಿಕೆಯಾಗುವ ಏಕೈಕ ಹೆಸರು ವಿನಾಯಕ ದಾಮೋದರ ಸಾವರ್ಕರ್‌.

ಆತ್ಮವಿಶ್ವಾಸದ ಖಜಾನೆ :

ತಾನೀಗ ಬ್ರಿಟಿಷರ ಹಡಗಿನಲ್ಲಿ ಬಂಧಿ. ಅದು ಚಲಿಸುತ್ತಿದ್ದುದು ಫ್ರಾನ್ಸಿನ ಆಳ ಸಮುದ್ರದಲ್ಲಿ. ಇಂತಹ  ಪರಿಸ್ಥಿತಿಯಲ್ಲೂ ಬ್ರಿಟಿಷರ ಹಡಗಿನ ಕಿರಿದಾದ ಕಿಂಡಿಯಿಂದ ತೂರಿ, ಆ ಭೋರ್ಗರೆಯುವ ಸಮುದ್ರದಲ್ಲಿ ಈಜಿ, ದಡ ಸೇರಿದ ಸಾವರ್ಕರ್‌.. ಆತ್ಮವಿಶ್ವಾಸಕ್ಕೆ ಮತ್ತೂಂದು ಹೆಸರು.

 

– ಪ್ರಕಾಶ್‌ ಮಲ್ಪೆ, ಉಡುಪಿ

ಟಾಪ್ ನ್ಯೂಸ್

1-wewqewqe

Revealed; ನೇಹಾ ಹಿರೇಮಠ ಹಂತಕ ಫಯಾಜ್‌ನ ಮತ್ತೊಂದು ಕರಾಳ ಮುಖ ಅನಾವರಣ

13-jp-hegde

Congress: ಸರ್ಕಾರದ ಯೋಜನೆಗಳು ಜನಸ್ನೇಹಿಯಾಗಿರಬೇಕು: ಕೆ.ಜಯಪ್ರಕಾಶ್ ಹೆಗ್ಡೆ

Bidar; Will file Defamation case against Khooba: Eshwar Khandre

Bidar; ಖೂಬಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವೆ: ಈಶ್ವರ್ ಖಂಡ್ರೆ

12-mng

Neha ಹತ್ಯೆ ಪ್ರಕರಣ; ಎನ್‌ಐಎ ತನಿಖೆ; ಮಹಿಳೆಯರು ಕಿರುಕತ್ತಿ ಹೊಂದಲು ಅವಕಾಶ:ವಿಎಚ್‌ಪಿ ಆಗ್ರಹ

ಅಂಡಾಶಯದ ಕ್ಯಾನ್ಸರ್ ನಿಂದ 30 ರ ಹರೆಯದಲ್ಲಿ ಖ್ಯಾತ ಫ್ಯಾಷನ್‌ ಇನ್‌ ಫ್ಲುಯೆನ್ಸರ್‌ ನಿಧನ

ಅಂಡಾಶಯದ ಕ್ಯಾನ್ಸರ್ ನಿಂದ 30 ರ ಹರೆಯದಲ್ಲಿ ಖ್ಯಾತ ಫ್ಯಾಷನ್‌ ಇನ್‌ ಫ್ಲುಯೆನ್ಸರ್‌ ನಿಧನ

IPL; To win the RCB Cup first….: What did Robin Uthappa say?

IPL; ಆರ್ ಸಿಬಿ ಕಪ್ ಗೆಲ್ಲಬೇಕಾದರೆ ಮೊದಲು….: ರಾಬಿನ್ ಉತ್ತಪ್ಪ ಹೇಳಿದ್ದೇನು?

Gadag; ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೊಲೆಗಡುಕರೇ ಪ್ರಥಮ ಪ್ರಜೆಗಳು: ಬಸವರಾಜ ಬೊಮ್ಮಾಯಿ

Gadag; ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೊಲೆಗಡುಕರೇ ಪ್ರಥಮ ಪ್ರಜೆಗಳು: ಬಸವರಾಜ ಬೊಮ್ಮಾಯಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

April 17ರಂದು ಶ್ರೀರಾಮ ನವಮಿ: ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

Rama Navami 2024: April 17ರಂದು ಶ್ರೀರಾಮ ನವಮಿ- ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

Ram Ayodhya

Rama Navami 2024: ನವಮಿಗೆ ಬಾಲಕರಾಮನ ಹಣೆಗೆ ಸೂರ್ಯ ತಿಲಕ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-wewqewqe

Revealed; ನೇಹಾ ಹಿರೇಮಠ ಹಂತಕ ಫಯಾಜ್‌ನ ಮತ್ತೊಂದು ಕರಾಳ ಮುಖ ಅನಾವರಣ

13-jp-hegde

Congress: ಸರ್ಕಾರದ ಯೋಜನೆಗಳು ಜನಸ್ನೇಹಿಯಾಗಿರಬೇಕು: ಕೆ.ಜಯಪ್ರಕಾಶ್ ಹೆಗ್ಡೆ

Bidar; Will file Defamation case against Khooba: Eshwar Khandre

Bidar; ಖೂಬಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವೆ: ಈಶ್ವರ್ ಖಂಡ್ರೆ

12-mng

Neha ಹತ್ಯೆ ಪ್ರಕರಣ; ಎನ್‌ಐಎ ತನಿಖೆ; ಮಹಿಳೆಯರು ಕಿರುಕತ್ತಿ ಹೊಂದಲು ಅವಕಾಶ:ವಿಎಚ್‌ಪಿ ಆಗ್ರಹ

ಅಂಡಾಶಯದ ಕ್ಯಾನ್ಸರ್ ನಿಂದ 30 ರ ಹರೆಯದಲ್ಲಿ ಖ್ಯಾತ ಫ್ಯಾಷನ್‌ ಇನ್‌ ಫ್ಲುಯೆನ್ಸರ್‌ ನಿಧನ

ಅಂಡಾಶಯದ ಕ್ಯಾನ್ಸರ್ ನಿಂದ 30 ರ ಹರೆಯದಲ್ಲಿ ಖ್ಯಾತ ಫ್ಯಾಷನ್‌ ಇನ್‌ ಫ್ಲುಯೆನ್ಸರ್‌ ನಿಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.