ಅನಿಲದ ವಿಚಾರದಲ್ಲಿ ಮಾತಿನ ಸ್ಫೋಟ
Team Udayavani, Jan 31, 2022, 6:30 AM IST
ಇದು ಪರಸ್ಪರ ಎದುರಾಳಿ ರಾಜಕೀಯ ಪಕ್ಷಗಳ ನಾಯಕರ ನಡುವಿನ ವಾಕ್ಸಮರ ಆಗಿದ್ದರೆ ಅದು ಸಹಜ ಎನ್ನ ಬಹುದಿತ್ತು. ಆದರೆ ಸ್ವಪಕ್ಷೀಯರೇ ತಮ್ಮ ಮಧ್ಯೆ ಕಿಡಿ ಕಾರಿಕೊಳ್ಳುತ್ತಿದ್ದಾರೆ. ಸೇರಿಗೆ ಸವ್ವಾಸೇರು ಎನ್ನುತ್ತಿದ್ದಾರೆ. ಅಭಿವೃದ್ಧಿ ವಿಚಾ ರದಲ್ಲಿ ಆರಂಭವಾದ ಮಾತು ವೈಯಕ್ತಿಕ ನಿಂದನೆ ಮಟ್ಟಕ್ಕೆ ಇಳಿದಿದೆ. ತನ್ನ ಚುನಾಯಿತ ಪ್ರತಿನಿಧಿಗಳೇ ಹೀಗೆ ಹಾದಿ ಬೀದಿಗಳಲ್ಲಿ ಪರಸ್ಪರ ಕಿಡಿಕಾರುತ್ತಿದ್ದರೆ, ಹೈಕಮಾಂಡ್ ಮೌನಕ್ಕೆ ಶರಣಾಗಿ ಬೇಜವಾಬ್ದಾರಿತನ ಪ್ರದರ್ಶಿಸಿದೆ.
ಮೈಸೂರು-ಕೊಡಗು ಸಂಸದ ಪ್ರತಾಪಸಿಂಹ ಹಾಗೂ ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್.ಎ. ರಾಮದಾಸ್, ಚಾಮರಾಜ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ ಅವರ ಮಧ್ಯೆ ಮಾತಿನ ಚಕಮಕಿ ತಾರಕಕ್ಕೇರಿದೆ. ವಿಚಾರವಿಷ್ಟೇ. ಮೈಸೂರು ನಗರದಲ್ಲಿ ನೆಲದಡಿ ಗ್ಯಾಸ್ ಪೈಪ್ ಅಳವಡಿಸಿ ಗ್ರಾಹಕರಿಗೆ ಅಡುಗೆ ಅನಿಲ ಪೂರೈಸುವ ಕೇಂದ್ರ ಸರಕಾರದ ಯೋಜನೆ ಇದು. ಭಾರತೀಯ ಅನಿಲ ಪ್ರಾಧಿಕಾರ ಈ ಯೋಜನೆ ಕೈಗೆತ್ತಿಕೊಂಡಿದೆ. ಈ ಯೋಜನೆ ಜಾರಿ ಮಾಡಿಯೇ ಸಿದ್ಧ ಎಂದು ಹಠ ತೊಟ್ಟಿದ್ದಾರೆ ಪ್ರತಾಪ ಸಿಂಹ.
ಮೊದಲ ಹಂತದಲ್ಲಿ ಮೈಸೂರು ನಗರದ 40 ಸಾವಿರ ಮನೆಗೆ ಸಂಪರ್ಕ ಕಲ್ಪಿಸುವ ಉದ್ದೇಶ ಇದೆ. ಈ ಯೋಜ ನೆಗಾಗಿ ಮೈಸೂರಿನಲ್ಲಿ ನೈಸರ್ಗಿಕ ಅಡುಗೆ ಅನಿಲ (ಪಿಎನ್ಜಿ) ಸಂಗ್ರಹ ಘಟಕ ಸ್ಥಾಪಿಸಲಾಗುತ್ತದೆ. ಶಾಸಕ ರಾದ ರಾಮದಾಸ್ ಹಾಗೂ ನಾಗೇಂದ್ರ ಅವರ ವಿರೋಧ ವೇನೂ ಈ ಯೋಜನೆಗೆ ಇಲ್ಲ. ಆದರೆ ಈಗಷ್ಟೇ ತಮ್ಮ ಕ್ಷೇತ್ರಗಳಲ್ಲಿ ಕೋಟ್ಯಂತರ ರೂ. ವೆಚ್ಚ ಮಾಡಿ ರಸ್ತೆಗಳನ್ನು ಅಭಿವೃದ್ಧಿಪಡಿಸಿದ್ದೇವೆ. ಗ್ಯಾಸ್ ಪೈಪ್ ಅಳವಡಿಸಲು ಮತ್ತೆ ರಸ್ತೆ ಅಗೆದರೆ ರಿಪೇರಿ ಮಾಡಲು ಹಣ ಕೊಡುವವರು ಯಾರು? ಎಂಬುದು ಅವರ ಪ್ರಶ್ನೆ.
ಈ ಯೋಜನೆ ಕುರಿತು ಕರೆದಿದ್ದ ಮೈಸೂರು ಮಹಾ ನಗರ ಪಾಲಿಕೆ ಸಭೆಯನ್ನು ಕೋರಂ ಇಲ್ಲದೆ ಮುಂದೂ ಡಬೇಕಾಯಿತು. ಮೈಸೂರಿನಲ್ಲಿ ಬಿಜೆಪಿ ಪಕ್ಷದ ಮೇಯರ್ ಇದ್ದಾರೆ. ಹೀಗಿದ್ದರೂ ಪಾಲಿಕೆ ಸಭೆಗೆ ಹೆಚ್ಚಿನ ಸಂಖ್ಯೆಯ ಸದಸ್ಯರು ಗೈರಾದರು. ಇಬ್ಬರು ಶಾಸಕರೇ ಹೀಗೆ ಕೋರಂ ಅಭಾವ ಸೃಷ್ಟಿಸಿ ಪ್ರತಾಪಸಿಂಹ ಅವರಿಗೆ ಒಳ ಏಟು ನೀಡಿದರು ಎಂಬುದು ರಾಜಕೀಯ ಪಡಸಾಲೆಯಲ್ಲಿನ ಚರ್ಚೆ.
ಈ ಪ್ರಕರಣದಲ್ಲಿ ಸಂಸದರು ಹಾಗೂ ಶಾಸಕರ ಮಧ್ಯೆ ಪ್ರತಿಷ್ಠೆಯ ಪ್ರಶ್ನೆಯೂ ಅಡಗಿದೆ. ಶಾಸಕರಾದ ರಾಮ ದಾಸ್ ಹಾಗೂ ನಾಗೇಂದ್ರ ರಾಜಕೀಯವಾಗಿ ಪ್ರತಾಪ ಸಿಂಹ ಅವರಿಗಿಂತಲೂ ಹಿರಿಯರು. ಅದಕ್ಕಿಂತಲೂ ಮುಖ್ಯವಾಗಿ ಬೇರುಮಟ್ಟದ ರಾಜಕಾರಣಿಗಳು. ಅಭಿವೃದ್ಧಿ ಕಾರ್ಯಗಳ ಜತೆಗೆ ತಮ್ಮ ಕ್ಷೇತ್ರಗಳಲ್ಲಿ ತಮ್ಮದೇ ಆದ ಪ್ರಭಾವ, ವರ್ಚಸ್ಸು, ಬೆಂಬಲಿಗರ ಪಡೆ ಹೊಂದಿದ್ದಾರೆ. ಸಂಸದ ಪ್ರತಾಪ ಸಿಂಹ 7 ವರ್ಷಗಳಿಂದ ಲೋಕಸಭಾ ಸದಸ್ಯರಾಗಿದ್ದರೂ ತಳಮಟ್ಟದಲ್ಲಿ ತಮ್ಮದೇ ಆದ ಗಟ್ಟಿ ನಾಯಕತ್ವ ಪಡೆದುಕೊಳ್ಳಲು ಸಾಧ್ಯವಾಗಿಲ್ಲ. ಪ್ರತಾಪ ಸಿಂಹ ರಾಜಕಾರಣಕ್ಕಿಂತಲೂ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡುವ ಸ್ವಭಾವದವರು.
ರಾಮದಾಸ್, ನಾಗೇಂದ್ರ ಅವರಿಗೆ ಪೈಪ್ಲೈನ್ ಯೋಜನೆ ಬಗ್ಗೆ ತಕರಾರಿಲ್ಲ. ಈ ಇಬ್ಬರು ಶಾಸಕರು ಹಾಗೂ ಪ್ರತಾಪ ಸಿಂಹ ಮಧ್ಯೆ ಪ್ರತಿಷ್ಠೆಯ ಪ್ರಶ್ನೆಯೇ ಇಲ್ಲಿ ಮೇಲುಗೈ ಸಾಧಿಸಿದೆ.
ನರೇಂದ್ರ ಮೋದಿ ಅವರ ಸರಕಾರ ಯಾರಿಗೂ ಮಾಮೂಲಿ ಕೊಡುವುದಿಲ್ಲ. ತಾನು ತಿನ್ನುವುದಿಲ್ಲ, ಬೇರೆ ಯವರನ್ನೂ ತಿನ್ನಲು ಬಿಡುವುದಿಲ್ಲ ಎನ್ನುವುದನ್ನು ಅರಿತುಕೊಳ್ಳಲಿ ಎಂಬ ಪ್ರತಾಪ ಸಿಂಹ ಅವರ ಹೇಳಿಕೆಗೆ ಇಬ್ಬರೂ ಶಾಸಕರು ಮತ್ತಷ್ಟು ಕೆಂಡಾಮಂಡಲರಾಗಿದ್ದಾರೆ. ಪಕ್ಷದ ಹೈಕಮಾಂಡ್ಗೆ ದೂರು ಒಯ್ದಿದ್ದಾರೆ. ಚಾಮರಾಜನಗರ ಸಂಸದ ವಿ. ಶ್ರೀನಿವಾಸ ಪ್ರಸಾದ್ ಅವರು ಸಂಸದರು, ಶಾಸಕರು ಇಬ್ಬರಿಗೂ ತಿಳಿ ಹೇಳಿ ತಮ್ಮ ರಾಜಕೀಯ ಮುತ್ಸದ್ಧಿತನ ಮೆರೆದಿದ್ದಾರೆ.
-ಕೂಡ್ಲಿ ಗುರುರಾಜ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?
Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…
Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ
Rama Navami 2024: April 17ರಂದು ಶ್ರೀರಾಮ ನವಮಿ- ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ
Rama Navami 2024: ನವಮಿಗೆ ಬಾಲಕರಾಮನ ಹಣೆಗೆ ಸೂರ್ಯ ತಿಲಕ