ಇಂದಿನಿಂದ ಏನೇನು ಬದಲಾವಣೆ? ಇಲ್ಲಿದೆ ಕೆಲವೊಂದು ಮಾಹಿತಿ
Team Udayavani, Nov 1, 2022, 7:45 AM IST
1. ಕೆವೈಸಿ ಅಗತ್ಯತೆ:
ಎಲ್ಲ ರೀತಿಯ ವಿಮೆಗಳನ್ನು ಹೊಂದಿರುವವರೂ ನ.1ರಿಂದ ತಮ್ಮ ಕೆವೈಸಿ(ನಿಮ್ಮ ಗ್ರಾಹಕರನ್ನು ಅರಿಯಿರಿ) ವಿವರಗಳನ್ನು ಒದಗಿಸುವುದನ್ನು ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ(ಐಆರ್ಡಿಎಐ) ಕಡ್ಡಾಯಗೊಳಿಸಿದೆ. ಈವರೆಗೆ ಜೀವ ವಿಮೆಯೇತರ ಪಾಲಿಸಿ ಖರೀದಿ ವೇಳೆ ಕೆವೈಸಿ ವಿವರ ನೀಡುವುದು ಕಡ್ಡಾಯವಾಗಿರಲಿಲ್ಲ. ಆದರೆ, ಇನ್ನು ಹೊಸ ಮತ್ತು ಹಳೇ ಗ್ರಾಹಕರೂ ಕಡ್ಡಾಯವಾಗಿ ವಿವರ ನೀಡಬೇಕಾಗುತ್ತದೆ.
2. ರೈಲಿನ ಸಮಯ ಬದಲು:
ಭಾರತೀಯ ರೈಲ್ವೆಯ ಪ್ರಕಾರ, ಮಂಗಳವಾರದಿಂದ ಸಾವಿರಾರು ರೈಲುಗಳ ಸಂಚಾರದ ಸಮಯ ಬದಲಾಗಲಿದೆ. ಹೀಗಾಗಿ, ಪ್ರಯಾಣ ಆರಂಭಿಸುವ ಮುನ್ನ ರೈಲಿನ ಸಮಯದ ಬಗ್ಗೆ ಅರಿತುಕೊಳ್ಳುವುದು ಸೂಕ್ತ. ಒಂದು ಮಾಹಿತಿ ಪ್ರಕಾರ, 13 ಸಾವಿರ ಪ್ರಯಾಣಿಕ ರೈಲುಗಳು, 7 ಸಾವಿರ ಸರಕು ರೈಲುಗಳು ಹಾಗೂ 30 ರಾಜಧಾನಿ ರೈಲುಗಳ ಸಂಚಾರದ ಸಮಯ ಪರಿಷ್ಕರಣೆಯಾಗಲಿದೆ.
3. ಎಲ್ಪಿಜಿ ದರ ಪರಿಷ್ಕರಣೆ:
ಪ್ರತಿ ತಿಂಗಳ ಮೊದಲ ದಿನ ಎಲ್ಪಿಜಿ ಸಿಲಿಂಡರ್ ದರ ಪರಿಷ್ಕರಣೆಯಾಗುತ್ತದೆ. ಹೀಗಾಗಿ, ಮಂಗಳವಾರ ಅಡುಗೆ ಅನಿಲ ಸಿಲಿಂಡರ್ ರೇಟ್ ಹೆಚ್ಚಾಗಲೂಬಹುದು, ಕಡಿಮೆಯಾಗಲೂಬಹುದು.
4. ಸಿಲಿಂಡರ್ ಡೆಲಿವರಿ ಪ್ರಕ್ರಿಯೆ:
ಒಟಿಪಿ ಮೂಲಕ ಸಿಲಿಂಡರ್ ಡೆಲಿವರಿ ಮಾಡುವ ಪ್ರಕ್ರಿಯೆ ನ.1ರಿಂದ ಜಾರಿಯಾಗಲಿದೆ. ಗ್ಯಾಸ್ಗೆ ಬುಕಿಂಗ್ ಮಾಡಿದ ಬಳಿಕ, ನಿಮ್ಮ ಮೊಬೈಲ್ ಸಂಖ್ಯೆಗೆ ಒಟಿಪಿಯೊಂದು ಬರಲಿದೆ. ಸಿಲಿಂಡರ್ ಅನ್ನು ಮನೆಗೆ ತರುವ ಡೆಲಿವರಿ ಸಿಬ್ಬಂದಿಗೆ ನೀವು ಆ ಒಟಿಪಿಯನ್ನು ಹೇಳಬೇಕು. ಸಿಸ್ಟಂ ಜತೆ ಆ ಕೋಡ್ ಹೊಂದಾಣಿಕೆಯಾದರಷ್ಟೇ ಆತ ನಿಮಗೆ ಸಿಲಿಂಡರ್ ಕೊಡುತ್ತಾನೆ.
5. ಜಿಎಸ್ಟಿ ರಿಟರ್ನ್ಸ್:
ನಿಮ್ಮ ವಹಿವಾಟು 5 ಕೋಟಿ ರೂ.ಗಳಿಗಿಂತ ಕಡಿಮೆಯಿದ್ದರೆ ಜಿಎಸ್ಟಿ ರಿಟರ್ನ್ಸ್ ಸಲ್ಲಿಕೆ ಮಾಡುವಾಗ ನೀವು 4 ಅಂಕಿಗಳ ಎಸ್ಎಚ್ಎನ್ ಕೋಡ್ ಅನ್ನು ಕೂಡ ಒದಗಿಸುವುದನ್ನು ಮಂಗಳವಾರದಿಂದ ಕಡ್ಡಾಯಗೊಳಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
World Theatre Day 2024: ರಂಗಭೂಮಿ ಕಲೆ-ಯುದ್ಧ ಮತ್ತು ಶಾಂತಿ ಪರಸ್ಪರ ವಿರುದ್ಧ ಧ್ರುವ
ಡೌಟೇ ಬೇಡ, ಜೋಡೆತ್ತುಗಳ ಹಾಗೆ ನಾನು, ಅನಂತ ಹೆಗಡೆ ಇಬ್ಬರೂ ಕೆಲಸ ಮಾಡುತ್ತೇವೆ…
Book Review;ವಿಶಿಷ್ಟ ರೂಪಕ ಶೈಲಿಯಿಂದ ಚಿತ್ರ ರಸಿಕರ ಮನಗೆದ್ದ ಕಾಸರವಳ್ಳಿಯ “ಬಿಂಬ ಬಿಂಬನ”
World Water Day: ಜುಳು ಜುಳು ಸದ್ದೇಕೆ ಉರಿ ಮೌನ
ಪ್ರೊ| ಕು.ಶಿ.: ಜ್ಞಾನಕಾಶಿಯಲ್ಲೊಬ್ಬ ಫಕೀರ
MUST WATCH
ಹೊಸ ಸೇರ್ಪಡೆ
SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು
Bengaluru: ಸಾಲ ವಸೂಲಿ ಹೆಸರಲ್ಲಿ ಆಟೋ ವಶ, ಧರ್ಮ ನಿಂದನೆ: ಬಂಧನ
Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ.. ಭಯಾನಕ ದೃಶ್ಯ ಸೆರೆ
Bengaluru: ಪೇಂಟರ್ ಕೊಂದು ಪೊಲೀಸ್ ಠಾಣೆಗೆ ಬಂದು ಸಿಕ್ಕಿಬಿದ್ದ ಸ್ನೇಹಿತರು
Loksabha Poll: ತಮಿಳುನಾಡು ಮಾಜಿ ಕಾಂಗ್ರೆಸ್ ನಾಯಕ ಈಗ ಬಿಜೆಪಿ ರಾಷ್ಟ್ರೀಯ ವಕ್ತಾರ