ಜ್ಞಾನವ್ಯಾಪಿ ಮಸೀದಿ: ಕಾರ್ಬನ್‌ ಡೇಟಿಂಗ್‌ ಪರೀಕ್ಷೆ ಎಂದರೇನು?


Team Udayavani, Oct 14, 2022, 7:10 AM IST

ಜ್ಞಾನವ್ಯಾಪಿ ಮಸೀದಿ: ಕಾರ್ಬನ್‌ ಡೇಟಿಂಗ್‌ ಪರೀಕ್ಷೆ ಎಂದರೇನು?

ಜ್ಞಾನವ್ಯಾಪಿ ಮಸೀದಿಯ ಆವರಣದಲ್ಲಿ ಪತ್ತೆಯಾಗಿರುವ ಶಿವಲಿಂಗದ ಕುರಿತಾಗಿ ಕಾರ್ಬನ್‌ ಡೇಟಿಂಗ್‌ ಪರೀಕ್ಷೆ ನಡೆಸಬೇಕು ಎಂಬ ಅರ್ಜಿ ಸಲ್ಲಿಕೆಯಾಗಿದ್ದು, ಇಂದು (ಅ. 14) ವಾರಾಣಸಿ ಜಿಲ್ಲಾ ಕೋರ್ಟ್‌ ತೀರ್ಪು ನೀಡಲಿದೆ. ಹಾಗಾದರೆ ಈ ಕಾರ್ಬನ್‌ ಡೇಟಿಂಗ್‌ ಪರೀಕ್ಷೆ ಎಂದರೇನು?  ಇದನ್ನು ಏಕೆ ನಡೆಸಲಾಗುತ್ತದೆ? ಇಲ್ಲಿದೆ ಮಾಹಿತಿ…

ಕಾರ್ಬನ್‌ ಡೇಟಿಂಗ್‌ ಅಂದರೆ…

ಪುರಾತನ ವಸ್ತುವೊಂದು ಪತ್ತೆಯಾದಾಗ, ಅದು ಯಾವ ಕಾಲದ್ದು ಎಂಬುದನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ ಪುರಾತತ್ವ ಇಲಾಖೆ ಕಾರ್ಬನ್‌ ಡೇಟಿಂಗ್‌ ಪರೀಕ್ಷೆ ನಡೆಸುತ್ತದೆ. ಇದನ್ನು ಕೇವಲ ವಸ್ತುಗಳ ಮೇಲಷ್ಟೇ ಬಳಕೆ ಮಾಡುವುದಿಲ್ಲ, ಸಸಿಗಳು, ಸತ್ತ ಪ್ರಾಣಿಗಳು ಅಥವಾ ಅಸ್ಥಿಪಂಜರದ ಪಳೆಯುಳಿಕೆಗಳ ಮೇಲೂ ಪ್ರಯೋಗಿಸಲಾಗುತ್ತದೆ. ಅಂದರೆ ವಿಜ್ಞಾನಿಗಳು ವಸ್ತು ಅಥವಾ ಇನ್ನಿತರ ವಸ್ತುಗಳ ಮೇಲೆ ರೇಡಿಯೋ ಆಕ್ಟೀವ್‌ ಕಾರ್ಬನ್‌ ಡೇಟಿಂಗ್‌ ಪ್ರಯೋಗಿಸಿ ದಾಗ, ಅದರಲ್ಲಿ ಕಾರ್ಬನ್‌ 14 ಯಾವಾಗ, ಎಷ್ಟು ಪ್ರಮಾಣದಲ್ಲಿ ಇತ್ತು ಎಂಬುದು ಗೊತ್ತಾಗುತ್ತದೆ.

ಜಾಗತಿಕವಾಗಿ ಬಳಕೆ  :

ಈ ಕಾರ್ಬನ್‌ ಡೇಟಿಂಗ್‌ ಅನ್ನು ಜಗತ್ತಿನಾದ್ಯಂತ ಎಲ್ಲ ಪುರಾತತ್ವ ಇಲಾಖೆ ಸಂಶೋಧಕರು ಸೇರಿದಂತೆ ಇತರ ಇತಿಹಾಸ ತಜ್ಞರು ಬಳಕೆ ಮಾಡುತ್ತಾರೆ. ಆದರೆ ಭೂಗರ್ಭ ಶಾಸ್ತ್ರಜ್ಞರು ಮಾತ್ರ ಈ ವಿಧಾನವನ್ನು ಕಲ್ಲುಗಳ ಜೀವಿತಾವಧಿ ಕಂಡುಹಿಡಿಯಲು ಬಳಕೆ ಮಾಡಲ್ಲ. ಏಕೆಂದರೆ ಕಾರ್ಬನ್‌ ಡೇಟಿಂಗ್‌ 50 ಸಾವಿರ ವರ್ಷಗಳಿಂದ ಈಚಿಗಿನ ಕಲ್ಲುಗಳ ಜೀವಿತಾವಧಿ ಬಗ್ಗೆ ಹೇಳುತ್ತದೆ.

ಹೇಗೆ ಕಂಡು ಹಿಡಿಯಲಾಗುತ್ತದೆ?  :

ಇಂಗಾಲದ ಹೊರತಾಗಿ, ಪೊಟ್ಯಾಸಿ ಯಮ್‌ -40 ಸಹ ವಿಕಿರಣಶೀಲ ಕಾಲನಿರ್ಣಯಕ್ಕಾಗಿ ವಿಶ್ಲೇಷಿಸಬಹು ದಾದ ಒಂದು ಧಾತುವಾಗಿದೆ. ಪೊಟ್ಯಾಸಿ ಯಮ್‌ -40 ಅರ್ಧಾಯುಷ್ಯ 1.3 ಬಿಲಿಯನ್‌ ವರ್ಷಗಳಷ್ಟಿದೆ, ಅದೇ ರೀತಿ, ಯುರೇನಿಯಂ -235  704 ಮಿಲಿಯನ್‌ ವರ್ಷಗಳ ಅರ್ಧಾಯುಷ್ಯವನ್ನು ಹೊಂದಿದೆ ಮತ್ತು 14 ಬಿಲಿಯನ್‌ ವರ್ಷಗಳ ಅರ್ಧಾಯುಷ್ಯವನ್ನು ಹೊಂದಿರುವ ಥೋರಿಯಂ -232 ಅನ್ನು ಬಂಡೆಗಳಂತಹ ಭೂವೈಜ್ಞಾನಿಕ ವಸ್ತುಗಳ ವಯಸ್ಸನ್ನು ಅಂದಾಜು ಮಾಡಲು ಸಹ ಬಳಸಲಾಗುತ್ತದೆ.

ಕಾರ್ಬನ್‌ 14 ಅಂದರೇನು? :

ಎಲ್ಲ ಜೀವಿಗಳು ಸೂರ್ಯನಿಂದ ಭೂಮಿಯ ವಾತಾವರಣದ ಮೂಲಕ ಬರುವ ಕಾಸ್ಮಿಕ್‌ ಕಿರಣಗಳನ್ನು ಎದುರಿಸುತ್ತವೆ. ಈ ಕಾಸ್ಮಿಕ್‌ ಕಿರಣಗಳಲ್ಲಿ ಕೆಲವು ವಾತಾವರಣದಲ್ಲಿನ ಪರಮಾಣುವಿಗೆ ಢಿಕ್ಕಿ ಹೊಡೆಯುತ್ತವೆ. ನಾವು ಹೀರಿಕೊಳ್ಳುವ ಕಾರ್ಬನ್‌ -14 ಪರಮಾಣುಗಳನ್ನು ಹೊಂದಿರುವ ದ್ವಿತೀಯಕ ಕಾಸ್ಮಿಕ್‌ ಕಿರಣವನ್ನು ಸೃಷ್ಟಿಸುತ್ತವೆ. ಕಾರ್ಬನ್‌-14 ವಿಕಿರಣಶೀಲವಾಗಿದ್ದು, ಸುಮಾರು 5,700 ವರ್ಷಗಳ ಅರ್ಧಾಯುಷ್ಯವನ್ನು ಹೊಂದಿದೆ. ಇದು ವಿಕಿರಣಶೀಲ ಮಾದರಿಯ ಪರಮಾಣು ನ್ಯೂಕ್ಲಿಯಸ್‌ಗಳು ಅರ್ಧದಷ್ಟು ಕೊಳೆಯಲು ಬೇಕಾಗುವ ಸಮಯವಾಗಿದೆ. ಕಾರ್ಬನ್‌ -14 ಪರಮಾಣುಗಳು ಆಮ್ಲಜನಕವನ್ನು ಸಂಧಿಸಿದಾಗ, ಅವು ಇಂಗಾಲದ ಡೈಆಕ್ಸೈಡ್‌ ಅನ್ನು ರೂಪಿಸುತ್ತವೆ, ಇದನ್ನು ದ್ಯುತಿಸಂಶ್ಲೇಷಣೆಯ ಮೂಲಕ ಸಸ್ಯಗಳು ಹೀರಿಕೊಳ್ಳುತ್ತವೆ. ಈ ಸಸ್ಯವನ್ನು ನಮ್ಮ ವ್ಯವಸ್ಥೆಗೆ ಕಾರ್ಬನ್‌ -14 ಅನ್ನು ಸೇರಿಸುತ್ತವೆ. ಕಾರ್ಬನ್‌ -14 ಕೊಳೆಯುತ್ತಲೇ ಇದ್ದರೂ ನಮ್ಮ ಕೊನೆಯ ಉಸಿರು ಇರುವವರೆಗೂ ಅವುಗಳನ್ನು ನಿರಂತರವಾಗಿ ಸೇರಿಸಲಾಗುತ್ತಿರುತ್ತದೆ.

ಟಾಪ್ ನ್ಯೂಸ್

Chitradurga; We are not waiting for anyone, nomination is sure…: M. Chandrappa

Chitradurga; ನಾವು ಯಾರನ್ನೂ ಕಾಯಲ್ಲ, ನಾಮಿನೇಷನ್ ಪಕ್ಕಾ…: ಎಂ.ಚಂದ್ರಪ್ಪ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

Income Tax; ಕಾಂಗ್ರೆಸ್ ಗೆ ಐಟಿ ಶಾಕ್; 1700 ಕೋಟಿ ರೂ ನೋಟಿಸ್ ನೀಡಿದ ಆದಾಯ ತೆರಿಗೆ ಇಲಾಖೆ

Income Tax; ಕಾಂಗ್ರೆಸ್ ಗೆ ಐಟಿ ಶಾಕ್; 1700 ಕೋಟಿ ರೂ ನೋಟಿಸ್ ನೀಡಿದ ಆದಾಯ ತೆರಿಗೆ ಇಲಾಖೆ

Vijayapura; ಬಂಜಾರರನ್ನು ಅವಮಾನಿಸಿಲ್ಲ, ವೋಟ್ ಬೇಡ ಎಂದಿಲ್ಲ: ಜಿಗಜಿಣಗಿ

Vijayapura; ಬಂಜಾರರನ್ನು ಅವಮಾನಿಸಿಲ್ಲ, ವೋಟ್ ಬೇಡ ಎಂದಿಲ್ಲ: ಜಿಗಜಿಣಗಿ

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

17

ಕೋರ್ಟ್‌ ಮೇಲೆ ಪಟ್ಟಭದ್ರರ ಒತ್ತಡ: ವಕೀಲರ ಪತ್ರ

Income Tax; ಕಾಂಗ್ರೆಸ್ ಗೆ ಐಟಿ ಶಾಕ್; 1700 ಕೋಟಿ ರೂ ನೋಟಿಸ್ ನೀಡಿದ ಆದಾಯ ತೆರಿಗೆ ಇಲಾಖೆ

Income Tax; ಕಾಂಗ್ರೆಸ್ ಗೆ ಐಟಿ ಶಾಕ್; 1700 ಕೋಟಿ ರೂ ನೋಟಿಸ್ ನೀಡಿದ ಆದಾಯ ತೆರಿಗೆ ಇಲಾಖೆ

16-

ನಟ, ಕಾಂಗ್ರೆಸ್‌ ಮಾಜಿ ಸಂಸದ ಗೋವಿಂದ “ಶಿಂಧೆ ಸೇನೆ’ ಸೇರ್ಪಡೆ

15-

ಕಂಗನಾ ವಿರುದ್ಧ ಪೋಸ್ಟ್: ಕೈ ನಾಯಕಿಗೆ‌ ಟಿಕೆಟ್‌ ಡೌಟ್‌

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Chitradurga; We are not waiting for anyone, nomination is sure…: M. Chandrappa

Chitradurga; ನಾವು ಯಾರನ್ನೂ ಕಾಯಲ್ಲ, ನಾಮಿನೇಷನ್ ಪಕ್ಕಾ…: ಎಂ.ಚಂದ್ರಪ್ಪ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

Sathish Ninasam- Rachita Ram: ಮ್ಯಾಟ್ನಿಯಲ್ಲಿ ಹಾರರ್‌ ಶೋ

Sathish Ninasam- Rachita Ram: ಮ್ಯಾಟ್ನಿಯಲ್ಲಿ ಹಾರರ್‌ ಶೋ

17

ಕೋರ್ಟ್‌ ಮೇಲೆ ಪಟ್ಟಭದ್ರರ ಒತ್ತಡ: ವಕೀಲರ ಪತ್ರ

Income Tax; ಕಾಂಗ್ರೆಸ್ ಗೆ ಐಟಿ ಶಾಕ್; 1700 ಕೋಟಿ ರೂ ನೋಟಿಸ್ ನೀಡಿದ ಆದಾಯ ತೆರಿಗೆ ಇಲಾಖೆ

Income Tax; ಕಾಂಗ್ರೆಸ್ ಗೆ ಐಟಿ ಶಾಕ್; 1700 ಕೋಟಿ ರೂ ನೋಟಿಸ್ ನೀಡಿದ ಆದಾಯ ತೆರಿಗೆ ಇಲಾಖೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.