ಸಾಂಕ್ರಾಮಿಕದ ವಿರುದ್ಧ ಹೇಗಿದೆ ಭಾರತದ ಯುದ್ಧ?


Team Udayavani, May 13, 2020, 7:09 AM IST

ಸಾಂಕ್ರಾಮಿಕದ ವಿರುದ್ಧ ಹೇಗಿದೆ ಭಾರತದ ಯುದ್ಧ?

ಸಾಂದರ್ಭಿಕ ಚಿತ್ರ

ದೇಶದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಎಪ್ಪತ್ತು ಸಾವಿರದ ಗಡಿ ದಾಟಿದೆ. ಲಾಕ್‌ಡೌನ್‌ ಹೊರತಾಗಿಯೂ ಸೋಂಕಿತರ ಸಂಖ್ಯೆ ಏರುತ್ತಿರುವುದು ಕಳವಳದ ಸಂಗತಿಯೇ. ಇದೇ ವೇಳೆಯಲ್ಲೇ ಭಾರತದಲ್ಲಿ ಸರಾಸರಿ ಮರಣ ಪ್ರಮಾಣ 3.2 ಪ್ರತಿಶತದಷ್ಟು ದಾಖಲಾಗಿದ್ದು, ಯುರೋಪಿಯನ್‌ ರಾಷ್ಟ್ರಗಳಿಗೆ ಹೋಲಿಸಿದರೆ ಇದು ಬಹಳ ಕಡಿಮೆಯೇ. ಆದರೆ ಅಚ್ಚರಿ ಹುಟ್ಟಿಸುತ್ತಿರುವ ಅಂಶವೆಂದರೆ, 8 ಸಾವಿರಕ್ಕೂ ಅಧಿಕ ಸೋಂಕಿತರನ್ನು ಹೊಂದಿರುವ ತಮಿಳುನಾಡಿನಲ್ಲಿ ಮರಣ ಪ್ರಮಾಣ 1 ಪ್ರತಿಶತಕ್ಕಿಂತಲೂ ಕಡಿಮೆಯಿದ್ದರೆ, ಪಶ್ಚಿಮ ಬಂಗಾಲದಲ್ಲಿ 9.57 ಪ್ರತಿಶತ ದಾಖಲಾಗಿದೆ!

ಇನ್ನೊಂದು ವಾರದಲ್ಲಿ ಲಕ್ಷ ಗಡಿ ದಾಟಬಹುದೇ?
ಭಾರತದಲ್ಲಿ ಸೋಂಕು ಪ್ರಮಾಣವು 6.7 ಪ್ರತಿಶತದಷ್ಟಿದ್ದು, ಇದೇ ವೇಗದಲ್ಲೇ ಮುಂದುವರಿದರೆ ಇನ್ನೂ 7 ದಿನಗಳಲ್ಲಿ ದೇಶದಲ್ಲಿ ಸೋಂಕಿತರ ಸಂಖ್ಯೆ 1 ಲಕ್ಷದ ಗಡಿ ದಾಟಬಹುದು ಎಂದು ತಜ್ಞರು ಎಚ್ಚರಿಸುತ್ತಿದ್ದಾರೆ. ಲಾಕ್‌ಡೌನ್‌ ಜಾರಿಗೆ ಬಂದು 8 ವಾರಗಳಾಗಿವೆಯಾದರೂ, ದೇಶದಲ್ಲಿ ಸರಾಸರಿ ಸೋಂಕಿತರ ಬೆಳವಣಿಗೆಯ ದರದಲ್ಲೇನು ಇಳಿಕೆ ಆಗುತ್ತಿಲ್ಲ. ಇನ್ನು ಪ್ರತಿನಿತ್ಯ ಕೊರೊನಾದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ನಮ್ಮಲ್ಲಿ 100ರ ಗಡಿ ದಾಟಿದೆ. ಮೇ5ರಿಂದ ಮೇ 11ರ ವರೆಗೆ ನಿತ್ಯ ಮೃತಪಟ್ಟವರ ಸರಾಸರಿ ಸಂಖ್ಯೆ 120ರಷ್ಟಿದೆ.

ಭಾರತದಲ್ಲಿ ಮರಣ ಪ್ರಮಾಣ ಕಡಿಮೆ
ಇಂದು ಕೋವಿಡ್ ದಿಂದಾಗಿ ವಿಶ್ವಾದ್ಯಂತ 42ಲಕ್ಷಕ್ಕೂ ಅಧಿಕ ಸೋಂಕಿತರಿದ್ದರೆ, 2.87 ಲಕ್ಷಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. 15 ಲಕ್ಷಕ್ಕೂ ಅಧಿಕ ಸೋಂಕಿತರು ಈಗ ಚೇತರಿಸಿಕೊಂಡಿದ್ದಾರೆ. ಮೇ 11ರ ವೇಳೆಗೆ ಕೊರೊನಾದಿಂದಾಗಿ ಜಾಗತಿಕ ಮರಣ ಪ್ರಮಾಣ 7-7.5 ಪ್ರತಿಶತವಿದ್ದರೆ, ಭಾರತದಲ್ಲಿ ಮರಣ ಪ್ರಮಾಣ 3.2 ರಷ್ಟಿದೆ. ಇನ್ನೊಂದೆಡೆ ಭಾರತದಷ್ಟೇ ಸೋಂಕಿತರ ಸಂಖ್ಯೆಯನ್ನು ಹೊಂದಿರುವ ಬೆಲ್ಜಿಯಂನಲ್ಲಿ ಮರಣ ಪ್ರಮಾಣ 16.31 ಪ್ರತಿಶತ ದಾಖಲಾಗಿದೆ! ಫ್ರಾನ್ಸ್‌ನಲ್ಲಿ 14.91 ಪ್ರತಿಶತ, ಬ್ರಿಟನ್‌ನಲ್ಲಿ 14.53 ಪ್ರತಿಶತ, ಇಟಲಿಯಲ್ಲಿ 13.95 ಪ್ರತಿಶತ ಹಾಗೂ ನೆದರ್‌ಲೆಂಡ್ಸ್‌ನಲ್ಲಿ 12.76 ಪ್ರತಿಶತ ಮರಣ ಪ್ರಮಾಣ ದಾಖಲಾಗಿದೆ. ಅಮೆರಿಕದಲ್ಲಿ ಮರಣ ಪ್ರಮಾಣ 5.91 ಪ್ರತಿಶತದಷ್ಟಿದೆ. ಆದರೆ, ಆ ದೇಶದಲ್ಲಿ ಸೋಂಕಿತರ ಸಂಖ್ಯೆ 13 ಲಕ್ಷಕ್ಕೂ ಅಧಿಕವಿದ್ದು, 81 ಸಾವಿರ ಜನ ಮೃತಪಟ್ಟಿದ್ದಾರೆ.

ಏಕೆ ಕೆಲವು ರಾಜ್ಯಗಳಲ್ಲಿ ಮರಣ ಪ್ರಮಾಣ ಅಧಿಕವಿದೆ?
ಮಹಾರಾಷ್ಟ್ರ, ದಿಲ್ಲಿ ಹಾಗೂ ತಮಿಳುನಾಡಿನಲ್ಲಿ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿದ್ದರೂ ಈ ರಾಜ್ಯಗಳಲ್ಲಿ ಪಶ್ಚಿಮ ಬಂಗಾಳ, ಮಧ್ಯಪ್ರದೇಶ ಮತ್ತು ಗುಜರಾತ್‌ಗಿಂತ ಕಡಿಮೆ ಮರಣ ಪ್ರಮಾಣ ದಾಖಲಾಗಿದೆ(ಸೋಂಕಿತರ ಸಂಖ್ಯೆಗೆ ಹೋಲಿಸಿದಾಗ). ಉದಾಹರಣೆಗೆ, ತಮಿಳುನಾಡಲ್ಲಿ ಮರಣ ಪ್ರಮಾಣ 0.67 ಪ್ರತಿಶತವಿದ್ದರೆ, ಪಶ್ಚಿಮ ಬಂಗಾಲದಲ್ಲಿ 9.57 ಪ್ರತಿಶತ ದಾಖಲಾಗಿದೆ. ಮಂಗಳವಾರದ ವೇಳೆಗೆ ತಮಿಳುನಾಡಲ್ಲಿ 8 ಸಾವಿರ ಪ್ರಕರಣಗಳು ದಾಖಲಾಗಿದ್ದು, 53 ಜನ ಮೃತಪಟ್ಟಿದ್ದಾರೆ. ಇನ್ನೊಂದೆಡೆ ಪಶ್ಚಿಮ ಬಂಗಾಲದಲ್ಲಿ 2063 ಪ್ರಕರಣಗಳು ಪತ್ತೆಯಾಗಿದ್ದರೆ, ಅವರಲ್ಲಿ ಮೃತಪಟ್ಟದ್ದು 190 ಜನ!

ಕೆಲವು ರಾಜ್ಯಗಳು ಕಡಿಮೆ ಪರೀಕ್ಷೆಗಳು ನಡೆಸುತ್ತಿರುವುದೂ ಈ ರೀತಿಯ ಅಂಕಿಸಂಖ್ಯೆ ಎದುರಾಗಲು ಕಾರಣವಿರಬಹುದು. ಉದಾಹರಣೆಗೆ, ತಮಿಳುನಾಡು ಮತ್ತು ದೆಹಲಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪರೀಕ್ಷೆಗಳು ನಡೆಯುತ್ತಿವೆ. ಹೆಚ್ಚು ಪರೀಕ್ಷೆಗಳನ್ನು ನಡೆಸಿದಾಗ, ರೋಗಲಕ್ಷಣ ಕಾಣಿಸಿಕೊಳ್ಳದ (-asymptomatic cases)ಪ್ರಕರಣಗಳೂ ಪತ್ತೆಯಾಗುತ್ತವೆ. ಹೀಗಾಗಿ, ಈ ರಾಜ್ಯಗಳಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳವಾಗಿಬಿಡುತ್ತದೆ, ಆದರೆ ಮೃತಪಡುವವರ ಪ್ರಮಾಣ ಕಡಿಮೆಯೇ ಇರುತ್ತದೆ. ಇನ್ನೊಂದೆಡೆ ಪಶ್ಚಿಮ ಬಂಗಾಲ, ಮಧ್ಯಪ್ರದೇಶ ಹಾಗೂ ಗುಜರಾತ್‌ನಲ್ಲಿ ಹೆಚ್ಚಿನ ಪರೀಕ್ಷೆಗಳು ನಡೆದಿಲ್ಲ. ಈ ರಾಜ್ಯಗಳಲ್ಲಿ ರೋಗಾವಸ್ಥೆ ಉಲ್ಬಣಿಸಿದ ಮೇಲೆಯೇ ಅನೇಕರನ್ನು ಪರೀಕ್ಷಿಸಲಾಗಿದೆ. ಸಹಜವಾಗಿಯೇ, ರೋಗಾವಸ್ಥೆ ತೀವ್ರವಾದವರು ಮೃತಪಡುವ ಸಾಧ್ಯತೆ ಅಧಿಕವಿರುತ್ತದೆ.

ಭಾರತದಲ್ಲಿ ಮೊದಲ ಪ್ರಕರಣ ಪತ್ತೆಯಾಗಿದ್ದು ಜನವರಿ 30ರಂದು. ಅದಕ್ಕೂ ಮುನ್ನವೇ ಕೆಲವು ರಾಷ್ಟ್ರಗಳಲ್ಲಿ ಕೊರೊನಾ ಸೋಂಕು ಪ್ರಕರಣಗಳು ಪತ್ತೆಯಾಗಿದ್ದವು. ಹಾಗಿದ್ದರೆ, ಆ ದೇಶಗಳ ಸ್ಥಿತಿ ಈಗ ಹೇಗಿದೆ?


ಟಾಪ್ ನ್ಯೂಸ್

crime (2)

Bengaluru: ಪಾರ್ಕ್ ನಲ್ಲಿ ಹಾಡಹಗಲೇ ಜೋಡಿಯ ಬರ್ಬರ ಹತ್ಯೆ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Billionaire Priyanka; Here is the property details of Satish Jarakiholi’s daughter

Belagavi; ಕೋಟ್ಯಾಧೀಶೆ ಪ್ರಿಯಾಂಕಾ; ಸತೀಶ್ ಜಾರಕಿಹೊಳಿ ಮಗಳ ಆಸ್ತಿ ವಿವರ ಇಲ್ಲಿದೆ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!

Cricket; ಪಾಕ್ ವಿರುದ್ಧದ ಟೆಸ್ಟ್ ಸರಣಿ ಆಡಲು ರೋಹಿತ್ ಇಂಗಿತ; ಕ್ಯಾಪ್ಟನ್ ಹೇಳಿದ್ದೇನು?

Cricket; ಪಾಕ್ ವಿರುದ್ಧದ ಟೆಸ್ಟ್ ಸರಣಿ ಆಡಲು ರೋಹಿತ್ ಇಂಗಿತ; ಕ್ಯಾಪ್ಟನ್ ಹೇಳಿದ್ದೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

April 17ರಂದು ಶ್ರೀರಾಮ ನವಮಿ: ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

Rama Navami 2024: April 17ರಂದು ಶ್ರೀರಾಮ ನವಮಿ- ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

Ram Ayodhya

Rama Navami 2024: ನವಮಿಗೆ ಬಾಲಕರಾಮನ ಹಣೆಗೆ ಸೂರ್ಯ ತಿಲಕ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-qwqeqewq

Kunigal:ನವಮಿಯಂದು ಪಾನಕ ಕುಡಿದ 60 ಮಂದಿ ಅಸ್ವಸ್ಥ, ಮೂವರು ಗಂಭೀರ

crime (2)

Bengaluru: ಪಾರ್ಕ್ ನಲ್ಲಿ ಹಾಡಹಗಲೇ ಜೋಡಿಯ ಬರ್ಬರ ಹತ್ಯೆ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Billionaire Priyanka; Here is the property details of Satish Jarakiholi’s daughter

Belagavi; ಕೋಟ್ಯಾಧೀಶೆ ಪ್ರಿಯಾಂಕಾ; ಸತೀಶ್ ಜಾರಕಿಹೊಳಿ ಮಗಳ ಆಸ್ತಿ ವಿವರ ಇಲ್ಲಿದೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.