ಯಾರು ಬರುವರು ನನ್ನ ಹಿಂದೆ?


Team Udayavani, Oct 7, 2022, 6:20 AM IST

walk

ಜಗತ್ತಿನ ಎಲ್ಲ ಜೀವ ವೈವಿಧ್ಯಗಳಲ್ಲಿ ಒಂದಲ್ಲ ಒಂದು ರೀತಿ ಸ್ಪರ್ಧೆ ಎರ್ಪಟ್ಟಂತೆ ತಾ ಮುಂದು ನಾ ಮುಂದು ಎಂದು ತನಗಿಂತ ಕಿರಿದಾದ, ತನಗಿಂತ ಬಲಹೀನವಾದ ಜೀವಿಗಳ ಮೇಲೆ ತನ್ನ ಅಧಿಪಥ್ಯ ಸ್ಥಾಪಿಸಲು ಎಲ್ಲ ಜೀವಿಗಳು ಹವಣಿಸುತ್ತಿರುತ್ತವೆ. ಯಾವಾಗಲು ತಾನೇ ಬಲಶಾಲಿಯಾಗಿರಬೇಕು, ತಾನು ನೆನೆದಂತೆ ನಡೆಯಬೇಕು ಎಂದು ಹವಣಿಸುತ್ತ ಪ್ರಕೃತಿಗೆ ವಿರುದ್ಧವಾಗಿ ತನ್ನ ಶಕ್ತಿ ಪ್ರದರ್ಶನ ಮಾಡುತ್ತ ಪ್ರಕೃತಿಯಲ್ಲೇ ಹುಟ್ಟಿ ಬೆಳೆದು ಇದೇ ಪ್ರಕೃತಿಯಲ್ಲಿ ಲೀನವಾಗುತ್ತವೆ.

ಪ್ರಕೃತಿಯಲ್ಲಿನ ಇಂಥ ಜೀವ ವೈವಿಧ್ಯದಲ್ಲಿನ ಒಂದು ಮಹಾನ್‌ ಜೀವಿಯೇ ಮಾನವ ಜೀವಿ, ಆದಿಮಾನವರಿಂದ ಹಿಡಿದು ಇತ್ತೀಚಿನ ಮಹಾ ಬುದ್ದಿವಂತರೆಲ್ಲ ಒಂದೇ ವರ್ಗಕ್ಕೆ ಸೇರಿದವರು.
ತಾನಾಯಿತು ತನ್ನ ಕೆಲಸವಾಯಿತು ಅಂತ ಇರುವವರ ಮಧ್ಯೆ ತಾನು ಕೂಡ ಒಬ್ಬ ಅಂತ ತಿಳಿದೂ ಇತರ ಜೀವಿಗಳಿಗೆ ಉಪಕಾರ-ಅಪಕಾರ ಮಾಡುತ್ತಾ ತಾನು ಹುಟ್ಟಿ ಬೆಳೆದ ಪ್ರಕೃತಿಯಲ್ಲಿನ ಎಲ್ಲ ಸವಲತ್ತುಗಳನ್ನು ಅನುಭವಿಸಿ ಕೊನೆಗೊಂದು ದಿನ ಇನ್ನಿಲ್ಲವಾಗುತ್ತಾನೆ. ಹೀಗಿರುವಾಗ ತನ್ನಂತೆ ಇರುವ ಇತರ ಜೀವಿಗಳೊಂದಿಗೆ ಸಂತೋಷದಿಂದ ಬದುಕುವುದನ್ನು ಬಿಟ್ಟು ತಾನೇ ಮೇಲು, ತಾನು ಹೇಳಿದಂತೆ ಇತರರು ನಡೆಯಬೇಕೆಂಬ ಹಂಬಲ, ತಾನೇ ಎಲ್ಲರಿಗಿಂತ ಒಂದು ಹೆಜ್ಜೆ ಮುಂದೆಯೆ ಇರಬೇಕು, ತಾನೇ ಶ್ರೇಷ್ಠ ಅಂತ ಜಂಬ ಕೊಚ್ಚಿಕೋಳ್ಳುತ್ತಲೆ ಇರುತ್ತಾನೆ.

ಅದಕ್ಕೆ ಇಂಬು ನೀಡುವಂತೆ ತನ್ನ ಗ್ರಹಬಲದಿಂಲೋ ತನ್ನ ಪೂರ್ವ ಜನ್ಮದ ಫ‌ಲದಿಂದಲೊ ಎತ್ತರೆತ್ತರಕ್ಕೆ ಬೆಳೆಯುತ್ತಾ ಹೋದ ಹಾಗೆ ತನ್ನ ಜತೆ ಕಷ್ಟ ಕಾಲದಲ್ಲಿ ಇದ್ದವರನ್ನು ಮರೆತು ಬೇರೆಯೇ ಲೋಕದಲ್ಲಿ ವಿಹರಿಸುತ್ತಿರುತ್ತಾನೆ. ಅತ್ಯಂತ ಬಲಶಾಲಿ(ಬುದ್ಧಿಯಲ್ಲಿ)ಯಾದವರು ತನ್ನ ಬಲವನ್ನು ಬಲಹೀನರ ಮೇಲೆ ಪ್ರಯೋಗಿಸುತ್ತಾನೆ. ಪ್ರಕೃತಿಯೊಡನೆ ಚೆಲ್ಲಾಟವಾಡಿ ತನಗೂ ತನ್ನ ಮುಂದಿನ ಪೀಳಿಗೆಗೂ ಅಪಾಯ ತಂದೊಡುªವ ಕೆಲಸ ಕಾರ್ಯಗಳಿಗೆ ಕೈ ಹಾಕುತ್ತಾನೆ. ಒಮ್ಮೆ ಯೋಚಿಸಿ ನೋಡಿ ಸಣ್ಣವರಿದ್ದಾಗ ವಿದ್ಯಾರ್ಥಿ ಜೀವನದಲ್ಲಿ ಎಲ್ಲ ವಿಷಯಗಳಲ್ಲದಿದ್ದರೂ ಯಾವುದರ ಲ್ಲಾದರೂ ಸರಿ ತಾನು ಎಲ್ಲರಿಗಿಂತ ಮುಂದಿರಬೇಕೆಂಬ ಹಂಬಲ, ವೃತ್ತಿ ಕ್ಷೇತ್ರಕ್ಕೆ ಬಂದಾಗಲೂ ಅದೇ ತುಡಿತ ಮತ್ತೆ ಸಾಂಸಾರಿಕ ಜೀವನಕ್ಕೆ ಬಂದಾಗಲಂತು ಕೇಳುವುದುಂಟೆ ಮತ್ತದೇ ಪ್ರವೃತ್ತಿ, ನೀವು ಯಾವ ಕ್ಷೇತ್ರವನ್ನಾದರು ಬೇಕಾದರೆ ಆಯ್ಕೆ ಮಾಡಿಕೊಳ್ಳಿ ಅದೇ ಚಾಳಿ ಹಾಂಗೆಂದು ಹಿಂದೆ ಹೋಗುವುದೇ ಇಲ್ಲವೇನೆಂದಿಲ್ಲ.

ವಿದ್ಯಾರ್ಥಿಗಳು ಗಲಾಟೆ ಮಾಡಿಕೋಂಡು ಅಧ್ಯಾಪಕರ ಹತ್ತಿರ ಪೆಟ್ಟು ತಿನ್ನುವಾಗ ಹಿಂದೆಯೆ ಹೋಗುವುದು, ಸಿನೆಮಾ ನೋಡಲು ಹಿಂದೆಯೇ ಕುಳಿತುಕೊಳ್ಳುವುದು, ಯಾರಿಗಾದರು ಸಹಾಯ ಮಾಡ ಬೇಕಾಗಿ ಬಂದಾಗ ಹಿಂದೆಯೇ ಸರಿಯುವುದು, ಯಾವಾಗಲೂ ಹಣ ವಂತರ ಹಿಂದೆ ತಿರುಗು ವುದು ಹೀಗೆ ಹತ್ತು ಹಲವು ಬಗೆಯ ಜೀವಿಗಳನ್ನು ಕಾಣಬಹುದು. ಇರಲಿ ಬಿಡಿ ಮೂಕ ಪ್ರಾಣಿ ಪಕ್ಷಿಗಳ ಲ್ಲಿರುವ ಭಾತೃತ್ವ, ಪ್ರೀತಿ, ಕರುಣೆ ಮಾನವ ಜೀವಿಗಳಲ್ಲಿ ಕ್ಷೀಣಿಸು ತ್ತಿರು ವುದು ಕಂಡುಬರುತ್ತಿದೆ. ಜೀವಿಗಳ ಉಗಮ ಸ್ಥಾನವಾಗಿರುವ, ಗ್ರಹಗಳಲ್ಲಿ ಒಂದಾಗಿರುವ ಭೂಮಂಡಲದಲ್ಲಿನ ಪ್ರಕೃತಿಯ ನಾಶಕ್ಕೆ ಮಾನವನೆಂಬ ಮಹಾನ್‌ ಜೀವಿ ಕಾರಣನಾಗುತ್ತಿದ್ದಾನೆ.ತನ್ನ ಅಗತ್ಯಕ್ಕಿಂತ ಹೆಚ್ಚಿನದನ್ನು ಕೂಡಿಡು ವುದರಲ್ಲೇ ಕಾಲಕಳೆಯುತ್ತ ತನ್ನ ಅಗತ್ಯ ಇರುವಲ್ಲಿ ತನ್ನ ಕರ್ತವ್ಯಗಳನ್ನು ಮರೆತು ಬಿಡುತ್ತಿದ್ದಾನೆ. ತನ್ನ ಬಂಧುಗಳನ್ನು, ತನ್ನ ಇಷ್ಟ ಮಿತ್ರರನ್ನು, ಕಲಿಸಿದ ಗುರುಗಳನ್ನು, ತನ್ನೊಡನೆ ಆಡಿ ಬೆಳೆದವರನ್ನು, ಅಷ್ಟೇ ಯಾಕೆ ತನ್ನನ್ನು ಕಷ್ಟಪಟ್ಟು ಹೆತ್ತು ಹೊತ್ತು ಆಡಿಸಿ ಬೆಳೆಸಿದ ತನ್ನದೇ ತಾಯಿ ತಂದೆಯವರನ್ನು ಕೂಡ ಅವಗಣಿಸಿ ತಾನು ನಡೆದ ಬಂದ ಹಾದಿಯನ್ನು ಮರೆತು ಇನ್ನೇನು ನಾನೆ ಎಲ್ಲ ಎಂದು ಮೈಮರೆಯುವಾಗ ಪ್ರಕೃತಿ ತನ್ನ ಕೆಲಸವನ್ನು ಮಾಡುತ್ತದೆ. ಆ ಕೊನೆ ಕ್ಷಣದಲ್ಲಿ ಮಾನವನಿಗೆ ತನ್ನ ತಪ್ಪಿನ ಅರಿವಾಗಿ ಕಡೆಗೊಮ್ಮೆ ಹಿಂದಿರುಗಿ ನೋಡಿದಾಗ ತನ್ನ ಹಿಂದೆ ಯಾರು ಬರಲಿಲ್ಲವೆಂಬ ಕಟುಸತ್ಯ ತಿಳಿ ಯುತ್ತದೆ.

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

World Theatre Day 2024: ರಂಗಭೂಮಿ ಕಲೆ-ಯುದ್ಧ ಮತ್ತು ಶಾಂತಿ ಪರಸ್ಪರ ವಿರುದ್ಧ ಧ್ರುವ

World Theatre Day 2024: ರಂಗಭೂಮಿ ಕಲೆ-ಯುದ್ಧ ಮತ್ತು ಶಾಂತಿ ಪರಸ್ಪರ ವಿರುದ್ಧ ಧ್ರುವ

ಡೌಟೇ ಬೇಡ, ಜೋಡೆತ್ತುಗಳ ಹಾಗೆ ನಾನು, ಅನಂತ ಹೆಗಡೆ ಇಬ್ಬರೂ ಕೆಲಸ ಮಾಡುತ್ತೇವೆ…

ಡೌಟೇ ಬೇಡ, ಜೋಡೆತ್ತುಗಳ ಹಾಗೆ ನಾನು, ಅನಂತ ಹೆಗಡೆ ಇಬ್ಬರೂ ಕೆಲಸ ಮಾಡುತ್ತೇವೆ…

Book Review;ವಿಶಿಷ್ಟ ರೂಪಕ ಶೈಲಿಯಿಂದ ಚಿತ್ರ ರಸಿಕರ ಮನಗೆದ್ದ ಕಾಸರವಳ್ಳಿಯ “ಬಿಂಬ ಬಿಂಬನ”

Book Review;ವಿಶಿಷ್ಟ ರೂಪಕ ಶೈಲಿಯಿಂದ ಚಿತ್ರ ರಸಿಕರ ಮನಗೆದ್ದ ಕಾಸರವಳ್ಳಿಯ “ಬಿಂಬ ಬಿಂಬನ”

World Water Day: ಜುಳು ಜುಳು ಸದ್ದೇಕೆ ಉರಿ ಮೌನ

World Water Day: ಜುಳು ಜುಳು ಸದ್ದೇಕೆ ಉರಿ ಮೌನ

ಪ್ರೊ| ಕು.ಶಿ.: ಜ್ಞಾನಕಾಶಿಯಲ್ಲೊಬ್ಬ ಫ‌ಕೀರ

ಪ್ರೊ| ಕು.ಶಿ.: ಜ್ಞಾನಕಾಶಿಯಲ್ಲೊಬ್ಬ ಫ‌ಕೀರ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.