ಪ್ರಕೃತಿಯ ಆಶಯಗಳಿಗೆ ಭಂಗ ತರುತ್ತಿದ್ದೇವೇಕೆ?

'ಪ್ರಕೃತಿ ಮನುಷ್ಯರ ಆಸೆಗಳನ್ನು ಈಡೇರಿಸಬಹುದೇ ಹೊರತು ದುರಾಸೆಗಳನ್ನಲ್ಲ'

Team Udayavani, Jun 5, 2019, 6:29 AM IST

w-38

ಪ್ರಕೃತಿ ಯಾವತ್ತೂ ನಿರ್ದಿಷ್ಟ ನಿಯಮಗಳಿಗೆ ಅನುಗುಣವಾಗಿ ಕೋಟ್ಯಂತರ ಜೀವಿಗಳ ನಡುವೆ ಒಂದು ಸಂತುಲಿತ ಸಂಬಂಧವನ್ನು ಕಾಯ್ದುಕೊಂಡು ಬರುತ್ತಿದೆ. ನಾವು ಪ್ರಕೃತಿಯ ಮೂಲ ಆಶಯಗಳಿಗೆ ಭಂಗ ತರುತ್ತಾ ಭೂಮಿಯನ್ನು ನಮಗೆ ಬೇಕಾದಂತೆ ಅನೈಸರ್ಗಿಕವಾಗಿ ಬಳಸಿಕೊಳ್ಳುತ್ತಾ ಸಾಗುತ್ತಿದ್ದೇವೆ.

ಜೂನ್‌ ಐದು ಪರಿಸರದ ದಿನ ಎಂದಾಚರಿಸುತ್ತೇವೆ. ಆದರೆ ಜೂನ್‌ ಐದರಂದು ಮಾತ್ರ ಪರಿಸರದ ಬಗೆಗೆ ಎಂದೂ ಇಲ್ಲದ ಕಾಳಜಿಯ ಢೋಂಗಿತನವನ್ನು ಪ್ರದರ್ಶಿಸುತ್ತಾ ಉಳಿದ ದಿನಗಳಲ್ಲಿ ಪರಿಸರವನ್ನು ಮರೆತದ್ದೇ ಆದಲ್ಲಿ, ಮುಂದೊಂದು ದಿನ ಅದಕ್ಕೆ ಬಹಳ ದೊಡ್ಡ ಬೆಲೆ ತೆರಬೇಕಾಗಿ ಬರುವುದು ಸತ್ಯ. ನಾವು ಹುಟ್ಟಿ ಬೆಳೆಯುವುದೇ ಈ ಪರಿಸರದ ನಡುವೆ. ನಮ್ಮ ದಿನನಿತ್ಯದ ಪ್ರತಿಕ್ಷಣಗಳಲ್ಲೂ ನಾವು ನಮ್ಮ ಉಳಿವಿಗಾಗಿ ಈ ಪರಿಸರವನ್ನೇ ಅವಲಂಬಿ ಸಿದ್ದೇವೆ. ಪರಿಸರವಿಲ್ಲದೆ ನಾವಿಲ್ಲ ಎಂದ ಮೇಲೆ ಅದನ್ನು ಪ್ರತಿ ದಿನ ಅಷ್ಟೇ ಚೆನ್ನಾಗಿ ಕಾಳಜಿಯಿಂದ ನೋಡಿಕೊಳ್ಳಬೇ ಕಾಗಿರುವುದು ಮನುಷ್ಯರೆನ್ನಿಸಿಕೊಂಡ ನಮ್ಮೆಲ್ಲರ ಆದ್ಯ ಕರ್ತವ್ಯ.

ಆಧುನಿಕ ಜೀವನ ಶೈಲಿಯ ಭರಾಟೆಯ ನಡುವೆ ನಾವು ಯಾವುದಕ್ಕೆ ಎಷ್ಟು ಪ್ರಾಮುಖ್ಯತೆಯನ್ನು ಕೊಡಬೇಕಿತ್ತೋ ಅದನ್ನು ಮರೆತು ನಮ್ಮದೇ ಸೀಮಿತ ವಲಯದೊಳಗಣ ಜಂಜಾಟಗಳನ್ನೇ ದೊಡ್ಡದು ಮಾಡಿಕೊಂಡು ಕುಳಿತಿದ್ದೇವೆ. ಪರಿಸರ ಎಂದರೇನು? ಅದರ ವ್ಯಾಪ್ತಿ ಎಂಥದ್ದು? ಅದರ ವಿಕೋಪಗಳು ನಿಜಕ್ಕೂ ಹೇಗಿರುತ್ತವೆ? ಅದನ್ನು ಉಳಿಸಿಬೆಳೆಸಿಕೊಳ್ಳುವಲ್ಲಿ ನಿಜಕ್ಕೂ ನಾವು ಮಾಡಬೇಕಾಗಿರುವುದೇನು? ಎನ್ನುವ ಹಲವಾರು ಪ್ರಶ್ನೆಗಳಿಗೆ ನಾವುಗಳು ಉತ್ತರವನ್ನು ಕಂಡುಕೊಳ್ಳುವ ಪ್ರಯತ್ನವನ್ನೇ ಮಾಡುತ್ತಿಲ್ಲ.

ನಾವು ಮಾಡುತ್ತಿರುವ ದೊಡ್ಡ ತಪ್ಪು ಏನು ಗೊತ್ತಾ? ಈ ಸುನಾಮಿ, ಜಲ ಪ್ರಳಯ, ಹಿಮ ಕುಸಿತ, ಭೂಕಂಪ, ಚಂಡಮಾರುತ, ಭೂಕಂಪನ, ಆಲಿಕಲ್ಲು ಮಳೆ, ನೆರೆ ಹಾವಳಿ, ಬಿಸಿಗಾಳಿ ,ಬಿರುಬಿಸಿಲು ಮತ್ತು ಅದರಿಂದ ಸಾವು ನೋವುಗಳೆಲ್ಲಾ ಘಟಿಸಿದಾಗ ನಮಗೇನೂ ತೊಂದರೆಯಿಲ್ಲ. ಅವೆಲ್ಲಾ ಕೇವಲ ಆಯಾ ಪ್ರದೇಶಕ್ಕಷ್ಟೇ ಸೀಮಿತ ಅಂದುಕೊಂಡು ಸುಮ್ಮನಿದ್ದು ಬಿಡುತ್ತೇವೆ. ಪರಿಸರ ರಕ್ಷಣೆಯ ಗಾಂಭೀರ್ಯತೆಯ ಅರಿವು ಹೆಚ್ಚಿನವರಿಗೆ ಇಲ್ಲವೇ ಇಲ್ಲ. ಮಾನವ ಕುಲ ಈಗಿರುವ ರೀತಿಯಲ್ಲೇ ಪ್ರಕೃತಿಯ ವಿರುದ್ಧ ಹೋಗುತ್ತಿದ್ದರೆ ಮುಂದೊಂದು ದಿನ ಅದರ ಭೀಕರ ದುಷ್ಪರಿಣಾಮಗಳನ್ನು ಜಲ, ನೆಲ, ಕುಲ ಭೇದವಿಲ್ಲದೇ ನಾವೆಲ್ಲರೂ ಅನುಭವಿಸಬೇಕಿರುವುದಂತೂ ಸತ್ಯ. ಈಗಲೂ ಸಾಕಷ್ಟು ಅನುಭವಿಸುತ್ತಿದ್ದರೂ ನಮ್ಮ ದಪ್ಪ ಚರ್ಮಕ್ಕೆ ಅದು ತಾಗುತ್ತಿಲ್ಲ ಅನ್ನೋದು ವಿಷಾದನೀಯ. ಪ್ರಕೃತಿಗೆ ಸವಾಲು ಹಾಕುವುದು ಮನುಷ್ಯರಿಂದ ಸಾಧ್ಯವಿಲ್ಲದ ವಿಚಾರ.

ಗಾಂಧೀಜಿ ಹೇಳಿರುವ ಒಂದು ಮಾತು ಯಾವತ್ತೂ ನೆನಪಿನಲ್ಲಿಡಬೇಕು. ಪ್ರಕೃತಿ ಮನುಷ್ಯರ ಆಸೆಗಳನ್ನು ಈಡೇರಿಸ ಬಹುದೇ ಹೊರತು ದುರಾಸೆಗಳನ್ನಲ್ಲ. ಪ್ರಕೃತಿ ಯಾವತ್ತೂ ಒಂದು ನಿರ್ದಿಷ್ಟ ನಿಯಮಗಳಿಗೆ ಅನುಗುಣವಾಗಿ ಕೋಟ್ಯಂತರ ಜೀವಿಗಳ ನಡುವೆ ಒಂದು ಸಂತುಲಿತ ಸಂಬಂಧವನ್ನು ಕಾಯ್ದುಕೊಂಡು ಬರುತ್ತಿದೆ. ದುರಾಸೆಗೆ ಬಿದ್ದಿರುವ ನಾವು ಪ್ರಕೃತಿಯ ಮೂಲ ಆಶಯಗಳಿಗೆ ಭಂಗ ತರುತ್ತಾ ಭೂಮಿಯನ್ನು ನಮಗೆ ಬೇಕಾದಂತೆ ಅನೈಸರ್ಗಿಕವಾಗಿ ಬಳಸಿಕೊಳ್ಳುತ್ತಾ ಸಾಗುತ್ತಿ ದ್ದೇವೆ.

ಅಕ್ರಮ ಗಣಿಗಾರಿಕೆ, ಅಣು ಸ್ಥಾವರಗಳು, ಅತ್ಯಾಧುನಿಕ ಜೀವನ ಶೈಲಿ, ಅರಣ್ಯಗಳ ನಾಶ, ಕಟ್ಟಡಗಳ ನಿರ್ಮಾಣ, ಕಾಂಕ್ರೀಟಿಕರಣ, ಅವೈಜ್ಞಾನಿಕ ಮೀನುಗಾರಿಕೆ, ಅಸಂಪ್ರದಾಯಿಕ ವ್ಯವಸಾಯ ಪದ್ಧತಿ, ನದಿ ತಿರುವು ಯೋಜನೆಗಳು, ಅತಿಯಾದ ಇಂಧನ ಹಾಗೂ ಪ್ಲಾಸ್ಟಿಕ್‌ ಬಳಕೆ ಹೀಗೆ ನೂರಾರು ರೀತಿಯಲ್ಲಿ ಪರಿಸರಕ್ಕೆ ಮಾರಕವಾಗುತ್ತಿರುವ ಕೆಲಸಗಳಲ್ಲಿ ಸತತವಾಗಿ ನಿರತರಾಗಿದ್ದೇವೆ.ಇರುವುದೊಂದೇ ಭೂಮಿ ಎನ್ನುವುದನ್ನು ನಾವು ಮರೆತಂತಿದೆ. ಇದೆಲ್ಲದರ ಪರಿಣಾಮಗಳನ್ನು ಈಗಾಗಲೇ ಅನುಭವಿಸುತ್ತಿದ್ದರೂ ಅದೇನೂ ದೊಡ್ಡದಲ್ಲವೆನ್ನುವಂತೆ ವರ್ತಿಸುತ್ತಿದ್ದೇವೆ. ನಾವು ಸದ್ಯ ಹೇಗೋ ಬದುಕಬಹುದು. ಆದರೆ ನಮ್ಮದೇ ಮಕ್ಕಳಿಗೆ ಒಂದು ಉತ್ತಮವಾದ ಪರಿಸರವನ್ನು ಬಿಟ್ಟು ಹೋಗುವುದು ನಮ್ಮ ಕರ್ತವ್ಯ ಅಲ್ಲವೆನ್ನುತ್ತೀರಾ?

ಒಂದು ಸುದ್ದಿ ಕೇಳಿ. ವಲ್ಡ್ರ್ ವೈಲ್ಡ್ ಲೈಫ್ ಫ‌ಂಡ್‌ ಅಧ್ಯಯನದ ವರದಿಯೊಂದರ ಪ್ರಕಾರ 1970ರಿಂದ 2010 ನಡುವಣ ನಲವತ್ತು ವರುಷಗಳ ಅವಧಿಯಲ್ಲಿ ಈ ಜಗತ್ತಿನಲ್ಲಿ ವನ್ಯ ಜೀವಿಗಳ ಸಂಖ್ಯೆಯಲ್ಲಿ ಶೇಕಡಾ ಐವತ್ತೆರಡರಷ್ಟು ಇಳಿಕೆಯಾಗಿದೆ. ಸಿಹಿ ನೀರು ಜೀವಿ ಪ್ರಬೇಧಗಳು 76 ಶೇಕಡದಷ್ಟು ಕಡಿಮೆಯಾಗಿದ್ದರೆ ಭೂ ಮತ್ತು ಸಾಗರವಾಸಿ ಪ್ರಬೇಧಗಳು ಶೇಕಡ 39ರಷ್ಟು ಕಡಿಮೆಯಾಗಿವೆ. ಸುಮಾರು 3000ಕ್ಕೂ ಅಧಿಕ ವನ್ಯಜೀವಿ ಪ್ರಬೇಧಗಳು ಅವಸಾನದ ಅಂಚಿನಲ್ಲಿವೆ. ಇದಕ್ಕೆಲ್ಲಾ ಮೂಲಕಾರಣ ಮನುಷ್ಯನೇ.

ಮನುಷ್ಯ ತನ್ನ ದುರಾಸೆಗಾಗಿ ವನ್ಯಜೀವಿಗಳ ಆವಾಸ ಸ್ಥಾನಗಳಿಗೆ ಲಗ್ಗೆಯಿಟ್ಟ. ಅರಣ್ಯಗಳ ಅತಿಕ್ರಮಣ ನಡೆಸುತ್ತಾ ಬಂದ. ಮೋಜಿಗಾಗಿ ರೆಸಾರ್ಟ್‌ಗಳು ನಿರ್ಮಾಣವಾದವು. ಕೈಗಾರಿಕಾ ವಲಯಗಳು ಹೆಚ್ಚಾದಂತೆ ವಾತಾವರಣ ಕಲುಷಿತವಾಯಿತು. ಪರಿಣಾಮ ಹವಾಮಾನದಲ್ಲಿಯೂ ಏರುಪೇರು. ಇದರ ಒಟ್ಟು ಪರಿಣಾಮ ವನ್ಯಜೀವಿಗಳ ಅವನತಿ. ಅವುಗಳು ಸತ್ತರೆ ನಮಗೇನಾಯಿತು ಅಂದುಕೊಳ್ಳಬೇಡಿ. ನೆಲ, ಜಲ, ಜೀವ ಸಂಕುಲದ ನಡುವಣ ಪ್ರಕೃತಿಯ ಸಂಬಂಧಗಳು ನಾವಂದು ಕೊಂಡಷ್ಟು ಸರಳವಲ್ಲ.

ನಮ್ಮ ಬದುಕನ್ನು ಸುಂದರವಾಗಿಸುವಲ್ಲಿ ಈ ಸಸ್ಯಗಳು, ಪ್ರಾಣಿಗಳು ನೀಡುತ್ತಿರುವ ಕೊಡುಗೆ ಅಪಾರ. ಅವುಗಳು ಅಳಿದ ವೆಂದರೆ ನಾವು ಅಳಿದಂತೆಯೇ. ಅಷ್ಟಕ್ಕೂ ಪ್ರಕೃತಿ ಮುನಿದರೆ ಏನೇನಾಗಬಲ್ಲುದು ಎನ್ನುವುದನ್ನು ಪ್ರಕೃತಿಯೇ ನಮಗೆ ಆಗಾಗ ತೋರಿಸಿಕೊಡುತ್ತಿದೆ. ಭವಿಷ್ಯದ ಬಗೆಗೆ ಭಯ ಹುಟ್ಟಿಸುವ ಇಂತಹ ಅಂಕಿ ಅಂಶಗಳು ಸಹಸ್ರಾರು ಲಭ್ಯವಿವೆ. ಇನ್ನೂ ಕೂಡ ನಾವು ಎಚ್ಚೆತ್ತುಕೊಳ್ಳುವುದಿಲ್ಲವೆಂದರೆ ಅದು ನಮ್ಮ ಮೂರ್ಖತನವಷ್ಟೆ ಮತ್ತು ಅಂತಹ ಮೂರ್ಖತನಕ್ಕೆ ಮುಂದೊಂದು ದಿನ ಪಶ್ಚತ್ತಾಪ ಪಡಲೂ ಆಗದಿರುವಂತಹ ಪರಿಸ್ಥಿತಿ ನಿರ್ಮಾಣಗೊಂಡಿರುತ್ತದೆ ಎನ್ನುವುದು ಸತ್ಯ.

ಪರಿಸರವನ್ನು ಉಳಿಸುವಲ್ಲಿ ವಿಶ್ವಾದ್ಯಂತ ವಿವಿಧ ರೀತಿಯ ಪ್ರಯತ್ನಗಳನ್ನು ಸಹಸ್ರಾರು ಸಣ್ಣ ದೊಡ್ಡ ಸಂಘಟನೆಗಳು ಸಂಸ್ಥೆಗಳು ಮಾಡಿಕೊಂಡು ಬರುತ್ತಲೇ ಇವೆ. ವಿಶ್ವಸಂಸ್ಥೆ ಕೂಡ ಈ ನಿಟ್ಟಿನಲ್ಲಿ ಹಲವಾರು ಗಮನಾರ್ಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಇದೆಲ್ಲದರ ಒಟ್ಟು ಪರಿಣಾಮವಾಗಿ ಒಂದಿಷ್ಟು ಆಶಾದಾಯಕ ಅಂಶಗಳು ಪರಿಸರದ ರಕ್ಷಣೆಯ ಬಗೆಗೆ ಕಂಡುಬಂದಿರುವುದು ಸತ್ಯ. ಆದರೆ ಈ ಪ್ರಯತ್ನಗಳು ಮಾತ್ರ ಸಾಕಾಗುವುದಿಲ್ಲ. ಈ ಪ್ರಪಂಚದ ಪ್ರತಿಯೊಬ್ಬ ವ್ಯಕ್ತಿಯಲ್ಲೂ ಕೂಡ ಪರಿಸರ ಮತ್ತು ಅದರ ರಕ್ಷಣೆಯ ಅಗತ್ಯದ ಬಗೆಗೆ ಅರಿವು ಹುಟ್ಟಬೇಕಿದೆ.

ಆ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯಬೇಕಿದೆ. ಶಾಲಾ ಕಾಲೇಜು ಗಳಲ್ಲಿ ಪಠ್ಯಕ್ರಮದ ಕಡ್ಡಾಯ ಭಾಗವಾಗಿ ಪರಿಸರ ಶಿಕ್ಷಣವನ್ನು ಆಳವಡಿಸಿಕೊಳ್ಳಬೇಕಿದೆ. ಸಾವಯವ ಕೃಷಿಗೆ ಪ್ರೋತ್ಸಾಹ, ಇಂಧನ ಮತ್ತು ಪ್ಲಾಸ್ಟಿಕ್‌ನ ಮಿತವಾದ ಬಳಕೆ, ಸೌರ ಶಕ್ತಿಯ ಬಳಕೆಯನ್ನು ಉತ್ತೇಜಿಸುವುದು, ಗಣಿಗಾರಿಕೆ ಮೀನು ಗಾರಿಕೆ ರಸಗೊಬ್ಬರಗಳ ತಯಾರಿಕೆ ಇತ್ಯಾದಿಗಳಲ್ಲಿ ಕಠಿಣ ನಿಯಮಗಳ ಅಳವಡಿಕೆ ಹೀಗೆ ನೂರಾರು ರೀತಿಯಲ್ಲಿ ಪರಿಸರವನ್ನು ಉಳಿಸುವತ್ತ ನಾವು ಸರಕಾರದ ಪ್ರಯತ್ನಗಳೊಂದಿಗೆ ಕೈ ಜೋಡಿಸಬಹುದು.

ಗಿಡ ನೆಡುವುದು ಮುಖ್ಯ ಅಲ್ಲ. ಹಾಗೆ ನೆಟ್ಟ ಗಿಡವನ್ನು ದಿನಂಪ್ರತಿ ನೀರೆರೆದು ಪೋಷಿಸಿ ಮರವನ್ನಾಗಿಸುವಲ್ಲಿ ನಮ್ಮ ನಿಜವಾದ ಕಾಳಜಿ ಅಡಗಿದೆ. ಸ್ವಚ್ಛತೆ, ಶಿಸ್ತುಬದ್ಧ ಜೀವನ ಶೈಲಿ, ಉಪಕಾರ ಸ್ಮರಣೆ ಮತ್ತು ಮಾನವೀಯತೆ ಪರಿಸರ ರಕ್ಷಣೆಯ ಮುಖ್ಯ ಸಾಧನಗಳು. ಭಾಷಣ ಮತ್ತು ಬರಹದ ಮಾತುಗಳು ಕಾರ್ಯರೂಪಕ್ಕೆ ಬರಬೇಕಿದೆ.

ನಮ್ಮ ಪ್ರಯತ್ನಗಳು ಕೇವಲ ಒಂದು ದಿನಕ್ಕೆ ಸೀಮಿತವಾಗದೆ ನಿತ್ಯನಿರಂತರವಾಗಿ ಸಾಗಬೇಕಿದೆ. ಹಾಗಾದಲ್ಲಿ ಮಾತ್ರ ಪರಿಸರ ದಿನಾಚರಣೆಗೆ ಒಂದು ಅರ್ಥ ಮೂಡಲು ಸಾಧ್ಯ. ಆ ನಿಟ್ಟಿನಲ್ಲಿ ಶ್ರಮಿಸೋಣ. ಏಕೆಂದರೆ ಈ ಪರಿಸರ ಅಥವಾ ಪ್ರಕೃತಿ ನಮ್ಮೆಲ್ಲರ ತಾಯಿ. ಅವಳ ರಕ್ಷಣೆ ನಮ್ಮ ಹೊಣೆ. ಅದಕ್ಕೆ ಕಟಿಬದ್ಧರಾಗೋಣ.

ಸೂಚನೆ: ಜೂ.2 ಮತ್ತು 3ರಂದು ಪ್ರಕಟವಾದ ರಾಜಕೀಯ ವಿಶ್ಲೇಷಣೆಯ ಲೇಖನಗಳು ಖ್ಯಾತ ಲೇಖಕ ಎಂ.ಜೆ.ಅಕ್ಬರ್‌ ಸ್ಟೇಟ್ ಟೈಮ್ಸ್‌ ಎಂಬ ಪತ್ರಿಕೆಗೆ ಬರೆದ ಲೇಖನದ ಭಾವಾನುವಾದ.

– ನರೇಂದ್ರ ಎಸ್‌ ಗಂಗೊಳ್ಳಿ

ಟಾಪ್ ನ್ಯೂಸ್

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

April 17ರಂದು ಶ್ರೀರಾಮ ನವಮಿ: ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

Rama Navami 2024: April 17ರಂದು ಶ್ರೀರಾಮ ನವಮಿ- ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

Ram Ayodhya

Rama Navami 2024: ನವಮಿಗೆ ಬಾಲಕರಾಮನ ಹಣೆಗೆ ಸೂರ್ಯ ತಿಲಕ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.