ಏಕೆ ರಾಜೀನಾಮೆ?


Team Udayavani, Jul 9, 2019, 5:07 AM IST

N-karnataka

ಐದು ವರ್ಷಗಳಿಗೆ ಅಧಿಕಾರ ನಡೆಸಲು ಜನ ತೀರ್ಪು ಕೊಟ್ಟು ಒಂದು ವರ್ಷವಾಗುತ್ತಿರುವಂತೆಯೇ ರಾಜೀನಾಮೆ ಕೊಟ್ಟು ಶಾಸಕರು ಮನೆಯಲ್ಲಿ ಕುಳಿತುಕೊಂಡಿದ್ದರೆ ಜನ ಏನು ಮಾಡಬೇಕು?

ಕರ್ನಾಟಕದಲ್ಲಿ ಏನು ನಡೆಯುತ್ತಿದೆ ಎನ್ನುವುದೇ ಒಂದು ಕುತೂಹಲ. ಎಲ್ಲವೂ ಅನುಕೂಲ ಶಾಸ್ತ್ರ ಅಥವಾ ಒಬ್ಬರಿಗೆ ಸರಿಕಾಣುವುದು ಮತ್ತೂಬ್ಬರಿಗೆ ಸರಿಕಾಣುವುದಿಲ್ಲ. ಆದರೆ ಜನಸಾಮಾನ್ಯರು ಮಾತ್ರ ಇಲ್ಲಿ ನಡೆಯುತ್ತಿರುವುದೆಲ್ಲವೂ ನಮ್ಮ ಹಿತಾಸಕ್ತಿಗೆ ಮಾರಕ ಎನ್ನುತ್ತಿದ್ದಾರೆ.

ಐದು ವರ್ಷಗಳಿಗೆ ಅಧಿಕಾರ ನಡೆಸಲು ಜನ ತೀರ್ಪು ಕೊಟ್ಟು ಒಂದು ವರ್ಷವಾಗುತ್ತಿರುವಂತೆಯೇ ರಾಜೀನಾಮೆ ಕೊಟ್ಟು ಶಾಸಕರು ಮನೆಯಲ್ಲಿ ಕುಳಿತುಕೊಂಡಿದ್ದರೆ ಜನ ಏನು ಮಾಡಬೇಕು? ಇವರನ್ನು ಆರಿಸಿ ಕಳುಹಿಸಿದ ತಪ್ಪಿಗೆ ಜನರೇ ನಾಚಿಕೆ ಪಡಬೇಕಷ್ಟೆ.

ಅಧಿಕಾರ ಸಿಗಲಿಲ್ಲ ಎನ್ನುವ ಕಾರಣವೇ ಪ್ರಮುಖವಾಗಿ ಹಪಾಹಪಿಸುತ್ತಿದ್ದಾರೆ. ಅಧಿಕಾರವೇ ಪ್ರಮುಖವಾಗಿದ್ದರೆ ಅಥವಾ ಅದು ಶಾಶ್ವತವಾಗಿರುತ್ತಿದ್ದರೆ ಬೇರೇಯೇ ಮಾತು, ಅಧಿಕಾರ ಯಾವ ಕಾರಣಕ್ಕೆ ಬೇಕು ಎನ್ನುವುದೇ ಗೊತ್ತಿಲ್ಲದವರು ಈಗ ಹೊಸ ವರಸೆ ಮುಂದಿಟ್ಟುಕೊಂಡು ಆಟವಾಡುತ್ತಿದ್ದಾರೆ ಅನ್ನಿಸುತ್ತಿದೆ.

ಪ್ರಜಾಪ್ರಭುತ್ವದಲ್ಲಿ ಒಂದು ನೀತಿ ಇರುತ್ತದೆ, ಸಿದ್ಧಾಂತವಿರುತ್ತದೆ. ನಾವು ಈ ಸಿದ್ಧಾಂತಕ್ಕೆ ಬದ್ಧರಾಗಿರುತ್ತೇವೆ ಎಂದು ಮಾತುಕೊಟ್ಟು ಇದೀಗ ಮಾತಿಗೆ ತಪ್ಪುತ್ತಿದ್ದಾರಲ್ಲವೇ?

ಯುವಕರು ರಾಜಕೀಯಕ್ಕೆ ಬರಬೇಕು, ಈ ದೇಶದ ಜನರ ಸಮಸ್ಯೆ ದೂರಾಗಬೇಕು ಎನ್ನುವ ಉದ್ದೇಶವೊಂದಿತ್ತು. ವಿದ್ಯಾವಂತರು ರಾಜಕೀಯ ಪ್ರವೇಶಿಸಿದರೆ ಈ ದೇಶದ ಚಿತ್ರಣವೇ ಬದಲಾಗುತ್ತದೆ ಎನ್ನುವ ಕಲ್ಪನೆಯಿತ್ತು. ಅವೆಲ್ಲ ಈಗ ಹುಸಿಯಾಗಿವೆ. ಸಮಸ್ಯೆಗಳು ಬೆಟ್ಟದಷ್ಟಿದ್ದು ದಿನ ಕಳೆದಂತೆ ಅವು ಬೆಳೆಯುತ್ತಿವೆ. ಬಡತನ, ವಸತಿ ಸಮಸ್ಯೆ, ಕುಡಿಯುವ ನೀರಿಗೆ ಹಾಹಾಕಾರ, ಉದ್ಯೋಗ ಸಮಸ್ಯೆಗಳು ಒಂದೇ ಎರಡೇ… ಈ ಸಮಸ್ಯೆಗಳು ನಮ್ಮಿಂದ ಮತಪಡೆದು ಹೋದ ಮಂದಿಗೆ ಅರಿವಿಲ್ಲವೇ? ಅಥವಾ ಅರಿವಿದ್ದರೂ ಅವು ಮುಖ್ಯವಲ್ಲ ಅಂದುಕೊಂಡಿದ್ದಾರೆಯೇ ? ಇಂಥ ಪ್ರಶ್ನೆಗಳು ಜನಸಾಮಾನ್ಯರನ್ನು ಕಾಡುತ್ತಿವೆ. ತನಗೆ ಮಂತ್ರಿ ಹುದ್ದೆ ಸಿಗಬೇಕು, ತಾನು ಅಧಿಕಾರ ನಡೆಸಬೇಕು ಎನ್ನುವುದು ತಪ್ಪು ಎಂದರ್ಥವಲ್ಲ. ಆದರೆ ಅಧಿಕಾರ ಸಿಗಬೇಕು, ಅದು ಜನಸಾಮಾನ್ಯರ ಸಮಸ್ಯೆಗಳನ್ನು ನಿವಾರಿಸಬೇಕು ನಿಜ, ಎಷ್ಟು ಸಮಸ್ಯೆಗಳನ್ನು ನಿವಾರಿಸಿದ್ದಾರೆ? ಎಷ್ಟು ಜನಸಾಮಾನ್ಯರ ಬವಣೆಗಳಿಗೆ ಪರಿಹಾರ ಹುಡುಕಿದ್ದಾರೆ? ಎಷ್ಟು ದಿನ ಸದನದಲ್ಲಿ ನಡೆಯುವ ಚರ್ಚೆಗಳಲ್ಲಿ ಭಾಗವಹಿಸಿದ್ದಾರೆ?

ಸಾಲು ಸಾಲು ಸವಾಲುಗಳು ಹುಟ್ಟಿಕೊಂಡು ಜನಸಾಮಾನ್ಯರನ್ನು ಕಾಡುತ್ತಿವೆ. ಆದರೆ ನಮ್ಮ ಜನಪ್ರತಿನಿಧಿಗಳು ಮಾತ್ರ ತಮ್ಮ ಹುದ್ದೆಯ ಮೇಲೆ ಕಣ್ಣಿಟ್ಟು ಅದನ್ನು ಪಡೆಯಲು ಶತಾಯಗತಾಯ ಹೋರಾಟ ಮಾಡುತ್ತಾ ಕಾಲಹರಣ ಮಾಡುತ್ತಿದ್ದಾರೆ. ಇದು ಕೇವಲ ಒಂದು ಪಕ್ಷದ ಸಮಸ್ಯೆಯಲ್ಲ ಅಥವಾ ಒಬ್ಬರ ಪ್ರಶ್ನೆಯಲ್ಲ. ಕಾಂಗ್ರೆಸ್‌, ಜೆಡಿಎಸ್‌, ಬಿಜೆಪಿ ಮೂರೂ ಪಕ್ಷಗಳೂ ಅವುಗಳ ಮೂಲಕ ಆಯ್ಕೆಯಾಗಿರುವ ಶಾಸಕರೂ ಸಮಾನರು. ಹಿಂದೆಯೂ ಶಾಸಕರ ರಾಜೀನಾಮೆ ಪ್ರಕರಣಗಳಿದ್ದವು. ಆದರೆ ಇಷ್ಟು ಲಜ್ಜೆಗೇಡಿತನವಿರಲಿಲ್ಲ. ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ನೀರಾವರಿ ಮಂತ್ರಿಯಾಗಿದ್ದ ದೇವೇಗೌಡರು ರೈತರ ನೀರಾವರಿಗೆ ಬಜೆಟ್‌ನಲ್ಲಿ ನೀಡಿದ ಹಣ ಕಡಿಮೆಯಾಯಿತು ಎನ್ನುವ ಕಾರಣ ನೀಡಿ ರಾಜೀನಾಮೆ ಕೊಟ್ಟಿದ್ದರು.

ರಾಮಕೃಷ್ಣ ಹೆಗಡೆಯವರು ಅಪವಾದಕ್ಕೆ ಒಳಗಾಗಿ ಅದು ಇತ್ಯರ್ಥವಾಗುವ ತನಕ ಮುಖ್ಯಮಂತ್ರಿ ಹುದ್ದೆಯೇ ಬೇಡವೆಂದು ರಾಜೀನಾಮೆ ಕೊಟ್ಟಿದ್ದರು. ಈ ಘಟನೆಗಳು ಎರಡು ಉದಾಹರಣೆ ಮಾತ್ರ. ಇಂಥ ಹತ್ತು ಹಲವು ಉದಾಹರಣೆಗಳಿವೆ.

ಮೌಲ್ಯಾಧಾರಿತ ರಾಜಕಾರಣವನ್ನು ಮಾಡಿ ರಾಜೀನಾಮೆ ಕೊಡಿ. ಅದನ್ನು ಜನ ಸಹಿಸಿಕೊಳ್ಳುತ್ತಾರೆ. ಹುದ್ದೆ ಸಿಕ್ಕಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕಾಗಿ ರಾಜೀನಾಮೆ ಕೊಟ್ಟು ಏನನ್ನು ಸಾಧಿಸುತ್ತೀರಿ?

ನಮ್ಮ ರಾಜಕೀಯ ಪರಂಪರೆ ದೊಡ್ಡದು, ಅದಕ್ಕೆ ಅದರದ್ದೇ ಆದ ಘನತೆ ಇದೆ. ಈ ಘನತೆಯನ್ನು ಕಡಿಮೆ ಮಾಡಬೇಡಿ. ನೀವು ರಾಜೀನಾಮೆ ಕೊಟ್ಟರೆ ಹೊಸದಾಗಿ ಚುನಾವಣೆ ನಡೆಯಬೇಕು, ಕೋಟ್ಯಂತರ ಹಣ ಖರ್ಚು ಮಾಡಬೇಕು. ಇದನ್ನು ನೀವು ಭರಿಸುತ್ತೀರಾ? ಜನಸಾಮಾನ್ಯರ ತಲೆಗೆ ಹೊರೆ ಬೀಳುತ್ತದೆ. ಈಗಲೇ ಪ್ರತಿಯೊಬ್ಬರ ತಲೆ ಮೇಲೆ ಎಷ್ಟು ಹೊರೆ ಇದೆ ಎನ್ನುವುದನ್ನು ಅರ್ಥಮಾಡಿಕೊಳ್ಳಿ.

-ಚಿದಂಬರ ಬೈಕಂಪಾಡಿ

 

ಟಾಪ್ ನ್ಯೂಸ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

17-voting

Vote: ಮತದಾನದ ಮಹತ್ವ

Siddaramaiah

Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ

15-udupi

Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.