ಮಹಿಳೆಯರ ಸಹಭಾಗಿತ್ವ ,ಸಾಧನೆ


Team Udayavani, Mar 6, 2021, 8:18 PM IST

ಮಹಿಳೆಯರ ಸಹಭಾಗಿತ್ವ ,ಸಾಧನೆ

ಸ ರಕಾರಿ ಸಂಸ್ಥೆಗಳಲ್ಲಿ  ಮಹಿಳೆಯರು ಕೆಲಸ ಮಾಡುವುದನ್ನು ಹತ್ತಿರದಿಂದ ನೋಡಿ ಬೆಳೆದವನು ನಾನು. ಅದರಲ್ಲಿ ಮೊದಲು ನೆನಪಿಗೆ ಬರುವುದು ಆಸ್ಪತ್ರೆಯಲ್ಲಿನ ಮಹಿಳಾ ಸ್ಟಾಫ್ ನರ್ಸ್‌ಗಳು. ಅವರನ್ನೆಲ್ಲ ದಾಯಮ್ಮ ಎಂದೇ ಕರೆಯುತ್ತಿದ್ದೆವು. ಬಳಿಕ ನೆನಪಾಗುವುದು ಶಾಲೆಯ ಶಿಕ್ಷಕಿಯರು, ಅನಂತರ ಮನೆಯ ಪಕ್ಕದಲ್ಲೇ ಇದ್ದ ಕಿರಾಣಿ ಅಂಗಡಿಯ ಗೌಡಶಾನಿ, ಊರ ಸಂತೆಯಲ್ಲಿ ಹಳ್ಳಿಗಳಿಂದ ಬಂದು ತರಕಾರಿ ಮಾರುತ್ತಿದ್ದ ಅಜ್ಜಿಯರು, ತಾಯಂದಿರು…. ನಾವು ಭೇಟಿ ಮಾಡುವ ಹೊಟೇಲ್‌, ಅಂಗಡಿ, ಫಾರ್ಮಸಿ, ಆಸ್ಪತ್ರೆ, ಬ್ಯಾಂಕ್‌, ಸಾರಿಗೆ ಸಂಸ್ಥೆ, ಪೊಲೀಸ್‌ ಇಲಾಖೆ, ನ್ಯಾಯಾಲಯ, ಸೇನೆ, ಸಮಾಜಸೇವೆ, ರಾಜಕೀಯ ಸೇರಿದಂತೆ ಇಂದು ಬಹುತೇಕ  ಎಲ್ಲ ಕ್ಷೇತ್ರಗಳಲ್ಲೂ ಮಹಿಳೆಯರ ಸಹಭಾಗಿತ್ವ, ಉಪಸ್ಥಿತಿ ಎದ್ದು ಮ ಕಾಣುತ್ತದೆ. ಇದು ಸಮಾಜದಲ್ಲಾದ ಬದಲಾವಣೆಗೆ ಹಿಡಿದ ಕೈಗನ್ನಡಿ.

ಬಹುತೇಕ ಇಂದಿನ ಹಾಗೂ ಮುಂಬರುವ ಪೀಳಿಗೆಗೆ ಈ ಬದಲಾವಣೆಯನ್ನು ಗಮನಿಸುವ ಅವಕಾಶವಾಗಲಿ, ಆಲೋಚನೆಯಾಗಲಿ ಸುಳಿಯಲಿಕ್ಕಿಲ್ಲ. ಎಕೆಂದರೆ ನಾವು ಸಣ್ಣವರಾಗಿದ್ದಾಗ ನೋಡಿದ ಬಾಲಕ, ಬಾಲಕಿಯರ ಬೇರೆಬೇರೆ ಶಾಲೆಗಳ ಉಪಸ್ಥಿತಿ, ಚಿತ್ರಮಂದಿರಗಳಲ್ಲಿ ಮಹಿಳೆಯರಿಗೆ ಇದ್ದ ಪ್ರತ್ಯೇಕ  ವ್ಯವಸ್ಥೆ, ಇರುವ ಮಕ್ಕಳಲ್ಲಿ ಮಾಡುತ್ತಿದ್ದ ತಾರತಮ್ಯದ ಮನಸ್ಥಿತಿಗಳನ್ನು ಹುಡುಕುವುದು ಬಲು ಕಷ್ಟ. ಇಂಗ್ಲೆಂಡ್‌ನಲ್ಲಿ ಈ ಬಗ್ಗೆ ಮಾತನಾಡುವುದೇ ಅಪ್ರಸ್ತುತ.  ಕೆಲವು ಮಹಿಳೆಯರು ಸಾಧನೆಯ ಶಿಖರವೇರಿ ಎಲ್ಲರ  ಶಹಬ್ಟಾಸ್‌ಗಿರಿ ಪಡೆದಿದ್ದರೂ ಸಾಮಾನ್ಯರಲ್ಲಿ ಸಾಮಾನ್ಯ ಎಂದೆನಿಸುವ ಮಹಿಳೆಯರು ಮಾಡುವ ಕೆಲಸಗಳಿಗೇನೂ ದೊಡ್ಡ  ಸಾಧನೆಗಿಂತ ಕಡಿಮೆಯೇನಲ್ಲ. ಕೆಲಸಗಳಲ್ಲಿ ಬಹುತೇಕ ಶೇ.80ರಷ್ಟು ಹೆಚ್ಚು ಕೆಲಸ ಮಹಿಳೆಯರ ಸಹಭಾಗಿತ್ವದಲ್ಲಿ  ಮಾಡುತ್ತಿರುವುದರಿಂದ ಅವರನ್ನು ಹೆಚ್ಚು ಹತ್ತಿರದಿಂದ ತಿಳಿದುಕೊಳ್ಳುವ ಅವಕಾಶ ಸಿಕ್ಕಿತು. ಎಲ್ಲ ಅಡೆತಡೆಯ ಮಧ್ಯೆಯೂ ಅವರ ಸಾಧನೆಯ ಓಘವನ್ನು ಗಮನಿಸಿದರೆ ಮುಕ್ತ ಮನಸ್ಸಿನಿಂದ ಪ್ರಶಂಸಿಸದೇ ಇರಲು ಸಾಧ್ಯವೇ ಇಲ್ಲ.  ಕಳೆದ ಕೆಲವು ತಿಂಗಳುಗಳಿಂದ ಸ್ವಯಂ ಸೇವಕನಾಗಿ ಸೇರಿಕೊಂಡ ಯುನೈಟೆಡ್‌ ಕಿಂಗ್ಡಮ್‌ನಾದ್ಯಂತ ಕನ್ನಡ ಕಲಿಸುವ ಕಾಯಕಕ್ಕೆ ಕೈ ಹಾಕಿರುವ ಕನ್ನಡಿಗರು ಯುಕೆ ನೇತೃತ್ವದ ಕನ್ನಡ  ಕಲಿ ತಂಡದ 60 ಮಂದಿ ಶಿಕ್ಷಕ ಶಿಕ್ಷಕಿಯರಲ್ಲಿ 50ಕ್ಕೂ ಹೆಚ್ಚು  ಮಹಿಳೆಯರಿದ್ದಾರೆ. ಅವರ ಕಾರ್ಯವೈಖರಿ ಅದರಲ್ಲೂ ಸಮಯದ ವ್ಯತ್ಯಾಸದಿಂದ ಮಧ್ಯರಾತ್ರಿಯಲ್ಲಿಯೂ  ನಮ್ಮೊಂದಿಗೆ ಕೆಲಸ ಮಾಡುವ ಅವರ ಉತ್ಸಾಹ, ಕಾಳಜಿ, ಬದ್ಧತೆ ಮತ್ತು ವಿಶ್ವಾಸವನ್ನು ಎತ್ತಿ ತೋರಿಸುತ್ತದೆ.

ಸಮಾನ ಮತ್ತು ಸಮ್ಮಾನಗಳೆರಡು ನಮ್ಮ ಮೌಲ್ಯಾಧಾರಿತ ಜೀವನದಿಂದ ಮನದ ಮೂಲೆಯಲ್ಲಿ ಅರಳಿ ಸುಗಂಧವನ್ನು ಸೂಸುವಂಥದ್ದು. ಅದನ್ನು ಬಿಟ್ಟು ನೈಸರ್ಗಿಕ ವ್ಯತ್ಯಾಸಗಳನ್ನು ಅಸಮಾನತೆ ಎಂಬಂತೆ ಬಿಂಬಿಸಿ ಸಮಾಜದ ತುಂಬೆಲ್ಲ ಸಮಾನತೆಯ ಹೆಸರಲ್ಲಿ ಗಟಾರಗಳನ್ನು ಸೃಷ್ಟಿಸಿ ದುರ್ಗಂಧ ಬೀರುವುದರಿಂದಲ್ಲ. 21ನೇ ಶತಮಾನದ ಮಹಿಳೆಯರು ಸಾಕಷ್ಟು ಸಾಧಿಸಿದ್ದಾರೆ. ಇನ್ನೇನಿದ್ದರೂ ಅಸಮಾನತೆಯ ಹೆಸರಲ್ಲಿ ಅವರಿಗೆ ಅಡ್ಡಲಾಗಿ ನಿಲ್ಲುವವರನ್ನು ನಿರ್ಬಂಧಿಸುವ ಕಾಯಕವಾಗಬೇಕು.

ಅಂತಾರಾಷ್ಟ್ರೀಯ ಮಹಿಳಾ ದಿನ ಹತ್ತಿರದಲ್ಲೇ ಇದೆ. ಈ ಸಂದರ್ಭದಲ್ಲಿ  ಮಹಿಳೆಯರ ಸಹಭಾಗಿತ್ವ ಮತ್ತು ಸಾಧನೆಯ ಕುರಿತು ಎಲ್ಲರೂ ಒಂದಷ್ಟು ಮೆಲುಕು  ಹಾಕಬೇಕಿದೆ.

 

-ಗೋವರ್ಧನ ಗಿರಿ ಜೋಷಿ, ಲಂಡನ್‌

ಟಾಪ್ ನ್ಯೂಸ್

Amit Shah: 2024ರ ಚುನಾವಣೆಯಲ್ಲಿ ಎನ್‌ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ

Amit Shah: 2024ರ ಚುನಾವಣೆಯಲ್ಲಿ ಎನ್‌ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ

11

ಕ್ರಿಕೆಟ್‌ ಬಗ್ಗೆ ಕಿಂಚಿತ್ತೂ ಜ್ಞಾನವಿಲ್ಲದ ವ್ಯಕ್ತಿಗೆ ಡ್ರೀಮ್‌11ನಲ್ಲಿ ಒಲಿಯಿತು 1.5 ಕೋಟಿ

baba-ramdev

Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

ಅಶ್ಲೀಲ ವಿಡಿಯೋ ಮಾದರಿಯಲ್ಲಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಕ್ಕೆ ಮಹಿಳೆಯನ್ನು ಕೊಂದ ಟೆಕಿ

ಅಶ್ಲೀಲ ವಿಡಿಯೋ ಮಾದರಿಯಲ್ಲಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಕ್ಕೆ ಮಹಿಳೆಯನ್ನು ಕೊಂದ ಟೆಕಿ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

1-aaaa

Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್‌ ನಲ್ಲಿ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

April 17ರಂದು ಶ್ರೀರಾಮ ನವಮಿ: ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

Rama Navami 2024: April 17ರಂದು ಶ್ರೀರಾಮ ನವಮಿ- ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

Ram Ayodhya

Rama Navami 2024: ನವಮಿಗೆ ಬಾಲಕರಾಮನ ಹಣೆಗೆ ಸೂರ್ಯ ತಿಲಕ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qwewweq

K. Jayaprakash Hegde; ಮೀನುಗಾರಿಕೆ, ಪ್ರವಾಸೋದ್ಯಮದ ಅಭಿವೃದ್ದಿಗೆ ಹೆಚ್ಚಿನ ಆಧ್ಯತೆ 

Amit Shah: 2024ರ ಚುನಾವಣೆಯಲ್ಲಿ ಎನ್‌ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ

Amit Shah: 2024ರ ಚುನಾವಣೆಯಲ್ಲಿ ಎನ್‌ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ

11

ಕ್ರಿಕೆಟ್‌ ಬಗ್ಗೆ ಕಿಂಚಿತ್ತೂ ಜ್ಞಾನವಿಲ್ಲದ ವ್ಯಕ್ತಿಗೆ ಡ್ರೀಮ್‌11ನಲ್ಲಿ ಒಲಿಯಿತು 1.5 ಕೋಟಿ

1-asdasdas

IPL; ಸ್ಟಾಯಿನಿಸ್‌ ಏಟಿಗೆ ತವರಲ್ಲೆ ಚಾಂಪಿಯನ್‌ ಚೆನ್ನೈ ಠುಸ್‌!

1-BVR-1

Congress vs BJP; ಬ್ರಹ್ಮಾವರದಲ್ಲಿ ಶಕ್ತಿ ಪ್ರದರ್ಶನದ ವೇದಿಕೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.