ಆಟಿಸಂ: ಕೌಶಲಗಳ ತರಬೇತಿಯಿಂದ ಪರಿಹಾರ


Team Udayavani, Apr 2, 2022, 4:30 PM IST

ಆಟಿಸಂ: ಕೌಶಲಗಳ ತರಬೇತಿಯಿಂದ ಪರಿಹಾರ

ಎ.2ರ ಶನಿವಾರ ವಿಶ್ವ ಆಟಿಸಂ ಜಾಗೃತಿ ದಿನ. ಬಾಲ್ಯದಲ್ಲಿಯೇ ಕಾಣಿಸಿಕೊಳ್ಳುವ ಆಟಿಸಂ, ಮಕ್ಕಳು ಮಾತ್ರವಲ್ಲದೆ ಅವರ ಹೆತ್ತವರಿಗೂ ಬಲುದೊಡ್ಡ ಸವಾಲಾಗಿದೆ. ಆಟಿಸಂ ಸ್ಥಿತಿಯನ್ನು ಹೊಂದಿರುವ ಮಕ್ಕಳ ಪಾಲನೆ, ಆರೈಕೆ, ಅವರಿಗೆ ನೀಡಬೇಕಾದ ಕೌಶಲ ತರಬೇತಿ, ಥೆರಪಿ, ಪರಿಹಾರೋಪಾಯಗಳ ಕುರಿತಂತೆ ಈ ಲೇಖನದಲ್ಲಿ ಬೆಳಕು ಚೆಲ್ಲಲಾಗಿದೆ.

“ಆಟಿಸಂ ಎಂಬುದು ಬುದ್ಧಿಮಾಂದ್ಯತೆ ಅಲ್ಲ. “ಆಟಿಸಂ’ ಸ್ಥಿತಿಯನ್ನು ಹೊಂದಿರುವ ಹಲವರು ವಿವಿಧ ಕ್ಷೇತ್ರಗಳಾದ ಸಂಗೀತ, ನೃತ್ಯ, ನಾಟಕ, ಕ್ರೀಡೆ, ವಿವಿಧ ಕಾರ್ಯ ಚಟುವಟಿಕೆಗಳಲ್ಲಿ ಪ್ರಾವೀಣ್ಯವನ್ನು ಹೊಂದಿರುವುದನ್ನು ನಾವು ಕಣ್ಣಾರೆ ಕಂಡಿದ್ದೇವೆ. ಆದರೆ ಇನ್ನು ಕೆಲವರು ತೀವ್ರ ತರದ ಆಟಿಸಂ ಸ್ಥಿತಿಯಿಂದಾಗಿ ಹತ್ತು ಹಲವಾರು ವರ್ತನೆಗಳ ಸಮಸ್ಯೆಗಳನ್ನು ಪ್ರದರ್ಶಿ ಸುತ್ತಾ ಇರುವುದು ಮಾತ್ರವಲ್ಲ, ಅದನ್ನು ನಿಭಾಯಿಸುವುದೇ ಹೆತ್ತವರಿಗೆ-ಪಾಲಕರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.

ಆಟಿಸಂ ಎನ್ನುವುದು, ತೀವ್ರವಾಗಿ ಕ್ಷೀಣ ಗೊಳಿಸುವ ಸಂಪೂರ್ಣ ಜೀವಿತಾವಧಿಯಲ್ಲಿ ಅನುಭವಿಸಬೇಕಾದ ವಿಕಲತೆಯ ವ್ಯವಸ್ಥೆ ಯಾಗಿದ್ದು, ಇದು ಜೀವನದ ಪ್ರಾರಂಭದ ಮೊದಲನೆಯ ಮೂರು ವರ್ಷಗಳಲ್ಲಿಯೇ ಕಂಡು ಬರುತ್ತದೆ. ಪ್ರತೀ 1,000 ಜನನಗಳಲ್ಲಿ ಸುಮಾರಾಗಿ 2-4 ಪ್ರಕರಣಗಳಲ್ಲಿ ಮಾತ್ರವೇ ತೀವ್ರವಾದ ಮಾನಸಿಕ ಅಂಗವಿಕಲತೆ ಅಥವಾ ಅದರ ಗುಣಲಕ್ಷಣಗಳು ಕಂಡುಬರುತ್ತವೆ. ಆಟಿಸಂ ಬಾಲಕಿಯರಿಗಿಂತ ಮೂರು ಪಟ್ಟು ಅಧಿಕವಾಗಿ ಬಾಲಕರಲ್ಲಿ ಉಂಟಾಗುತ್ತದೆ.

ಸಾಮಾನ್ಯ ಮಗು ಜೀವನದ ಮೊದ ಲನೆಯ ವರ್ಷದಲ್ಲಿ ನಡೆಯಲು, ಮಾತ ನಾಡಲು ಮತ್ತು ನಮ್ಮೊಂದಿಗೆ ಸ್ಪಂದಿಸಲು ಕಲಿಯುತ್ತದೆ. ನಿಧಾನಗತಿಯನ್ನು ಹೊಂದಿರುವ ಮಗು ಈ ಪ್ರತಿಭೆಗಳನ್ನು ನಿಧಾನ ವಾಗಿಯೇ ಕಲಿಯುತ್ತದೆ. ಆದರೆ ಆಟಿಸಂ ಹೊಂದಿರುವ ಮಗು ಇವುಗಳನ್ನು ಕಲಿಯುವುದೇ ಇಲ್ಲ. ಆತ/ ಆಕೆಯು ಸಾಮಾನ್ಯ ವಾಗಿಯೇ ಬೆಳೆಯುತ್ತಿದ್ದಾರೆ ಎಂದು ಕಂಡುಬರುತ್ತದೆ ಮತ್ತು ಕೊನೆಗೆ ಅದು ನಿಂತು ಹೋದಂತೆ ಕಂಡುಬರುತ್ತದೆ. ಮಾತನಾಡಲು ಆರಂಭಿಸಿದಂತೆ ಕಂಡು ಬರುತ್ತದೆ. ಆದರೆ ನಿಂತುಹೋಗುತ್ತದೆ. ಇಂತಹ ವ್ಯಕ್ತಿಗಳು ಕೆಲವೊಂದು ಕೌಶಲಗಳಲ್ಲಿ ಅತ್ಯಂತ ಪರಿಣತ ರಂತೆ ಕಂಡುಬರುತ್ತಾರೆ. ಆದರೆ ಇತರ ವಿಷಯಗಳಲ್ಲಿ ತೀರಾ ದುರ್ಬಲ ರಾಗಿರುತ್ತಾರೆ. ಇಂತಹ ಗುಣಲಕ್ಷಣಗಳೇ “ಆಟಿಸಂ’ ಇದೆ ಎಂಬುದನ್ನು ತೋರಿಸುತ್ತದೆ.

ಸಂಶೋಧನೆಗಳ ಪ್ರಕಾರ, ನರಮಂಡಲ ವ್ಯವಸ್ಥೆಯಲ್ಲಿ ಉಂಟಾಗುವ ಯಾವುದೇ ರಚನಾಕೃತಿಯ ಅಥವಾ ಕಾರ್ಯ ವೈಖರಿ ಯಲ್ಲಿನ ಹಾನಿಯಿಂದಾಗಿ ಆಟಿಸಂ ಬರು ತ್ತದೆ. ಕೆಲವೊಂದು ವೈರಸ್‌ಗಳು ಮತ್ತು ಆನುವಂಶಿಕ ಪರಿಸ್ಥಿತಿಗಳು “ಆಟಿಸಂ’ನ ಸ್ಥಿತಿಗೆ ಕಾರಣವಾಗಿವೆ. ಸದ್ಯದ ಸ್ಥಿತಿಯಲ್ಲಿ ಆಟಿಸಂ ಸುಮಾರು ಶೇ.10ರಷ್ಟು ಪ್ರಕರಣಗಳು ಆನು ವಂಶಿಕವಾಗಿ ಬಂದಿದೆ ಎಂದು ನಂಬಲಾಗಿದೆ.

ಪ್ರೇರಣೆ: ಆಟಿಸಂ ಹೊಂದಿರುವ ಮಕ್ಕಳನ್ನು ಯಾವುದೇ ಚಟುವಟಿಕೆಗೆ ತೊಡಗಿಸಿಕೊಳ್ಳುವ ಮೊದಲು ಆ ಚಟುವಟಿಕೆಗೆ ಪೂರಕವಾದ ಪ್ರೇರಣೆ ಅತೀ ಅಗತ್ಯ. ಇವರಲ್ಲಿ ಗೋಚರಿಸಲ್ಪಡುವ ಪ್ರಮುಖ ಸಮಸ್ಯೆಗಳೆನಿಸಿದ ಏಕಾಗ್ರತೆ, ಗ್ರಹಿಸುವ ಶಕ್ತಿ ಹಾಗೂ ನಿರ್ವಾಹಣ ಕೌಶಲಗಳನ್ನು ಹೆಚ್ಚಿಸುವ ಪ್ರಯತ್ನವನ್ನು ತರಬೇತುದಾರರು ವಿವಿಧ ಚಟುವಟಿಕೆಗಳ ಮುಖಾಂತರ ಸಾಧಿಸಬೇಕಾಗಿರುವುದು ಅತ್ಯವಶ್ಯಕವಾಗಿದೆ. ಆಟಿಸಂ ಮಕ್ಕಳು ತೋರ್ಪ ಡಿಸುವ ಸ್ವೀಕೃತವಲ್ಲದ ವರ್ತನೆಯ ಬಗ್ಗೆ ಹೆತ್ತವರು ವಿಶೇಷವಾಗಿ ಗಮನಹರಿಸಿ ಆ ವರ್ತನೆಗಳ ಪರಿವರ್ತನೆಗಾಗಿ ತಜ್ಞರ ಸಲಹೆ ಪಡೆದುಕೊಳ್ಳುವುದು ಸೂಕ್ತ.

ಥೆರಪಿ ಹಾಗೂ ತರಬೇತಿ: ಆಟಿಸಂ ಹೊಂದಿರುವ ಬಹಳಷ್ಟು ಮಕ್ಕಳಲ್ಲಿ ಮಾತಿನ ಸಮಸ್ಯೆಗಳು ಸಾಮಾನ್ಯ. ಇಲ್ಲಿ ವಾಕ್‌ಥೆರಪಿ ಅತೀ ಅಗತ್ಯವಾಗಿ ನೀಡಬೇಕು. ಮಕ್ಕಳಲ್ಲಿ ದೈಹಿಕ ಸಮಸ್ಯೆಗಳಿದ್ದಲ್ಲಿ ಫಿಸಿಯೋಥೆರಪಿ ನೀಡುವುದು ಸೂಕ್ತ. ಮಾತ್ರವಲ್ಲದೆ, “ಆಕ್ಯೂಪೇಶನಲ್‌ ಥೆರಪಿ’ ಮಕ್ಕಳ ದೈಹಿಕ, ಸಂವೇ ದನಶೀಲ ಹಾಗೂ ಅರಿವಿನ ಸಮಸ್ಯೆಗಳ ನಿವಾ ರಣೆಗೆ ಸಹಕಾರಿಯಾಗಿದೆ. ಸ್ನಾಯುಗಳ ಕೌಶಲ ಗಳ ವೃದ್ಧಿ ಹಾಗೂ ಕಣ್ಣು-ಕೈಗಳ ಸಮನ್ವಯತೆಗೆ ಸಹಕಾರಿಯಾಗಿದೆ. ಆಟಿಸಂಗೆ ಸಂಬಂಧಿಸಿದ ಇಂಥ ಸಮಸ್ಯೆಗಳ ನಿಯಂತ್ರಣಕ್ಕೆ ಮುಖ್ಯವಾಗಿ ಬಹು ಸಂವೇದನ ಪ್ರಚೋದನೆ ಅತೀ ಅಗತ್ಯ.

ಒಟ್ಟಿನಲ್ಲಿ ಆಟಿಸಂ ರೋಗವಲ್ಲ. ಅದೊಂದುಸ್ಥಿತಿ. ಆ ಸ್ಥಿತಿಯನ್ನು ನಿವಾರಿಸಲು ಬೇಕಾದ ಕೌಶಲಗಳ ತರಬೇತಿಯನ್ನು ಆದಷ್ಟು ಶೀಘ್ರ ವಾಗಿ ಪ್ರಾರಂಭಿಸಬೇಕು. ಮುಖ್ಯವಾಗಿ ಆಟಿಸಂ ಮಗುವಿನಲ್ಲಿರುವ ಸಮಸ್ಯೆಗಳನ್ನು ತೊಂದರೆಗಳನ್ನು ಎಳವೆಯಲ್ಲಿಯೇ ಪತ್ತೆಮಾಡಿ, ಅದಕ್ಕೆ ಸೂಕ್ತವಾದ ಪರಿಹಾರೋಪಾ ಯಗಳನ್ನು ಕಂಡುಕೊಂಡು ಪರಿಣಾಮ ಕಾರಿ ಯಾದ ತರಬೇತಿಗೆ ಹಾಗೂ ಥೆರಪಿಗೆ ಇವರನ್ನು ಒಳಪಡಿಸಿದಲ್ಲಿ ಇವರಲ್ಲಿ ಮಹತ್ತರ ಬದಲಾವಣೆ ಕಾಣಬಹುದು. ಆ ಬದಲಾವಣೆ ನೊಂದ ಹೆತ್ತವರ ಮೊಗದಲ್ಲಿ ಮಂದಹಾಸ
ವನ್ನು ಮೂಡಿಸದೆ ಇರಲಾರದು.

-ಡಾ| ವಸಂತ್‌ ಕುಮಾರ್‌ ಶೆಟ್ಟಿ, ಮಂಗಳೂರು

ಟಾಪ್ ನ್ಯೂಸ್

gayi

Davanagere; ಗಾಯಿತ್ರಿ ಸಿದ್ದೇಶ್ವರ್‌ ಅಂತಿಮ ನಾಮಪತ್ರ ಸಲ್ಲಿಕೆ; ಭರ್ಜರಿ ಮೆರವಣಿಗೆ

4-shirva

Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Boat Capsizes In Odisha’s Mahanadi River

Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ

Tamil Nadu BJP chief Annamalai demands re-poll due to missing voter names

Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ

3-blthngady

ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Rama Navami 2024: ಬೇಸಗೆಯಲ್ಲಿ ಆರೋಗ್ಯ ಆಚಾರ; ಆಹಾರ-ವಿಹಾರ ನಿಯಮಗಳೇನು?

Rama Navami 2024: ಬೇಸಗೆಯಲ್ಲಿ ಆರೋಗ್ಯ ಆಚಾರ; ಆಹಾರ-ವಿಹಾರ ನಿಯಮಗಳೇನು?

5-health

Health: ಸಿರಿಧಾನ್ಯಗಳು: ಪುಟ್ಟ ಧಾನ್ಯಗಳಾದರೂ ಪೌಷ್ಟಿಕಾಂಶಗಳ ಗಣಿ

5-ginger

Ginger: ಶುಂಠಿ ಆರೋಗ್ಯಕ್ಕೆ ಉಪಕಾರಿ

7-

Obsessive Psychiatry: ಗೀಳು ಮನೋರೋಗ

6-thyroid

Thyroid Disease: ಥೈರಾಯ್ಡ್ ಅನಾರೋಗ್ಯ ನಿರ್ಲಕ್ಷಿಸಿದರೆ ಮಾರಕವಾದೀತು ಎಚ್ಚರ!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

gayi

Davanagere; ಗಾಯಿತ್ರಿ ಸಿದ್ದೇಶ್ವರ್‌ ಅಂತಿಮ ನಾಮಪತ್ರ ಸಲ್ಲಿಕೆ; ಭರ್ಜರಿ ಮೆರವಣಿಗೆ

4-shirva

Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Boat Capsizes In Odisha’s Mahanadi River

Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ

Tamil Nadu BJP chief Annamalai demands re-poll due to missing voter names

Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.