ವಿಶ್ವ ರಕ್ತದಾನಿಗಳ ದಿನ: ಒಂದು ಜೀವ ಉಳಿಸಿದ್ದೇವೆಂಬ ಸಂತೃಪ್ತಿ ಸಾಕು….
ಇತ್ತೀಚಿನ ದಿನಗಳಲ್ಲಿ ರಕ್ತವನ್ನು ಮಾರುಕಟ್ಟೆಯ ಸರಕಾಗಿ ಮಾಡಿಕೊಂಡಿರುವುದು ಅತ್ಯಂತ ದುರದೃಷ್ಟಕರ ಸಂಗತಿ.
Team Udayavani, Jun 14, 2020, 1:25 PM IST
ನಮಗೆ ಯಾವುದೇ ರೀತಿಯ ತೊಂದರೆ ಆಗದೆ ನಮ್ಮ ದೇಹದಿಂದ ದಾನ ಮಾಡುವಂತಹದ್ದು ರಕ್ತ ಒಂದೇ. ನಾವು ಕೊಟ್ಟ ರಕ್ತ ಒಬ್ಬ ವ್ಯಕ್ತಿಯ ಜೀವವನ್ನು ಉಳಿಸುತ್ತದೆ ಎಂದರೆ ರಕ್ತ ದಾನ ಎಷ್ಟೊಂದು ಮಹತ್ವವಾದದ್ದು. ಆದ್ದರಿಂದಲೇ ರಕ್ತದಾನಕ್ಕಿಂತ ಶ್ರೇಷ್ಠವಾದ ದಾನ ಮತ್ತೊಂದಿಲ್ಲ ಎನ್ನುವುದು. ನಾವು ಕೊಟ್ಟ ರಕ್ತ ಎರಡು ಮೂರು ದಿನಗಳಲ್ಲಿ ಉತ್ಪತ್ತಿಯಾಗುವುದರಿಂದ ರಕ್ತವನ್ನು ನೀಡಿದವರು ಪಡೆದವರು ಇಬ್ಬರು ಆರೋಗ್ಯವಾಗಿರಲು ಸಾಧ್ಯ.
ಇತ್ತೀಚಿನ ದಿನಗಳಲ್ಲಿ ರಕ್ತವನ್ನು ಮಾರುಕಟ್ಟೆಯ ಸರಕಾಗಿ ಮಾಡಿಕೊಂಡಿರುವುದು ಅತ್ಯಂತ ದುರದೃಷ್ಟಕರ ಸಂಗತಿ. ಸಮಯಕ್ಕೆ ಸರಿಯಾಗಿ ರಕ್ತ ಸಿಗದೆ ಸಾಕಷ್ಟು ಜನರು ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ. ಪ್ರತಿಯೊಬ್ಬನಲ್ಲಿಯು ಹರಿಯುತ್ತಿರುವ ರಕ್ತ ಮನುಷ್ಯ ಸಂಕುಲವೇ ಒಂದೇ ಎಂಬ ಸತ್ವವನ್ನು ಸಾರುತ್ತದೆ. ರಕ್ತವನ್ನು ದಾನ ಮಾಡುವುದರಿಂದ ಒಂದು ಜೀವವನ್ನು ಬದುಕಿಸಿದ್ದೇವೆ ಎಂಬ ಸಂತೃಪ್ತಿ ದೊರೆಯುತ್ತದೆ.
ಪ್ರಸ್ತುತ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ರಕ್ತ ಬೇಕೆಂದು ಒಂದು ಸಂದೇಶವನ್ನು ಹಾಕಿದರೆ ಸಾಕು. ಪರಿಚಯವೇ ಇಲ್ಲದ ಹಲವು ಮಂದಿ ರಕ್ತ ವನ್ನು ನೀಡಲು ಮುಂದೆ ಬರುತ್ತಿರುವುದು ಇನ್ನೂ ಮಾನವೀಯ ಮೌಲ್ಯಗಳು ಜೀವಂತವಾಗಿರುವುದಕ್ಕೆ ಸಾಕ್ಷಿ. ರಕ್ತ ದಾನವನ್ನು ಪ್ರತಿಯೊಬ್ಬ ವ್ಯಕ್ತಿಯು ಜವಾಬ್ದಾರಿಯಾಗಿ ತೆಗೆದುಕೊಳ್ಳಬೇಕು.
ಅನಿಲ್ ಗುಮ್ಮಘಟ್ಟ
ಪಾವಗಡ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?
Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…
Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ
Rama Navami 2024: April 17ರಂದು ಶ್ರೀರಾಮ ನವಮಿ- ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ
Rama Navami 2024: ನವಮಿಗೆ ಬಾಲಕರಾಮನ ಹಣೆಗೆ ಸೂರ್ಯ ತಿಲಕ
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ