world cycle day: ಸಮತೋಲನದ ಬದುಕು ಹೇಳಿಕೊಟ್ಟ ಬಾಲ್ಯದ ಸೈಕಲ್
Team Udayavani, Jun 3, 2020, 8:51 AM IST
ಸಾಂದರ್ಭಿಕ ಚಿತ್ರ
ಜೀವನದಲ್ಲಿ ನಂಬಿಕೆಯೇ ಎಲ್ಲಾ. ನಂಬಿಕೆ ಜೀವನವನ್ನು ಸಮತೋಲನದಲ್ಲಿಡುತ್ತದೆ.ಈ ನಂಬಿಕೆ ಸಮತೋಲನ ಮೊದಲು ನಮಗೆ ಹೇಳಿಕೊಡುವುದು ಬಾಲ್ಯದ ಸೈಕಲ್. ಸೈಕಲ್ ಎಂದಾಕ್ಷಣ ಒಬ್ಬೊಬ್ಬರಿಗೆ ಒಂದೊಂದು ನೆನಪಿನ ಪುಟಗಳು ತೆರೆಯುತ್ತಾ ಹೋಗುತ್ತದೆ.
ಬಾಲ್ಯದಲ್ಲಿ ನಮ್ಮ ಬಳಿ ಸೈಕಲ್ ಇದೆ ಎಂದರೆ ನಮಗೆ ಅದೊಂದು ಬೆಲೆಬಾಳುವ ಆಸ್ತಿ. ದೀಪಾವಳಿಯಂದು ಪಟಾಕಿ ಹೊಡೆಯುವ ಸಂಭ್ರಮಕ್ಕಿಂತ ನಮ್ಮ ಸೈಕಲ್ ಗೆ ಪೂಜೆ ಮಾಡಿಸುವ ಖುಷಿಯೇ ಹೆಚ್ಚು. ಈಗ ಜೀವನದಲ್ಲಿ ಬೀಳಬಾರದು ಎಂದು ಯತ್ನಿಸುವ ನಾವು, ಸೈಕಲ್ ಕಲಿಯುವಾಗ ಖಂಡಿತಾ ಬಿದ್ದಿರುತ್ತೇವೆ.
ನಮ್ಮದು ಹಳ್ಳಿ ಪ್ರದೇಶವಾಗಿದ್ದರಿಂದ ಎಲ್ಲೆಲ್ಲೂ ಸೈಕಲ್ ನದ್ದೆ ಕಾರುಬಾರು. ನಾನು ಅಪ್ಪ ತಂದುಕೊಟ್ಟ ಸೆಕೆಂಡ್ ಹ್ಯಾಂಡ್ ಸೈಕಲ್ ಏರಿಕೊಂಡು ಹೋಗುತ್ತಿದ್ದರೆ, ಅಂಬಾರಿಯಲ್ಲಿ ಹೋಗುವ ಸಂಭ್ರಮ. ಒಮ್ಮೆ ನಾನು ಮತ್ತು ನನ್ನ ಗೆಳೆಯ ಸೈಕಲನ್ನು ರಸ್ತೆಯಲ್ಲಿ ಬಿಟ್ಟು ಗದ್ದೆಯಂಚಿನಲ್ಲಿ ಓಡಿಸಲು ಹೊರಟೆವು. ಗದ್ದೆಯ ನಡುವಿನಲ್ಲಿರುವ ವಿದ್ಯುತ್ ಕಂಬವನ್ನು ಮುಟ್ಟಿ ಬರಬೇಕು ಎಂಬುದು ನಮ್ಮ ಗುರಿ, ನಾವು ಆರಿಸಿದ ಗದ್ದೆ ಎತ್ತರವಾಗಿತ್ತು,ತಪ್ಪಿದರೆ ಬೀಳುವುದು ಹತ್ತು ಅಡಿ ಆಳವಿರುವ ಗದ್ದೆಗೆ. ಕಂಬ ಸಮೀಪಿಸಿದಂತೆ ಆಯಾ ತಪ್ಪಿದ ನಾನು ಸೈಕಲಿನೊಂದಿಗೆ 10 ಅಡಿ ಆಳದ ಗದ್ದೆಗೆ ಬಿದ್ದೆ. ಸವಾರಿಸಿಕೊಂಡು ಎದ್ದಾಗ ತಿಳಿಯಿತು, ಸೈಕಲ್ ನ ಹ್ಯಾಂಡಲ್ ಬಾರ್ ತಾಗಿ ಕಾಲಿಗೆ ಗಾಯವಾಗಿತ್ತು ಅಂತ. ನೋವಲ್ಲಿ ಸೈಕಲ್ ತಳ್ಳಿಕೊಂಡು ಮನೆ ಸೇರಿದಾಗ ಇನ್ನು ಸೈಕಲ್ ಸವಾಸ ಬೇಡ ಅನಿಸಿತ್ತು.ಎರಡು ದಿನದಲ್ಲಿ ಗೆಳೆಯರ ಸೈಕಲ್ ಬೆಲ್ ಕೇಳುತ್ತಿದ್ದಂತೆ ನೋವೆಲ್ಲ ಮಾಯವಾಗಿ ಪುನಃ ಸೈಕಲ್ ಏರಿ ಗದ್ದೆಯ ನಡುವಿನ ಕಂಬ ಮುಟ್ಟಿ ನನ್ನ ಗುರಿ ತಲುಪಿದ್ದೆ.
ಇಂದು ಒಮ್ಮೊಮ್ಮೆ ಜೀವನದಲ್ಲಿ ಸೋತಾಗ ಮೇಲೇಳಲು ಅವರಿವರ ಮಾತು, ‘ಮೋಟಿವೇಷನಲ್ ವಿಡಿಯೋ’ಗಳನ್ನು ನೋಡುತ್ತೇವೆ, ಅದೆಲ್ಲ ಬಿಟ್ಟು ಒಮ್ಮೆ ನೆನಪಿಸಿಕೊಳ್ಳಿ ಸೈಕಲ್ ಕಲಿಯುವಾಗ ಬಿದ್ದ ನಾವು ಎದ್ದು ಮೈಕೊಡವಿ ಛಲದಿಂದ ಪುನಃ ಸೈಕಲ್ ಏರುತ್ತಿದ್ದೆವು. ಸೈಕಲ್ ನಿಂದ ನಾವು ಕಲಿತ ಸಮತೋಲನವೇ ಜೀವನದ ಯಶಸ್ಸಿನ ರಹಸ್ಯ.
ಪೂಜಾ
ತೃತೀಯ ಬಿ.ಎ
ಎಂ.ಜಿ.ಎಂ. ಕಾಲೇಜು
ಉಡುಪಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಶುಭ ಶುಕ್ರವಾರ: ಸಾಮಾಜಿಕ ನ್ಯಾಯದ ಪ್ರತೀಕ ಯೇಸು ಕ್ರಿಸ್ತ
Inspiration: ಸ್ವಾಮಿ ಸ್ಮರಣಾನಂದ ಸೇವೆ ಎಲ್ಲರಿಗೂ ಸ್ಫೂರ್ತಿದಾಯಕ
World Theatre Day 2024: ರಂಗಭೂಮಿ ಕಲೆ-ಯುದ್ಧ ಮತ್ತು ಶಾಂತಿ ಪರಸ್ಪರ ವಿರುದ್ಧ ಧ್ರುವ
ಡೌಟೇ ಬೇಡ, ಜೋಡೆತ್ತುಗಳ ಹಾಗೆ ನಾನು, ಅನಂತ ಹೆಗಡೆ ಇಬ್ಬರೂ ಕೆಲಸ ಮಾಡುತ್ತೇವೆ…
Book Review;ವಿಶಿಷ್ಟ ರೂಪಕ ಶೈಲಿಯಿಂದ ಚಿತ್ರ ರಸಿಕರ ಮನಗೆದ್ದ ಕಾಸರವಳ್ಳಿಯ “ಬಿಂಬ ಬಿಂಬನ”
MUST WATCH
ಹೊಸ ಸೇರ್ಪಡೆ
AAP ‘ಮಹಾರ್ಯಾಲಿ’ಯಲ್ಲಿ ಭಾಗಿಯಾಗಲಿರುವ ರಾಹುಲ್,ಖರ್ಗೆ,ಪವಾರ್, ಅಖಿಲೇಶ್
Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ
Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’
ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ್ ನಾಯ್ಕ ಸೋನಿ ?
JDS; ಮೂವರು ಅಭ್ಯರ್ಥಿಗಳ ಪಟ್ಟಿ ಪ್ರಕಟ: ಕೋಲಾರಕ್ಕೆ ಮಲ್ಲೇಶ್ ಬಾಬು