ಸೈಕ್ಲಿಂಗ್‌ನಿಂದ ಆರೋಗ್ಯವಂತ, ಪರಿಸರಸ್ನೇಹಿ ಸಮಾಜ : ಇಂದು ವಿಶ್ವ ಬೈಸಿಕಲ್‌ ದಿನ


Team Udayavani, Jun 3, 2022, 6:05 AM IST

ಸೈಕ್ಲಿಂಗ್‌ನಿಂದ ಆರೋಗ್ಯವಂತ, ಪರಿಸರಸ್ನೇಹಿ ಸಮಾಜ : ಇಂದು ವಿಶ್ವ ಬೈಸಿಕಲ್‌ ದಿನ

ರಸ್ತೆ, ಹೆದ್ದಾರಿಗಳುದ್ದಕ್ಕೂ ಆಕರ್ಷಕ ವಿನ್ಯಾಸ, ಶೈಲಿಯ ಬೈಕ್‌, ಆಟೋ, ಕಾರು, ವಿವಿಧ ತೆರನಾದ ವ್ಯಾನ್‌ಗಳು, ಬಸ್‌ಗಳು, ಲಾರಿ-ಟ್ರಕ್‌ಗಳು ಓಡಾಡುವಾಗ ಬದಿಯಲ್ಲಿ ತನ್ನಷ್ಟಕ್ಕೇ ಪೆಡಲ್‌ ತುಳಿಯುತ್ತಾ ಸಾಗುವ ಬಡಪಾಯಿ ಸೈಕಲ್‌ ಸವಾರ ಯಾರ ಗಮನಕ್ಕೂ ಬರುವುದಿಲ್ಲ. ಕಾರುಗಳಂತೆ ಟ್ರಾಫಿಕ್‌ ಜಾಮ್‌ಗೆ ಕಾರಣವಾಗದೆ, ಹೊಗೆಯುಗುಳದೆ, ಲೀಟರ್‌ಗಟ್ಟಲೆ ಪೆಟ್ರೋಲ್‌ ಕುಡಿಯದೆ ಸವಾರನ ಕಾಲಿನ ಬಲದಲ್ಲಿ ಚಲಿಸುವ ಸೈಕಲ್‌ ಇಂದಿಗೂ ಹಲವು ಕುಟುಂಬಗಳಿಗೆ ಆಧಾರ, ನಗರಗಳಲ್ಲಿ ಫಿಟ್‌ನೆಸ್‌ ಪ್ರಿಯರ ಮೆಚ್ಚಿನ ಸಾಧನ. ಪೇಪರ್‌, ಹಾಲು ಹಾಕುವವರಿಗೆ, ಕಾರ್ಮಿಕರೇ ಮುಂತಾದ ಸರಳಜೀವಿಗಳಿಗೆ ಇದು ಅಗ್ಗದ ಸಂಚಾರ ಸಾಧನ.

ಹಿಂದೆ ವಿದೇಶ ಗಳಲ್ಲಷ್ಟೇ ಫಿಟ್‌ನೆಸ್‌, ಕ್ರೀಡಾ ಉಪಯೋಗಕ್ಕೆ ಸೈಕಲ್‌ ಬಳಕೆಯಾಗುತ್ತಾ ಬಂದಿದ್ದರೆ ಕಳೆದೆರಡು ದಶಕಗಳಲ್ಲಿ ಭಾರತ ದಲ್ಲೂ ಈ ಕ್ಷೇತ್ರಗಳಲ್ಲಿ ಸೈಕಲ್‌ ಬಹಳಷ್ಟು ಬೆಳವಣಿಗೆ
ಸಾಧಿಸಿದೆ. ಈಗ ಭಾರತದ ನಗರ, ಪಟ್ಟಣಗಳಲ್ಲೂ ಬೆಳಗ್ಗೆ ಎದ್ದು ಆರೋಗ್ಯಕ್ಕಾಗಿ ಸೈಕಲ್‌ ತುಳಿದರೆ ಇನ್ನು ಕೆಲವು ಮೆಟ್ರೋ ನಗರಗಳಲ್ಲಿ ಸಪೂರ ಟಯರ್‌ ರೋಡ್‌ ಸೈಕಲ್‌ಗ‌ಳಲ್ಲಿ ರೇಸ್‌ಗಳಲ್ಲಿ ಪಾಲ್ಗೊಳ್ಳಲು ಅಭ್ಯಾಸ ನಡೆಸುವುದನ್ನೂ ಗಮನಿಸಬಹುದು.

ಬೈಸಿಕಲ್‌ಗೆ ಸುಮಾರು 200 ವರ್ಷ ಗಳ ಇತಿಹಾಸವಿದೆ. ಕಾರ್ಲ್ ವಾನ್‌ ಡ್ರಯಸ್‌ ಎಂಬ ಜರ್ಮನ್‌ ಪ್ರಜೆ 1817ರಲ್ಲಿ ಬೈಸಿಕಲ್‌ ತಯಾರಿಸಿ ಸಾರಿಗೆ ವಾಹನಕ್ಕೆ ನಾಂದಿ ಹಾಡಿದರು. ಆಗ ಇದ್ದ ಸೈಕಲ್‌ಗೆ ಪೆಡಲ್‌ ಇರಲಿಲ್ಲ, ಅದರ ಮೇಲೆ ಕುಳಿತು ನಡೆಯುತ್ತಾ, ಓಡುತ್ತಾ ಹೋದರೆ ಬೇಗ ತಲಪಬಹುದಿತ್ತು! ಅನಂತರದ ದಿನಗಳಲ್ಲಿ ವಿವಿಧ ರೂಪ ತಳೆದ ಬೈಸಿಕಲ್‌ 20ನೇ ಶತಮಾನದಲ್ಲಿ ಅತ್ಯಂತ ಜನಪ್ರಿಯ ಸಾರಿಗೆ ಸಾಧನವಾಯಿತು. ಪ್ರಪಂಚದೆಲ್ಲೆಡೆ ಸೈಕಲ್‌ ಬಳಕೆ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಯಿತು. 20ನೇ ಶತಮಾನದ ಪೂರ್ವಾರ್ಧದಲ್ಲಿ ಯುರೋಪಿನ ದೇಶಗಳು ಅನಂತರ ಏಷ್ಯಾ ಹಾಗೂ ಇನ್ನಿತರ ದೇಶಗಳಲ್ಲಿ ಸೈಕಲ್‌ ಬಹಳ ಜನಪ್ರಿಯ ಸಾರಿಗೆ ಸಾಧನವಾಗಿ ಗುರುತಿಸಿಕೊಂಡಿತು. 20ನೇ ಶತಮಾನದ ಅಂತ್ಯ ಹಾಗೂ 21ನೇ ಶತಮಾನದ ಆದಿಯಲ್ಲಿ ಮೋಟಾರು ವಾಹನಗಳು ಸಾರಿಗೆ ಕ್ಷೇತ್ರದಲ್ಲಿ ಕ್ಷಿಪ್ರಕ್ರಾಂತಿಗೆ ಸಾಕ್ಷಿಯಾದವು.

ಸೈಕಲ್‌ ಬಹಳ ಸರಳ, ಕೈಗೆಟಕುವ, ವಿಶ್ವಾಸಾರ್ಹ, ಪರಿಸರ ಸ್ನೇಹಿ ಸಾರಿಗೆ ಸಾಧನ. ಮೋಟಾರು ವಾಹನಗಳ ಪೈಪೋಟಿಯಲ್ಲಿ ತನ್ನ ಪ್ರಾಮುಖ್ಯವನ್ನು ಕಳೆದುಕೊಂಡು ಮೂಲೆ ಗುಂಪಾಗುವ ಸಂದರ್ಭ ದಲ್ಲಿ ಪೋಲೆಂಡ್‌ನ‌ ಪ್ರೊ| ಲೆಸಝೆಕ್‌ ಸಿಬಿಲ್‌ಸ್ಕಿ ಎಂಬ ಸಮಾಜಶಾಸ್ತ್ರಜ್ಞರ ಅವಿರತ ಪ್ರಯತ್ನದಿಂದಾಗಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಜೂನ್‌ 3ನ್ನು ವಿಶ್ವ ಬೈಸಿಕಲ್‌ ದಿನವನ್ನಾಗಿ ಆಚರಿಸುವ ಕುರಿತು 2018ರಲ್ಲಿ ನಿರ್ಣಯವನ್ನು ಕೈಗೊಳ್ಳಲಾಯಿತು. ಪ್ರಪಂಚಾದ್ಯಂತ ಬೈಸಿಕಲ್‌ ಅನ್ನು ಸಾರಿಗೆ ಸಾಧನವಾಗಿ, ಮನೋರಂಜನೆಗೆ, ಕ್ರೀಡಾಚಟುವಟಿಕೆಗಳಿಗಾಗಿ ಬಳಸುವ ನಿಟ್ಟಿನಲ್ಲಿ ಉತ್ತೇಜನ ನೀಡುವ ಈ ಕಾರ್ಯಕ್ರಮಗಳನ್ನು ಪ್ರತೀ ವರ್ಷ ವಿಶ್ವ ಬೈಸಿಕಲ್‌ ದಿನದಂದು ವಿವಿಧ ಸಂಘಸಂಸ್ಥೆಗಳು ಆಯೋಜಿಸುತ್ತವೆ.

ಬೈಸಿಕಲ್‌ ಬಳಕೆ ಜನರ ಆರೋಗ್ಯದ ಮೇಲೆ ಹಲವಾರು ಉತ್ತಮ ಪರಿಣಾಮ ಗಳನ್ನು ಬೀರುತ್ತದೆ ಎಂದು ವೈದ್ಯಕೀಯ ಅಧ್ಯಯನಗಳು ದೃಢಪಡಿಸಿವೆ. ನಿರಂತರವಾಗಿ ಸೈಕ್ಲಿಂಗ್‌ ಮಾಡು ವುದರಿಂದ  ಹೃದಯ ಬಲಗೊಳ್ಳುವುದು, ಸ್ನಾಯುಗಳ ಶಕ್ತಿವರ್ಧನೆ, ಸಂದುಗಳ ನಮ್ಯತೆ ಹೆಚ್ಚುವುದು, ಮೂಳೆ ಬಲಗೊಳ್ಳುವುದು, ಪಚನ ಕ್ರಿಯೆ ಉತ್ತಮ ಗೊಳ್ಳುವುದು, ಮಾನಸಿಕ ಒತ್ತಡ ಕಡಿಮೆಯಾಗಿ ಆತ್ಮ ಸಂತೋಷ ಹೀಗೆ ಹತ್ತು ಹಲವು ಆರೋಗ್ಯ ಸಂಬಂಧಿ ಪ್ರಯೋಜನಗಳಿವೆ. ಸೈಕ್ಲಿಂಗ್‌ನಿಂದ ಮಾರಕ ರೋಗಗಳಾದ ಪಾರ್ಶ್ವವಾಯು, ಹೃದಯಾ ಘಾತ, ಖನ್ನತೆ, ಡಯಾಬಿಟಿಸ್‌, ಬೊಜ್ಜು, ಸಂಧಿವಾತ ಮುಂತಾದ ರೋಗಗಳನ್ನು ಬರದಂತೆ ತಡೆಯಬಹುದು. ಸೈಕ್ಲಿಂಗ್‌ನ್ನು ಸಾಮಾನ್ಯವಾಗಿ ಹೊರಾಂಗಣದಲ್ಲಿ ಮಾಡುವಾಗ ಉತ್ತಮ ಗಾಳಿ, ಸೂರ್ಯಕಿರಣ, ಪರಿಸರದಲ್ಲಿನ ಮನಮುದಗೊಳಿಸುವ ದೃಶ್ಯಗಳಾದ ನದಿ, ಕೊಳ್ಳ, ಕಾಡು ಮೇಡು ಮನಸ್ಸಿಗೆ ಆಹ್ಲಾದಕರ ಅನುಭವನ್ನು ನೀಡುತ್ತವೆ.

ಸೈಕ್ಲಿಂಗ್‌ ಎನ್ನುವುದು ಪರಿಸರಸ್ನೇಹಿ. ಸೈಕ್ಲಿಂಗ್‌ನಿಂದ ಪರಿಸರಕ್ಕೆ ಯಾವುದೇ ರೀತಿಯ ಹಾನಿಯಾಗದು. ಹೊಗೆ ಸಮಸ್ಯೆ, ಶಬ್ದ ಮಾಲಿನ್ಯದ ಹಂಗಿಲ್ಲ. ಕಿಸೆಗೆ ಹೊರೆಯಲ್ಲ. ಪುಟ್ಟಮಕ್ಕಳಿಗೆ ಶಾಲೆಗೆ ಹೋಗಲು, ಆ ಮೂಲಕ ರಸ್ತೆ ಸಂಚಾರದ ಕನಿಷ್ಠ ನಿಯಮ ಅರಿತುಕೊಳ್ಳುವುದಕ್ಕೆ ಸೈಕಲ್‌ ಸಹಕಾರಿ.

ಏರುತಗ್ಗುಗಳಿಲ್ಲದ ಹಾದಿಯಾದರೆ ಗೇರ್‌ಲೆಸ್‌ ಸೈಕಲ್‌ನಲ್ಲೂ 8-10 ಕಿ.ಮೀ. ಗಳಷ್ಟು ಪೆಡಲ್‌ ತುಳಿದೇ ಕೆಲಸಕ್ಕೆ ಹೋಗಬಹುದು. ಇದರಿಂದ ನಗರಗಳ ಲ್ಲಿನ ಸಂಚಾರ ದಟ್ಟಣೆಯನ್ನು ತಪ್ಪಿಸ ಬಹುದು. ಕರಾವಳಿಯಂತಹ ಏರುತಗ್ಗಿನ ಪ್ರದೇಶದಲ್ಲಿ ಗೇರ್‌ ಲೆಸ್‌ ಸೈಕಲ್‌ ತುಸು ಕಷ್ಟ. ಇಂತಹ ಪ್ರದೇಶಗಳಲ್ಲಿ ಗೇರ್‌ ಸೈಕಲ್‌ ಪ್ರಯೋಜನಕಾರಿ.

ಇತ್ತೀಚೆಗಿನ ದಿನಗಳಲ್ಲಿ ಸೈಕಲ್‌ಗ‌ಳಲ್ಲೂ ಹಲವು ವಿಧ ಮತ್ತು ಮಾದರಿಗಳು ಲಭ್ಯ. ಚಿಕ್ಕಮಕ್ಕಳಿಂದ ತೊಡಗಿ ಹಿರಿಯ ನಾಗರಿಕರ ವರೆಗೂ ಅಗತ್ಯಕ್ಕೆ ತಕ್ಕಂತಹ ಸೈಕಲ್‌ಗ‌ಳಿವೆ. ಸೈಕಲ್‌ನ್ನು ಖರೀದಿಸುವವರು ತಮ್ಮ ಉದ್ದೇಶ ಏನು? ಎನ್ನುವುದನ್ನು ಮೊದಲು ತಿಳಿದುಕೊಳ್ಳಬೇಕು. ಫಿಟ್‌ನೆಸ್‌ಗಾದರೆ ಅಗಲ ಟಯರ್‌ಗಳ ಎಂಟಿಬಿ ಅಥವಾ ಮೌಂಟೇನ್‌ ಟೆರೇನ್‌ ಬೈಕ್‌ ಉತ್ತಮ, ಇದರಲ್ಲಿ ಕೆಟ್ಟುಹೋದ ರಸ್ತೆಯಲ್ಲೂ ಸಂಚರಿಸಬಹುದು. ಇದರಲ್ಲೇ ಟಯರಿನ ಅಗಲ ಕಡಿಮೆ ಮಾಡಿರುವ ಹೈಬ್ರಿಡ್‌ಗಳು ಇಂದಿನ ನಗರ ಕೇಂದ್ರಿತ ಫಿಟ್‌ನೆಸ್‌ ಪ್ರಿಯರಿಗೆ ಹೆಚ್ಚು ಪ್ರಿಯ, ಇವುಗಳ ವೇಗವೂ ಹೆಚ್ಚು. ಇನ್ನು ಕ್ರೀಡಾ ಉಪಯೋಗಕ್ಕೆ ಬಾಗಿದ ಹ್ಯಾಂಡಲ್‌ನ ರೋಡ್‌ ಬೈಕ್‌ ಉತ್ತಮ.

ಸೈಕ್ಲಿಂಗ್‌ ಅನ್ನು ಫಿಟ್‌ನೆಸ್‌ಗಾಗಿ ಬಳಸುವ ಮುನ್ನ ಈ ಕೆಲವು ಅಂಶ ಗಳನ್ನು ಗಮನದಲ್ಲಿರಿಸಿಕೊಳ್ಳಬೇಕು. ಸೈಕಲನ್ನು ಸುಸ್ಥಿತಿಯಲ್ಲಿರಿಸಿಕೊಳ್ಳಬೇಕು. ಈಗಿನ ಗೇರ್‌ಯುತವಾದ ಸೈಕಲ್‌ಗ‌ಳ ವೇಗ ಹೆಚ್ಚಿರುವುದರಿಂದ ಹೆಲ್ಮೆಟ್‌ ಕಡ್ಡಾಯ. ಕತ್ತಲಲ್ಲಿ ಸೈಕಲ್‌ ಸವಾರರನ್ನು ಗುರುತಿಸುವುದು ಕಷ್ಟ, ಹಾಗಾಗಿ ಹಿಂಬದಿಯ ಕೆಂಪು ಬ್ಲಿಂಕರ್‌ ಲೈಟ್‌ಗಳು ಮುಂಭಾಗ ಶಕ್ತಿಶಾಲಿ ರಿಚಾರ್ಜಬಲ್‌ ಹೆಡ್‌ಲೈಟ್‌ ಬಳಸಬಹುದು.

ಆರೋಗ್ಯವಂತ, ಪರಿಸರ ಸ್ನೇಹಿ ಸಮಾಜಕ್ಕೆ ಸೈಕ್ಲಿಂಗ್‌ನ ಕೊಡುಗೆ ಅಪೂರ್ವ. ನಮ್ಮ ಸೈಕ್ಲಿಂಗ್‌ ಹವ್ಯಾಸವನ್ನು ಕೇವಲ ವಿಶ್ವ ಬೈಸಿಕಲ್‌ ದಿನಕ್ಕಷ್ಟೇ ಸೀಮಿತಗೊಳಿಸದೆ ನಿರಂತರ ಸೈಕಲ್‌ ಬಳಸುವ ಅಭ್ಯಾಸ ಬೆಳೆಸಿಕೊಂಡರೆ ಆರೋಗ್ಯವಂತ ಸಮಾಜ ಹಾಗೂ ಮಾಲಿನ್ಯ ಮುಕ್ತ ಪರಿಸರಕ್ಕೆ ನಮ್ಮದೂ ಅಳಿಲ ಸೇವೆ ಸಲ್ಲಿಸಿದ ಸಾರ್ಥಕತೆ ನಮ್ಮದಾಗಬಹುದು.

ಪ್ರಯೋಜನಗಳು ಹಲವು
ಬೈಸಿಕಲ್‌ ಬಳಕೆ ಜನರ ಆರೋಗ್ಯದ ಮೇಲೆ ಹಲವಾರು ಉತ್ತಮ ಪರಿಣಾಮಗಳನ್ನು ಬೀರುತ್ತದೆ ಎಂದು ವೈದ್ಯಕೀಯ ಅಧ್ಯಯನಗಳು ದೃಢಪಡಿಸಿವೆ. ನಿರಂತರವಾಗಿ ಸೈಕ್ಲಿಂಗ್‌ ಮಾಡುವುದರಿಂದ ಹೃದಯ ಬಲಗೊಳ್ಳುವುದು, ಸ್ನಾಯುಗಳ ಶಕ್ತಿವರ್ಧನೆ, ಸಂದುಗಳ ನಮ್ಯತೆ ಹೆಚ್ಚುವುದು, ಮೂಳೆ ಬಲಗೊಳ್ಳುವುದು, ಪಚನ ಕ್ರಿಯೆ ಉತ್ತಮಗೊಳ್ಳುವುದು, ಮಾನಸಿಕ ಒತ್ತಡ ಕಡಿಮೆಯಾಗಿ ಆತ್ಮ ಸಂತೋಷ ಹೀಗೆ ಹತ್ತು ಹಲವು ಆರೋಗ್ಯ ಸಂಬಂಧಿ ಪ್ರಯೋಜನಗಳಿವೆ.

– ಡಾ| ರಂಗನಾಥ ಉಡುಪ, ಸುರತ್ಕಲ್‌

ಟಾಪ್ ನ್ಯೂಸ್

Team India; Not Hardik; Bhajji has suggested the name of Team India’s next T20 captain

Team India; ಹಾರ್ದಿಕ್ ಅಲ್ಲ; ಟೀಂ ಇಂಡಿಯಾದ ಮುಂದಿನ ಟಿ20 ನಾಯಕನ ಹೆಸರು ಸೂಚಿಸಿದ ಭಜ್ಜಿ

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

18

ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸುವಂತಹ ನೀಚತನಕ್ಕೆ ಬಿಜೆಪಿ ಇಳಿದಿದೆ-ಚನ್ನರಾಜ ಹಟ್ಟಿಹೊಳಿ

Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ

Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ

ತಾಳಿಭಾಗ್ಯ ಯೋಜನೆ ತಂದ ಕಾಂಗ್ರೆಸ್ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil

ತಾಳಿಭಾಗ್ಯ ಯೋಜನೆ ತಂದ ‘ಕಾಂಗ್ರೆಸ್’ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil

Mumbai Airport: ನ್ಯೂಡಲ್ಸ್‌ ಪ್ಯಾಕೇಟ್‌ ನೊಳಗೆ ಕೋಟ್ಯಂತರ ಮೌಲ್ಯದ ವಜ್ರ ಕಳ್ಳಸಾಗಣೆ!

Mumbai Airport: ನ್ಯೂಡಲ್ಸ್‌ ಪ್ಯಾಕೇಟ್‌ ನೊಳಗೆ ಕೋಟ್ಯಂತರ ಮೌಲ್ಯದ ವಜ್ರ ಕಳ್ಳಸಾಗಣೆ!

ʼದುರ್ಗಿʼಯಾಗಿ ಚಂದನವನಕ್ಕೆ ಕಾಲಿಟ್ಟ ಕಾಲಿವುಡ್‌ ಬೆಡಗಿ: ಡಾಲಿ ಜೊತೆ ರೊಮ್ಯಾನ್ಸ್

ʼದುರ್ಗಿʼಯಾಗಿ ಚಂದನವನಕ್ಕೆ ಕಾಲಿಟ್ಟ ಕಾಲಿವುಡ್‌ ಬೆಡಗಿ: ಡಾಲಿ ಜೊತೆ ರೊಮ್ಯಾನ್ಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

April 17ರಂದು ಶ್ರೀರಾಮ ನವಮಿ: ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

Rama Navami 2024: April 17ರಂದು ಶ್ರೀರಾಮ ನವಮಿ- ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

Ram Ayodhya

Rama Navami 2024: ನವಮಿಗೆ ಬಾಲಕರಾಮನ ಹಣೆಗೆ ಸೂರ್ಯ ತಿಲಕ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Team India; Not Hardik; Bhajji has suggested the name of Team India’s next T20 captain

Team India; ಹಾರ್ದಿಕ್ ಅಲ್ಲ; ಟೀಂ ಇಂಡಿಯಾದ ಮುಂದಿನ ಟಿ20 ನಾಯಕನ ಹೆಸರು ಸೂಚಿಸಿದ ಭಜ್ಜಿ

ಬಿಜೆಪಿ ದಲಿತರ ಪರ ಮೊಸಳೆ ಕಣ್ಣೀರು: ಬಿ.ಕೆ. ಹರಿಪ್ರಸಾದ

ಬಿಜೆಪಿ ದಲಿತರ ಪರ ಮೊಸಳೆ ಕಣ್ಣೀರು: ಬಿ.ಕೆ. ಹರಿಪ್ರಸಾದ

Haveri Lok Sabha constituency: “ಮೇ 7 ರಂದು ತಪ್ಪದೇ ಮತದಾನ ಮಾಡಿ’

Haveri Lok Sabha constituency: “ಮೇ 7 ರಂದು ತಪ್ಪದೇ ಮತದಾನ ಮಾಡಿ’

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

18

ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸುವಂತಹ ನೀಚತನಕ್ಕೆ ಬಿಜೆಪಿ ಇಳಿದಿದೆ-ಚನ್ನರಾಜ ಹಟ್ಟಿಹೊಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.