ಅ.4-10: ವಿಶ್ವ ಅಂತರಿಕ್ಷ ಸಪ್ತಾಹ: ಅಂತರಿಕ್ಷದತ್ತ ಯುವಜನತೆಯ ಸೆಳೆತ


Team Udayavani, Oct 4, 2022, 6:15 AM IST

ಅ.4-10: ವಿಶ್ವ ಅಂತರಿಕ್ಷ ಸಪ್ತಾಹ: ಅಂತರಿಕ್ಷದತ್ತ ಯುವಜನತೆಯ ಸೆಳೆತ

ಇಸ್ರೋ ತನ್ನ ಕೇಂದ್ರಗಳ ಮೂಲಕ ಹಾಗೂ ದೇಶದ ವಿಜ್ಞಾನಾಸಕ್ತ ಸಂಸ್ಥೆಗಳ ಮೂಲಕ ಕಾರ್ಯಕ್ರಮಗಳನ್ನು ಹಮ್ಮಿ ಕೊಳ್ಳುತ್ತಿದೆ. ರಾಜ್ಯದ ತಾರಾಲಯಗಳು, ವಿಜ್ಞಾನ ಕೇಂದ್ರಗಳು ವಿಭಿನ್ನ ಕಾರ್ಯಕ್ರಮಗಳ ಮೂಲಕ ಈ ಸಪ್ತಾಹದಲ್ಲಿ ಯುವಜನತೆಯನ್ನು ತಲು ಪುವ ಪ್ರಯತ್ನ ಮಾಡುತ್ತಿದೆ.

1999ರಲ್ಲಿ ವಿಶ್ವ ಸಂಸ್ಥೆ ಜಾಗತಿಕ ಅಂತರಿಕ್ಷ ಸಪ್ತಾಹವನ್ನು ಪ್ರತೀವರ್ಷ ಅಕ್ಟೋಬರ್‌ 4 ರಿಂದ 10ರ ವರೆಗೆ ಆಚರಿಸಬೇಕೆಂದು ನಿರ್ಣಯ ತೆಗೆದುಕೊಂಡಿತು. ಅದರಂತೆ ಪ್ರತೀ ವರ್ಷ ಎಲ್ಲ ತಾರಾಲಯಗಳು, ವಿಜ್ಞಾನ ಕೇಂದ್ರಗಳು, ಆಸಕ್ತ ಸಂಘಸಂಸ್ಥೆಗಳು ಅಂತಾ ರಾಷ್ಟ್ರೀಯ ಮಟ್ಟದಲ್ಲಿ ವಿಜ್ಞಾನ-ತಂತ್ರಜ್ಞಾನದ ಈ ಉತ್ಸವವನ್ನು ಆಚರಿಸಿಕೊಂಡು ಬರುತ್ತಿವೆ.

1957ರ ಅಕ್ಟೋಬರ್‌ 04 ರಂದು ಮಾನವ ನಿರ್ಮಿತ ಭೂ ಉಪಗ್ರಹ ಸ್ಪುಟ್ನಿಕ್‌ ­ 1ರ ಉಡ್ಡಯನವಾಯಿತು. ಇದು ಬಾಹ್ಯಾಕಾಶ ಸಂಶೋಧನೆಗೆ ನಾಂದಿಯಾಯಿತು. 1967 ಅಕ್ಟೋಬರ್‌ 10 ರಂದು ಬಾಹ್ಯಾಂ ತರಿಕ್ಷದಲ್ಲಿ ಆಸಕ್ತ ರಾಷ್ಟ್ರಗಳು ಕೈಗೊಳ್ಳಬಹುದಾದ ಶಾಂತಿಯುತ ಅನ್ವೇಷಣೆಗಳ ಬಗ್ಗೆ (ಚಂದ್ರ ಹಾಗೂ ಇತರ ಆಕಾಶಕಾಯಗಳನ್ನು ಸೇರಿಸಿ) ರೂಪಿಸಿದ ಅಂತಾ ರಾಷ್ಟ್ರೀಯ ನಿಯಮಗಳಿಗೆ ಸಹಿ ಹಾಕಲಾಯಿತು.

ಅಂತರಿಕ್ಷ ಸಪ್ತಾಹ ಏಕೆ?
ಆಧುನಿಕ ಜಗತ್ತಿನಲ್ಲಿ ಉಪ ಗ್ರಹಗಳ ಸ್ಥಾನ, ಉಪಯೋಗ ಮುಂದೆ ಅವುಗಳನ್ನು ಬಳಸುವ ಬಗೆ, ಅಂತ ರಿಕ್ಷದಲ್ಲಿ ನಮ್ಮದೇ ಆದ ಅಂತರಿಕ್ಷ ನಿಲ್ದಾಣ ಗಳನ್ನು ಸ್ಥಾಪಿಸಿ -ಉಪಗ್ರಹಗಳ ಉಡಾವಣೆ, ರಿಪೇರಿ ಹೊರ ಜಗತ್ತಿನ ವೀಕ್ಷಣೆ ಇತ್ಯಾದಿಗಳ ಸಾಧ್ಯಾಸಾಧ್ಯತೆಗಳು ಎಷ್ಟರ ಮಟ್ಟಿಗೆ ಮುಂದುವರಿದಿವೆ ಎಂದರೆ ಜಗತ್ತಿನ ರಾಷ್ಟ್ರಗಳಲ್ಲಿ ಈ ನಿಟ್ಟಿನಲ್ಲಿ ಮುಂಚೂಣಿ ಯಲ್ಲಿರಲು ಸ್ಪರ್ಧೆಯೇ ಏರ್ಪಟ್ಟಿದೆ. ದಿನದಿಂದ ದಿನಕ್ಕೆ ಹೊಸ ಕಲ್ಪನೆಗಳ ಮೂಲಕ ಉದ್ಯಮಿಗಳು ಈ ಕ್ಷೇತ್ರಕ್ಕೆ ದಾಪುಗಾಲಿಡು ತ್ತಿದ್ದಾರೆ. ಚಂದ್ರಾನ್ವಷೇಣೆ, ಮಂಗಳ ನತ್ತ ಪಯಣ, ವಿಶೇಷ ವಿನ್ಯಾಸದ ದೂರ ದರ್ಶಕಗಳ ಉಡಾವಣೆ, ಒಂದೇ ಎರಡೇ? ಎಲ್ಲ ಉಪಗ್ರಹಗಳು ಒಂದಲ್ಲ ಒಂದು ಕ್ಷೇತ್ರಕ್ಕೆ ಸಂಬಂಧಿಸಿದವುಗಳು. ಸಂವಹನಕ್ಕಾಗಿ, ಮಿಲಿಟರಿ ಉದ್ದೇಶಗಳಿಗಾಗಿ, ಭೂಪ್ರದೇಶದ ಮಾಹಿತಿಗಳಿಗಾಗಿ, ಸಂಶೋಧನೆಗಳಿಗಾಗಿ ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.

ವಿಜ್ಞಾನಿಗಳ ಕುತೂಹಲ, ವಿಶ್ವ ರಹಸ್ಯಗಳನ್ನು ಅರಿಯುವ ತುಡಿತ, ಛಲ ಬಹಳಷ್ಟು ಸ್ಪರ್ಧಾತ್ಮಕವಾಗಿ ಮುಂದುವರಿದಿದೆ. ಭವಿಷ್ಯ ದಲ್ಲಿ ಭೂಮಿಯ ಹೊರಗಿನಿಂದ ನೋಡಿದರೆ, ಇದು ಉಪಗ್ರಹಗಳಿಂದ ಸುತ್ತುವರಿದಿರುವ ಗ್ರಹ, ದಟ್ಟಣೆ ಎಷ್ಟಿದೆಯೆಂದರೆ ಬೇರೇನೂ ಕಾಣದು ಎಂದು ಹೇಳುವ ಕಾಲ ಬಂದೀತು ಎಂದು ಹಾಸ್ಯ ಮಾಡುವ ಪರಿಸ್ಥಿತಿಯಾಗಿದೆ.

ಅದಕ್ಕಾಗಿ ಈ ಸಪ್ತಾಹ. ನಮ್ಮ ಮುಂದಿನ ಜನಾಂಗ ಈ ಕ್ಷೇತ್ರದ ಬಗ್ಗೆ ಅರಿತುಕೊಳ್ಳಬೇಕು ಸುಸ್ಥಿರ ಅಭಿವೃದ್ಧಿಗೆ ಇವನ್ನು ಬಳಸಬೇಕು. ಇದರಲ್ಲಿ ತೊಡಗಿಕೊಳ್ಳುವ ಆಸಕ್ತಿ ಅವರಲ್ಲಿ ಮೂಡಬೇಕು. ವಿಜ್ಞಾನ-ತಂತ್ರಜ್ಞಾನದತ್ತ ಅವರು ಹೊರಳಬೇಕೆನ್ನುವ ಆಶಯ. ಅಂತಾ ರಾಷ್ಟ್ರೀಯ ಸಹಕಾರದೊಂದಿಗೆ ಬಾಹ್ಯಾಕಾಶ ಸಂಶೋಧನೆ, ಶಿಕ್ಷಣ ಹೊಸ ಮಜಲನ್ನು ತಲುಪ ಬೇಕೆನ್ನುವ ಮನೋಭಾವವನ್ನು ಮೂಡಿಸುವ ಪ್ರಯತ್ನ.

ಅಂತಾರಾಷ್ಟ್ರೀಯ ಬಾಹ್ಯಾ ಕಾಶ ಸಂಸ್ಥೆಗಳು, ತಾರಾಲಯ ಗಳು ವಿಜ್ಞಾನ ಕೇಂದ್ರಗಳು ಈ ಸಪ್ತಾಹದಲ್ಲಿ ಈ ವರ್ಷ ಬಹಳ ದೊಡ್ಡ ಮಟ್ಟ ದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿವೆ. ಭಾರತದಲ್ಲಿ ಇಸ್ರೋ ತನ್ನ ಕೇಂದ್ರಗಳ ಮೂಲಕ ಹಾಗೂ ದೇಶದ ವಿಜ್ಞಾನಾಸಕ್ತ ಸಂಸ್ಥೆಗಳ ಮೂಲಕ ಕಾರ್ಯ ಕ್ರಮಗಳನ್ನು ಹಮ್ಮಿ ಕೊಳ್ಳುತ್ತಿದೆ. ರಾಜ್ಯದ ತಾರಾಲಯಗಳು, ವಿಜ್ಞಾನ ಕೇಂದ್ರಗಳು ವಿಭಿನ್ನ ಕಾರ್ಯಕ್ರಮಗಳ ಮೂಲಕ ಈ ಸಪ್ತಾಹದಲ್ಲಿ ವಿದ್ಯಾರ್ಥಿಗಳನ್ನು, ಅಧ್ಯಾಪಕ ರನ್ನು ಮತ್ತು ಸಾರ್ವಜನಿಕರನ್ನು ತಲುಪುವ ಪ್ರಯತ್ನ ಮಾಡುತ್ತಿವೆ. ರಸಪ್ರಶ್ನೆ ಸ್ಪರ್ಧೆಗಳು ಆನ್‌ಲೈನ್‌ ಕಾರ್ಯಕ್ರಮಗಳು, ಕಾರ್ಯಾ ಗಾರಗಳು, ವಿವಿಧ ಪ್ರಯೋಗಗಳು ಇವೆಲ್ಲ ಅಂತರಿಕ್ಷದ ಪರಿಚಯ, ಅಂತರಿಕ್ಷ ಯಾನದ ಸಾಧನೆಗಳು, ಭವಿಷ್ಯದ ಯೋಜನೆಗಳು ಇತ್ಯಾದಿಗಳನ್ನು ಚರ್ಚಿಸುತ್ತಿವೆ. ಒಟ್ಟಿನಲ್ಲಿ ನಮ್ಮ ಮುಂದಿನ ಯುವ ಜನಾಂಗ ಈ ಕ್ಷೇತ್ರದಲ್ಲಿ ಸಾಧನೆ ಮಾಡುವ ಆಸಕ್ತಿ ಬೆಳೆಸಿಕೊಳ್ಳ ಬೇಕೆನ್ನುವುದು ಉದ್ದೇಶ. ಅದು ಈಡೇರಲಿ ಎಂದು ನಮ್ಮ ಹಾರೈಕೆ.

-ಡಾ| ಕೆ.ವಿ.ರಾವ್‌, ಮಂಗಳೂರು

ಟಾಪ್ ನ್ಯೂಸ್

15-udupi

Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ

Delhi Police: ಮಾರುತಿ ಸ್ವಿಫ್ಟ್‌ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!

Delhi Police: ಮಾರುತಿ ಸ್ವಿಫ್ಟ್‌ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!

BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ

BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ

ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

Loksabha; ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

Anil Kumble Reveals His IPL Bid 2008

IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

April 17ರಂದು ಶ್ರೀರಾಮ ನವಮಿ: ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

Rama Navami 2024: April 17ರಂದು ಶ್ರೀರಾಮ ನವಮಿ- ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

15-udupi

Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ

Delhi Police: ಮಾರುತಿ ಸ್ವಿಫ್ಟ್‌ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!

Delhi Police: ಮಾರುತಿ ಸ್ವಿಫ್ಟ್‌ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!

BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ

BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ

We Are The Bad Boys song from Vidyarthi Vidyarthiniyare

Kannada Cinema; ಬ್ಯಾಡ್‌ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.