ಅಂಟಾರ್ಟಿಕಾದಿಂದ ಬೇರ್ಪಟ್ಟ ವಿಶ್ವದ ಬೃಹತ್ ಐಸ್ ಬರ್ಗ್, ನವದೆಹಲಿಗಿಂತ ಮೂರು ಪಟ್ಟು ಗಾತ್ರ!

ಪೆಂಗ್ವಿನ್ ಸೇರಿದಂತೆ ಸಮುದ್ರ ಜೀವಿಗಳಿಗೆ ಹೆಚ್ಚಿನ ಅಪಾಯ ಸಂಭವಿಸಲಿದೆ ಎಂದು ಸಂಶೋಧಕರು ಎಚ್ಚರಿಸಿದ್ದಾರೆ.

Team Udayavani, May 20, 2021, 3:55 PM IST

ಅಂಟಾರ್ಟಿಕಾದಿಂದ ಬೇರ್ಪಟ್ಟ ವಿಶ್ವದ ಬೃಹತ್ ಐಸ್ ಬರ್ಗ್, ನವದೆಹಲಿಗಿಂತ ಮೂರು ಪಟ್ಟು ಗಾತ್ರ

ಭೂಮಿಯ ವಾತಾವರಣದಲ್ಲಿ ತೀವ್ರವಾಗಿ ಬದಲಾವಣೆಯಾಗುತ್ತಿದ್ದು, ಇಡೀ ಭೂಮಂಡಲದ ಹವಾಮಾನ ಬಿಸಿಯೇರುತ್ತಿದೆ. ಮತ್ತೊಂದೆಡೆ ವಿಪರೀತವಾದ ಹವಾಮಾನ ವೈಪರೀತ್ಯದಿಂದಾಗಿ ಬಹುದೊಡ್ಡ ಅಪಾಯಗಳಿಗೆ ಜತ್ತು ಸಾಕ್ಷಿಯಾಗುತ್ತಿದೆ. ಅದಕ್ಕೊಂದು ಹೊಸ ಸೇರ್ಪಡೆ ವಿಶ್ವದ ಅತೀದೊಡ್ಡ ಐಸ್ ಬರ್ಗ್ (ಮಂಜುಗಡ್ಡೆ) ಎನಿಸಿಕೊಂಡ ಎ-76 ಅಂಟಾರ್ಕ್ಟಿಕಾದ ರೊನ್ನೆ ಐಸ್ ಶೆಲ್ಫ್ ನಿಂದ ಬೇರ್ಪಟ್ಟಿದೆ. ಅಷ್ಟೇ ಅಲ್ಲ ಅಂಟಾರ್ಕ್ಟಿಕಾದ ವೆಡ್ಡೆಲ್ ಸಮುದ್ರದಲ್ಲಿ ತೇಲುತ್ತಿದೆ ಎಂದು ಯುರೋಪ್ ಬಾಹ್ಯಾಕಾಶ ಏಜೆನ್ಸಿ ತಿಳಿಸಿದೆ.

ಇದನ್ನೂ ಓದಿ:ಪತ್ನಿಗೆ ಮತ್ತೋರ್ವನ ಜೊತೆ ಅನೈತಿಕ ಸಂಬಂಧ: ಪತಿಯಿಂದ ವ್ಯಕ್ತಿಯ ಕೊಲೆ

ಈ ಮಂಜುಗಡ್ಡೆ ಮೂರು ದೆಹಲಿಯಷ್ಟು ಬೃಹತ್ ಗಾತ್ರದಲ್ಲಿದೆ!
ವಿಶ್ವದ ಅತೀದೊಡ್ಡ ಮಂಜುಗಡ್ಡೆಯಾಗಿರುವ ಎ-76 ಸುಮಾರು 4,320 ಚದರ ಕಿಲೋ ಮೀಟರ್ ಬೃಹತ್ ಗಾತ್ರವನ್ನು ಹೊಂದಿದೆ. ಇದು ನವದೆಹಲಿಯ ಮೂರು ಪಟ್ಟು ಹೆಚ್ಚಿನ ಗಾತ್ರದ್ದಾಗಿದೆ. ಈ ಐಸ್ ಬರ್ಗ್ ವೆಡ್ಡೆಲ್ ಸಮುದ್ರ ಪ್ರದೇಶದಲ್ಲಿದೆ. ಇದು 170 ಕಿಲೋ ಮೀಟರ್ ಉದ್ದ ಮತ್ತು 25 ಕಿಲೋ ಮೀಟರ್ ಅಗಲ ಹೊಂದಿದೆ. ಈ ಬೃಹತ್ ಮಂಜುಗಡ್ಡೆ ಸ್ಪೇನ್ ದ್ವೀಪಪ್ರದೇಶ ಮಜ್ ರೋಕಾಕ್ಕಿಂತ ದೊಡ್ಡದಾಗಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.

ಯುರೋಪಿಯನ್ ಸ್ಪೇಸ್ ಏಜೆನ್ಸಿ ಹೇಳಿಕೆ ಪ್ರಕಾರ, ಎ-76 ಐಸ್ ಬರ್ಗ್ ಎ-23ಎಗಿಂತ ಅತೀ ದೊಡ್ಡ ಮಂಜುಗಡ್ಡೆಯಾಗಿದೆ. ಇದು ಕೂಡಾ ವೆಡ್ಡೆಲ್ ಸಮುದ್ರಪ್ರದೇಶದಲ್ಲಿದ್ದು, ಅಂದಾಜು 3,880 ಚದರ ಕಿಲೋ ಮೀಟರ್ ನಷ್ಟು ಬೃಹತ್ ಗಾತ್ರ ಹೊಂದಿದ್ದು, ಎ-23ಎ ಮಂಜುಗಡ್ಡೆ ಕೂಡಾ ಬೇರ್ಪಟ್ಟು ತೇಲುತ್ತಿದೆ. ಅಂಟಾರ್ಟಿಕಾದ ಪರ್ಯಾಯ ದ್ವೀಪದಿಂದ ಒಡೆಯುವ ಅನೇಕ ಮಂಜುಗಡ್ಡೆಗಳು ದಕ್ಷಿಣ ಜಾರ್ಜಿಯಾ ಮತ್ತು ದಕ್ಷಿಣ ಸ್ಯಾಂಡ್ ವಿಚ್ ದ್ವೀಪಗಳನ್ನು ತಲುಪುತ್ತದೆ ಎಂದು ಏಜೆನ್ಸಿ ವಿವರಿಸಿದೆ.

ಈ ವರ್ಷದ ಫೆಬ್ರುವರಿ ಆರಂಭದಲ್ಲಿ ಎ-76 ಮಂಜುಗಡ್ಡೆ ಮೊದಲ ಬಾರಿಗೆ ಒಡೆಯಲು ಆರಂಭವಾಗಿತ್ತು. ನಂತರ ಅದು ಬ್ರಂಟ್ ಐಸ್ ಶೆಲ್ಫ್ ಭಾಗದಿಂದ ಬೇರ್ಪಟ್ಟಿತ್ತು. ಹೀಗೆ ಬೇರ್ಪಟ್ಟ ಮಂಜುಗಡ್ಡೆ ದಿನಂಪ್ರತಿ ಐದು ಮೀಟರ್ ಗಳಷ್ಟು ಮುಂದಕ್ಕೆ ಚಲಿಸುತ್ತಿತ್ತು.

ಅದೇ ರೀತಿ 2017ರಲ್ಲಿ ಅಂಟಾರ್ಟಿಕಾದ ಮಂಜುಗಡ್ಡೆ ಗೋಡೆಯನ್ನು ಒಡೆದು ಹಾಕಿದ್ದ ವಿಶ್ವದ ಅತೀದೊಡ್ಡ ಮಂಜುಗಡ್ಡೆ ಈಗ ದಕ್ಷಿಣ ಅಟ್ಲಾಂಟಿಕ್ ಸಮುದ್ರದ ಜಾರ್ಜಿಯಾ ಐಲ್ಯಾಂಡ್ ನತ್ತ ಪ್ರಯಾಣ ಬೆಳೆಸಿತ್ತು. ಬೃಹತ್ ಮಂಜುಗಡ್ಡೆ ಎ68ಎ ಹೆಸರಿನ ಮಂಜುಗಡ್ಡೆ ಜಾರ್ಜಿಯಾಕ್ಕೆ ಹತ್ತಿರವಾಗುತ್ತಿರುವ ಬಗ್ಗೆ ಯುರೋಪಿಯನ್ ಸ್ಪೇಸ್ ಏಜೆನ್ಸಿ ಮಾಹಿತಿ ನೀಡಿತ್ತು. ಈ ಬಗ್ಗೆ ಸಂಶೋಧನೆ ನಡೆಸುತ್ತಿರುವ ಕೊಲೊರಾಡೋ ಯೂನಿರ್ವಸಿಟಿ ಸಂಶೋಧಕರು, ಎ-76 ಮಂಜುಗಡ್ಡೆ ಬೇರ್ಪಟ್ಟಿದ್ದರಿಂದ ಹವಾಮಾನ ಬದಲಾವಣೆಗೆ ಯಾವುದೇ ಸಂಬಂಧ ಹೊಂದಿಲ್ಲ.

ಬೃಹತ್ ಮಂಜುಗಡ್ಡೆಗಳು ಈಗಾಗಲೇ ಸಮುದ್ರದಲ್ಲಿ ತೇಲಲು ಆರಂಭವಾಗಿದೆ. ಇದರಿಂದ ಮಂಜುಗಡ್ಡೆ ಬೆಳೆಯಲ್ಲ. ಆದರೆ 1880ರಿಂದ 9 ಇಂಚಿನಷ್ಟು ಸಮುದ್ರದ ನೀರಿನ ಮಟ್ಟ ಏರಿಕೆಯಾಗಿದೆ. ಸಮುದ್ರದ ನೀರಿನ ಮಟ್ಟ ಹೆಚ್ಚಳವಾಗಲು ಮಂಜುಗಡ್ಡೆ ಕರಗುವಿಕೆ ಪ್ರಮುಖ ಕಾರಣವಾಗಿದೆ ಎಂದು ತಿಳಿಸಿದೆ. ಅಲ್ಲದೇ ಎರಡು ಬೃಹತ್ ಮಂಜುಗಡ್ಡೆಗಳು ಒಂದಕ್ಕೊಂದು ಘರ್ಷಣೆ ಸಂಭವಿಸಿದಲ್ಲಿ ಪೆಂಗ್ವಿನ್ ಸೇರಿದಂತೆ ಸಮುದ್ರ ಜೀವಿಗಳಿಗೆ ಹೆಚ್ಚಿನ ಅಪಾಯ ಸಂಭವಿಸಲಿದೆ
ಎಂದು ಸಂಶೋಧಕರು ಎಚ್ಚರಿಸಿದ್ದಾರೆ.

ಟಾಪ್ ನ್ಯೂಸ್

UPSC Exam: 30ಕ್ಕಿಂತ ಅಧಿಕ ಕನ್ನಡಿಗರ ಆಯ್ಕೆ

UPSC Exam: 30ಕ್ಕಿಂತ ಅಧಿಕ ಕನ್ನಡಿಗರ ಆಯ್ಕೆ

ಶ್ರೀ ಕ್ಷೇತ್ರ ಗೆಜ್ಜೆಗಿರಿ ಮೇಳದಿಂದ ವಿದೇಶದಲ್ಲಿ ಯಕ್ಷಗಾನ ಪ್ರದರ್ಶನ

ಶ್ರೀ ಕ್ಷೇತ್ರ ಗೆಜ್ಜೆಗಿರಿ ಮೇಳದಿಂದ ವಿದೇಶದಲ್ಲಿ ಯಕ್ಷಗಾನ ಪ್ರದರ್ಶನ

ನಾರಾಯಣ ಗುರುಗಳ ಪ್ರತಿಮೆ ಜಗತ್ತು ನೋಡುವಂತೆ ಮಾಡಿದ ಪ್ರಧಾನಿ ಮೋದಿ: ಸತೀಶ್‌ ಕುಂಪಲ

ನಾರಾಯಣ ಗುರುಗಳ ಪ್ರತಿಮೆ ಜಗತ್ತು ನೋಡುವಂತೆ ಮಾಡಿದ ಪ್ರಧಾನಿ ಮೋದಿ: ಸತೀಶ್‌ ಕುಂಪಲ

Congress; ಕ್ಷೇತ್ರದ ಅಭಿವೃದ್ಧಿಗಾಗಿ ಪ್ರತ್ಯೇಕ ಪ್ರಣಾಳಿಕೆ: ಜಯಪ್ರಕಾಶ್‌ ಹೆಗ್ಡೆ

Congress; ಕ್ಷೇತ್ರದ ಅಭಿವೃದ್ಧಿಗಾಗಿ ಪ್ರತ್ಯೇಕ ಪ್ರಣಾಳಿಕೆ: ಜಯಪ್ರಕಾಶ್‌ ಹೆಗ್ಡೆ

banPuttur ಚುನಾವಣೆ ಕರ್ತವ್ಯ ನಿರತ ಅಂಗನವಾಡಿ ಕಾರ್ಯಕರ್ತೆಗೆ ಹಲ್ಲೆ

Puttur ಚುನಾವಣೆ ಕರ್ತವ್ಯ ನಿರತ ಅಂಗನವಾಡಿ ಕಾರ್ಯಕರ್ತೆಗೆ ಹಲ್ಲೆ

Kota ಮತದಾನ ಮಾಡಿ ಕೊನೆಯುಸಿರೆಳೆದ ಅಜ್ಜಿ!

Kota ಮತದಾನ ಮಾಡಿ ಕೊನೆಯುಸಿರೆಳೆದ ಅಜ್ಜಿ!

Bantwal: ಮನೆಯಲ್ಲೇ ಮತ ಚಲಾಯಿಸಿದ ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿ

Bantwal: ಮನೆಯಲ್ಲೇ ಮತ ಚಲಾಯಿಸಿದ ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-aasasas

ಸೌರ ಯುಗಾದಿ; ಜೀವನೋತ್ಸಾಹ, ನವಚೈತನ್ಯ ತುಂಬುವ ಹಬ್ಬ ವಿಷು

PAK: ವಾಣಿಜ್ಯ ಕಟ್ಟಡ ನಿರ್ಮಾಣಕ್ಕಾಗಿ ಐತಿಹಾಸಿಕ ಹಿಂದೂ ದೇವಸ್ಥಾನ ಧ್ವಂಸಗೊಳಿಸಿದ ಪಾಕ್!

PAK: ವಾಣಿಜ್ಯ ಕಟ್ಟಡ ನಿರ್ಮಾಣಕ್ಕಾಗಿ ಐತಿಹಾಸಿಕ ಹಿಂದೂ ದೇವಸ್ಥಾನ ಧ್ವಂಸಗೊಳಿಸಿದ ಪಾಕ್!

Union Territory: 6 ಕೇಂದ್ರಾಡಳಿತ ಪ್ರದೇಶದಲ್ಲಿ 6 ಸೀಟು ಯಾರಿಗೆ?

Union Territory: 6 ಕೇಂದ್ರಾಡಳಿತ ಪ್ರದೇಶದಲ್ಲಿ 6 ಸೀಟು ಯಾರಿಗೆ?

Lok Sabha Election: ಜೆಡಿಎಸ್‌ ಭದ್ರಕೋಟೆ ಹಾಸನದಲ್ಲಿ ಜಿದ್ದಾಜಿದ್ದಿನ ಸ್ಪರ್ಧೆ

Lok Sabha Election: ಜೆಡಿಎಸ್‌ ಭದ್ರಕೋಟೆ ಹಾಸನದಲ್ಲಿ ಜಿದ್ದಾಜಿದ್ದಿನ ಸ್ಪರ್ಧೆ

1-qwewqew

ಮರಳಿ ಬಂದಿದೆ ಯುಗಾದಿ: ಹೊಸ ಸಂವತ್ಸರದ ಹುರುಪು, ನವ ಬೆಳಕಿನ ಆಶಯ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

UPSC Exam: 30ಕ್ಕಿಂತ ಅಧಿಕ ಕನ್ನಡಿಗರ ಆಯ್ಕೆ

UPSC Exam: 30ಕ್ಕಿಂತ ಅಧಿಕ ಕನ್ನಡಿಗರ ಆಯ್ಕೆ

ಶ್ರೀ ಕ್ಷೇತ್ರ ಗೆಜ್ಜೆಗಿರಿ ಮೇಳದಿಂದ ವಿದೇಶದಲ್ಲಿ ಯಕ್ಷಗಾನ ಪ್ರದರ್ಶನ

ಶ್ರೀ ಕ್ಷೇತ್ರ ಗೆಜ್ಜೆಗಿರಿ ಮೇಳದಿಂದ ವಿದೇಶದಲ್ಲಿ ಯಕ್ಷಗಾನ ಪ್ರದರ್ಶನ

ನಾರಾಯಣ ಗುರುಗಳ ಪ್ರತಿಮೆ ಜಗತ್ತು ನೋಡುವಂತೆ ಮಾಡಿದ ಪ್ರಧಾನಿ ಮೋದಿ: ಸತೀಶ್‌ ಕುಂಪಲ

ನಾರಾಯಣ ಗುರುಗಳ ಪ್ರತಿಮೆ ಜಗತ್ತು ನೋಡುವಂತೆ ಮಾಡಿದ ಪ್ರಧಾನಿ ಮೋದಿ: ಸತೀಶ್‌ ಕುಂಪಲ

Congress; ಕ್ಷೇತ್ರದ ಅಭಿವೃದ್ಧಿಗಾಗಿ ಪ್ರತ್ಯೇಕ ಪ್ರಣಾಳಿಕೆ: ಜಯಪ್ರಕಾಶ್‌ ಹೆಗ್ಡೆ

Congress; ಕ್ಷೇತ್ರದ ಅಭಿವೃದ್ಧಿಗಾಗಿ ಪ್ರತ್ಯೇಕ ಪ್ರಣಾಳಿಕೆ: ಜಯಪ್ರಕಾಶ್‌ ಹೆಗ್ಡೆ

banPuttur ಚುನಾವಣೆ ಕರ್ತವ್ಯ ನಿರತ ಅಂಗನವಾಡಿ ಕಾರ್ಯಕರ್ತೆಗೆ ಹಲ್ಲೆ

Puttur ಚುನಾವಣೆ ಕರ್ತವ್ಯ ನಿರತ ಅಂಗನವಾಡಿ ಕಾರ್ಯಕರ್ತೆಗೆ ಹಲ್ಲೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.