ಲಡಾಖ್‌ನಲ್ಲಿ  ವಿಶ್ವದ ಅತೀ ಎತ್ತರದ ರಸ್ತೆ


Team Udayavani, Aug 1, 2021, 6:50 AM IST

ಲಡಾಖ್‌ನಲ್ಲಿ  ವಿಶ್ವದ ಅತೀ ಎತ್ತರದ ರಸ್ತೆ

ಭಾರತದ ಗಡಿಯಂಚಿನ ಲಡಾಖ್‌ನಲ್ಲಿ ವಿಶ್ವದ ಅತೀ ಎತ್ತರದ ರಸ್ತೆಯನ್ನು ನಿರ್ಮಿಸಲಾಗಿದೆ. ಗಡಿ ರಸ್ತೆಗಳ ನಿರ್ಮಾಣ ಸಂಸ್ಥೆ (ಬಿಆರ್‌ಒ)ಯು ಸಿಯಾಚಿನ್‌ ಹಿಮನದಿಗಿಂತ ಎತ್ತರದಲ್ಲಿರುವ ಪೂರ್ವ ಲಡಾಖ್‌ನ ಉಮ್ಲಿಂಗ್‌ ಲಾ ಪಾಸ್‌ನಲ್ಲಿ  ಸಮುದ್ರಮಟ್ಟ ಕ್ಕಿಂತ 19,300 ಅಡಿಗಳಷ್ಟು ಎತ್ತರ ದಲ್ಲಿ  ಈ ರಸ್ತೆಯನ್ನು ನಿರ್ಮಿಸಿದೆ.

ಎವರೆಸ್ಟ್‌ ಬೇಸ್‌  ಕ್ಯಾಂಪ್‌ಗಿಂತಲೂ ಎತ್ತರ :

ಈ ರಸ್ತೆಯು ಎವರೆಸ್ಟ್‌ ಬೇಸ್‌ ಕ್ಯಾಂಪ್‌ಗಿಂತಲೂ ಎತ್ತರದಲ್ಲಿದೆ. 52 ಕಿ.ಮೀ. ಉದ್ದದ ಈ ಟಾರು ರಸ್ತೆಯಲ್ಲಿ ವಾಹನಗಳು ಸುಗಮ ವಾಗಿ ಸಂಚರಿಸಬಹುದಾಗಿದೆ. ಉಮ್ಲಿಂಗ್‌ ಲಾ ಪಾಸ್‌ ಮೂಲಕ ಪೂರ್ವ ಲಡಾಖ್‌ನ ಚುಮಾರ್‌ ಸೆಕ್ಟರ್‌ನ ಪ್ರಮುಖ ಪಟ್ಟಣಗಳನ್ನು ಸಂಪರ್ಕಿಸುತ್ತದೆ. ಟಿಬೆಟ್‌ನಲ್ಲಿರುವ ಮೌಂಟ್‌ ಎವರೆಸ್ಟ್‌ನ ಉತ್ತರ ಬೇಸ್‌  16,900 ಅಡಿ ಎತ್ತರದಲ್ಲಿದ್ದರೆ, ನೇಪಾಲದಲ್ಲಿರುವ ದಕ್ಷಿಣ ಬೇಸ್‌ 17,598 ಅಡಿಗಳಷ್ಟು ಎತ್ತರದಲ್ಲಿದೆ. ಮೌಂಟ್‌ ಎವರೆಸ್ಟ್‌ನ ಎತ್ತರವು 29,000 ಅಡಿಗಳಿಗಿಂತ ಕೊಂಚ ಅಧಿಕವಾಗಿದೆ. ಸಿಯಾಚಿನ್‌ ಹಿಮನದಿಯು 17,700 ಅಡಿಗಳಷ್ಟು ಎತ್ತರದಲ್ಲಿದ್ದರೆ ಲೇಹ್‌ನ ಖರ್ದುಂಗ್‌ ಲಾ ಪಾಸ್‌ 17,582 ಅಡಿ ಎತ್ತರದಲ್ಲಿದೆ.

ಬೊಲಿವಿಯಾವನ್ನು ಹಿಂದಿಕ್ಕಿದ ಭಾರತ :

ಬೊಲಿವಿಯಾವು ಸಮುದ್ರ ಮಟ್ಟಕ್ಕಿಂತ 18,953 ಅಡಿಗಳಷ್ಟು ಎತ್ತರದಲ್ಲಿ ರಸ್ತೆಯನ್ನು ಈ ಹಿಂದೆ ನಿರ್ಮಿಸಿದ್ದು ಇದು ಈವರೆಗೆ ವಿಶ್ವದಲ್ಲಿಯೇ ಅತ್ಯಂತ ಎತ್ತರದ ರಸ್ತೆ ಎಂಬ ಹೆಗ್ಗಳಿಕೆಯನ್ನು ಪಡೆದಿತ್ತು. ಇದೀಗ ಭಾರತ ಲಡಾಖ್‌ನಲ್ಲಿ 19,300 ಅಡಿಗಳಷ್ಟು ಎತ್ತರದಲ್ಲಿ ರಸ್ತೆಯನ್ನು ನಿರ್ಮಿಸುವ ಮೂಲಕ ಈ ದಾಖಲೆಯನ್ನು ಮುರಿದಿದೆ.

ದುರ್ಗಮ ಪ್ರದೇಶ :

ಲಡಾಖ್‌ನ ಉಮ್ಲಿಂಗ್‌ ಲಾ ಪಾಸ್‌ ಅತ್ಯಂತ ಸಂಕೀರ್ಣ ಮತ್ತು ಕಠಿನ ಭೂ ಪ್ರದೇಶ ಮತ್ತು ಅತ್ಯಂತ ಕಡಿಮೆ ಎಂದರೆ ಚಳಿಗಾಲದಲ್ಲಿ ಮೈನಸ್‌ 40 ಡಿ. ಸೆ. ತಾಪಮಾನ ಇರುತ್ತದೆ. ಅಲ್ಲದೆ ಇಲ್ಲಿ ಆಮ್ಲಜನಕದ ಮಟ್ಟ ಸಾಮಾನ್ಯ ಸ್ಥಳಗಳಿಗೆ ಹೋಲಿಸಿದರೆ  50 ಪ್ರತಿಶತ ಕಡಿಮೆ ಇರುತ್ತದೆ. ಇಂತಹ ಕ್ಲಿಷ್ಟಕರ ಸನ್ನಿವೇಶದ ಹೊರತಾಗಿಯೂ ಬಿಆರ್‌ಒ ಈ ರಸ್ತೆಯನ್ನು ನಿರ್ಮಿ ಸುವ ಮೂಲಕ ಇತಿಹಾಸ ಸೃಷ್ಟಿಸಿದೆ.

ಸ್ಥಳೀಯರಿಗೆ ವರದಾನ‌ :

ಲೇಹ್‌ನಿಂದ ಚಿಸುಮ್ಲೆ ಮತ್ತು ಡೆಮ್ಲೊಕ್‌ ಅನ್ನು ಸಂಪರ್ಕಿಸುವ ನೇರ ರಸ್ತೆ ಇದಾಗಿರುವುದರಿಂದ ಸ್ಥಳೀಯರಿಗೆ ವರದಾನವಾಗಿದೆ. ಲೇಹ್‌ಗೆ ನೇರ ರಸ್ತೆ ಸಂಪರ್ಕ ಸಾಧ್ಯವಾಗಿರುವುದರಿಂದ ಈ ಪ್ರದೇಶಗಳ  ಸಾಮಾಜಿಕ, ಆರ್ಥಿಕ ಪರಿಸ್ಥಿತಿ ಸುಧಾರಣೆಗೊಳ್ಳಲಿದೆ. ಅಲ್ಲದೆ ಲಡಾಖ್‌ನಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ಇದು ಸಹಕಾರಿಯಾಗಲಿದೆ.

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

World Theatre Day 2024: ರಂಗಭೂಮಿ ಕಲೆ-ಯುದ್ಧ ಮತ್ತು ಶಾಂತಿ ಪರಸ್ಪರ ವಿರುದ್ಧ ಧ್ರುವ

World Theatre Day 2024: ರಂಗಭೂಮಿ ಕಲೆ-ಯುದ್ಧ ಮತ್ತು ಶಾಂತಿ ಪರಸ್ಪರ ವಿರುದ್ಧ ಧ್ರುವ

ಡೌಟೇ ಬೇಡ, ಜೋಡೆತ್ತುಗಳ ಹಾಗೆ ನಾನು, ಅನಂತ ಹೆಗಡೆ ಇಬ್ಬರೂ ಕೆಲಸ ಮಾಡುತ್ತೇವೆ…

ಡೌಟೇ ಬೇಡ, ಜೋಡೆತ್ತುಗಳ ಹಾಗೆ ನಾನು, ಅನಂತ ಹೆಗಡೆ ಇಬ್ಬರೂ ಕೆಲಸ ಮಾಡುತ್ತೇವೆ…

Book Review;ವಿಶಿಷ್ಟ ರೂಪಕ ಶೈಲಿಯಿಂದ ಚಿತ್ರ ರಸಿಕರ ಮನಗೆದ್ದ ಕಾಸರವಳ್ಳಿಯ “ಬಿಂಬ ಬಿಂಬನ”

Book Review;ವಿಶಿಷ್ಟ ರೂಪಕ ಶೈಲಿಯಿಂದ ಚಿತ್ರ ರಸಿಕರ ಮನಗೆದ್ದ ಕಾಸರವಳ್ಳಿಯ “ಬಿಂಬ ಬಿಂಬನ”

World Water Day: ಜುಳು ಜುಳು ಸದ್ದೇಕೆ ಉರಿ ಮೌನ

World Water Day: ಜುಳು ಜುಳು ಸದ್ದೇಕೆ ಉರಿ ಮೌನ

ಪ್ರೊ| ಕು.ಶಿ.: ಜ್ಞಾನಕಾಶಿಯಲ್ಲೊಬ್ಬ ಫ‌ಕೀರ

ಪ್ರೊ| ಕು.ಶಿ.: ಜ್ಞಾನಕಾಶಿಯಲ್ಲೊಬ್ಬ ಫ‌ಕೀರ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.