ಮಧ್ಯರಾತ್ರಿಯಲ್ಲಿ ಕಂದಕಕ್ಕೆ ಉರುಳಿದ ಆ ಆ್ಯಂಬುಲೆನ್ಸ್‌ನಲ್ಲಿದ್ದ ಮಗು ಎಲ್ಲೋಯ್ತು?

ಕಾಡುದಾರಿಯಲ್ಲಿ ಅಪಘಾತಕ್ಕೀಡಾದ ಆ ವಾಹನದಲ್ಲಿದ್ದವರ ನೆರವಿಗೆ ಧಾವಿಸಿದ ‘ಆಪತ್ಬಾಂಧವ’ ಯಾರು?

ಹರಿಪ್ರಸಾದ್, Apr 26, 2019, 6:33 PM IST

Asif-726-new

ಚಿಕ್ಕಮಗಳೂರಿನಲ್ಲಿರುವ ಶ್ರದ್ಧಾ ಕೇಂದ್ರವೊಂದಕ್ಕೆ ಹೋಗಿ ಮೂಡಿಗೆರೆ ಮಾರ್ಗವಾಗಿ ಬುಧವಾರ ತಡರಾತ್ರಿ ತಮ್ಮ ವಾಹನದಲ್ಲಿ ಊರಿಗೆ ಮರಳುತ್ತಿದ್ದ ಕರಾವಳಿ ಭಾಗದ ಆ ಕುಟುಂಬಕ್ಕೆ ರಸ್ತೆಬದಿಯ ಕಂದಕಕ್ಕೆ ‘ನಗು-ಮಗು’ ಆ್ಯಂಬುಲೆನ್ಸ್‌ ಉರುಳಿ ಬಿದ್ದಿರುವುದು ಕಾಣಿಸುತ್ತದೆ. ತಕ್ಷಣವೇ ತಮ್ಮ ವಾಹನವನ್ನು ನಿಲ್ಲಿಸಿ ಇಳಿದು ನೋಡಿದಾಗ ಅದರಲ್ಲಿ ಹದಿನಾಲ್ಕು ದಿನದ ನವಜಾತ ಶಿಶು ಮತ್ತು ಬಾಣಂತಿ ಇರುವ ವಿಷಯ ಅವರಿಗೆ ಗೊತ್ತಾಗುತ್ತದೆ. ಆದರೆ ವಾಹನ ಕಂದಕಕ್ಕೆ ಉರುಳಿದ್ದ ಕಾರಣ ಅದರೊಳಗಿದ್ದ ಚಾಲಕನಿಗಾಗಲೀ, ಬಾಣಂತಿ ಮತ್ತು ಆಕೆಯ ಪತಿಗಾಗಲೀ ಹೊರಗೆ ಬರಲಾಗದೇ ಸಿಕ್ಕಿಬಿದ್ದ ಸ್ಥಿತಿಯಲ್ಲಿದ್ದರು.

ಮಗುವಿನ ಆರೋಗ್ಯದಲ್ಲಿ ಸಮಸ್ಯೆ ಇದ್ದ ಕಾರಣ ಆ ದಂಪತಿ ಚಿಕ್ಕಮಗಳೂರಿನಿಂದ ಮಂಗಳೂರಿನ ಲೇಡಿಗೋಷನ್‌ ಆಸ್ಪತ್ರೆಗೆ ಸರಕಾರದ ‘ನಗು-ಮಗು’ ಆ್ಯಂಬುಲೆನ್ಸ್‌ ಮೂಲಕ ಕರೆದೊಯ್ಯುತ್ತಿರುತ್ತಾರೆ. ಆದರೆ ದಾರಿಮಧ್ಯೆ ಚಾಲಕನಿಗೆ ನಿದ್ದೆ ಮಂಪರು ಆವರಿಸಿದ ಕಾರಣ ಆ್ಯಂಬುಲೆನ್ಸ್‌ ಆತನ ನಿಯಂತ್ರಣ ತಪ್ಪಿ ದಾರಿಬದಿಯ ಕಂದಕಕ್ಕೆ ಉರುಳುತ್ತದೆ.

ಹೀಗೆ ಕಂದಕಕ್ಕೆ ಆ್ಯಂಬುಲೆನ್ಸ್‌ ಉರುಳಿದ ರಭಸಕ್ಕೆ 14 ದಿನ ಪ್ರಾಯದ ಆ ನವಜಾತ ಶಿಶು ವಾಹನದ ಒಳಗೇ ಕಣ್ಮರೆಯಾಗುತ್ತದೆ. ಒಂದು ಕಡೆ ಗಾಢ ಕತ್ತಲು ಇನ್ನೊಂದೆಡೆ ಅಪಘಾತವಾಗಿರುವ ವಾಹನ. ಇತ್ತ ಆ ತಾಯಿ ತನ್ನ ಮಗುವಿಗಾಗಿ ರೋದಿಸುತ್ತಿರುತ್ತಾಳೆ. ಇದೇ ಸಂದರ್ಭದಲ್ಲಿ ತಮ್ಮ ವಾಹನವನ್ನು ನಿಲ್ಲಿಸಿದ ಆ ವ್ಯಕ್ತಿ ತಕ್ಷಣ ಆ್ಯಂಬುಲೆನ್ಸ್‌ ನಲ್ಲಿದ್ದವರ ಸಹಾಯಕ್ಕೆ ಒದಗುತ್ತಾರೆ. ಹೀಗೆ ಆ ನಡುರಾತ್ರಿ ಕಾಡುದಾರಿಯಲ್ಲಿ ಅಪಘಾತಕ್ಕೀಡಾಗಿದ್ದ ಆ್ಯಂಬುಲೆನ್ಸ್‌ ನಲ್ಲಿದ್ದವರ ಸಹಾಕ್ಕೆ ನಿಂತವರೇ ಕರಾವಳಿ ಭಾಗದಲ್ಲಿ ‘ಆಪತ್ಬಾಂಧವ’ ಎಂದೇ ಹೆಸರಾಗಿರುವ ಮಹಮ್ಮದ್‌ ಆಸೀಫ್.

ತಕ್ಷಣವೇ ಆ್ಯಂಬುಲನ್ಸ್‌ ನ ಕಿಟಕಿ ಗಾಜನ್ನು ಒಡೆದು ಒಳಪ್ರವೇಶಿದ ಆಸೀಫ್ ಮೊದಲಿಗೆ ಕಣ್ಮರೆಯಾಗಿರುವ ಮಗುವನ್ನು ಹುಡುಕುತ್ತಾರೆ. ಒಂದೈದು ನಿಮಿಷದ ಹುಡುಕಾಟದ ಬಳಿಕ ಆ್ಯಂಬುಲೆನ್ಸ್‌ ನ ಒಳಗಿದ್ದ ಆಕ್ಸಿಜನ್‌ ಬಾಕ್ಸ್‌ನ ಒಳಗೆ ಮಗುವಿನ ಅಳು ಕ್ಷೀಣವಾಗಿ ಕೇಳಿಸುತ್ತದೆ. ತನ್ನ ಮಗುವಿನ ಅಳು ಕೇಳಿದೊಡನೆ ಆ ತಾಯಿಯ ಕಣ್ಣು ಅರಳುತ್ತದೆ. ಮಗುವನ್ನು ಆ ತಾಯಿಯ ಕೈಗೆ ಒಪ್ಪಿಸಿ, ಅವರನ್ನು ತಮ್ಮ ವಾಹನದಲ್ಲಿಯೇ ಮೂಡಿಗೆರೆಯ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬರುತ್ತಾರೆ.

ಬಳಿಕ ಅಲ್ಲಿಂದ ಬೇರೊಂದು ಆ್ಯಂಬುಲೆನ್ಸ್‌ ಮೂಲಕ ಬಾಣಂತಿ ಮತ್ತು ಮಗುವನ್ನು ಮಂಗಳೂರಿಗೆ ಕಳುಹಿಸಿಕೊಡುವ ವ್ಯವಸ್ಥೆಯನ್ನು ಆಸೀಫ್ ಮತ್ತು ಅವರ ಜೊತೆಗಿದ್ದವರು ಮಾಡುತ್ತಾರೆ. ತಾವು ಪ್ರವಾಸ ಹೋಗಿದ್ದ ವಾಹನದಲ್ಲಿ ಮಹಿಳೆಯರು ಮತ್ತು ಮಕ್ಕಳಿದ್ದರೂ ಅಪಘಾತ ಸ್ಥಳದಿಂದ ಚಿಕ್ಕಮಗಳೂರಿನ ಆಸ್ಪತ್ರೆವರೆಗೆ ತಾಯಿ-ಮಗುವನ್ನು ಕರೆದೊಯ್ಯಲು ಸಹಕಾರ ನೀಡಿದರು ಎಂಬುದನ್ನು ಆಸೀಫ್ ನೆನಪಿಸಿಕೊಳ್ಳುತ್ತಾರೆ.

ಒಟ್ಟಿನಲ್ಲಿ ನಡು ಮಧ್ಯರಾತ್ರಿ ಸಮಯದಲ್ಲಿ ನಿರ್ಜನ ಕಾಡು ರಸ್ತೆಯಲ್ಲಿ ಅಪಘಾತಕ್ಕೀಡಾಗಿದ್ದ ವಾಹನದಲ್ಲಿದ್ದವರ ಸಹಾಯಕ್ಕೆ ಒದಗಿ ಅವರಿಗೆ ಆಸ್ಪತ್ರೆ ತಲುಪುವಲ್ಲಿ ತಮ್ಮ ನೆರವನ್ನು ನೀಡುವ ಮೂಲಕ ಮಹಮ್ಮದ್‌ ಆಸೀಫ್ ಅವರು ತಾನು ನಿಜವಾದ ‘ಆಪತ್ಬಾಂಧವ’ ಎಂಬುದನ್ನು ಮತ್ತೂಮ್ಮೆ ಸಾಬೀತುಪಡಿಸಿದ್ದಾರೆ.

‘ಆಪತ್ಭಾಂಧವ’ ಮಹಮ್ಮದ್‌ ಆಸೀಫ್ ಅವರು ಉಡುಪಿ ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಯಾವುದೇ ರೀತಿಯ ದುರಂತಗಳಾದರೂ ತಮ್ಮ ‘ಆಪತ್ಭಾಂಧವ ಆ್ಯಂಬುಲೆನ್ಸ್‌’ ಮೂಲಕ ಪ್ರತ್ಯಕ್ಷರಾಗುತ್ತಾರೆ. ಮಾತ್ರವಲ್ಲದೇ ಸಮಾನ ಮನಸ್ಕ ಗೆಳೆಯರ ಬಳಗದೊಂದಿಗೆ ಸೇರಿಕೊಂಡು ದಾರಿಬದಿಯಲ್ಲಿ, ಬಸ್‌ ಸ್ಟಾಂಡ್‌ ಗಳಲ್ಲಿ ಅನಾಥ ಸ್ಥಿತಿಯಲ್ಲಿರುವ ವ್ಯಕ್ತಿಗಳನ್ನು, ಮಾನಸಿಕ ಅಸ್ವಸ್ಥರನ್ನು ನಿರ್ಗತಿಕ ಕೇಂದ್ರಗಳಿಗೆ ಮತ್ತು ಆಸ್ಪತ್ರೆಗಳಿಗೆ ಸೇರಿಸುವ ಕಾರ್ಯವನ್ನು ನಡೆಸುತ್ತಿರುತ್ತಾರೆ.

ಹೀಗೆ ತನ್ನ ವೃತ್ತಿಯನ್ನೇ ಪ್ರವೃತ್ತಿಯನ್ನಾಗಿಸಿಕೊಂಡು ಆ ಮೂಲಕ ತನ್ನ ಸೀಮಿತ ವ್ಯಾಪ್ತಿಯಲ್ಲಿ ಸಮಾಜಮುಖೀ ಕಾರ್ಯವನ್ನು ನಡೆಸುತ್ತಿರುವ ಮಹಮ್ಮದ್‌ ಆಸೀಫ್ ಅವರ ಶ್ರಮ ಪ್ರಶಂಸಾರ್ಹವಾದುದು.

ಇದೀಗ ತಾಯಿ ಮತ್ತು ಮಗು ಸುರಕ್ಷಿತವಾಗಿ ಮಂಗಳೂರು ತಲುಪಿದ್ದು ಅಲ್ಲಿ ಲೇಡಿಗೋಷನ್‌ ಆಸ್ಪತ್ರೆಯಲ್ಲಿ ಮಗು ಚಿಕಿತ್ಸೆ ಪಡೆದುಕೊಳ್ಳುತ್ತಿದೆ. ನಾನು ವೃತ್ತಿಯಲ್ಲಿ ಆ್ಯಂಬುಲೆನ್ಸ್‌ ಚಾಲಕನಾಗಿದ್ದರೂ ಆ ಒಂದು ಕ್ಷಣ ಏನು ಮಾಡುವುದೆಂದು ತೋಚಲಿಲ್ಲ. ಆದರೆ ನನ್ನ ಜೊತೆಗಿದ್ದ ಆಸಿಫ್ ಬಜ್ಪೆ, ದಾವೂದ್‌ ಸಾಣೂರು ಹಾಗೂ ಪಜಲ್‌ ಸಾಣೂರು ಅವರ ಸಹಕಾರದಿಂದ ಆ್ಯಂಬುಲೆನ್ಸ್‌ ಒಳಗೆ ಸಿಲುಕಿದ್ದವರನ್ನು ಸುರಕ್ಷಿತವಾಗಿ ಕಾಪಾಡಿದ ನೆಮ್ಮದಿ ಇದೆ. ಹದಿನಾಲ್ಕು ದಿವಸ ಪ್ರಾಯದ ಆ ಮಗು ಪವಾಡಸದೃಶವಾಗಿ ಸುರಕ್ಷಿತ ರೀತಿಯಲ್ಲಿ ಆಕ್ಸಿಜನ್‌ ಬಾಕ್ಸಿನೊಳಗಿತ್ತು.
– ‘ಆಪತ್ಬಾಂಧವ’ ಮಹಮ್ಮದ್‌ ಆಸೀಫ್

ಟಾಪ್ ನ್ಯೂಸ್

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kambalaHigh-tech touch for Kambala race

Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ

JIO SPACE FIBER 1

JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?

thumb news web exclusive uv (2) (1)

“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…

thumb web ex (1) (1) (1) (1) (1) (1) copy (1)

ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!

web exclusive keer

ಒಂದು ಜಾಹೀರಾತು ದೇಶಕ್ಕೆ ಬೆಂಕಿ ಹಚ್ಚಿತ್ತು.. ಏನಿದು ಪೆಪ್ಸಿಯ ನಂಬರ್ ಫೀವರ್

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

18=

Festivals: ಹಬ್ಬಗಳು ಮರೆಯಾಗುತ್ತಿವೆಯೇ?

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

17-uv-fusion

Holi: ಹೋಳಿ ಹುಣ್ಣಿಮೆ ಹಿನ್ನೆಲೆ

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.