ದುರ್ಗದ ಕೋಟೆಯಲ್ಲಿ ಕಾಶ್ಮೀರದ ವಲಸೆ ಹಕ್ಕಿ


Team Udayavani, Dec 29, 2018, 12:41 PM IST

bird.jpg

ಚಿತ್ರದುರ್ಗ ಬಹಳ ಬಿಸಿಲಿನ ಪ್ರದೇಶ. ಹಲವಾರು ಕಡೆ ಕುರುಚಲು ಕಾಡು. ಕೋಟೆಯೊಳಗೆ ಬರೀ ಕಲ್ಲುಬಂಡೆಗಳ ಕಾರುಬಾರು. ಬಿಸಿಲ ಜಳವಂತೂ ಹೇಳತೀರದು. ರಜಾ ದಿನಗಳಲ್ಲಿ ಮತ್ರಾ ಕೋಟೆ ನೋಡಲು ಬರುವ ಜನರ ಓಡಾಟ. ಹೀಗೆ ಒಂದು ದಿನ ಕೋಟೆ ನೋಡುತ್ತಾ ನೆಡೆಯುತ್ತಿರುವಾಗ ಗಾಢ ನೀಲಿ ಬಣ್ಣದ ಹಕ್ಕಿ ಕಾಣಿಸಿತು. ಸುತ್ತ ಮುತ್ತ ಸಾಮಾನ್ಯವಾಗಿ ಕಾಣಸಿಗುವ ಹಕ್ಕಿಗಳಿಗಿಂತ ವಿಭಿನ್ನವಾಗಿದ್ದು, ಅಪರೂಪದ ಹಕ್ಕಿಯೆನಿಸಿತು. ಲಗುಬಗೆಯಿಂದ ಕ್ಯಾಮರಾ ತೆಗೆದು ಹಲವಾರು ಫೋಟೋ ಕ್ಲಿಕ್ಕಿಸಿ, ಸೂಕ್ಷ್ಮವಾಗಿ ಗಮನಿಸಿದೆ. ಒಂಟಿಯಾಗಿದ್ದ ಈ ಹಕ್ಕಿ ಸದ್ದಿಲ್ಲದೆ ಅಲ್ಲಲ್ಲಿ ಹುಳು ಹುಪ್ಪಟೆಗಳನ್ನು ಹುಡುಕುತ್ತಿತ್ತು.

ಮನೆಗೆ ಬಂದು ಡಾಣ ಸಲೀಂ ಆಲಿಯವರ “ಭಾರತದ ಹಕ್ಕಿಗಳು” ಪುಸ್ತಕ ತೆಗೆದು ನೋಡಿದರೆ ವಾಹ್ ಎನ್ನುವಂತಾಯಿತು. ಕಾರಣ ಅದು ಕಾಶ್ಮೀರ ಕಣಿವೆಯಿಂದ ಚಿತ್ರದುರ್ಗದ ಕೋಟೆಗೆ ಚಳಿಗಾಲದ ವಲಸೆಗಾರನಾಗಿ ಬಂದ ನೀಲಿ ಬಂಡೆಗುಟುಕ ಹಕ್ಕಿ (ಬ್ಲೂ ರಾಕ್ ತ್ರಶ್). ಗಾತ್ರದಲ್ಲಿ ಬುಲ್ ಬುಲ್ ಹಕ್ಕಿಯಷ್ಟು (೨೩ ಸೆಂ.ಮೀ). ಗಂಡು ಹಕ್ಕಿ ಗಾಢ ನೀಲಿ ಬಣ್ಣದ್ದಾಗಿದೆ. ಹೆಣ್ಣು ಪೇಲವ ಬೂದು ಬಣ್ಣವಿದ್ದು, ಮಾಸಲು ಬಿಳಿ ಬಣ್ಣದ ಕೆಳಮೈಯಲ್ಲಿ ಕಡುಕಂದು ಬಣ್ಣದ ಗೆರೆಗಳಿರುತ್ತವೆ. ಸಾಮಾನ್ಯವಾಗಿ ಒಂಟಿ ಜೀವನ. ಕೋಟೆ ಕೊತ್ತಲಗಳಲ್ಲಿ, ಹಳೆ ಬುರುಜುಗಳಲ್ಲಿ, ಕಲ್ಲು ಕ್ವಾರಿಗಳಲ್ಲಿ, ಬಂಡೆ ಕಲ್ಲುಗಳ ನಡುವೆ ಅದರ ಜೀವನ.

ಚಳಿಗಾಲದಲ್ಲಿ ಭಾರತದೆಲ್ಲೆಡೆ, ಪಾಕಿಸ್ತಾನ, ಶ್ರೀಲಂಕಾ ಮತ್ತು ಮಯನ್ಮಾರ್ ಗಳಲ್ಲೂ ಕಾಣಸಿಗುತ್ತವೆ. ಮುಖ್ಯವಾಗಿ ಹಿಮಾಲಯದಲ್ಲಿ ವಾಸ. ಕೋಟೆಗಳಿಲ್ಲದ ಕಡೆ ಹಳೆಯ ಬಂಗಲೆಗಳೂ ಆದೀತು. ಆಗಾಗ್ಗೆ ಬಾಲವನ್ನು ಅದುರಿಸುತ್ತಿರುತ್ತದೆ. ನೆಲದಲ್ಲಿರುವ ಹುಳುಗಳಿಗಾಗಿ ವಿಮಾನದಂತೆ ಇಳಿದು ಬೇಟೆಯಾಡಿ ತಿನ್ನುತ್ತವೆ. ಹುಳು ದೊಡ್ಡದಿದ್ದರೆ ಎತ್ತಿಕೊಂಡು ಹೋಗಿ ಕಲ್ಲ ಬಂಡೆಗೆ ಬಡಿದು ಅನಂತರ ತಿನ್ನುತ್ತವೆ. ಕೀಟಗಳಲ್ಲದೆ ಕೆಲವು ಜಾತಿಯ ಹಣ್ಣುಗಳನ್ನು ತಿನ್ನುತ್ತವೆ.

ಸದಾ ಮೌನಿ. ಆದರೆ ಪರಿಣಯ ಕಾಲದಲ್ಲಿ ಗಂಡು ಹಕ್ಕಿ ಸುಶ್ರಾವ್ಯವಾಗಿ ಸಿಳ್ಳೆಯಂತೆ ಹಾಡುತ್ತದೆ. ಕಾಶ್ಮೀರದ ಘರ್ ವಾಲ್ ಮುಂತಾದ ಪ್ರದೇಶಗಳಲ್ಲಿ ಎರಡು ಸಾವಿರದಿಂದ ಮೂರು ಸಾವಿರ ಮೀಟರ್ ಎತ್ತರದ ಗುಡ್ಡಗಾಡುಗಳಲ್ಲಿ ಏಪ್ರಿಲ್ ನಿಂದ ಜೂನ್ ವರೆಗೆ ಸಂತಾನಾಭಿವೃದ್ಧಿ. ಕಲ್ಲು ಬಂಡೆಗಳ ನಡುವೆ ಅಥವ ನದಿ ತೀಗಳಲ್ಲಿ ಹುಲ್ಲು ಎಲೆಗಳಿಂದ ಮಾಡಿದ ಗೂಡಿನಿಂದ ಮೂರರಿಂದ ಐದು  ಕಂದು ಕೆಂಪು ಬಣ್ಣದ ಚುಕ್ಕೆಗಳಿರುವ ಪೇಲವ ನೀಲಿ ಬಣ್ಣದ ಮೊಟ್ಟೆಗಳನ್ನಿಡುತ್ತವೆ. ಈ ಪ್ರದೇಶಗಳ ಚಳಿಗಾಲದ ಕೊರೆಯುವ ಚಳಿ ತದೆಯಲಾರದೆ ಉಷ್ಣ ಪ್ರದೇಶಗಳಿಗೆ ವಲಸೆ ಹೋಗುತ್ತವೆ. 

ದುರ್ಗದ ಕೋಟೆಯಲ್ಲಿ ಕಾಶ್ಮೀರದ ಹಕ್ಕಿ ಜೀವನ ನಡೆಸುವುದು ಪ್ರಕೃತಿಯ ಸೋಜಿಗ. ಸುಗಮ ಜೀವನಕ್ಕಾಗಿ ಸಾವಿರಾರು ಮೈಲಿ ದೂರದ ಊರಿನಿಂದ ಕೋಟೆನಾಡಿಗೆ ಬಂದು ಮತ್ತೆ ಸ್ವಸ್ಥಾನವಾದ ಕಾಶ್ಮೀರಕ್ಕೆ ಹಿಂತಿರುಗುವ ಅಗಾಧ ಶಕ್ತಿ ಈ ಹಕ್ಕಿಗಳಿಗಿದೆ. ಇಂಥ ಪ್ರಕೃತಿಯ ವಿಸ್ಮಯಗಳು ಅದು ಎಷ್ಟಿವೆಯೋ?
ಡಾ|ಎಸ್. ಶಿಶುಪಾಲ
(ತರಂಗ ಅಕ್ಟೋಬರ್ 25)

ಟಾಪ್ ನ್ಯೂಸ್

Pakistan cricket team military training wasted

PCB; ಪಾಕ್‌ ಕ್ರಿಕೆಟ್‌ ತಂಡದ ಸೇನಾ ತರಬೇತಿ ವ್ಯರ್ಥ: ಹಾಸ್ಯ

ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು

Election; ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು

Ireland postponed Aussie series

Dublin; ಆಸೀಸ್‌ ಸರಣಿ ಮುಂದೂಡಿದ ಐರ್ಲೆಂಡ್‌

“Will not play T20 World Cup for West Indies”: Sunil Narine

T20 Cricket: “ವಿಂಡೀಸ್‌ ಪರ ಟಿ20 ವಿಶ್ವಕಪ್‌ ಆಡಲ್ಲ’: ಸುನೀಲ್‌ ನಾರಾಯಣ್‌ ಸ್ಪಷ್ಟ ನುಡಿ

Andhra Student passed away After Getting Trapped In Frozen Kyrgyzstan Waterfall

Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು

weapon used to attack Salman’s house was seized in the river!

Tapi River; ಸಲ್ಮಾನ್‌ ಮನೆ ದಾಳಿಗೆ ಬಳಸಿದ್ದ ಅಸ್ತ್ರ ನದಿಯಲ್ಲಿ ವಶ!

ಕಾಂಗ್ರೆಸ್‌ ಸರ್ಕಾರದ್ದು ತಾಲಿಬಾನ್‌ ಆಡಳಿತ ಮಾದರಿ: ಸಿ.ಟಿ.ರವಿ

Congress ಸರ್ಕಾರದ್ದು ತಾಲಿಬಾನ್‌ ಆಡಳಿತ ಮಾದರಿ: ಸಿ.ಟಿ.ರವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kambalaHigh-tech touch for Kambala race

Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ

JIO SPACE FIBER 1

JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?

thumb news web exclusive uv (2) (1)

“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…

thumb web ex (1) (1) (1) (1) (1) (1) copy (1)

ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!

web exclusive keer

ಒಂದು ಜಾಹೀರಾತು ದೇಶಕ್ಕೆ ಬೆಂಕಿ ಹಚ್ಚಿತ್ತು.. ಏನಿದು ಪೆಪ್ಸಿಯ ನಂಬರ್ ಫೀವರ್

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Northamptonshire: ಕೌಂಟಿ ಕ್ರಿಕೆಟ್‌ನಲ್ಲಿ ಕರುಣ್‌ ನಾಯರ್‌ ದ್ವಿಶತಕ

Northamptonshire: ಕೌಂಟಿ ಕ್ರಿಕೆಟ್‌ನಲ್ಲಿ ಕರುಣ್‌ ನಾಯರ್‌ ದ್ವಿಶತಕ

Pakistan cricket team military training wasted

PCB; ಪಾಕ್‌ ಕ್ರಿಕೆಟ್‌ ತಂಡದ ಸೇನಾ ತರಬೇತಿ ವ್ಯರ್ಥ: ಹಾಸ್ಯ

Shotgun

Shotgun ಶೂಟಿಂಗ್‌ ಅರ್ಹತಾ ಸುತ್ತಿನಲ್ಲಿ ಕರಣ್‌: ವಿವಾದ

ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು

Election; ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು

Ireland postponed Aussie series

Dublin; ಆಸೀಸ್‌ ಸರಣಿ ಮುಂದೂಡಿದ ಐರ್ಲೆಂಡ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.