ವ್ಯಾಸರಾವ್‌ ಇನ್ನಿಲ್ಲ ; ಕಳಚಿ ಬಿದ್ದ ಸಾಹಿತ್ಯ ಲೋಕದ ಕೊಂಡಿ 


Team Udayavani, Jul 15, 2018, 4:45 PM IST

25dfdsf.jpg

ರವಿ ಕಾಣದನ್ನು ಕವಿ ಕಂಡ ಎನ್ನುವ ಮಾತಿನಂತೆ ಕನ್ನಡದ ಸಾಹಿತ್ಯ ಪರಂಪರೆಯಲ್ಲಿ ಅದೆಷ್ಟೋ ಮರೆಯಾದ  ಮೇರು ಸಾಹಿತಿಗಳು  ಅದ್ಭುತ ಗೀತೆಗಳ ಸಾಲುಗಳನ್ನು   ಸಾಹಿತ್ಯಲೋಕಕ್ಕೆ ನೀಡಿದ್ದಾರೆ.ಅಂತಹ ಗೀತೆಗಳ ಪೈಕಿ ಸೂರ್ಯಂಗೂ ಚಂದ್ರಂಗೂ ಬಂದಾರೆ ಮುನಿಸು ನಗುತಾದ ಭೂತಾಯಿ ಮನಸು. ರಾಜಂಗೂ ರಾಣಿಗೂ ಮುರಿದೊದ್ರೆ ಮನಸು ಅರಮನೆಯಾಗೇನೈತೆ ಸೊಗಸೂ..ಎನ್ನುವ ಶುಭಮಂಗಳ ಚಿತ್ರದ  ಗೀತೆ ಇಂದಿಗೂ ಎಂದೆಂದಿಗೂ ನೆನಪಿನಲ್ಲುಳಿಯುವ ಅದ್ಭುತ ಸಾಹಿತ್ಯವುಳ ಚಿತ್ರಗೀತೆ. ಈ ಗೀತೆಯನ್ನು ಬರೆದ ಎಂ. ಎನ್‌.ವ್ಯಾಸರಾಯರು ಸಾಹಿತ್ಯ ಲೋಕವನ್ನು ಅಗಲಿ ಬಾರದ ಲೋಕಕ್ಕೆ ತೆರಳಿದ್ದಾರೆ. 

ಸಾಹಿತ್ಯ ಲೋಕದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದ ವ್ಯಾಸರಾಯರು ಕವಿಯಾಗಿಯೂ,ಕಥೆಗಾರರಾಗಿಯೂ, ಕಾದಂಬರಿಕಾರರಾಗಿ,ಅನುವಾದಕರಾಗಿ  ತನ್ನ ಸಾಹಿತ್ಯ ಸೇವೆ ಸಲ್ಲಿಸಿದವರು. 

ಮೈಸೂರಿನಲ್ಲಿ 1945 ಜನವರಿ 27 ರಂದು ನರಸಿಂಗ ರಾವ್‌, ಸುಶೀಲಮ್ಮ ದಂಪತಿಯ ಪುತ್ರನಾಗಿ ಜನಿಸಿದ ವ್ಯಾಸರಾವ್‌ ಅವರು ಬೆಂಗಳೂರು ವಿವಿಯಲ್ಲಿ ಬಿಎ ಪದವಿ ಪಡೆದರು. ಡ್ರಾಮಾಟಿಕ್ಸ್‌ನಲ್ಲಿ ಡಿಪ್ಲೋಮಾ ಪದವಿಯನ್ನೂ ಪಡೆದಿದ್ದರು. 

ಅವರಲ್ಲಿದ್ದ ಸಾಹಿತ್ಯದ ಸ್ಪೂರ್ತಿ ಹಲವು ಬರಹಗಳು ಪ್ರಕಟಗೊಳ್ಳುವಂತೆ ಮಾಡಿತ್ತು. ಪತ್ತೇದಾರಿ ಕಾದಂಬರಿಯಿಂದ ಹಿಡಿದು ಪ್ರೇಮಗೀತೆಗಳನ್ನೂ ವ್ಯಾಸರಾಯರು ಬರೆದಿದ್ದರು. ಉತ್ತಮ ವಿಚಾರಗಳನ್ನೊಳಗೊಂಡ ಅವರ ಕಾದಂಬರಿಗಳು ತೆಲುಗು, ಹಿಂದಿ, ಸಿಂಧ್‌ ಮತ್ತು ಆಂಗ್ಲ ಭಾಷೆಗೆ ಭಾಷಾಂತರಗೊಂಡಿರುವುದು ಅವರ ಶ್ರೇಷ್ಠತೆಗೆ ಸಾಕ್ಷಿ . 

‘ಬೆಳ್ಳಿ ಮೂಡುವ’ ಕವನ ಸಂಕಲನ,’ಮಳೆಯಲ್ಲಿ ನೆನದ’ ಕಥಾ ಸಂಕಲನ, ‘ಉತ್ತರ ಮುಖಿ’ ನೀಳ್ಗತೆಗಳ ಸಂಕಲನ, ‘ಸ್ಕಾಟ್‌ ಡಬಲ್‌ ಎಕ್ಸ್‌’ , ‘ಅಖಿಲಾ ಮೈ ಡಾರ್ಲಿಂಗ್‌’ ಎನ್ನುವ ಪತ್ತೇದಾರಿ ಕಾದಂಬರಿಗಳು, ಕತ್ತಲಲ್ಲಿ ಬಂದವರು ಎನ್ನುವ ನಾಟಕ ಪ್ರಮುಖವಾದ ಕೃತಿಗಳು. 

ಚೀನಿ, ಸಿಂಧಿ,ಇಂಗ್ಲೀಷ್‌,ಫ್ರೆಂಚ್‌‌, ಉರ್ದು ಕಥೆಗಳನ್ನು ಭಾಷಾಂತರಿಸಿದ ಹೆಗ್ಗಳಿಕೆಯೂ ವ್ಯಾಸರಾವ್‌ ಅವರದ್ದು. ವರನಟ ಡಾ.ರಾಜ್‌ ಕುಮಾರ್‌, ಕವಿ ಜಿ.ಎಸ್‌.ಶಿವರುದ್ರಪ್ಪ , ಡಾ.ಯು.ಆರ್‌.ಅನಂತಮೂರ್ತಿ ಸೇರಿದಂತೆ ಹಲವು ದಿಗ್ಗಜರ ಸಂದರ್ಶನ ನಡೆಸಿದ್ದ ವ್ಯಾಸರಾವ್‌ ಅವರು ತಮ್ಮ ಸಾಹಿತ್ಯ ಪ್ರೌಢಿಮೆಗೆ ಅನುಗುಣವಾಗಿ ಅದ್ಭುತ ಎನಿಸುವಂತ ಪ್ರಶ್ನೆಗಳನ್ನು ಮುಂದಿಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. 

ಇತರರ ಸಾಹಿತ್ಯ ದ ಕುರಿತು ಅಪಾರ ಕಾಳಜಿ, ಯುವ ಬರಹಗಾರರಿಗೆ ಪ್ರೇರೆಪಕರಾಗಿದ್ದ ವ್ಯಾಸರಾಯರು ನೂರಾರು ಮಂದಿ ಬರಹಗಾರರ ಕಥೆ, ಸಾಹಿತ್ಯ, ಹಾಸ್ಯ, ಕವನ ಸಂಕಲನಗಳಿಗೆ ಮುನ್ನುಡಿ ಬರೆದಿದ್ದಾರೆ. 

ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಹಿರಿತೆರೆ ಮಾತ್ರವಲ್ಲನೆ ಕಿರುತೆರೆಗೂ ಸಾಹಿತಿಯಾಗಿ ಪರಿಚಿತರಾಗಿದ್ದ ವ್ಯಾಸರಾಯರು 35 ಜನಪ್ರಿಯ ಟಿವಿ ಧಾರಾವಾಹಿಗಳಿಗೆ ಸಾಹಿತ್ಯ ರಚಿಸಿದ್ದರು. 

ನೂರಕ್ಕೂ ಹೆಚ್ಚು ಸಿನಿಮಾ ಹಾಡುಗಳನ್ನು  ಬರೆದಿದ್ದ  ವ್ಯಾಸರಾಯರ ಹಾಡುಗಳ ಪೈಕಿ ಸೂರ್ಯಂಗೂ ಚಂದ್ರಂಗೂ ಬಂದಾರೆ ಮುನಿಸು, ನೀನಿಲ್ಲದೇ ನನಗೇನಿದೆ.., ಚಂದ ಚಂದ ಸಂಗಾತಿ ನೋಟವೇ ಚಂದ.. ಮೊದಲಾದವು ಜನಪ್ರಿಯತೆಯ ಉತ್ತುಂಗಕ್ಕೇರಿದ ಗೀತೆಗಳು. 

ಶ್ರೇಷ್ಠ ಸಾಹಿತ್ಯಕ್ಕೆ ಸಾಕ್ಷಿ, ಪ್ರೇರಣೆಯಾಗಿದ್ದ ಅವರ ಸಾಹಿತ್ಯವುಳ್ಳ ‘ಮೈಸೂರು ಮಲ್ಲಿಗೆ’, ‘ಆಸ್ಫೋಟ’, ‘ದಂಗೆ ಎದ್ದ ಮಕ್ಕಳು’, ‘ವಾತ್ಸಲ್ಯ ಪಥ’ ಚಿತ್ರಗಳು ಪ್ರಶಸ್ತಿಗೆ ಭಾಜನವಾಗಿವೆ. 

ಬರ್ಕಲೀ ತರಂಗಿಣಿ ಪ್ರಶಸ್ತಿ, ಲಾವಣ್ಯ ಪ್ರಶಸ್ತಿ, ಜೇಸೀ ಪ್ರಶಸ್ತಿ, ಸ್ವರಮಂದಾರ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ ಸೇರಿದಂತೆ ನೂರಾರು ಸನ್ಮಾನಗಳಿಗೆ ವ್ಯಾಸರಾವ್‌ ಅವರು ಭಾಜನರಾಗಿದ್ದರು. 

ಬೆಂಗಳೂರಿನ ನಿವಾಸದಲ್ಲಿ  ಜುಲೈ 15 ರ ಭಾನುವಾರ ಬೆಳ್ಳಂಬೆಳಗ್ಗೆ ಸಾಹಿತ್ಯ ಲೋಕದ ಯಾತ್ರೆ ಮುಗಿಸಿ ವ್ಯಾಸರಾಯರು ಮರೆಯಾಗಿದ್ದಾರೆ. 

ಬಹುಮುಖ ಪ್ರತಿಭೆಯನ್ನು  ಹೊಂದಿದ್ದ ಮೇರು ಸಾಹಿತಿಯ ಅಗಲುವಿಕೆ ಕನ್ನಡ ಸಾರಸ್ವತ ಲೋಕಕ್ಕೆ ,ಚಿತ್ರರಂಗಕ್ಕೆ ತುಂಬಲಾರದ ನಷ್ಟ ಎನ್ನಬಹದು.

ಟಾಪ್ ನ್ಯೂಸ್

NIA (2)

Rameshwaram Cafe case: ಎನ್‌ಐಎಯಿಂದ ಸಹ ಸಂಚುಕೋರನ ಬಂಧನ

1-qqwewqe

Congress ಹಾಸನ, ಮಂಡ್ಯದಲ್ಲೂ ಗೆಲ್ಲಲಿದೆ : ಸಚಿವ ಎಂ.ಬಿ.ಪಾಟೀಲ್

1-eewqe

BJP MP ಜಿಗಜಿಣಗಿ ಮಾಡಿದ ಅಪಮಾನವನ್ನು ಸಮಾಜದ ಮನೆ ಮನೆಗೆ ತಿಳಿಸುತ್ತೇವೆ: ರಾಠೋಡ

9

6.69 ಕೋಟಿ ರೂ. ಖೋಟಾನೋಟು ವಶಕ್ಕೆ: ಕೇಂದ್ರ ಏಜೆನ್ಸಿ ತನಖೆ ಆರಂಭ

1-a-DK-SHI

D.K. Suresh ಅವರದ್ದು ಹೃದಯವಂತಿಕೆಯಲ್ಲವೇ?: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ

1-wewqeqwe

Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kambalaHigh-tech touch for Kambala race

Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ

JIO SPACE FIBER 1

JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?

thumb news web exclusive uv (2) (1)

“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…

thumb web ex (1) (1) (1) (1) (1) (1) copy (1)

ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!

web exclusive keer

ಒಂದು ಜಾಹೀರಾತು ದೇಶಕ್ಕೆ ಬೆಂಕಿ ಹಚ್ಚಿತ್ತು.. ಏನಿದು ಪೆಪ್ಸಿಯ ನಂಬರ್ ಫೀವರ್

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Udupi: ನೇಣು ಬಿಗಿದು ಆತ್ಮಹತ್ಯೆ

Udupi: ನೇಣು ಬಿಗಿದು ಆತ್ಮಹತ್ಯೆ

police crime

Kolkata ವಿಮಾನ ನಿಲ್ದಾಣದಲ್ಲಿ ಸ್ವಯಂ ಗುಂಡಿಟ್ಟುಕೊಂಡು ಯೋಧ ಆತ್ಮಹತ್ಯೆ

Sullia: ಗಾಂಜಾ ಸೇವನೆ; ಇಬ್ಬರು ವಶಕ್ಕೆ

Sullia: ಗಾಂಜಾ ಸೇವನೆ; ಇಬ್ಬರು ವಶಕ್ಕೆ

Checkbounce case: ಆರೋಪಿ ಮಹಿಳೆ ಖುಲಾಸೆ

Checkbounce case: ಆರೋಪಿ ಮಹಿಳೆ ಖುಲಾಸೆ

Udupi: ಕರ್ತವ್ಯದಲ್ಲಿದ್ದ ಪೊಲೀಸ್‌ಗೆ ಹಲ್ಲೆ, ಜೀವಬೆದರಿಕೆ: ಪ್ರತ್ಯೇಕ ಪ್ರಕರಣ ದಾಖಲು

Udupi: ಕರ್ತವ್ಯದಲ್ಲಿದ್ದ ಪೊಲೀಸ್‌ಗೆ ಹಲ್ಲೆ, ಜೀವಬೆದರಿಕೆ: ಪ್ರತ್ಯೇಕ ಪ್ರಕರಣ ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.