ಕ್ಯಾಚ್ ಸಿಕ್ಕರೂ ಔಟ್ ಇಲ್ಲ: ಕ್ರಿಕೆಟ್ ಈ ನಿಯಮಗಳ ಬಗ್ಗೆ ನಿಮಗೆಷ್ಟು ಗೊತ್ತು?


ಕೀರ್ತನ್ ಶೆಟ್ಟಿ ಬೋಳ, Oct 28, 2019, 5:30 PM IST

we

ಜಂಟಲ್‌ಮನ್‌ ಗೇಮ್ ಕ್ರಿಕೆಟ್ ನ ಮೂಲ ನಿಯಮಾವಳಿಗಳು ಯಾರಿಗೆ ಗೊತ್ತಿಲ್ಲ ಹೇಳಿ. ಸ್ಪರ್ಧಾತ್ಮಕ ಕ್ರಿಕೆಟ್ ಆಯೋಜಿಸಲು ಈ ನಿಯಮಗಳು ಅಗತ್ಯವೂ ಹೌದು. ಐಸಿಸಿಯ ಪರಿಣಿತರ ತಂಡ ಈ ನಿಯಮಗಳನ್ನು ಕಾಲಕಾಲಕ್ಕೆ ಪರಾಮರ್ಶಿಸಿ, ನವೀಕರಿಸುತ್ತವೆ.

ಕೆಲವು ನಿಯಮಗಳು ಹೇಗಿರುತ್ತವೆ ಎಂದರೆ, ಕೇಳಿದರೆ ನಿಮಗೂ ಆಶ್ಚರ್ಯ ಅನಿಸಬಹುದು. ಅದರಲ್ಲಿ ಕೆಲವು ನಿಯಮಗಳು ವಿವಾದಗಳಿಗೂ ಕಾರಣವಾಗುತ್ತದೆ. ಈ ಬಾರಿಯ ವಿಶ್ವಕಪ್ ಫೈನಲ್ ನ ಬೌಂಡರಿ ಕೌಂಟ್ ನಿಯಮ ಅದರಲ್ಲಿ ಒಂದು. ಫೈನಲ್‌ ವಿವಾದದ ನಂತರ ಈ ನಿಯಮವನ್ನು ಐಸಿಸಿ ಕಡೆಗೂ ಬದಲಿಸಿದೆ.

ಅಂತಹ ಕೆಲವು ವಿಚಿತ್ರ ಕ್ರಿಕೆಟ್ ನಿಯಮಾವಳಿಗಳು ಇಲ್ಲಿವೆ.

ಲೆಗ್ ಬಿಫೋರ್ ವಿಕೆಟ್ : ಎಲ್ ಬಿ ಡಬ್ಲ್ಯೂ ಎಂದೇ ಪ್ರಸಿದ್ಧಿಯಾಗಿರುವ ಆ ನಿಯಮದ ಬಗ್ಗೆ ಬಹುತೇಕರಿಗೆ ತಿಳಿಯದ ವಿಷಯವೊಂದಿದೆ. ಇಲ್ಲಿ  ಚೆಂಡು ಕಾಲಿಗೆ ಬಡಿದರೆ ಮಾತ್ರ ಔಟ್ ಎಂದರ್ಥವಲ್ಲ. ವಿಕೆಟ್ ಗೆ ಸ್ಪರ್ಶಿಸಬಹುದಾದ ಚೆಂಡು ದೇಹದ ಯಾವ ಭಾಗಕ್ಕೆ  ತಾಗಿದರೂ ಅದನ್ನು ಔಟ್ ಎಂದು ಘೋಷಿಸಲಾಗುತ್ತದೆ. ಅಂದರೆ ಕಾಲಿಗೆ ತಾಗಿಲ್ಲದೆ ಇದ್ದರೂ ಲೆಗ್ ಬಿಫೋರ್ ವಿಕೆಟ್ ! (ಆಸೀಸ್ ವಿರುದ್ಧ  ಸಚಿನ್ ತೆಂಡೂಲ್ಕರ್ ಗೆ ಅಂಪೈರ್ ಡ್ಯಾರೆಲ್ ಹೇರ್ ನೀಡಿದ ತೀರ್ಪು ನೆನಪಿಸಿಕೊಳ್ಳಿ.)

ಕ್ಯಾಚ್ ಹಿಡಿದರೂ ಔಟ್ ಇಲ್ಲ: ಹೌದು.ಈ ನಿಯಮದ ಪ್ರಕಾರ ಕ್ಯಾಚ್ ಹಿಡಿದರೂ ಆಟಗಾರ ಔಟ್ಎಂದು ಘೋಷಿಸಲಾಗುವುದಿಲ್ಲ. ಬ್ಯಾಟ್ಸ್‌ಮನ್‌ ಬಾರಿಸಿದ  ಚೆಂಡು ಫೀಲ್ಡರ್ ನ ಟೋಪಿ ಅಥವಾ ಹೆಲ್ಮೆಟ್ ತಾಗಿ ಕೈಸೇರಿದರೆ ಅದು ನಾಟ್ ಔಟ್ ಎನ್ನಲಾಗುತ್ತದೆ. ಒಂದು ವೇಳೆ ಹಾಗೆ ಕ್ಯಾಚ್ ಹಿಡಿಯಲು ಅವಕಾಶ ನೀಡಿದರೆ ಫೀಲ್ಡರ್ ಗಳು ಟೋಪಿ, ಹೆಲ್ಮೆಟ್ ನಿಂದಲೇ ಕ್ಯಾಚ್ ಹಿಡಿಯುತ್ತಾರೆ. ಅದು ನ್ಯಾಯಸಮ್ಮತವಲ್ಲ.

ಸಿಕ್ಸ್ ಹೋದರು ಡೆಡ್ ಬಾಲ್: ಕೆಲವು  ಪಂದ್ಯದಲ್ಲಿ ನೇರ ಪ್ರಸಾರದ ಉದ್ದೇಶದಿಂದ ಏರಿಯಲ್ ಕ್ಯಾಮೆರಾಗಳನ್ನು ಬಳಸುತ್ತಾರೆ. ಐಪಿಎಲ್ ನಲ್ಲಿ ನೀವು ಇದನ್ನು ಗಮನಿಸಿರಬಹುದು. ಇಂತಹ ಸಮಯದಲ್ಲಿ ಬ್ಯಾಟ್ಸ್‌ಮನ್‌ ಹೊಡೆದ ಚೆಂಡು ಈ ಏರಿಯಲ್ ಕ್ಯಾಮ್ ಗೆ ತಾಗಿದರೆ ಅದು ಡೆಡ್ ಬಾಲ್ ಎಂದು ಘೋಷಿಸಲಾಗುತ್ತದೆ. ಮೇಲ್ಛಾವಣಿ ಇರುವ ಮೈದಾನದಲ್ಲಿ ಕೂಡ ಇದೇ ನಿಯಮ. ಅದು ಬೇಕಾದರೆ ಸಿಕ್ಸ್ ಹೋಗಲಿ ಅಥವಾ ಔಟ್ ಆಗಲಿ ಅದಕ್ಕಿಂತ ಮೊದಲು ಇತರ ವಸ್ತುವಿನ ಸ್ಪರ್ಶವಾದರೆ ಅದು ಡೆಡ್ ಬಾಲ್.

ಕ್ರಿಕೆಟ್ ನ ಪೆನಾಲ್ಟಿ : ಫುಟ್‌ಬಾಲ್‌, ಹಾಕಿಗಳಲ್ಲಿ ಪೆನಾಲ್ಟಿಯ ಬಗ್ಗೆ ಕೇಳಿರಬಹುದು. ಕ್ರಿಕೆಟ್ ನಲ್ಲೂ ಪೆನಾಲ್ಟಿ ಇದೆಯೆಂದರೆ ನಂಬುತ್ತಾರೆ. ವೇಗಿಗಳ ಬೌಲಿಂಗ್ ಗೆ ವಿಕೆಟ್ ಕೀಪರ್ ಗಳು ಸಾಮಾನ್ಯವಾಗಿ ಟೋಪಿ ಹಾಕಿ ಕೊಂಡಿರುತ್ತಾರೆ.  ಆ ಸಮಯದಲ್ಲಿ ತಮ್ಮ ಹೆಲ್ಮೆಟ್ ನ್ನು ತಮ್ಮ ಹಿಂದುಗಡೆ ಇಟ್ಟಿರುತ್ತಾರೆ. ಪಂದ್ಯದಲ್ಲಿ ಒಂದು ವೇಳೆ ಬಾಲ್ ಆ ಹೆಲ್ಮೆಟ್ ತಾಗಿ ನಿಂತರೆ ಅದಕ್ಕೆ ಪೆನಾಲ್ಟಿ ಹಾಕಲಾಗುತ್ತದೆ. ಅಂದರೆ ಬ್ಯಾಟಿಂಗ್ ಮಾಡುವ ತಂಡಕ್ಕೆ ಐದು ಹೆಚ್ಚುವರಿ ರನ್ ಗಳನ್ನು ನೀಡಲಾಗುತ್ತದೆ.

 ಮೂರು ನಿಮಿಷದ ನಿಯಮ: ಒಬ್ಬ ಆಟಗಾರ ಔಟ್ ಆದ ಮೂರು ನಿಮಿಷದ ಮೊದಲ ಮತ್ತೋರ್ವ ಆಟಗಾರ ಪಿಚ್ ಗೆ ಬಂದಿರಬೇಕು. ಒಂದು ವೇಳೆ ಆ ಬ್ಯಾಟ್ಸಮನ್ ಮೂರು ನಿಮಿಷದ ಒಳಗೆ ಪಿಚ್ ಗೆ ಆಗಮಿಸದೇ ಇದ್ದರೆ ಇಂತಹ ಆಟಗಾರನನ್ನು ನಿವೃತ್ತಿ ( ರಿಟೈರ್ಡ್ ಹರ್ಟ್ ) ಎಂದು ಘೋಷಿಸಿ ಔಟ್ ನೀಡಲಾಗುತ್ತದೆ.

ಟಾಪ್ ನ್ಯೂಸ್

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

23

ಹೂಡಿಕೆದಾರರಿಗೆ ಲಾಭಾಂಶ ನೀಡದ ಆರೋಪ ʼManjummel Boysʼ ನಿರ್ಮಾಪಕರ ವಿರುದ್ದ ದೂರು ದಾಖಲು

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

Surjewala

BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kambalaHigh-tech touch for Kambala race

Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ

JIO SPACE FIBER 1

JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?

thumb news web exclusive uv (2) (1)

“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…

thumb web ex (1) (1) (1) (1) (1) (1) copy (1)

ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!

web exclusive keer

ಒಂದು ಜಾಹೀರಾತು ದೇಶಕ್ಕೆ ಬೆಂಕಿ ಹಚ್ಚಿತ್ತು.. ಏನಿದು ಪೆಪ್ಸಿಯ ನಂಬರ್ ಫೀವರ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Theft ಶಿರೂರು: ಜ್ಯುವೆಲ್ಲರಿ ಅಂಗಡಿ ಶಟರ್‌ ಮುರಿದು ಕಳ್ಳತನ

Theft ಶಿರೂರು: ಜ್ಯುವೆಲ್ಲರಿ ಅಂಗಡಿ ಶಟರ್‌ ಮುರಿದು ಕಳ್ಳತನ

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್‌ ಶೆಟ್ಟಿ ಬೆಳ್ಳಾರೆ

ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್‌ ಶೆಟ್ಟಿ ಬೆಳ್ಳಾರೆ

20-shirva-1

ಮೂಡುಬೆಳ್ಳೆ ಶ್ರೀಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ, ಶ್ರೀ ಸೂರ್ಯನಾರಾಯಣ ದೇಗುಲ

Thailandನಲ್ಲಿ ಗುಜರಿ ಮಾಫಿಯಾದ ಕಿಂಗ್‌ ಪಿನ್‌ ರವಿ ಕಾನಾ, ಪ್ರಿಯತಮೆ ಕಾಜಲ್‌ ಜಾ ಬಂಧನ

Thailandನಲ್ಲಿ ಗುಜರಿ ಮಾಫಿಯಾದ ಕಿಂಗ್‌ ಪಿನ್‌ ರವಿ ಕಾನಾ, ಪ್ರಿಯತಮೆ ಕಾಜಲ್‌ ಜಾ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.