ಸುಕನ್ಯಾ ಸಮೃದ್ಧಿಯಲ್ಲಿದೆ ಹೆಣ್ಣುಮಕ್ಕಳ ಉನ್ನತಿ,ಭದ್ರತೆ, ಸ್ವಾವಲಂಬನೆ


Team Udayavani, Dec 24, 2018, 6:00 AM IST

Udayavani Kannada Newspaper

ಮಕ್ಕಳ ಭವಿಷ್ಯಕ್ಕಾಗಿ ಸಾಕಷ್ಟು  ಹಣವನ್ನು ಲಾಭದಾಯಕವಾಗಿ ಕೂಡಿಡುವ ಮಾರ್ಗೋಪಾಯಗಳನ್ನು ಚರ್ಚಿಸುವ ಸರಣಿಯಲ್ಲಿ ನಾವು ಈ ಬಾರಿ ಸುಕನ್ಯಾ ಸಮೃದ್ದಿ ಯೋಜನೆ, ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಮತ್ತು ನಿರಖು ಠೇವಣಿಗಳ (ಎಫ್ ಡಿ)  ಬಗ್ಗೆ ಚಿಂತನೆ ನಡೆಸಬಹುದಾಗಿದೆ. 

ನಮ್ಮ ಮುಂದಿರುವ ಅದೆಷ್ಟೋ ಹೂಡಿಕೆ ಯೋಜನೆಗಳು ಮತ್ತು ಅವಕಾಶಗಳ ಬಗ್ಗೆ ನಮಗೆ ಸ್ಪಷ್ಟವಾದ ಮಾಹಿತಿ, ತಿಳಿವಳಿಕೆ ಇಲ್ಲದಿರುವುದು ಅಥವಾ ಅದನ್ನು ತಿಳಿದುಕೊಳ್ಳುವಷ್ಟು ವ್ಯವಧಾನ ನಮ್ಮಲ್ಲಿ ಇಲ್ಲದಿರುವುದೇ ನಮ್ಮ ಹೂಡಿಕೆ ಪ್ರವೃತ್ತಿಗೆ ಇರುವ ಬಹುದೊಡ್ಡ ಅಡಚಣೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದುದರಿಂದ ನಮಗೆ ಉಪಲಬ್ಧವಿರುವ ವಿವಿಧ ಹೂಡಿಕೆ ಅವಕಾಶಗಳು, ಸ್ಕೀಮುಗಳು, ಯೋಜನೆಗಳ ಬಗ್ಗೆ ನಾವು ಮೊದಲಾಗಿ ಕೂಲಂಕಷವಾಗಿ ತಿಳಿದುಕೊಳ್ಳಬೇಕು. ಅನಂತರವೇ ಅವುಗಳು ದೀರ್ಘಾವಧಿಯಲ್ಲಿ ಲಾಭದಾಯಕವೇ, ಆಕರ್ಷಕವೇ ಎಂಬಿತ್ಯಾದಿ ಲೆಕ್ಕಾಚಾರಗಳನ್ನು ತುಲನಾತ್ಮಕವಾಗಿ ಮಾಡಬೇಕು.

ಅಂತಿರುವಾಗ ಈಗ ನಮ್ಮ ಮುಂದಿರುವ ಸುಕನ್ಯಾ ಸಮೃದ್ಧಿ ಯೋಜನೆಯ ಸಾಧಕ ಬಾಧಕಗಳು ಏನು ಎಂಬುದನ್ನು ಅರಿಯಲು ಮುಂದಾಗಬೇಕಾಗಿದೆ.

ಸುಕನ್ಯಾ ಸಮೃದ್ಧಿ ಯೋಜನೆಯನ್ನು ಜಾರಿಗೆ ತಂದದ್ದು ಪ್ರಕೃತ ಕೇಂದ್ರದಲ್ಲಿ  ಅಧಿಕಾರದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರಕಾರ. 2015-¬ -16ರ ಕೇಂದ್ರ ಬಜೆಟ್ನಲ್ಲಿ  ಬೇಟಿ ಬಚಾವೋ ಬೇಟಿ ಪಢಾವೋ ಎಂಬ ಆಕರ್ಷಕ ಶೀರ್ಷಿಕೆಯ ಈ ಯೋಜನೆಯನ್ನು ಸರಕಾರ ಜಾರಿಗೆ ತಂದಿತು.

ಹೆಸರೇ ಹೇಳುವಂತೆ ಸುಕನ್ಯಾ ಸಮೃದ್ಧಿ ಉಳಿತಾಯ ಯೋಜನೆಯನ್ನು ಹೆಣ್ಣು ಮಕ್ಕಳ ಆರ್ಥಿಕ ಅಭ್ಯುದಯಕ್ಕಾಗಿ ರೂಪಿಸಲಾಗಿದೆ. ಹತ್ತು ವರ್ಷಕ್ಕಿಂತ ಕೆಳಗಿನ ಪ್ರಾಯದ ಹೆಣ್ಣು ಮಕ್ಕಳಿಗಾಗಿ 21 ವರ್ಷಗಳ ಸುದೀರ್ಘ ಅವಧಿಯ ಈ ಯೋಜನೆಯು ಪ್ರಕೃತ ಶೇ.8.5ರ ವಾರ್ಷಿಕ ಇಳುವರಿಯನ್ನು ಹೊಂದಿದೆ. ಹೆಣ್ಣು ಮಕ್ಕಳ ಉನ್ನತ ಶಿಕ್ಷಣ, ಮದುವೆ ಮುಂತಾಗಿ ಯಾವುದೇ ಗುರಿಯನ್ನು ಸುಲಭದಲ್ಲಿ ಸಾಧಿಸುವುದಕ್ಕೆ ಕಲ್ಪಿಸಲಾಗಿರುವ ಉತ್ತಮ ಯೋಜನೆ ಇದಾಗಿದೆ.

ಸುಕನ್ಯಾ ಯೋಜನೆಯಡಿಯ ಹೂಡಿಕೆ (ವರ್ಷಕ್ಕೆ ಗರಿಷ್ಠ 1.5 ಲಕ್ಷ ರೂ.), ಬಡ್ಡಿ ಮತ್ತು ಅದರ ಪಕ್ವತೆಯ ಮೊತ್ತವು ತೆರಿಗೆ ವಿನಾಯಿತಿಗೆ ಅರ್ಹವಾಗಿರುತ್ತದೆ.

ಹೆತ್ತವರು ಹತ್ತು ವರ್ಷ ಕೆಳಹರೆಯದ ತಮ್ಮ ಇಬ್ಬರು ಪುತ್ರಿಯರ ಹೆಸರಲ್ಲಿ ಈ ಯೋಜನೆಯಡಿ ಹಣ ಹೂಡಬಹುದಾಗಿದೆ. ಹೀಗೆ ಹೂಡುವ ಹಣವು ಈ ಯೋಜನೆಯಲ್ಲಿ 21 ವರ್ಷಗಳ ಲಾಕ್ ಆಗಿರುತ್ತದೆ, ಅರ್ಥಾತ್ ಅದನ್ನು ಹಿಂಪಡೆಯುವ ಅವಕಾಶ ಇರುವುದಿಲ್ಲ. ಆದರೆ ಈ ಯೋಜನೆಯಡಿಯ ಹೂಡಿಕೆಯ ಇಳುವರಿಯು ಇಷ್ಟು ದೀರ್ಘದ, ಅಂದರೆ, 21 ವರ್ಷಗಳ ಕಾಲಾವಧಿಯಲ್ಲಿ, ನಿರಂತರವಾಗಿ ಏರುತ್ತಲೇ ಸಾಗುವುದೆಂದು ತಿಳಿಯಬಹುದಾದ, ಹಣದುಬ್ಬರದಿಂದ ಕೊರೆದು ಹೋಗುವ ಹೂಡಿಕೆ ಮೌಲ್ಯವನ್ನು ತುಂಬಿಕೊಡುವುದಿಲ್ಲ ಎನ್ನುವುದು ಗಮನಾರ್ಹ.

ಸುಕನ್ಯಾ ಯೋಜನೆಗೆ ಸೇರ್ಪಡೆಗೊಳ್ಳುವ ಬಾಲಕಿಯು 18 ವರ್ಷ ಮುಗಿಸಿದಾಗ ಆಕೆಯ ಹೆಸರಿನ ಖಾತೆಯಿಂದ ಶೇ.50ರಷ್ಟು  ಮೊತ್ತವನ್ನು ಹಿಂಪಡೆಯುವುದಕ್ಕೆ ಅವಕಾಶ ಇರುತ್ತದೆ. ವರ್ಷವೊಂದರಲ್ಲಿ ಈ ಯೋಜನೆಯಡಿ ಒಬ್ಬ ಖಾತೆದಾರಳ ಹೆಸರಿನಲ್ಲಿ ಗರಿಷ್ಠ 1.50 ಲಕ್ಷ  ರೂ. ಮಾತ್ರವೇ ಹೂಡುವುದಕ್ಕೆ ಅವಕಾಶ ಇರುತ್ತದೆ.

ಇವಿಷ್ಟು ಮೂಲ ಸಂಗತಿಗಳೊಂದಿಗೆ ನಾವಿನ್ನು ಚರ್ಚಿಸಬೇಕಾದ ಸಂಗತಿ ಎಂದರೆ ಸುಕನ್ಯಾ ಸಮೃದ್ದಿ ಯೋಜನೆಯಡಿ ನಮ್ಮ ಹೂಡಿಕೆ ಪಡೆಯುವ ಇಳುವರಿ (ಶೇ.8.5ರ ಬಡ್ಡಿ) ನಿಜಕ್ಕೂ ಆಕರ್ಷಕವೇ, ಲಾಭದಾಯಕವೇ, ಹಣದುಬ್ಬರದಿಂದ ಕೊರೆದು ಹೋಗುವ ಹೂಡಿಕೆ ಮೌಲ್ಯವನ್ನು ಕಾಪಿಡುವ ಶಕ್ತಿ ಹೊಂದಿರುವ ಯೋಜನೆಯೇ ಎಂಬುದಾಗಿದೆ. ಇದನ್ನು ತಿಳಿಯಬೇಕಿದ್ದರೆ ನಾವು ಈ ಯೋಜನೆಯನ್ನು ಇದೇ ಬಗೆಯ ಆದರೆ ಸ್ವಲ್ಪ ಕಡಿಮೆ ಅವಧಿಯ (15 ವರ್ಷ) ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಅಥವಾ ಪಿಪಿಎಫ್ ಜತೆಗೆ ತುಲನೆ ಮಾಡಬೇಕಾಗುತ್ತದೆ. ಏಕೆಂದರೆ ಪಿಪಿಎಫ್ ಯೋಜನೆಯಲ್ಲಿ ಸುಕನ್ಯಾಗೆ ಹೋಲಿಸಿದರೆ ಕೆಲವೊಂದು ಉತ್ತಮ ಮತ್ತು ಆಕರ್ಷಕ ಗುಣಲಕ್ಷಣಗಳು ಇವೆ.

ಪರಿಣತರನ್ನು ಉಲ್ಲೇಖೀಸಿ ಹೇಳುವುದಾದರೆ ಸುಕನ್ಯಾ ಸಮೃದ್ಧಿ ಯೋಜನೆಯು ಹೂಡಿಕೆ ಭದ್ರತೆಯ ದೃಷ್ಟಿಯಿಂದ, ನಿಖರ ಇಳುವರಿಯ ದೃಷ್ಟಿಯಿಂದ ಉತ್ತಮವಾಗಿದೆ. 21 ವರ್ಷಗಳ ವರ್ಷಂಪ್ರತಿ 1.50 ಲಕ್ಷ ರೂ. ಹೂಡುತ್ತಾ ನಿಶ್ಚಿಂತೆಯಿಂದ ಇರಬಹುದಾದ ಸುಭದ್ರ ಯೋಜನೆ ಇದಾಗಿದೆ ಎಂಬುದು ಪರಿಣತರ ಅಭಿಪ್ರಾಯ.

ಆದರೆ ಪಿಪಿಎಫ್ ಮತ್ತು ನಿರಖು ಠೇವಣಿಯಂತಹ ಸುಕನ್ಯಾ ರೀತಿಯ ಡೆಟ್ ಫಂಡ್ಗಳನ್ನು ತುಲನೆ ಮಾಡಿದರೆ, ಪಿಪಿಎಫ್ ಯೋಜನೆ ತಕ್ಕಡಿಯಲ್ಲಿ ಹೆಚ್ಚು ತೂಗುತ್ತದೆ ಎಂಬುದು ಸ್ಪಷ್ಟವಿದೆ.

ಇದಕ್ಕೆ ಕಾರಣ ಸ್ಪಷ್ಟ ಮತ್ತು ಸರಳವಿದೆ : ಪಿಪಿಎಫ್ ನಲ್ಲೂ ವರ್ಷಕ್ಕೆ ಗರಿಷ್ಠ 1.50 ಲಕ್ಷ ರೂ. ಹೂಡುವುದಕ್ಕೆ ಅವಕಾಶವಿದೆ. ಇದರಡಿಯ ಹೂಡಿಕೆ ಮೊತ್ತ, ಬಡ್ಡಿ ಮತ್ತು ಪಕ್ವತೆಯ ಸಮಯದಲ್ಲಿ ಕೈಗೆ ಸಿಗುವ ದೊಡ್ಡ ಗಂಟಿನ ಮೊತ್ತಕ್ಕೆ ತೆರಿಗೆ ವಿನಾಯಿತಿ ಇದೆ.

ಪಿಪಿಎಫ್ ಹೂಡಿಕೆ ಮೊತ್ತ ಸುಭದ್ರ, ಸುರಕ್ಷಿತ ಮತ್ತು ನಿಶ್ಚಿಂತೆಯದ್ದಾಗಿರುತ್ತದೆ. ದೀರ್ಘಾವಧಿಯ ಗುರಿಗಳನ್ನು ಸಾಧಿಸುವುದಕ್ಕೆ ಅನುಕೂಲಕರವೂ ಸುಲಭವೂ ಆಕರ್ಷಕವೂ ಆಗಿರುತ್ತದೆ.

ಸುಕನ್ಯಾ ಯೋಜನೆಯ ಲಾಕ್ ಇನ್ ಪೀರಿಯಡ್ 21 ವರ್ಷಗಳದ್ದಾದರೆ ಪಿಪಿಎಫ್ ಲಾಕ್ ಇನ್ ಪೀರಿಯಡ್ ಕೇವಲ 15 ವರ್ಷ. ಆದರೆ ಪ್ರಕೃತ ಪಿಪಿಎಫ್ ಬಡ್ಡಿ (ಶೇ.8) ಸುಕನ್ಯಾ ಯೋಜನೆಗಿಂತ (ಶೇ.8.5) ಸ್ವಲ್ಪ ಕಡಿಮೆಯೇ ಇದೆ. ಪಿಪಿಎಫ್ ಬಡ್ಡಿ ದರ ನಿಗದಿತವಾಗಿರುವುದಿಲ್ಲ; ಬದಲಾಗುತ್ತಲೇ ಇರುತ್ತದೆ. ಸುಕನ್ಯಾ ಯೋಜನೆಗಿಂತಲೂ ಪಿಪಿಎಫ್ ಯೋಜನೆಯಡಿ ಐದು ವರ್ಷಗಳ ಬಳಿಕ ಆಂಶಿಕವಾಗಿ ಹಣ ಹಿಂಪಡೆಯುವುದಕ್ಕೆ ಇನ್ನೂ ಉತ್ತಮ ಸೌಕರ್ಯವಿದೆ.

ಸುಕನ್ಯಾ ಯೋಜನೆಗೆ ಬಾಲಕಿಯೊಬ್ಬಳು 9 ವರ್ಷ ಪ್ರಾಯದಲ್ಲಿ ಸೇರಿದ ಪಕ್ಷದಲ್ಲಿ ಆಕೆಗೆ 18 ವರ್ಷವಾಗುವಾಗ ಶೇ.50ರ ಹಣ ಹಿಂಪಡೆಯುವಿಕೆ ಅವಕಾಶವು ಆ ಹೊತ್ತಿನ ಗುರಿಯನ್ನು ಸಾಧಿಸಲು ಅಪರ್ಯಾಪ್ತವಾಗಿರುತ್ತದೆ ಎನ್ನುವುದೊಂದು ಸ್ವಲ್ಪ ಮಟ್ಟಿನ ಹಿನ್ನಡೆಯ ಸಂಗತಿ.

ಅದೇನಿದ್ದರೂ ಸುಕನ್ಯಾ ಸಮೃದ್ಧಿ ಯೋಜನೆಯು ಅಬಲೆ ಎನಿಸಿಕೊಳ್ಳುವ ಹೆಣ್ಣು ಮಗುವಿಗೆ ಪ್ರಾಯಪ್ರಬುದ್ಧಳಾದಾಗ ಆರ್ಥಿಕವಾಗಿ ಸಬಲೆ ಎನಿಸಿಕೊಳ್ಳುವುದಕ್ಕೆ ಹೆತ್ತವವರು ಕಲ್ಪಿಸುವ ಒಂದು ಸುವರ್ಣಾವಕಾಶದ ಯೋಜನೆಯೇ ಆಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಇಂದಿನ ದಿನಗಳಲ್ಲಿ ಭಾರತೀಯ ಸ್ಟೇಟ್ ಬ್ಯಾಂಕಿನ ಎಲ್ಲ ಶಾಖೆಗಳಲ್ಲಿ ಸುಕನ್ಯಾ ಸಮೃದ್ಧಿ ಖಾತೆಯನ್ನು ನೇರವಾಗಿ ಇಲ್ಲವೇ ಆನ್ಲೈನ್ ಮೂಲಕವೂ ತೆರೆಯುವುದಕ್ಕೆ ಅವಕಾಶವಿದೆ. ಹಾಗೆಯೇ ಸಿಸ್ಟಮ್ಯಾಟಿಕ್ ಇನ್ವೆಸ್ಟ್ಮೆಂಟ್ ಪ್ಲಾನ್ (ಸಿಪ್) ಮೂಲಕ ವರ್ಷಂಪ್ರತಿಯ ಹೂಡಿಕೆಯನ್ನು ಕ್ರಮಬದ್ಧವಾಗಿ ಮುಂದುವರಿಸಿಕೊಂಡು ಹೋಗುವುದಕ್ಕೂ ಅವಕಾಶವಿದೆ.

ಟಾಪ್ ನ್ಯೂಸ್

90 ದಿನಗಳಲ್ಲಿ ನೆಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೆವಾಲಾ

90 ದಿನದಲ್ಲಿ ನೆಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೆವಾಲಾ

Thailandನಲ್ಲಿ ಗುಜರಿ ಮಾಫಿಯಾದ ಕಿಂಗ್‌ ಪಿನ್‌ ರವಿ ಕಾನಾ, ಪ್ರಿಯತಮೆ ಕಾಜಲ್‌ ಜಾ ಬಂಧನ

Thailandನಲ್ಲಿ ಗುಜರಿ ಮಾಫಿಯಾದ ಕಿಂಗ್‌ ಪಿನ್‌ ರವಿ ಕಾನಾ, ಪ್ರಿಯತಮೆ ಕಾಜಲ್‌ ಜಾ ಬಂಧನ

23

ಹೂಡಿಕೆದಾರರಿಗೆ ಲಾಭಾಂಶ ನೀಡದ ಆರೋಪ ʼManjummel Boysʼ ನಿರ್ಮಾಪಕರ ವಿರುದ್ದ ದೂರು ದಾಖಲು

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kambalaHigh-tech touch for Kambala race

Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ

JIO SPACE FIBER 1

JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?

thumb news web exclusive uv (2) (1)

“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…

thumb web ex (1) (1) (1) (1) (1) (1) copy (1)

ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!

web exclusive keer

ಒಂದು ಜಾಹೀರಾತು ದೇಶಕ್ಕೆ ಬೆಂಕಿ ಹಚ್ಚಿತ್ತು.. ಏನಿದು ಪೆಪ್ಸಿಯ ನಂಬರ್ ಫೀವರ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

20-shirva-1

ಮೂಡುಬೆಳ್ಳೆ ಶ್ರೀಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ, ಶ್ರೀ ಸೂರ್ಯನಾರಾಯಣ ದೇಗುಲ

90 ದಿನಗಳಲ್ಲಿ ನೆಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೆವಾಲಾ

90 ದಿನದಲ್ಲಿ ನೆಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೆವಾಲಾ

Thailandನಲ್ಲಿ ಗುಜರಿ ಮಾಫಿಯಾದ ಕಿಂಗ್‌ ಪಿನ್‌ ರವಿ ಕಾನಾ, ಪ್ರಿಯತಮೆ ಕಾಜಲ್‌ ಜಾ ಬಂಧನ

Thailandನಲ್ಲಿ ಗುಜರಿ ಮಾಫಿಯಾದ ಕಿಂಗ್‌ ಪಿನ್‌ ರವಿ ಕಾನಾ, ಪ್ರಿಯತಮೆ ಕಾಜಲ್‌ ಜಾ ಬಂಧನ

19-sagara

LS Polls: ರಾಜ್ಯದ ಜನರಿಗೆ ಈಶ್ವರಪ್ಪ ಸ್ಪರ್ಧೆ ವಿಷಯ ಈಗ ಖಚಿತ: ಈಶ್ವರಪ್ಪ

23

ಹೂಡಿಕೆದಾರರಿಗೆ ಲಾಭಾಂಶ ನೀಡದ ಆರೋಪ ʼManjummel Boysʼ ನಿರ್ಮಾಪಕರ ವಿರುದ್ದ ದೂರು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.