ತೇಜಸ್ವಿ, ಕೆದಂಬಾಡಿ ಮತ್ತು ಪ್ರಧಾನಿ ಮೋದಿಯ ‘ಮ್ಯಾನ್ ವರ್ಸಸ್ ವೈಲ್ಡ್’


Team Udayavani, Aug 2, 2019, 10:00 AM IST

Modi—Tejaswi

ಈ ಹೊತ್ತು ಎರಡು ವಿದ್ಯಮಾನಗಳು ಸುತ್ತೆಲ್ಲ ವಿಶಿಷ್ಟವಾಗಿ ಸದ್ದು ಮಾಡುತ್ತಿವೆ. ಒಂದನೆಯದು ಮತ್ತು ಹೆಚ್ಚು ಜನಪ್ರಿಯತೆ ಗಳಿಸಿರುವುದು ಪ್ರಧಾನಿ ನರೇಂದ್ರ ಮೋದಿಯವರು ಪಾಲ್ಗೊಂಡಿರುವ ಡಿಸ್ಕವರಿ ಚಾನೆಲ್‌ನ ಮ್ಯಾನ್ ವರ್ಸಸ್ ವೈಲ್ಡ್ ಸರಣಿಯ ಎಪಿಸೋಡ್. ಆ.12ರಂದು ಪ್ರಸಾರವಾಗಲಿರುವ ಈ ಕಂತಿನ ಪ್ರೊಮೋ ಈಗಾಗಲೇ ಹುಚ್ಚೆಬ್ಬಿಸಿದೆ, ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದೆ.

ಎರಡನೆಯದು ದೇಶದಲ್ಲಿ ಈಗ ಹುಲಿಗಳ ಸಂಖ್ಯೆ ಹೆಚ್ಚಿದೆ ಎಂಬ ಸುದ್ದಿ. ಚಿರತೆ, ಕರಡಿಗಳ ಜತೆಗೆ ಮುಖಾಮುಖಿ ನಾವು ಹತ್ತಿರದಿಂದ ಕಂಡು-ಕೇಳಿರುವಂಥದ್ದೇ.

ಈ ಹೊತ್ತಿನಲ್ಲಿ ಬೇಟೆ ಮತ್ತು ವನ್ಯಜೀವಿಗಳ ಜತೆಗೆ ಮುಖಾಮುಖಿಯನ್ನು ಚಿತ್ರಿಸುವ ಕನ್ನಡ ಸಾಹಿತ್ಯ ಸ್ಮರಣೆಗೆ ಬರುತ್ತದೆ. ಕೆದಂಬಾಡಿ ಜತ್ತಪ್ಪ ರೈಗಳು ಬರೆದ ಬೇಟೆಯ ನೆನಪುಗಳು ಅಂತಹ ಕೃತಿಗಳ ಸಾಲಿನಲ್ಲಿ ಮೊದಲನೆಯದಾದರೆ ಕನ್ನಡದ ಅರ್ನೆಸ್ಟ್ ಹೆಮಿಂಗ್ವೇ ಎನ್ನಬಹುದಾದ ಕೆ. ಪಿ. ಪೂರ್ಣಚಂದ್ರ ತೇಜಸ್ವಿಯವರ ‘ರುದ್ರಪ್ರಯಾಗದ ಭಯಾನಕ ನರಭಕ್ಷಕ’, ‘ಮುನಿಸ್ವಾಮಿ ಮತ್ತು ಮಾಗಡಿಯ ಚಿರತೆ’ ಮತ್ತು ಕಾಡಿನ ಕತೆಗಳು ಸರಣಿಯ ಹಲವು ಪುಸ್ತಕಗಳು ಮನುಷ್ಯ ಮತ್ತು ಪ್ರಾಣಿಜಗತ್ತು ಹಾಸುಹೊಕ್ಕಾಗುವ ಸಂದರ್ಭಗಳನ್ನು ವಿಶ್ಲೇಷಿಸುತ್ತವೆ.

ಕನ್ನಡದಲ್ಲಿ ವಿಜ್ಞಾನ ಮತ್ತು ಪರಿಸರ ಸಾಹಿತ್ಯವನ್ನು ಸರಳವಾದ, ವಿಶಿಷ್ಟವಾದ ಮತ್ತು ಆಪ್ತವಾಗುವ ಶೈಲಿಯಲ್ಲಿ ಬರೆದುಕೊಟ್ಟವರು ಪೂರ್ಣಚಂದ್ರ ತೇಜಸ್ವಿ. ಅವರ ‘ರುದ್ರಪ್ರಯಾಗದ ಭಯಾನಕ ನರಭಕ್ಷಕ’ ಇಂಗ್ಲಿಷ್‌ನ ‘ಮ್ಯಾನ್ ಈಟಿಂಗ್ ಲಿಯೊಪಾರ್ಡ್ ಆಫ್ ರುದ್ರಪ್ರಯಾಗ್’ ಎಂಬ ಕೃತಿಯ ಕನ್ನಡ ರೂಪಾಂತರ. ಆಸಕ್ತಿಕರ ವಿಚಾರ ಎಂದರೆ, ಈ ಪುಸ್ತಕವನ್ನು ಬರೆದವರು ಜಿಮ್ ಕಾರ್ಬೆಟ್. ಆತ ಬ್ರಿಟಿಶ್ ಕರ್ನಲ್, ಈಗಿನ ಉತ್ತರಾಖಂಡ, ಉತ್ತರಪ್ರದೇಶ ಭಾಗದಲ್ಲಿ ಮನುಷ್ಯನನ್ನು ಬೇಟೆಯಾಡುವ ಅಭ್ಯಾಸ ಬೆಳೆಸಿಕೊಂಡ ಹುಲಿ-ಚಿರತೆಗಳ ಬೇಟೆಯಲ್ಲಿ ಸಿದ್ಧಹಸ್ತನೆನಿಸಿದ್ದವನು.

ಈ ಬೇಟೆಯ ಪ್ರವೃತ್ತಿಯ ಜತೆಗೆ ಸ್ವಾತಂತ್ರ್ಯಪೂರ್ವದ ಆ ಕಾಲಘಟ್ಟದಲ್ಲಿಯೇ ‘ಭಾರತ ವನ್ಯಮೃಗಗಳ ರಕ್ಷಣೆಯತ್ತ ಎಚ್ಚರ ತಾಳಬೇಕೆಂಬ ಕಾಳಜಿಯನ್ನೂ ಹೊಂದಿದ್ದವನು. ಜಿಮ್ ಕಾರ್ಬೆಟ್ ಬರೆದ ಪುಸ್ತಕ ನರಭಕ್ಷಕ ಚಿರತೆಯೊಂದರ ಬೇಟೆಯ ಅನುಭವ ಮಾತ್ರವಾಗದೆ ಆ ಕಾಲದ ಜನಜೀವನ ಹಾಗೂ ಪರಿಸರ ಮತ್ತು ಮನುಷ್ಯನ ಅಂತರ್‌ ಸಂಬಂಧಗಳನ್ನು ಪರಿಶೀಲಿಸುತ್ತದೆ. ಈತನ ಹೆಸರನ್ನೇ ಹೊಂದಿರುವ ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನದಲ್ಲಿ ಪ್ರಧಾನಿ ಮೋದಿ ಮ್ಯಾನ್ ವರ್ಸಸ್ ವೈಲ್ಡ್ ಸರಣಿಯ ಎಪಿಸೋಡ್‌ ನಲ್ಲಿ ಕಾಣಿಸಿಕೊಂಡಿದ್ದಾರೆ.

‘ಕೆದಂಬಾಡಿ ಜತ್ತಪ್ಪ ಗೌಡರ ‘ಬೇಟೆಯ ನೆನಪುಗಳು’ ಕೃತಿಯಿಂದ ತೊಡಗಿ ತೇಜಸ್ವಿಯವರು ಕನ್ನಡಕ್ಕೆ ತಂದಿರುವ ‘ರುದ್ರಪ್ರಯಾಗದ ಭಯಾನಕ ನರಭಕ್ಷಕ’ದ ಸಹಿತ ಬೇಟೆಯ ಸಾಹಿತ್ಯ ಅಥವಾ ಪರಿಸರ ಸಾಹಿತ್ಯ ಎನ್ನಬಹುದಾದ ಎಲ್ಲವೂ ‘ಭಾರತ ಸ್ವಾತಂತ್ರ್ಯಪಡೆದ 1950ರ ಹಿಂದುಮುಂದಿನ ದಶಕಗಳ ವನ್ಯಜೀವಿ ಬಾಹುಳ್ಯದ ಕಾಲಕ್ಕೆ ಸಂಬಂಧಿಸಿದಂಥವು. ಈಗ ದೇಶದಲ್ಲಿ ಹುಲಿಗಳ ಸಂಖ್ಯೆ ಹೆಚ್ಚಿರುವುದು, ಪ್ರಧಾನಿ ಮೋದಿ ‘ಮ್ಯಾನ್ ವರ್ಸಸ್ ವೈಲ್ಡ್’ ಸರಣಿಯಲ್ಲಿ ‘ಭಾಗವಹಿಸಿರುವುದು ಎರಡೂ ಕ್ಷೀಣಿಸುತ್ತಿರುವ ವನ್ಯಮೃಗಗಳ ಉಳಿವು, ಹೆಚ್ಚುತ್ತಿರುವ ಮನುಷ್ಯ- ಕಾಡುಮೃಗಗಳ ಸಂಘರ್ಷವನ್ನು ವಿಶ್ಲೇಷಿಸುವಂಥವು.

ಇದೇ ಕಾರಣಕ್ಕೆ ಜಿಮ್ ಕಾರ್ಬೆಟ್‌ ನಂತಹ ಇನ್ನೊಬ್ಬ ಕೆನೆತ್ ಆ್ಯಂಡರ್ಸನ್‌ ನ ಅನುಭವಗಳನ್ನು ಹೇಳುವ ‘ಕಾಡಿನ ಕತೆಗಳು-1’ರ ಪ್ರವೇಶಿಕೆಯಲ್ಲಿ ತೇಜಸ್ವಿಯವರು, ‘ಕೆನೆತ್ ಆ್ಯಂಡರ್ಸನ್ ಮತ್ತು ಜಿಮ್ ಕಾರ್ಬೆಟ್ ತಮ್ಮ ಅನುಭವಗಳನ್ನು ಬರೆದ ಕಾಲ ಐತಿಹಾಸಿಕವಾಗಿ ಒಂದು ವಿಚಿತ್ರ ಪರ್ವಕಾಲವೆಂದು ಕರೆಯಬಹುದು’’ ಎನ್ನುತ್ತಾರೆ. ಜನಸಂಖ್ಯೆ ಹೆಚ್ಚಿದಂತೆ ನಾಗರಿಕತೆ ವಿಸ್ತರಿಸಿ ಕಾಡಿನ ವಿಸ್ತೀರ್ಣ ಕುಗ್ಗಿದಂತೆ ಮಾಂಸಾಹಾರಿ ಪ್ರಾಣಿಗಳು ಒತ್ತಡಕ್ಕೆ ಸಿಲುಕಿದ ಕಾರಣಕ್ಕೆ ಅದು ಪರ್ವಕಾಲ ಎಂದಿದ್ದಾರೆ.

ನಾಡಿದ್ದು ಪ್ರಸಾರವಾಗಲಿರುವ ‘ಮ್ಯಾನ್ ವರ್ಸಸ್ ವೈಲ್ಡ್’ ಕಂತನ್ನು ವೀಕ್ಷಿಸುವ ಜತೆಗೆ ತೇಜಸ್ವಿ, ಜತ್ತಪ್ಪ ಗೌಡರಂಥವರು ಬರೆದ ಪರಿಸರ ಮತ್ತು ಬೇಟೆಯ ಸಾಹಿತ್ಯವನ್ನು ಓದಿದರೆ ನಮ್ಮಲ್ಲಿ ಹೊಸ ಎಚ್ಚರ ಮತ್ತು ಪರಿಸರ ಪ್ರೀತಿಯೊಂದು ಹುಟ್ಟಬಹುದೇನೋ!

– ಚಾರು

ಟಾಪ್ ನ್ಯೂಸ್

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kambalaHigh-tech touch for Kambala race

Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ

JIO SPACE FIBER 1

JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?

thumb news web exclusive uv (2) (1)

“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…

thumb web ex (1) (1) (1) (1) (1) (1) copy (1)

ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!

web exclusive keer

ಒಂದು ಜಾಹೀರಾತು ದೇಶಕ್ಕೆ ಬೆಂಕಿ ಹಚ್ಚಿತ್ತು.. ಏನಿದು ಪೆಪ್ಸಿಯ ನಂಬರ್ ಫೀವರ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

bike

Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

8-uv-fusion

Photography: ನಿಮ್ಮ ಬೊಗಸೆಯಲ್ಲಿ ಇರಲಿ ನೆನಪುಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.