ರಂಗಭೂಮಿಯ ‘ಮಾಸ್ಟರ್‌’ ಬ್ಲಾಸ್ಟರ್‌ ಕೊನೆ ನೋಟ…


Team Udayavani, May 9, 2019, 11:00 AM IST

Hirannayya

‘ರಂಗಭೂಮಿ’ ಹೆಸರಿನ ಆ ಮನೆಯ ಗೇಟು ತೆರೆದಿತ್ತು. ಆಗ ತಾನೇ ಬಾಗಿಲು ಸಾರಸಿ, ಗುಡಿಸಿ ರಂಗೋಲಿ ಇಟ್ಟಿದ್ದರು. ಬಲಗಡೆಗೆ ಒಂದು ವ್ಹೀಲ್ ಚೇರು ಗುಡುಗುಡು ಅಂತ ಬಂದು ನಿಂತಿತು. ಇಬ್ಬರು ಹಿಂದೆ ತಳ್ಳಿಕೊಂಡು ಬಂದರು. ತಿರುಗಿದರೆ, ಎದುರಿಗಿದ್ದ ಜೋಡಿ ಕಣ್ಣುಗಳು ನೋಡಿದವು. ಯಾವುದೇ ರಿಯಾಕ್ಷನ್‌ ಇಲ್ಲ. ನಿಸ್ತೇಜ ಮುಖಕ್ಕೆ ಒಂದು ಜೊತೆ ಕಣ್ಣು, ಮೂಗು, ಬಾಯಿ ಇಟ್ಟಂತಿದೆ. ದಢೂತಿ ಹೊಟ್ಟೆಯನ್ನು ಮುಚ್ಚಿಡಲು ಒಂದು ಟವೆಲ್‌. ಎಳೆ ಬಿಸಿಲು ಕೂಡ ಹಿರಣ್ಣಯ್ಯನವರ ಹಳೇ ಗತ್ತನ್ನು ನೆನಪಿಸಿಕೊಂಡು ದೂರ ನಿಂತಂತೆ ಇತ್ತು. ನನ್ನ ಮುಖ ನೋಡುತ್ತಿದ್ದಂತೆ – ಗುಮ್ಮನ ನೋಡಿದ ಮಗುವಿನಂತೆ, ಗಾಬರಿ ಗೆರೆಗಳು ಮುಖದ ತುಂಬ ಮುತ್ತಿ ಕೊಂಡು, ಕಣ್ಣುಗಳು ಚೂರು ದಪ್ಪನಾಗಿ ಪಕ್ಕದಲ್ಲಿದವರ ಕಡೆ ಅಪರಿಚತವಾಗಿ ನೋಡಿದರು.

ಜಗತ್ತಿನ, ಅದರ ಓರೆಕೋರೆಗಳು, ಜನನಾಯಕರ ಅಂಕುಡೊಂಕುಗಳನ್ನು ಎಕ್ಸಿಮಿಷನ್‌ನಲ್ಲಿ ಫೋಟೋಗಳಂತೆ ಬಂದವರ ಕೈ ಹಿಡಿದು ಕರೆದುಕೊಂಡು ಹೋಗುತ್ತಿದ್ದ ಗತ್ತಿನ ವ್ಯಂಗ್ಯಗಳನ್ನು ಮಾಡುತ್ತಿದ್ದ ಹಿರಣ್ಣಯ್ಯ ಇವರೇನಾ ಅನಿಸಿಬಿಟ್ಟಿತು? ಹಿರಣ್ಣಯ್ಯನವರು ಯಾವತ್ತೂ ಈ ರೀತಿ ಕಳಾಹೀನರಾಗಿರಲಿಲ್ಲ. ಎದುರಿಗೆ ಯಾರೇ ಕಂಡರು- ಮಾತಿಗೂ ಮುನ್ನ ಫ‌ಳ್‌ ಅಂತ ನಗುವಿನ ಪ್ರಾಂಜಲ ಬೆಳಕನ್ನು ಹೊತ್ತಿಸಿ, ಜೋಕು ಸಿಡಿಸಿ ಹಿನ್ನೆಲೆ ಸಂಗೀತದಂತೆ ‘ಕಕಕಕಕ…’ ಅಂತ ನಕ್ಕು ಆನಂತರ ಮಾತಿಗಿಳಿಯುತ್ತಿದ್ದರು.

ನಮ್ಮ ಕಾಲದಲ್ಲಿ ನಾಡಿಗೇರ ಕೃಷ್ಣರಾಯ ಅಂತಿದ್ದ. ಅದೇನು ನಗಿಸೋನು ಗೊತ್ತಾ? ಹೀಗೇಳಿ.. ಎರಡು ಜೋಕು ಬೀಡೋರು… ಅವರಂತೆಯೇ ಅವರ ಮೊಮ್ಮಗ ಚೇತನ್‌ ನಾಡಿಗೇರ್‌ ನಮ್ಮ ಜೊತೆ ಇದ್ದಾನೆ ಸಾರ್‌ ಆಂದಾಗ.. ಕರ್ಕೊಂಡು ಬನ್ರೀ ಅವರನ್ನ.. ಕೂತು ಫ‌ುಲ್‌ ಲೋಟ ಕಾಫಿ ಕುಡಿಯೋಣ ಅಂತ ಮಗುವಿನಂತೆ ಕೇಳಿದ್ದು ಇವರೇನ ಅನಿಸಿಬಿಟ್ಟಿತು…

ಆದರೆ, ನಾವಿಬ್ಬರೂ ಹೋಗಲಾಗಲೇ ಇಲ್ಲ… ಆವತ್ತು, ನನಗೂ ಈ ಜಗತ್ತಿಗೂ ಸಂಬಂಧವೇ ಇಲ್ಲ, ನನ್ನ ಈ ಜಗತ್ತಿಗೂ ನಿಮಗೂ ಸಂಬಂಧ ಇಲ್ಲ ಅನ್ನೋ ರೀತಿ ತೆಳುಗಡ್ಡದಲ್ಲಿ ಕುಳಿತಿದ್ದರು ಮಾಸ್ಟರ್‌. ಉಬ್ಬಿದ ಹೊಟ್ಟೆಯಿಂದ ಎರಡು, ಮೂರು ತೇಗು ಬಂತು.. ಪಕ್ಕದಲ್ಲಿದ್ದವರು ಹೊಟ್ಟೆ ನೀವಿ, ಅದೇ ಟುವೆಲ್‌ನಿಂದ ಮೂತಿ ಒರೆಸಿದರು.

ಎರಡೂ ಕಾಲುಗಳು ಚೇರಿನ ಪೆಡಲುಗಳಿಗೆ ಅಂಟಿಕೊಂಡಿದ್ದವು. ಹಿರಣ್ಣಯ್ಯನವರನ್ನು ನೋಡುತ್ತಿದ್ದಂತೆ- ಅವರ ಮಗ ಬಾಬು ಹಿರಣ್ಣಯ್ಯ ಹೇಳಿದ ಸತ್ಯ ಕಿವಿಯೊಳಗೆ ಕೂಗಿತು.. “ಅಪ್ಪ ಇದ್ದಾರೆ, ಆದರೆ, ನಮ್ಮ ಜೊತೆ ಇರಲ್ಲ …’ ಹಿರಣ್ಣಯ್ಯನವರು ಭೌತಿಕ ಜಗತ್ತಿನ ಸಂಪರ್ಕ ಕಳೆದುಕೊಂಡು ಒಂದು ವರ್ಷವೇ ದಾಟಿಹೋಗಿತ್ತು…

ಅವರು ತಮ್ಮದೇ ಲೋಕದಲ್ಲಿ ಬದುಕುತ್ತಿದ್ದರು. ದಿನಂಪ್ರತಿ ಬೆಳಗ್ಗೆ, ಸಂಜೆ ಎಳೆ ಬಿಸಲಲ್ಲಿ ಕೂರುವುದು, ಪೇಪರ್‌ ಓದುವಂತೆ ಮಾಡುತ್ತಿದ್ದರು, ಆದರೆ ಯಾವ ವಿಷಯವೂ ತಲೆಗೆ ಹೋಗುತ್ತಿರಲಿಲ್ಲ. ಸಂಜೆ ಬೇಜಾರಿಗೆ ಒಂದಷ್ಟು ಧಾರಾವಾಹಿಗಳನ್ನು ನೋಡುತ್ತಿದ್ದರು. ಅದೇ ಸೀರಿಯಲ್‌ ನೋಡಿದರೂ, ಇವತ್ತು ರಾಧಾರಮಣ ಬರಲಿಲ್ವಾ ಅನ್ನೋರು… ಕೇಬಲ್‌ ಕೆಟ್ಟೋಗಿದಿಯಪ್ಪಾ…ಬರುತ್ತೆ ಅಂತ ಸಮಾಧಾನ ಮಾಡೋರು ಮಕ್ಕಳು. ಏಕೆಂದರೆ, ಒಂದು ಪಕ್ಷ ಪ್ರಸಾರ ಆಗುತ್ತಿದ್ದರೆ. ನೀವೇ ನೋಡ್ತಾ ಇದ್ದೀರಾ.. ಅಂದು ಬಿಟ್ಟರೆ.. ಹೌದಾ, ಅಂತ ಚಿಂತೆಗಿಳಿಯುತ್ತಾರೆ ಅನ್ನೋ ಆತಂಕ ಬೇರೆ.

ಅವರಿಗೆ ಹಿಂದಿನ ಎಲ್ಲಾ ನೆನಪುಗಳು ಅಳಿಸಿಹೋಗಿದ್ದವು. ಅವುಗಳನ್ನು ನವೀಕರಿಸಲು ಸಾಧ್ಯವಾಗದಷ್ಟು ಖಾಯಿಲೆ ಅಮರಿಕೊಂಡಿತ್ತು. ಹೊಸ ನೆನಪು ಜಮೆಯಾಗುತ್ತಿರಲಿಲ್ಲ, ಇರುವ ನೆನಪು ಕ್ಷಣಾರ್ಧದಲ್ಲಿ ಜಾರಿಬಿಡುತ್ತಿತ್ತು… ನೀವು ಯಾರು? ಅಂತ ಮನೆಯವರನ್ನೇ ಕೇಳಿಬಿಡುವಟ್ಟಿಗೆ, ಜಠರ ಕೆಲಸ ನಿಲ್ಲಿಸಿಬಿಟ್ಟುತ್ತು. ಹಾಗಾಗಿ, ತಿಂದದ್ದು ಜೀರ್ಣವಾಗುತ್ತಿರಲಿಲ್ಲ. ಬರೀ ಲಿಕ್ವಿಡ್‌. ತಿಂದದ್ದು ಬ್ಲಾಕ್‌ ಆದರೆ ದೇಹದ ಎಲ್ಲ ಕ್ರಿಯೆ ಏರುಪೇರಾಗುತ್ತದೆ ಅಂತ 10-15 ದಿನಕ್ಕೆ ದುಭಾರಿ ಇಂಜೆಕ್ಷನ್‌ ಕೊಡಿಸುತ್ತಿದ್ದರು, ಮೂರು ಗಂಟೆಗಳ ಕಾಲ..

ದೇವರೇ.. ಮಾತಿನಿಂದ ಬದುಕಿದವರಿಗೇ ಮಾತೇ ಕಿತ್ತುಕೊಳ್ಳೋದು ಈ ರೀತೀನ ಅನಿಸಿಬಿಟ್ಟಿತು.
ಆವತ್ತು, ಅವರ ಮನೆಯಿಂದ ಹೊರಡುವಾಗ ಚೇರಿತ್ತು, ಹಿರಣ್ಣಯ್ಯನರು ಇರಲಿಲ್ಲ, ಮೌನವನ್ನು ಹಾಸಿ ಹೋಗಿದ್ದರು. ಅದರ ಮೇಲೆ ಘರ್ಜನೆ, ತುಂಟತನ, ತಮಾಷೆಗಳು, ತಮ್ಮನ್ನು ತಾವೇ ಕಾಲು ಎಳೆದು ಕೊಳ್ಳುವ ಮಾತುಗಳನ್ನು ಸಪಾಟಾಗಿ ಮಲಗಿಸಿದಂತಿತ್ತು. ತಿರುಗಾ ಬರ್ತೀನಿ ಅಂತ.
‘ಇನ್ನ ಮೇಲೆ ನಮ್ಮಪ್ಪ ಹೀಗೆ. ಅದಕ್ಕೆ ಯಾರಾದರು ಬಂದರೆ ಅವರನ್ನು ತೋರಿಸೋಕೆ ಹಿಂಸೆಯಾಗುತ್ತೆ…’ ಮಗ ಬಾಬು ಅವರು ಗೇಟಿನ ತನಕ ಬಂದು ಹೀಗಂದರು.

“ಇವನ್ನೆಲ್ಲಾ ಹೇಳಬೇಡವೋ…’ ಅನ್ನೋ ರೀತಿ ಅವರ ಕಣ್ಣಲ್ಲಿ ಒತ್ತರಿಸಿ ಬಂತು ನೀರು…
ಅವರ ಜೋಂಪು ಹತ್ತಿದ್ದ ಮನಸ್ಸು, ಈಗಿನ ಹಾಗೂ ಹಳೆ ಹಿರಣ್ಣಯ್ಯನವರ ಪಟಗಳನ್ನು ತಾಳೆ ಮಾಡುತಲಿತ್ತು…

— ಕಟ್ಟೆ ಗುರುರಾಜ್‌

ಟಾಪ್ ನ್ಯೂಸ್

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Stones Pelted: ಪಶ್ಚಿಮ ಬಂಗಾಳ: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ

Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ

Gujarat Lok Sabha Constituency: ಗುಜರಾತ್‌ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?

Gujarat Lok Sabha Constituency: ಗುಜರಾತ್‌ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

4-gadaga

Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್‌ಪಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kambalaHigh-tech touch for Kambala race

Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ

JIO SPACE FIBER 1

JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?

thumb news web exclusive uv (2) (1)

“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…

thumb web ex (1) (1) (1) (1) (1) (1) copy (1)

ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!

web exclusive keer

ಒಂದು ಜಾಹೀರಾತು ದೇಶಕ್ಕೆ ಬೆಂಕಿ ಹಚ್ಚಿತ್ತು.. ಏನಿದು ಪೆಪ್ಸಿಯ ನಂಬರ್ ಫೀವರ್

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

O2

O2: ತೆರೆಗೆ ಬಂತು ಓ2; ಚಿತ್ರದ ಮೇಲೆ ಆಶಿಕಾ ನಿರೀಕ್ಷೆ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Stones Pelted: ಪಶ್ಚಿಮ ಬಂಗಾಳ: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ

Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ

5-congress

Udupi-ಚಿಕ್ಕಮಗಳೂರಿನಲ್ಲಿ ಬಿಜೆಪಿಗರೂ ಜೆಪಿ-ಜೆಪಿ ಎನ್ನುತ್ತಿದ್ದಾರೆ: ನಿಕೇತ್‌ರಾಜ್‌ ಮೌರ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.