ಡ್ರಗ್ಸ್‌ ಓವರ್‌ಡೋಸ್‌ಗೆ ಬಲಿಯಾದರೆ 26ರ ರ‍್ಯಾಪ್‌ ಗಾಯಕ 


Team Udayavani, Sep 9, 2018, 11:55 AM IST

4.jpg

ಆತನಿಗಿನ್ನೂ ವಯಸ್ಸು 26, ತನ್ನ  ಹಾಡುಗಳ ಮೂಲಕ ಯುವ ಹೃದಯಗಳಲ್ಲಿ ಹುಚ್ಚೆಬ್ಬಿಸಲು ಆರಂಭಿಸಿದ್ದ . ಪ್ರಖ್ಯಾತಿಯ ಉತ್ತುಂಗಕ್ಕೇರಬೇಕಾದ ಹುಡುಗ ಚಿಗುರುವಾಗಲೇ ಮರೆಯಾಗಿ ಹೋಗಿದ್ದಾನೆ. 

ಹೌದು ಅಮೆರಿಕದ ಯುವ ರ‍್ಯಾಪ್‌ ಹಾಡುಗಾರ ಮೆಕ್‌ ಮಿಲ್ಲರ್‌ ಕ್ಯಾಲಿಫೋರ್ನಿಯಾದ ತನ್ನ ನಿವಾಸದಲ್ಲಿ  ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಡ್ರಗ್ಸ್‌ ಓವರ್‌ಡೋಸ್‌ಗೆ ಬಲಿಯಾಗಿದ್ದಾರೆ ಎಂದು ಹೇಳಲಾಗಿದೆ. 

ಮೆಕಲೊಮ್‌ ಜೆಮ್ಸ್‌ ಮೆಕ್‌ ಕೊರ್ಮಿಕ್‌ ಎಂಬ ಮೂಲ ಹೆಸರಿನ ಗಾಯಕ 2011 ರಲ್ಲಿ ಮೊದಲ ಅಲ್ಬಂ ಹೊರತಂದು ಹಲವು ರ‍್ಯಾಪ್‌ ಸಂಗೀತ ಪ್ರಿಯರ ಮೆಚ್ಚುಗೆಗೆ ಪಾತ್ರವಾಗಿದ್ದರು. 

ಪಿಟ್ಸ್‌ಬರ್ಗ್‌ನಲ್ಲಿ ಜನಿಸಿದ್ದ ಮೆಕ್‌ ಮಿಲ್ಲರ್‌ ಶಾಲೆಯಲ್ಲಿರುವಾಗಲೆ ಗಾಯಕನಾಗಿ ಹೊರ ಹೊಮ್ಮಿದ್ದರು. 15 ರ ಹರೆಯದಲ್ಲಿ  ಎಝ್ ಮ್ಯಾಕ್‌ ಎಂಬ ಹೆಸರಿನಲ್ಲಿ ತನ್ನ ಹಾಡುಗಳ ಮೂಲಕ ಗಮನ ಸೆಳೆದಿದ್ದರು. 2013 ರಲ್ಲಿ ಎಂಟಿವಿಯ ರಿಯಾಲಿಟಿ ಶೋ ಮೂಲಕ ಖ್ಯಾತಿಗೆ ಬಂದಿದ್ದರು. 

ಪ್ರಖ್ಯಾತ ಗಾಯಕರಾಗಿದ್ದ ಕೆಂಡ್ರಿಕ್‌ ಲಾಮರ್‌ ಮತ್ತು ಫಾರ್ರೆಲ್‌ ವಿಲಿಯಮ್ಸ್‌ ಅವರೊಂದಿಗೆ ಜುಗಲ್‌ಬಂದಿ ಮಾಡಿಯೂ ಗಮನ ಸೆಳೆದಿದ್ದರು. 

ಬೀಟ್ಸ್‌ಗಳ ಜೊತೆಗೆ ಹಾಡುತ್ತಿದ್ದುದು ಮೆಕ್‌ ಮಿಲ್ಲರ್‌ ಹೆಚ್ಚುಗಾರಿಕೆಯಾಗಿತ್ತು, ಹೆಚ್ಚಿನ ರ‍್ಯಾಪರ್‌ಗಳಿಗೆ ಬೀಟ್ಸ್‌ಗಳ ಜೊತೆಗೆ ಹಾಡುವುದು ಕಷ್ಟಕರವಾಗಿತ್ತು. ಪಿಯಾನೋವನ್ನು 6 ವರ್ಷದ ಬಾಲಕನಿರುವಾಗಲೇ ಅಭ್ಯಸಿಸಲು ಆರಂಭಿಸಿದ್ದರು. ಡ್ರಮ್ಸ್‌ಗಳನ್ನೂ ಆಕರ್ಷಕವಾಗಿ ಬಾರಿಸುತ್ತಿದ್ದ ಅವರು ಪಾಶ್ಚಾತ್ಯ ಸಂಗೀತ ಲೋಕದ ದೈತ್ಯ ಪ್ರತಿಭೆಯಾಗುವ ಎಲ್ಲಾ ಲಕ್ಷಣಗಳಿದ್ದವು. 

ಪ್ರೇಯಸಿಯಿಂದ ದೂರವಾಗಿದ್ದ ಮೆಕ್‌ 
ಪ್ರೇಯಸಿ , ಗಾಯಕಿ ಅರಿಯಾನಾ ಗ್ರ್ಯಾಂಡೆ ಅವರಿಂದ ದೂರಾದ ಬಳಿಕ ಮೆಕ್‌ ಅಮೆರಿಕದಲ್ಲಿ ಭಾರಿ ಸುದ್ದಿಯಾಗಿದ್ದರು.
ಅರಿಯಾನಾ  ಮೆಕ್‌ ಜೋಡಿ 2017 ರಲ್ಲಿ ಜೊತೆಯಾಗಿ ಹಲವು ಕಾರ್ಯಕ್ರಮಗಳನ್ನು ನೀಡಿ ಯುವ ಜನತೆಯನ್ನು ಹುಚ್ಚೆಬ್ಬಿಸಿದ್ದರು. 

ಪ್ರೇಯಸಿ ದೂರಾದ ಬಳಿಕವೂ ಕಾರ್ಯಕ್ರಮಗಳನ್ನು ಮುಂದುವರಿಸಿದ್ದ ಮೆಕ್‌ ಮಿಲ್ಲರ್‌ ತನ್ನ ವಿರುದ್ಧ ಕೇಳಿ ಬರುತ್ತಿದ್ದ ಯಾವ ಟೀಕೆಗೂ ತಲೆ ಕೆಡಿಸಿಕೊಂಡಿರಲಿಲ್ಲ. 

ಮಿಲ್ಲರ್‌ ನಿಧನಕ್ಕೆ ವಿಶ್ವದ ಹಲವಾರು ರ‍್ಯಾಪ್‌ ಗಾಯಕರು ಕಂಬನಿ ಮಿಡಿದಿದ್ದಾರೆ. ಅಭಿಮಾನಿಗಳು ಕಂಬನಿ ಸುರಿಸಿದ್ದಾರೆ.

ಟಾಪ್ ನ್ಯೂಸ್

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

yaksh

Kundapura: ಕಳಚಿದ ಕೊಂಡಿ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ

Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kambalaHigh-tech touch for Kambala race

Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ

JIO SPACE FIBER 1

JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?

thumb news web exclusive uv (2) (1)

“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…

thumb web ex (1) (1) (1) (1) (1) (1) copy (1)

ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!

web exclusive keer

ಒಂದು ಜಾಹೀರಾತು ದೇಶಕ್ಕೆ ಬೆಂಕಿ ಹಚ್ಚಿತ್ತು.. ಏನಿದು ಪೆಪ್ಸಿಯ ನಂಬರ್ ಫೀವರ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.