ಮೋಡಗಳ ಹೊರೆ ಹೊತ್ತಿರುವ ದ್ವೀಪ “ಲಿಟ್ಲಾ ಡೆಮುನ್” ಬಗ್ಗೆ ಗೊತ್ತಿರಲಿ!


Team Udayavani, Oct 5, 2018, 6:01 PM IST

litla.jpg

ಜೋಡಿ ಕೊರಳಿನ ಪರ್ವತ ಎಂದು ಕರೆಸಿಕೊಳ್ಳುವ ಈ ಪರ್ವತವಿರುವುದು ಡೆನ್ಮಾರ್ಕ್ ನಲ್ಲಿ. ಇದರ ಮೇಲೇ ಹಾದುಹೋಗುವ ಬಿಳಿ ಮೋಡಗಳನ್ನು ನೋಡಲೆಂದೇ ಸಾವಿರಾರು ಪ್ರವಾಸಿಗರು ಆಗಮಿಸುತ್ತಾರೆ!

ಹಸುರಿನ ಹಚ್ಚಡ ಹೊದ್ದಿರುವ ಪರ್ವತದ ಮೇಲುಭಾಗದಲ್ಲಿ ಹಾಲಿನ ಕೆನೆಯಂತೆಯೋ ಹತ್ತಿಯ ಮೂಟೆಯಂತೆಯೋ ಕಾಣುವ ಬಿಳಿಯ ಮೋಡಗಳ ರಾಶಿಯ ಅನನ್ಯ ನೋಟ ವರ್ಷದ ಎಲ್ಲ ದಿನಗಳಲ್ಲಿಯೂ ನೋಡಲು ಸಿಗುತ್ತದೆ. ಜಗತ್ತಿನ ಬೇರೆ ಎಲ್ಲಿಯೂ ಇಂಥ ಅಪರೂಪದ ದೃಶ್ಯವನ್ನು ಏಕಪ್ರಕಾರವಾಗಿ ನೋಡಲು ಸಾಧ್ಯವಿಲ್ಲ ಎನ್ನುವ ಕಾರಣಕ್ಕೆ ಸನಿಹದ ಹಲ್ಟಾ ಮತ್ತು ಸ್ಯಾಂಡ್ವಿಕ್ ಎಂಬ ಹಳ್ಳಿಗಳಿಗೆ ಸಾವಿರಾರು ಪ್ರವಾಸಿಗರು ಬರುತ್ತಾರೆ. ಅಲ್ಲಿ ನಿಂತು ನಿಸರ್ಗದ ಈ ವಿಶೇಷ ಸೊಬಗನ್ನು ಸವಿದು ಹೋಗುತ್ತಾರೆ. ಕಠಿನವಾದ ದ್ವೀಪಕ್ಕೆ ಹೋಗುವುದು ಶ್ರಮದಾಯಕವಾದ ಕಾರಣ ದೂರದಲ್ಲಿಯೇ ನಿಂತು ಇದರ ನೋಟವನ್ನು ಆಸ್ವಾದಿಸಿ ಹೋಗುವವರು ಸಂಖ್ಯೆಯೇ ದೊಡ್ಡದು.

ಮೋಡಗಳ ಹೊರೆ ಹೊತ್ತಿರುವ ಈ ಲಿಟ್ಲಾ ಡೆಮುನ್ ದ್ವೀಪವಿರುವುದು ಡೆನ್ಮಾರ್ಕಿನಲ್ಲಿ. ಅಲ್ಲಿರುವ 18 ಪ್ರಮುಖ ದ್ವೀಪಗಳಲ್ಲಿ ಇದು ಚಿಕ್ಕದು.ಸುವಾರೊ ಮತ್ತು ಸ್ಟೋರಾ ಎಂಬ ದ್ವೀಪಗಳ ನಡುವೆ ಇರುವ ಈ ಲಿಟ್ಲಾ ಡೆಮುನ್ ದ್ವೀಪ 250 ಚದರ ಎಕರೆಗಳಿಗಿಂತಲೂ ಸಣ್ಣದು. ಇದರಲ್ಲಿರುವ ಪರ್ವತದ ಮೇಲಿಂದ ಸದಾ ಕಾಣುವ ಚಪ್ಪರದಂತಿರುವ ಮೋಡಗಳಿಗೆ ವೈಜ್ಞಾನಿಕವಾಗಿ ‘ಲೆಂಟಿಕ್ಯೂಲರ್’ ಮೋಡಗಳೆಂದು ಕರೆಯುತ್ತಾರೆ. ಕ್ಯಾಮರಾದ ಲೆನ್ಸಿನಂತೆ ಅವು ಕಾಣಿಸುತ್ತವೆ. ಈ ಪರ್ವತದ ಹೆಸರಿಗೆ ‘ಜೋಡಿ ಕೊರಳಿನ ಪರ್ವತ’ (ಸ್ಲೆಟನಿನ್) ಎಂಬ ಅರ್ಥವಿದೆಯಂತೆ.

ಖಾಸಗಿಯವರ  ಒಡೆತನ
ದ್ವೀಪದ ಮೂರನೆಯ ಒಂದು ಭಾಗ ಪೂರ್ಣವಾಗಿ ಬಂಡೆಗಳಿಂದ ತುಂಬಿದೆ. ಉಳಿದ ಭಾಗದಲ್ಲಿರುವುದೇ ಮೋಡ ಹೊತ್ತಿರುವ ಸ್ಲೆಟಿನಿನ್ ಪರ್ವತ. 13ನೆಯ ಶತಮಾನದಲ್ಲಿ ಉತ್ತರ ಯುರೋಪಿನಿಂದ ಇಲ್ಲಿಗೆ ಗಿಡ್ಡವಾದ ಕಪ್ಪು ಉಣ್ಣೆಯ ಕುರಿ ಜಾತಿಗಳನ್ನು ತಂದುಬಿಡಲಾಯಿತು. ಇಲ್ಲಿರುವ ಹಸುರನ್ನು ಮೇದು ಅವುಗಳ ಸಂತತಿ ಸಾವಿರಾರು ಸಂಖ್ಯೆಗೇರಿದೆ. ನಿರ್ಜನವಾಗಿರುವ ವಾತಾವರಣ ಅವುಗಳ ಬೆಳವಣಿಗೆಗೆ ಪೂರಕವಾಗಿದೆ. ಆದರೆ ಶರತ್ಕಾಲ ಬಂದಾಗ ಮೀನುಗಾರಿಕಾ ದೋಣಿಗಳಲ್ಲಿ ಜನ ದ್ವೀಪಕ್ಕೆ ಬರುತ್ತಾರೆ. ಕುರಿಗಳ ವಾಸಸ್ಥಾನದ ಬಳಿ ಹಗ್ಗದ ಉರುಳುಗಳನ್ನು ಎಸೆಯುತ್ತಾರೆ. ಅವುಗಳ ಕಾಲುಗಳು ಈ ಉರುಳಿನಲ್ಲಿ ಸಿಲುಕಿದಾಗ ಸುಲಭವಾಗಿ ಹಿಡಿದು ಹೋಗಿ ಮಾಂಸಾಹಾರಕ್ಕೆ ಬಳಸುತ್ತಾರೆ.

ಒಂದು ದೋಣಿಯಲ್ಲಿ ಹದಿನೈದು ಕುರಿಗಳನ್ನು ಸಾಗಿಸಬಹುದು.ಕುರಿ ಹಿಡಿಯುವವರು ಬಿಟ್ಟು ಹೋದ ಹಗ್ಗಗಳನ್ನು ಉಪಯೋಗಿಸಿ ದ್ವೀಪದ ವೀಕ್ಷಣೆಗೆ ಬರುವ ಪ್ರವಾಸಿಗರು ದುರ್ಗಮವಾದ ಪರ್ವತವನ್ನು ಏರುತ್ತಾರೆ, ಬಿಳಿಯ ಮೋಡದ ಹಂದರವನ್ನು ಕೈಯಲ್ಲಿ ಹಿಡಿಯಲು ಮುಂದಾಗುತ್ತಾರೆ.

ಕಡಲು ಹಕ್ಕಿಗಳ ವಾಸ
ದ್ವೀಪ ಒಂದು ಪಕ್ಷಿಧಾಮವೆಂಬ ಖ್ಯಾತಿಯನ್ನೂ ಪಡೆದಿದೆ. ಯುರೋಪಿಯನ್ ಪೆಟ್ರೆಲ್ಸ್ ಮತ್ತು ಅಟ್ಲಾಂಟಿಕ್ ಪಫಿನ್ಸ್ ಜಾತಿಯ ಸಾವಿರಾರು ಕಡಲು ಹಕ್ಕಿಗಳನ್ನು ನೋಡುವ ಅಪೂರ್ವ ಅವಕಾಶವೂ ಇಲ್ಲಿದೆ.ಬಹು ಹಿಂದೆ ರಾಜ ಬ್ರೆಸ್ಟುರ್ ಮತ್ತು ಗೊಟಿಸ್ಕೆಗ್ಜರ್ ಎಂಬಿಬ್ಬರ ನಡುವೆ ಲಿಟ್ಲಾ ಡೆಮುನ್ ದ್ವೀಪದಲ್ಲಿ ಯುದ್ಧ ನಡೆದ ದಾಖಲೆಗಳಿವೆ. ಡ್ಯಾನಿಷ್ ಸಾಮ್ರಾಜ್ಯಕ್ಕೆ ಸೇರಿದ ದ್ವೀಪವನ್ನು 1852 ರಲ್ಲಿ 9640 ಡಿಕ್ ಬೆಲೆಗೆ ಹರಾಜು ಹಾಕಲಾಯಿತು.ಖಾಸಗಿಯವರು ಅದನ್ನು ಕೊಂಡುಕೊಂಡಿದ್ದರು. ಸ್ವಲ್ಪ ಸಮಯ ಇದೊಂದು ಮಾರಾಟ ಕೇಂದ್ರವಾಗಿ ಬಳಕೆಯಲ್ಲಿತ್ತು. ಬೇರೆಯವರು ಬಾಡಿಗೆಗೂ ಪಡೆದು ಬಳಸಿಕೊಂಡಿದ್ದರು. ಈಗಲೂ ಅದರ ಒಡೆತನ ಖಾಸಗಿಯವರದ್ದು. ಆದರೆ ದ್ವೀಪ ಕಡಿದಾಗಿರುವುದರಿಂದ ಜನ ನೆಲೆಸಲು ಅಲ್ಲಿ ಆಸ್ಪದವಿಲ್ಲ.  

ಟಾಪ್ ನ್ಯೂಸ್

ನಾರಾಯಣ್‌,ಬಟ್ಲರ್‌ ಶತಕ ಮೇಲಾಟ; ರನ್‌ ಚೇಸ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ಗೆ ಬೃಹತ್‌ ಗೆಲುವು

ನಾರಾಯಣ್‌,ಬಟ್ಲರ್‌ ಶತಕ ಮೇಲಾಟ; ರನ್‌ ಚೇಸ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ಗೆ ಬೃಹತ್‌ ಗೆಲುವು

ನ್ಯಾಯಾಲಯದಲ್ಲೇ ಕುಸಿದು ಬಿದ್ದ ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ಮೈಕಲ್‌ ಸ್ಲೇಟರ್‌

ನ್ಯಾಯಾಲಯದಲ್ಲೇ ಕುಸಿದು ಬಿದ್ದ ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ಮೈಕಲ್‌ ಸ್ಲೇಟರ್‌

FIDE Candidates 2024; ಜಂಟಿ ಅಗ್ರಸ್ಥಾನದಲ್ಲೇ ಉಳಿದ ಗುಕೇಶ್‌

FIDE Candidates 2024; ಜಂಟಿ ಅಗ್ರಸ್ಥಾನದಲ್ಲೇ ಉಳಿದ ಗುಕೇಶ್‌

ಹೃದಯ ಗೆದ್ದ ದಿನೇಶ್‌ ಕಾರ್ತಿಕ್‌; ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ?

ಹೃದಯ ಗೆದ್ದ ದಿನೇಶ್‌ ಕಾರ್ತಿಕ್‌; ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ?

IPL ಬ್ರೇಕ್‌ ಪಡೆದ ಗ್ಲೆನ್‌ ಮ್ಯಾಕ್ಸ್‌ವೆಲ್‌

IPL ಬ್ರೇಕ್‌ ಪಡೆದ ಗ್ಲೆನ್‌ ಮ್ಯಾಕ್ಸ್‌ವೆಲ್‌

Olympic Games Paris 2024; ಬೆಳಗಿತು ಪ್ಯಾರಿಸ್‌ ಒಲಿಂಪಿಕ್‌ ಜ್ಯೋತಿ

Olympic Games Paris 2024; ಬೆಳಗಿತು ಪ್ಯಾರಿಸ್‌ ಒಲಿಂಪಿಕ್‌ ಜ್ಯೋತಿ

UPSC Exam: 30ಕ್ಕಿಂತ ಅಧಿಕ ಕನ್ನಡಿಗರ ಆಯ್ಕೆ

UPSC Exam: 30ಕ್ಕಿಂತ ಅಧಿಕ ಕನ್ನಡಿಗರ ಆಯ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kambalaHigh-tech touch for Kambala race

Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ

JIO SPACE FIBER 1

JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?

thumb news web exclusive uv (2) (1)

“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…

thumb web ex (1) (1) (1) (1) (1) (1) copy (1)

ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!

web exclusive keer

ಒಂದು ಜಾಹೀರಾತು ದೇಶಕ್ಕೆ ಬೆಂಕಿ ಹಚ್ಚಿತ್ತು.. ಏನಿದು ಪೆಪ್ಸಿಯ ನಂಬರ್ ಫೀವರ್

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ನಾರಾಯಣ್‌,ಬಟ್ಲರ್‌ ಶತಕ ಮೇಲಾಟ; ರನ್‌ ಚೇಸ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ಗೆ ಬೃಹತ್‌ ಗೆಲುವು

ನಾರಾಯಣ್‌,ಬಟ್ಲರ್‌ ಶತಕ ಮೇಲಾಟ; ರನ್‌ ಚೇಸ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ಗೆ ಬೃಹತ್‌ ಗೆಲುವು

ನ್ಯಾಯಾಲಯದಲ್ಲೇ ಕುಸಿದು ಬಿದ್ದ ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ಮೈಕಲ್‌ ಸ್ಲೇಟರ್‌

ನ್ಯಾಯಾಲಯದಲ್ಲೇ ಕುಸಿದು ಬಿದ್ದ ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ಮೈಕಲ್‌ ಸ್ಲೇಟರ್‌

FIDE Candidates 2024; ಜಂಟಿ ಅಗ್ರಸ್ಥಾನದಲ್ಲೇ ಉಳಿದ ಗುಕೇಶ್‌

FIDE Candidates 2024; ಜಂಟಿ ಅಗ್ರಸ್ಥಾನದಲ್ಲೇ ಉಳಿದ ಗುಕೇಶ್‌

ಹೃದಯ ಗೆದ್ದ ದಿನೇಶ್‌ ಕಾರ್ತಿಕ್‌; ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ?

ಹೃದಯ ಗೆದ್ದ ದಿನೇಶ್‌ ಕಾರ್ತಿಕ್‌; ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ?

IPL ಬ್ರೇಕ್‌ ಪಡೆದ ಗ್ಲೆನ್‌ ಮ್ಯಾಕ್ಸ್‌ವೆಲ್‌

IPL ಬ್ರೇಕ್‌ ಪಡೆದ ಗ್ಲೆನ್‌ ಮ್ಯಾಕ್ಸ್‌ವೆಲ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.