ಜಗತ್ತನ್ನೇ ಮೋಡಿ ಮಾಡಿದ “ಝೂಝೂ” ಹಿಂದಿನ ನಿಜವಾದ ಹೀರೋ ಯಾರು ಗೊತ್ತಾ?


ಮಿಥುನ್ ಪಿಜಿ, Dec 17, 2019, 6:00 PM IST

zoo-zoo

ಝೂಝೂ ಗಳನ್ನು ಯಾರು ತಾನೇ ಮರೆಯಲು ಸಾಧ್ಯ ! ಕೋಟ್ಯಾಂತರ ಜನರ ಮನಗೆದ್ದ ಈ ಜಾಹೀರಾತು ‘ಟೆಲಿವಿಷನ್ ಜಾಹೀರಾತುಗಳಿಗೆ’ ಹೊಸತನವನ್ನು ತಂದುಕೊಟ್ಟಿದ್ದನ್ನು ಕಾಣಬಹುದು.  ಗ್ರಾಹಕರನ್ನು ಆಕರ್ಷಿಸಲು ಝೂಝೂ ಎಂಬ ವಿನೂತನ ಪ್ರಯತ್ನಕ್ಕೆ ವೊಡಾಪೋನ್  ಸಂಸ್ಥೆ ಮುಂದಾಗಿ ಅದರಲ್ಲಿ ಯಶಸ್ವಿಯೂ ಆಗಿತ್ತು. 2009ರ ಐಪಿಎಲ್‌ ನಲ್ಲಂತೂ ಈ ಜಾಹೀರಾತು ಬಹುಕೋಟಿ  ಜನರ ಆಕರ್ಷಣೆಯ ಕೇಂದ್ರಬಿಂದುವಾಗಿತ್ತು. ಯಾಕೆಂದರೇ ಐಪಿಎಲ್ ಗಿಂತಲೂ ಝೂಝೂ ಗಳನ್ನು ನೋಡಲೆಂದೇ ಜನರು ಮುಗಿಬೀಳುತ್ತಿದ್ದರು. ಇಂತಹ ವೊಡಾಫೋನ್ ನ ಝೂಝೂ ಜಾಹೀರಾತುಗಳಿಗೆ ಈಗಲೂ ಜನಪ್ರಿಯತೆಯಿದೆ.

ಭಾರತೀಯ ಟೆಲಿಕಾಂ ಮಾರುಕಟ್ಟೆಯಲ್ಲಿ ಅತೀ ದೊಡ್ಡ ಸಂಸ್ಥೆಯಾಗಿದ್ದ ವೊಡಾಫೋನ್, ಇತರ ಟೆಲಿಕಾಂ ಕಂಪೆನಿಗಳಿಗಿಂತ ಭಿನ್ನವಾಗಿ ಮಾರುಕಟ್ಟೆಯಲ್ಲಿ ಗುರುತಿಸಿಕೊಳ್ಳಲು ಝೂಝೂ ಗೂ ಮೊದಲು ಪುಟ್ಟ ನಾಯಿಮರಿಯನ್ನು ಜಾಹೀರಾತಿಗೆ ಬಳಸಿಕೊಂಡು ಹೊಸ ಭಾಷ್ಯ ಬರೆದಿತ್ತು. ಇದಾದ ಬಳಿಕ ಝೂಝೂ ಗಳ ಮೂಲಕವೇ ಹೆಚ್ಚು ಸದ್ದು ಮಾಡಿತ್ತು. ವೇಗವಾಗಿ ಮತ್ತು ಸರಳವಾಗಿ ಎಲ್ಲರಿಗೂ ಅರ್ಥವಾಗುವ ಈ ಜಾಹೀರಾತು ಎಷ್ಟು ಮೋಡಿ ಮಾಡಿತ್ತೆಂದರೇ ಮತ್ತೊಂದು ಜಾಹೀರಾತು ಬರುವುದನ್ನೇ ಜನರು ಕಾತರದಿಂದ ಕಾಯುತ್ತಿದ್ದರು.

ಕೇವಲ ಸಂಜ್ಞೆ, ಮೂಕಾಭಿನಯದಲ್ಲೇ 15-20 ಸೆಕೆಂಡುಗಳಲ್ಲಿ ಜನರನ್ನು ಹಿಡಿದಿಟ್ಟುಕೊಂಡ  ಈ ಝೂಝೂಗಳು ಒಂದು ರೀತಿಯ ಆಜಾತಶತ್ರುಗಳ ರೀತಿ.  ಪ್ರತಿಯೊಬ್ಬರು ಆ ಜಾಹೀರಾತುಗಳನ್ನು ಇಷ್ಟ ಪಡುತ್ತಿದ್ದರು. ಇದು ಇತರ ಟೆಲಿಕಾಂ ಕಂಪೆನಿಗಳಿಗೆ ಮಾರುಕಟ್ಟೆಯಲ್ಲಿ ದೊಡ್ಡ ಹೊಡೆತವನ್ನೇ ನೀಡಿತ್ತು.

ಈ ಜಾಹೀರಾತು ನೋಡುವುದಕ್ಕೆ ಯಾವುದೋ ಅನ್ಯಗ್ರಹದಿಂದ ಬಂದಂತೆ ಕಾಣುವ ಜೀವಿಗಳ ಕಾರ್ಟೂನ್ ಅಥವಾ ಕಂಪ್ಯೂಟರ್ ಆ್ಯನಿಮೇಶನ್ ಗಳಿಂದ ನಿರ್ಮಾಣ ಮಾಡಿದ ಪಾತ್ರಗಳಂತೆ ಕಂಡರೂ ಇವು ಅ್ಯನಿಮೇಶನ್  ಪಾತ್ರವಲ್ಲ. ಬದಲಾಗಿ ಮುಖವಾಡ ಮತ್ತು ವೇಷ ಧರಿಸಿ ಅಭಿನಯ ಮಾಡಿದ ಮನುಷ್ಯರೇ ಈ ಜಾಹೀರಾತಿನ ಹೀರೋಗಳು. ಇಲ್ಲಿ ಯಾವುದೇ ಗ್ರಾಫಿಕ್ಸ್ ಇಲ್ಲಿ ಬಳಕೆಯಾಗಿಲ್ಲ ಎನ್ನುವುದೇ ವಿಶೇಷ.

ಝೂಝೂ ಗಳಿಗೆ ಬಲೂನ್ ಮಾದರಿಯ ದೇಹ, ಮೊಟ್ಟೆಯಾಕಾರದ ತಲೆಗಳಿದ್ದವು. ಚಿತ್ರಕಥೆಗಳಿಗನುಗುಣವಾಗಿ ಹಾಸ್ಯದ ಹಿನ್ನಲೆಯಲ್ಲಿ ಅಭಿನಯಗಳಿರುತ್ತಿತ್ತು. ಮಾತ್ರವಲ್ಲದೇ ಹಲವು ಪಾತ್ರಗಳು ಈ ಕಥೆಯಲ್ಲಿ ಮೂಡಿಬರುತ್ತಿದ್ದವು. ಈ ಜಾಹೀರಾತುಗಳನ್ನು Ogilvy &mather ಎಂಬ ಏಜೆನ್ಸಿ ನಿರ್ಮಾಣ ಮಾಡುತ್ತಿದ್ದವು. ಪ್ರಮುಖವಾಗಿ ಬೆಂಗಳೂರು ಮೂಲದ ನಿರ್ವಾಣ ಫಿಲಂಸ್, ದಕ್ಷಿಣ ಆಫ್ರಿಕಾದ ಕೆಪ್ ಟೌನ್ ನಲ್ಲಿ ಇದರ ಚಿತ್ರೀಕರಣ ಮಾಡುತ್ತಿತ್ತು. ಪ್ರಕಾಶ್ ವರ್ಮಾ ಎಂಬುವವರು ಇದರ ನಿರ್ದೇಶಕರಾಗಿದ್ದರು.

ಝೂಝೂ ಎಂಬ ಪರಿಕಲ್ಪನೆಯ ಹಿಂದೆ ರಾಜೀವ್ ರಾವ್ ಎಂಬ ವ್ಯಕ್ತಿಯಿದ್ದಾರೆ. ಇವರು ಚಿತ್ರಕಥೆಯನ್ನು ಕೂಡ ಬರೆಯುತ್ತಿದ್ದರು. 10-15 ಸೆಕೆಂಡ್ ಗಳು ಇರುವ ಈ ವಿಡಿಯೋದ ಚಿತ್ರೀಕರಣ ಬರೋಬ್ಬರಿ 10 ದಿನ ನಡೆಯುತ್ತಿದ್ದವು. ಮಾತ್ರವಲ್ಲದೆ ಒಂದು ತಿಂಗಳ ಕಾಲ  ಪ್ರಿ-ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದ್ದವು. ಇದಕ್ಕೆ ತಗಲುತ್ತಿದ್ದ ವೆಚ್ಚ 3ಕೋಟಿ ರೂಪಾಯಿ !

Ogilvy &mather ಸಂಸ್ಥೆ ವೊಡಾಫೋನ್ ಜಾಹೀರಾತುಗಳ ನಿರ್ಮಾಣದ ಹೊಣೆ ಹೊತ್ತಿದ್ದರಿಂದ ಐಪಿಎಲ್ ಸೀಸನ್ 2ರ ವೇಳೆಗೆ 30 ಸರಣಿ ಜಾಹೀರಾತುಗಳನ್ನು ಚಿತ್ರಿಕರಿಸಿತ್ತು. ಜನರು ಐಪಿಎಲ್ ಗಿಂತಲೂ ಈ ಜಾಹೀರಾತಿನ ಕಡೆಗೆ ಹೆಚ್ಚು ಆಕರ್ಷಿತರಾಗಿದ್ದರು ಎನ್ನುವುದರಲ್ಲಿ ಯಾವುದೇ ಸಂದೇಹವಿರಲಿಲ್ಲ. ಮಾತ್ರವಲ್ಲದೆ ವಿಶ್ವಕಪ್ ಕ್ರಿಕೆಟ್ ಸಂದರ್ಭದಲ್ಲೂ ಇದು ಜನಾಕರ್ಷಣೆಯಾಗಿದ್ದವು.

ಝೂಝೂ ಜಾಹೀರಾತು ಅಷ್ಟೇ ಅಲ್ಲ. ಝೂಝೂ ಕ್ಯಾಲೆಂಡರ್‌ ಸೇರಿದಂತೆ ಬೇರೆ ಬೇರೆ ಹೊಸ ಉತ್ಪನ್ನಗಳು ಮಾರುಕಟ್ಟೆಗೆ ಬಂದಿವೆ. ಹೀಗಾಗಿ ಈ ಜಾಹಿರಾತನ್ನು ನಿರ್ಮಾಣ ಮಾಡಿದ ಓ&ಎಂ (O&M) ಕಂಪೆನಿಯೇ ಝೂಝೂ ಕ್ಯಾಲೆಂಡರ್‌ನ್ನು ಕೂಡ ಬಿಡುಗಡೆ ಮಾಡಿದೆ. ಮಾತ್ರವಲ್ಲದೆ ಇತ್ತೀಚಿನ ವರ್ಷಗಳಲ್ಲಿ ಝೂಝೂ ನಿಂಜಾ ಕೂಡ ಜನರ ಮೆಚ್ಚುಗೆ ಗಳಿಸಿತ್ತು. ಸಿಮ್ ಕಾರ್ಡ್ ಇಲ್ಲದ ಸ್ಮಾರ್ಟ್ ಫೋನ್ ಒಂದನ್ನು ಹುಡುಗನೋರ್ವ ಪ್ರಿಯತಮೆಗೆ ಗಿಫ್ಟ್ ಕೊಟ್ಟಾಗ, ಸಿಮ್ ಕಾರ್ಡ್ ಇಲ್ಲವೆಂದು ಆಕೆ ಕೋಪಗೊಳ್ಳುತ್ತಾಳೆ.  ಆಗ ಹುಡುಗನನ್ನು ಕಾಪಾಡಲು ಹೊರಟ ಝೂಝೂ ನಿಂಜಾ, ಅವರಿರುವ ಸ್ಥಳಕ್ಕೆ ಹೊಸ ಸಿಮ್ ಕಾರ್ಡ್ ಅನ್ನು ಕೊಂಡೊಯ್ಯುತ್ತದೆ. ಈ ಜಾಹೀರಾತು ಪ್ರಪಂಚದಾದ್ಯಂತ ಟ್ರೆಂಡ್ ಆಗಿತ್ತು.

ಕಾಲಕ್ರಮೇಣ ಈ ಝೂಝೂ ಗಳ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಬಹಳ ಜನಪ್ರಿಯವಾದವು. ಕೆಲವು ವರುಷಗಳ ಹಿಂದೆ ಫೇಸ್ ಬುಕ್, ಟ್ಟಿಟ್ಟರ್, ಆರ್ಕುಟ್, ಯೂಟ್ಯೂಬ್ ಸೇರಿದಂತೆ ಸರಿಸುಮಾರು 200 ಪೇಜ್ ಗಳಲ್ಲಿ ಪ್ರತಿನಿತ್ಯ ಲಕ್ಷಾಂತರ ಹಿಟ್ಸ್ ಗಳನ್ನು ಪಡೆಯುತ್ತಿದ್ದವು. ಇಂದಿಗೂ ಕೂಡ ಜನರ ಮನಸ್ಸಿನಲ್ಲಿ ಈ ಜಾಹೀರಾತುಗಳು ಅಚ್ಚಳಿಯದೇ ಉಳಿದಿದೆ.

ಈ ಜಾಹೀರಾತು ಕಂಡು  ಪ್ರಪಂಚದಾದ್ಯಂತ ಹಲವು ಪ್ರಸಿದ್ದ ವ್ಯಕ್ತಿಗಳು ಮೂಕವಿಸ್ಮಿತರಾಗಿದ್ದಾರೆ .ಮಾತ್ರವಲ್ಲದೆ ತಮ್ಮದೇ ಆದ ರೀತಿಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. “In a world where we seem focused on a recession, an election, and most things dull and boring, the Zoozoo’s are a breath of fresh air”ಎಂದಿದ್ದಾರೆ.

-ಮಿಥುನ್ ಮೊಗೇರ

ಟಾಪ್ ನ್ಯೂಸ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

BJP Minority Morcha Leader Expelled

Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kambalaHigh-tech touch for Kambala race

Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ

JIO SPACE FIBER 1

JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?

thumb news web exclusive uv (2) (1)

“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…

thumb web ex (1) (1) (1) (1) (1) (1) copy (1)

ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!

web exclusive keer

ಒಂದು ಜಾಹೀರಾತು ದೇಶಕ್ಕೆ ಬೆಂಕಿ ಹಚ್ಚಿತ್ತು.. ಏನಿದು ಪೆಪ್ಸಿಯ ನಂಬರ್ ಫೀವರ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

8-uv-fusion

Photography: ನಿಮ್ಮ ಬೊಗಸೆಯಲ್ಲಿ ಇರಲಿ ನೆನಪುಗಳು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

7-uv-fusion

UV Fusion: ಚುಕ್ಕಿ ತಾರೆ ನಾಚುವಂತೆ ಒಮ್ಮೆ ನೀ ನಗು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.