ಭೂಮಿ ಪೂಜೆ: ವಿದೇಶಿ ಮಾಧ್ಯಮಗಳಲ್ಲೇನಿತ್ತು?


Team Udayavani, Aug 6, 2020, 8:25 AM IST

ಭೂಮಿ ಪೂಜೆ: ವಿದೇಶಿ ಮಾಧ್ಯಮಗಳಲ್ಲೇನಿತ್ತು?

ವಾಷಿಂಗ್ಟನ್‌: ಕ್ಯಾಪಿಟೋಲ್‌ ಹಿಲ್‌ನ ಎದುರು ಕೇಸರಿ ಧ್ವಜ ಹಿಡಿದು ಸಂಭ್ರಮಿಸಿದ ಅನಿವಾಸಿ ಭಾರತೀಯರು.

ಮಣಿಪಾಲ: ಅಯೋಧ್ಯೆಯ ರಾಮ ದೇವಾಲಯ ಭೂಮಿ ಪೂಜೆಯ ಸುದ್ದಿ ಜಗತ್ತಿನ ಹಲವು ಸುದ್ದಿ ಮಾಧ್ಯಮಗಳಲ್ಲಿ ಅನುರಣಿಸಿವೆ.ವಿಶ್ವ ಮಾಧ್ಯಮಗಳ ಮುಖ್ಯಾಂಶಗಳಲ್ಲಿ ಅಯೋಧ್ಯೆಯೇ ರಾರಾಜಿಸುತ್ತಿದೆ. ಸಿಎನ್‌ಎನ್‌, ದಿ ಗಾರ್ಡಿಯನ್‌, ಬಿಬಿಸಿ, ಅಲ್‌ಜಜೀರಾ ಮತ್ತು ಡಾನ್‌ ಈ ಕಾರ್ಯಕ್ರಮವನ್ನು ಪ್ರಮುಖ ಸುದ್ದಿಯಾಗಿ ತೆಗೆದುಕೊಂಡಿವೆ. ಅಮೆರಿಕದ ಸುದ್ದಿ ತಾಣ ಸಿಎನ್‌ಎನ್‌, ದೇಶದಲ್ಲಿ ಕೊರೊನಾ ವೈರಸ್‌ ಹರಡಿದರೂ ಪ್ರಧಾನಿ ಮೋದಿ ದೇವಾಲಯ ನಿರ್ಮಾಣದ ಭೂಮಿ ಪೂಜೆಯನ್ನು ಮಾಡಿದ್ದಾರೆ ಎಂದು ವರದಿ ಮಾಡಿದೆ. ರಾಮ ದೇವಾಲಯದ ಅಡಿಪಾಯವು ವಾಸ್ತವವಾಗಿ, ಭಾರತದ ಬದಲಾಗುತ್ತಿರುವ ಸಂವಿಧಾನದ ಅಡಿಪಾಯವಾಗಿದೆ ಎಂದು ಪಾಕಿಸ್ಥಾನದ ಪತ್ರಿಕೆ ದಿ ಡಾನ್‌ ಬರೆದಿದೆ.

ಕೊರೊನಾ ಹೊರತಾಗಿಯೂ ಶಿಲಾನ್ಯಾಸ: ಸಿಎನ್‌ಎನ್‌
ಮೋದಿ ಅವರು ಹಿಂದೂಗಳ ಪವಿತ್ರ ಸ್ಥಳದಲ್ಲಿ ರಾಮ್‌ ದೇವಾಲಯದ ಭೂಮಿ ಪೂಜೆಯನ್ನು ನೆರವೇರಿಸಿದ್ದಾರೆ. ಈ ಸ್ಥಳವು ಹಿಂದೂಗಳು ಮತ್ತು ಮುಸ್ಲಿಮರ ನಡುವಿನ ವಿವಾದದ ಮೂಲವಾಗಿದೆ. ಭಾರತದಲ್ಲಿ ಸತತ ಐದು ದಿನಗಳಲ್ಲಿ 50 ಸಾವಿರಕ್ಕೂ ಹೆಚ್ಚು ಹೊಸ ಸೋಂಕು ಪ್ರಕರಣಗಳು ಮುನ್ನೆಲೆಗೆ ಬರುತ್ತಿರುವ ಸಮಯದಲ್ಲಿ ಬುಧವಾರ ಭೂಮಿ ಪೂಜೆ ಕಾರ್ಯಕ್ರಮ ನಡೆಯಿತು ಎಂದಿದೆ. ಸೋಂಕಿನ ವಿಷಯದಲ್ಲಿ ಭಾರತ ವಿಶ್ವದಲ್ಲೇ ಮೂರನೇ ಸ್ಥಾನದಲ್ಲಿದೆ. ಗೃಹ ಸಚಿವ ಅಮಿತ್‌ ಶಾ ಮತ್ತು ಅಯೋಧ್ಯೆಯ ದೇವಾಲಯದ ಅರ್ಚಕರು ಸೇರಿದಂತೆ ನಾಲ್ವರು ಭದ್ರತಾ ಸಿಬಂದಿಗೂ ಸೋಂಕು ತಗುಲಿದೆ ಎಂದು ಸಿಎನ್‌ಎನ್‌ ಹೇಳಿದೆ.

ಮೂರು ತಿಂಗಳ ಮೊದಲೇ ಅಯೋಧ್ಯೆಯಲ್ಲಿ ದೀಪಾವಳಿ: ದಿ ಗಾರ್ಡಿಯನ್‌
ಅಯೋಧ್ಯೆಯಲ್ಲಿ ದೀಪಾವಳಿ ಮೂರು ತಿಂಗಳ ಹಿಂದೆಯೇ ಬಂದಿದೆ ಎಂದು ಬ್ರಿಟಿಷ್‌ ಪತ್ರಿಕೆ ದಿ ಗಾರ್ಡಿಯನ್‌ ಬರೆದಿದೆ. ಅಯೋಧ್ಯಾ ನಗರದಲ್ಲಿ ರಾಮ ದೇವಾಲಯದ ಅಡಿಪಾಯ ಹಾಕಲಾಗುತ್ತಿದೆ. ಇದು ದಶಕಗಳಿಂದ ಭಾರತೀಯ ಇತಿಹಾಸದಲ್ಲಿ ಅತ್ಯಂತ ಭಾವನಾತ್ಮಕ ವಿಷಯವಾಗಿದೆ. ಭಗವಾನ್‌ ರಾಮನು ಹಿಂದೂಗಳಲ್ಲಿ ಅತ್ಯಂತ ಪೂಜ್ಯ. ರಾಮನ ದೇವಾಲಯದ ನಿರ್ಮಾಣವು ಅನೇಕ ಹಿಂದೂಗಳಿಗೆ ಹೆಮ್ಮೆಯ ಕ್ಷಣ ವಾಗಿದೆ. ಭಾರತೀಯ ಮುಸ್ಲಿಮರೂ ಪರೋಕ್ಷವಾಗಿ ರಾಮ ಮಂದಿರವನ್ನು ಬೆಂಬಲಿಸಿದ್ದಾರೆ ಎಂದು ಅದು ಹೇಳಿದೆ.

ನೂತನ ಸಂವಿಧಾನದ ಅಡಿಪಾಯ: ಡಾನ್‌
ಪಾಕಿಸ್ಥಾನ ಪತ್ರಿಕೆ ಡಾನ್‌ ಹಿಂದೂ ದೇವಾಲಯದ ಅಡಿಪಾಯವನ್ನು ಬಾಬರಿ ಮಸೀದಿ ಇದ್ದ ಸ್ಥಳದಲ್ಲಿ ನಿರ್ಮಿಸಲಾಗಿದೆ ಎಂದಿದೆ. ಈ ಸ್ಥಳವು ಸುಮಾರು 500 ವರ್ಷಗಳಿಂದ ಬಾಬರಿ ಮಸೀದಿಯನ್ನು ಹೊಂದಿತ್ತು. ಜಾತ್ಯತೀತ ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಪರಿವರ್ತಿಸುವ ಮತ್ತೂಂದು ಹೆಜ್ಜೆ ಇದಾಗಿದೆ ಎಂಬುದನ್ನು ಬಿಜೆಪಿ ಪರೋಕ್ಷವಾಗಿಒಪ್ಪುತ್ತದೆ ಎಂದು ಭಾರತದ ನೀತಿ ಸಂಶೋಧನಾ ಕೇಂದ್ರದ ಮಾಜಿ ಅಧ್ಯಕ್ಷ ಪ್ರತಾಪ್‌ ಭಾನು ಮೆಹ್ತಾ ಅವರನ್ನು ಉಲ್ಲೇಖೀಸಿ ಡಾನ್‌ ಉಲ್ಲೇಖೀಸಿದೆ. ಭಾರತದ ಮೂಲ ಸಾಂವಿಧಾನಿಕ ಚೌಕಟ್ಟು ಬದಲಾಗುತ್ತಿದೆ ಎಂಬುದನ್ನು ಇದು ಸೂಚಿಸುತ್ತದೆ ಎಂದಿದೆ.

ಜಾತ್ಯತೀತ ಸಿದ್ಧಾಂತದೊಂದಿಗೆ ಹೊಂದಾಣಿಕೆ: ಅಲ್‌ಜಜೀರಾ
ಮಸೀದಿಯ ಸ್ಥಳದಲ್ಲಿ ದೇವಾಲಯವನ್ನು ನಿರ್ಮಿಸಲಾಗುತ್ತಿದೆ ಎಂದು ಕೊಲ್ಲಿ ರಾಷ್ಟ್ರಗಳ ಚಾನೆಲ್‌ ಅಲ್‌ಜಜೀರಾ ಬರೆದಿದೆ. ಭಾರತದ ಜಾತ್ಯತೀತ ಸಿದ್ಧಾಂತವು ರಾಜಿಯಾಗಿದೆ. ಭಾರತದಲ್ಲಿ ಅಧಿಕಾರದಲ್ಲಿದ್ದ ಹಿಂದೂ ರಾಷ್ಟ್ರೀಯವಾದಿ ಭಾರತೀಯ ಜನತಾ ಪಕ್ಷ 1980ರ ದಶಕದಿಂದಲೂ ದೇವಾಲಯದ ಆಂದೋಲನವನ್ನು ನಡೆಸಿತ್ತು. 1992ರಲ್ಲಿ ಹಿಂದೂ ಮೂಲಭೂತವಾದಿಗಳು ಮಸೀದಿಯನ್ನು ಕೆಡವಿದರು. ನವೆಂಬರ್‌ 2019ರಲ್ಲಿ ಸುಪ್ರೀಂ ಕೋರ್ಟ್‌ ಮಸೀದಿಯ ಸ್ಥಳವನ್ನು ಹಿಂದೂಗಳಿಗೆ ನೀಡಿತು. ಈ ನಿರ್ಧಾರಕ್ಕೆ ವ್ಯಾಪಕ ಟೀಕೆಯೂ ವ್ಯಕ್ತವಾಗಿತ್ತು. ಬಾಬ್ರಿ ಉರುಳಿಸುವಿಕೆಯ ಪ್ರಕರಣದ ಕಾನೂನು ವಿಚಾರಣೆ ಇನ್ನೂ ಪೂರ್ಣಗೊಂಡಿಲ್ಲ ಎಂದು ಹೇಳಿದೆ.

ಭಾರತದ ಹಿಂದೂಗಳಿಗೆ ಸಂತಸ: ಎಬಿಸಿ ನ್ಯೂಸ್‌
ಕೊರೊನಾ ಕಾರಣದಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಶಿಲಾನ್ಯಾಸದಲ್ಲಿ ಭಾಗವಹಿಸಿಲ್ಲ. ಈ ಬಗ್ಗೆ ಹಿಂದೂಗಳು ಸಂತಸದಲ್ಲಿದ್ದಾರೆ ಎಂದು ಎಬಿಸಿ ನ್ಯೂಸ್‌ ವರದಿ ಮಾಡಿದೆ. ಈ ಮೊದಲು ಮಸೀದಿ ಇದ್ದ ಜಾಗದಲ್ಲಿ ಪ್ರಧಾನಿ ಮೋದಿ ಅವರು ರಾಮ್‌ ದೇವಸ್ಥಾನದ ಭೂಮಿ ಪೂಜೆಯನ್ನು ಮಾಡಿದರು. ಮೂರರಿಂದ ಮೂರೂವರೆ ವರ್ಷದಲ್ಲಿ ಇಲ್ಲಿ ರಾಮ ದೇವಾಲಯದ ನಿರ್ಮಾಣವಾಗಲಿದೆ. ಇದು ವಿಶ್ವದ ಅತ್ಯಂತ ಭವ್ಯವಾದ ದೇವಾಲಯಗಳಲ್ಲಿ ಒಂದಾಗಲಿದೆ ಎಂದಿದೆ.

ದೇಗುಲ ನಿರ್ಮಾಣಕ್ಕೆ ಸುಪ್ರೀಂ ದಾರಿ: ಬಿಬಿಸಿ
ಭೂಮಿ ಪೂಜೆಯ ವರದಿಯ ಜತೆಗೆ ರಾಮ ದೇವಸ್ಥಾನ ಮತ್ತು ಬಾಬರಿ ಮಸೀದಿ ವಿವಾದವನ್ನೂ ಬಿಬಿಸಿ ಉಲ್ಲೇಖೀಸಿದೆ. 1992ರ ವರೆಗೆ ಇಲ್ಲಿ ಮಸೀದಿ ಇತ್ತು. ಅದನ್ನು ಹಿಂದೂಗಳು ಒಡೆದರು. ಪರಿಣಾಮವಾಗಿ ಎರಡೂ ಎರಡೂ ಸಮುದಾಯಗಳು ಈ ಸ್ಥಳವನ್ನು ಪಡೆದುಕೊಳ್ಳಲು ಕಾನೂನು ಹೋರಾಟ ಮುಂದುವರೆಸಿದವು. ಕಳೆದ ವರ್ಷ ಸುಪ್ರೀಂ ಕೋರ್ಟ್‌ ನೀಡಿದ ತೀರ್ಪು ದೇವಾಲಯ ನಿರ್ಮಾಣಕ್ಕೆ ದಾರಿ ಮಾಡಿಕೊಟ್ಟಿದೆ. ಮುಸ್ಲಿಮರಿಗೆ ಮಸೀದಿ ನಿರ್ಮಾಣಕ್ಕೆ ಪ್ರತ್ಯೇಕ ಸ್ಥಾನ ನೀಡಲಾಗಿದೆ ಎಂದು ವರದಿ ಮಾಡಿದೆ.

ಟಾಪ್ ನ್ಯೂಸ್

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ayodhya: ಪೇಜಾವರ ಶ್ರೀಗಳ ನೇತೃತ್ವದಲ್ಲಿ ಇಂದು ನಡೆದ ಮಂಡಲೋತ್ಸವ

Ayodhya: ಪೇಜಾವರ ಶ್ರೀಗಳ ನೇತೃತ್ವದಲ್ಲಿ ಇಂದು ನಡೆದ ಮಂಡಲೋತ್ಸವ

ram mandir imp

Ayodhya: ವ್ಯಾಟಿಕನ್‌, ಮೆಕ್ಕಾ ಮೀರಿಸಲಿದೆ- ವರ್ಷಕ್ಕೆ ಐದು ಕೋಟಿ ಭಕ್ತರು ಭೇಟಿ ನಿರೀಕ್ಷೆ

ram mandir 2

Ayodhya: ಅಯೋಧ್ಯೆಯಲ್ಲಿ ಕರ್ನಾಟಕ ಸರಕಾರದಿಂದ ಅತಿಥಿಗೃಹ ?

yogi ram mandir

Ayodhya: ಭೇಟಿ ಬಗ್ಗೆ ಹತ್ತು ದಿನ ಮೊದಲೇ ತಿಳಿಸಿ: ವಿವಿಐಪಿಗಳಿಗೆ ಯೋಗಿ ಸರಕಾರದ ಕೋರಿಕೆ

ram mandir 2

Ram Mandir: ಭಕ್ತ ಪ್ರವಾಹ- ರಾಮನ ದರ್ಶನ ಸಮಯ ವಿಸ್ತರಣೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-aaa

Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.