ಪಿಒಕೆಯ ಶಾರದಾ ಪೀಠದ ಮೃತ್ತಿಕೆ ತರಲು ಚೀನದಿಂದ ಬಂದ ದಂಪತಿ


Team Udayavani, Aug 6, 2020, 8:19 AM IST

ಪಿಒಕೆಯ ಶಾರದಾ ಪೀಠದ ಮೃತ್ತಿಕೆ ತರಲು ಚೀನದಿಂದ ಬಂದ ದಂಪತಿ

ರಾಂಚಿ: ಇಲ್ಲಿನ ತಪೋವನ ಶ್ರೀ ರಾಮ ಮಂದಿರ ದೇಗುಲದಲ್ಲಿ ದೀಪಪ್ರಜ್ವಲಿಸಿ ಸಂಭ್ರಮಾಚರಣೆ

ಮಣಿಪಾಲ: ಅಯೋಧ್ಯೆಯ ರಾಮ ದೇಗುಲದ ಭೂಮಿ ಪೂಜೆಗೆ ದೇಶದ ಮೂಲೆ ಮೂಲೆಗಳಿಂದ ಪವಿತ್ರ ಜಲ ಮತ್ತು ಮಣ್ಣನ್ನು ಅಯೋಧ್ಯೆಗೆ ತಲುಪಿಸಲಾಗಿದೆ. ಪಿಒಕೆಯಲ್ಲಿರುವ ಪವಿತ್ರ ಶಾರದಾ ದೇಗುಲದ ಮೃತ್ತಿಕೆಯನ್ನೂ ಅಯೋಧ್ಯೆಗೆ ಅರ್ಪಿಸಲಾಗಿದೆ.

ಭಾರತದ ಪ್ರಜೆಗಳಿಗೆ ಪಿಒಕೆಗೆ ಪ್ರಯಾಣಿಸಲು ಅನುಮತಿ ನೀಡಲಾಗುವುದಿಲ್ಲ. ಆದ್ದರಿಂದ ಚೀನದಲ್ಲಿ ವಾಸಿಸುತ್ತಿರುವ ಭರತವಂಶಿ ವೆಂಕಟೇಶ್‌ ರಾಮನ್‌ ಮತ್ತು ಅವರ ಪತ್ನಿ ಚೀನದಿಂದ ಪಾಸ್‌ಪೋರ್ಟ್‌ ಪಡೆದು ಪಿಒಕೆಗೆ ಆಗಮಿಸಿದ್ದಾರೆ. ಈ ದಂಪತಿಗಳು ಹಾಂಗ್‌ ಕಾಂಗ್‌ನಿಂದ ಪಾಕಿಸ್ಥಾನ ಆಕ್ರಮಿತ ಕಾಶ್ಮೀರದ (ಪಿಒಕೆ) ರಾಜಧಾನಿ ಮುಜಫ‌ರಾಬಾದ್‌ಗೆ ಬಂದು ಶಾರದಾ ದೇಗುಲ ತಲುಪಿದ್ದಾರೆ. ಅಲ್ಲಿ ಪೂಜೆ ಸಲ್ಲಿಸಿ ಪವಿತ್ರ ಮಣ್ಣಿನೊಂದಿಗೆ ಹಾಂಕಾಂಗ್‌ ಮೂಲಕ ದಿಲ್ಲಿಗೆ ಆಗಮಿಸಿದ್ದರು. ಇಲ್ಲಿ ಅವರು ಈ ಮಣ್ಣನ್ನು ಕರ್ನಾಟಕದ ನಿವಾಸಿ ಮತ್ತು ಸೇವಾ ಶಾರದಾ ಪೀಠದ ಸಕ್ರಿಯ ಸದಸ್ಯೆ ಅಂಜನಾ ಶರ್ಮಾ ಅವರಿಗೆ ಹಸ್ತಾಂತರಿಸಿದರು. ಅವರು ಬುಧವಾರ ಬೆಳಗ್ಗೆ ಅಯೋಧ್ಯೆಗೆ ಮಣ್ಣಿನೊಂದಿಗೆ ಆಗಮಿಸಿದ್ದು, ಭೂಮಿ ಪೂಜೆಗೆ ಸಮರ್ಪಿಸಲಾಗಿದೆ.

ಈ ದೇಗುಲ ಹಿಂದೂಗಳು ಮತ್ತು ಕಾಶ್ಮೀರ ಪಂಡಿತರ ಮೂರು ಪವಿತ್ರ ತಾಣಗಳಲ್ಲಿ ಒಂದಾಗಿದೆ. ಇದು ನೀಲಮಣಿ ನದಿಯ ದಡದಲ್ಲಿದ್ದು, ಭಾರತದ ಉರಿಯಿಂದ 70 ಕಿ.ಮೀ. ದೂರದಲ್ಲಿದೆ. ಇಲ್ಲಿಗೆ ಹೋಗಲು ಎರಡು ಮಾರ್ಗಗಳಿವೆ. ಮೊದಲನೆಯದು ಮುಜಫ‌ರಾಬಾದ್‌ನಿಂದ ಮತ್ತು ಎರಡನೆಯದು ಪೂಂಛ…-ರಾವಲಕೋಟ್‌ನಿಂದ. ಹೆಚ್ಚಾಗಿ ಉರಿಯಿಂದ ಮುಜಫ‌ರಾಬಾದ್‌ಗೆ ಹೋಗುವ ಮಾರ್ಗವನ್ನು ಬಳಸಲಾಗುತ್ತದೆ.

ಪಾಕ್‌ ಸರಕಾರ ಕಳೆದ ವರ್ಷ ಮಾ.25ರಂದು ಕಾರಿಡಾರ್‌ ನಿರ್ಮಾಣಕ್ಕೆ ಅನುಮೋದನೆ ನೀಡಿತ್ತು. ಇದರಿಂದ ಭಾರತದ ಹಿಂದೂಗಳು ಶಾರದಾ ದೇಗುಲಕ್ಕೆ ತೆರಳಲು ಅನುಕೂಲವಾಗಲಿದೆಎ ಎನ್ನಲಾಗಿತ್ತು. ಇಲ್ಲಿ ಶಾರದಾ ವಿಶ್ವವಿದ್ಯಾಲಯವೂ ಇತ್ತು, ಐದು ಸಾವಿರಕ್ಕೂ ಹೆಚ್ಚು ವಿದ್ವಾಂಸರು ಅಧ್ಯಯನ ಮಾಡುತ್ತಿದ್ದರು. ಆದಿ ಶಂಕರಾಚಾರ್ಯರು ಸಹ ಅಲ್ಲಿ ಅಧ್ಯಯನ ಮಾಡಿದ್ದರು ಎಂಬ ಉಲ್ಲೇಖ ಇದೆ.

ರಾಜ್ಯದಿಂದ ಜಲ ಅರ್ಪಣೆ
ಕರ್ನಾಟಕದ ಅಂಜನಾ ಪರ್ವತದಿಂದ ಪವಿತ್ರ ನೀರನ್ನು ಅಂಜನಾ ಶರ್ಮ ಅವರು ರಾಮ ಜನ್ಮಭೂಮಿಗೆ ಅರ್ಪಿಸಿದ್ದಾರೆ. ಅಂಜನಾ ಪರ್ವತವನ್ನು ರಾಮನ ಭಕ್ತ ಹನುಮನ ಜನ್ಮಸ್ಥಳವೆಂದು ಗುರುತಿಸಲಾಗುತ್ತದೆ. ಶಿವಲಿಂಗವನ್ನು ರಾವಣ ಲಂಕೆಗೆ ಕೊಂಡೊಯ್ಯಲು ಬಳಸಿದ್ದು ಗೋಕರ್ಣದ ದಾರಿಯನ್ನು. ಹೀಗಾಗಿ ಗೋಕರ್ಣದ ಪವಿತ್ರ ನೀರನ್ನೂ ಅಯೋಧ್ಯೆಗೆ ತಲುಪಿಸಲಾಗಿದೆ.

ಟಾಪ್ ನ್ಯೂಸ್

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ayodhya: ಪೇಜಾವರ ಶ್ರೀಗಳ ನೇತೃತ್ವದಲ್ಲಿ ಇಂದು ನಡೆದ ಮಂಡಲೋತ್ಸವ

Ayodhya: ಪೇಜಾವರ ಶ್ರೀಗಳ ನೇತೃತ್ವದಲ್ಲಿ ಇಂದು ನಡೆದ ಮಂಡಲೋತ್ಸವ

ram mandir imp

Ayodhya: ವ್ಯಾಟಿಕನ್‌, ಮೆಕ್ಕಾ ಮೀರಿಸಲಿದೆ- ವರ್ಷಕ್ಕೆ ಐದು ಕೋಟಿ ಭಕ್ತರು ಭೇಟಿ ನಿರೀಕ್ಷೆ

ram mandir 2

Ayodhya: ಅಯೋಧ್ಯೆಯಲ್ಲಿ ಕರ್ನಾಟಕ ಸರಕಾರದಿಂದ ಅತಿಥಿಗೃಹ ?

yogi ram mandir

Ayodhya: ಭೇಟಿ ಬಗ್ಗೆ ಹತ್ತು ದಿನ ಮೊದಲೇ ತಿಳಿಸಿ: ವಿವಿಐಪಿಗಳಿಗೆ ಯೋಗಿ ಸರಕಾರದ ಕೋರಿಕೆ

ram mandir 2

Ram Mandir: ಭಕ್ತ ಪ್ರವಾಹ- ರಾಮನ ದರ್ಶನ ಸಮಯ ವಿಸ್ತರಣೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Minchu

Bidar; ಬಿರುಗಾಳಿ‌ ಸಹಿತ ಭಾರಿ ಮಳೆ :ಸಿಡಿಲು ಬಡಿದು‌ ರೈತ ಸಾವು

1-wewqewqe

Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

1-qweqwewq

Congress;ಕಾರ್ಕಳ ಕ್ಷೇತ್ರದಿಂದ 40 ಸಾವಿರ ಲೀಡ್ ಗೆ ಪ್ರಯತ್ನ: ಮುನಿಯಾಲು

1-wewqe

Belgavi; ತಂದೆ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸುತ್ತೇವೆ: ಶ್ರದ್ಧಾ ಶೆಟ್ಟರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.