ಹೊಸ ಚಿತ್ರದ ಹಲವು ದೃಶ್ಯಗಳು ನಮ್ಮನ್ನು ಕಾಡುತ್ತವೆ : ಇಟಾಲೋ ಸ್ಪಿನೆಲಿ

ಗಿರೀಶ್‌ ಕಾಸರವಳ್ಳಿಯವರ‌ ಹೊಸ ಚಿತ್ರದ ಕುರಿತು ಅಭಿಪ್ರಾಯ

Team Udayavani, Mar 2, 2020, 9:16 AM IST

Illiralare-2-3

ಬೆಂಗಳೂರು: ಗಿರೀಶ್‌ ಕಾಸರವಳ್ಳಿಯವರ ಹೊಸ ಚಿತ್ರ ಅತ್ಯಂತ ಶಕ್ತಿಯುತವಾಗಿದೆ ಎನ್ನುತ್ತಾರೆ ಇಟಲಿ ಯ ಚಿತ್ರ ನಿರ್ದೇಶಕ ಮತ್ತು ನಟ ಇಟಾಲೊ ಸ್ಪಿನೆಲಿ. ಗಿರೀಶರ ಹೊಸ ಚಿತ್ರ ‘ಇಲ್ಲಿರಲಾರೆ, ಅಲ್ಲಿಗೆ ಹೋಗಲಾರೆ ಕುರಿತು ‘ಉದಯವಾಣಿ’ಗೆ ಪ್ರತಿಕ್ರಿಯಿಸಿದ ಇಟಾಲೊ, ‘ಹೊಸ ಚಿತ್ರದಲ್ಲಿ ಗಿರೀಶರ ಸೃಜನಶೀಲತೆ ಕಾಣುತ್ತದೆ. ವಿಶ್ವದಂಗಳಕ್ಕೆ ಅನ್ವಯವಾಗುವ ಕಥಾವಸ್ತು. ಕೆಲವು ದೃಶ್ಯಗಳಲ್ಲಿನ ಕಲಾತ್ಮಕ ಅಭಿವ್ಯಕ್ತಿ ಅನನ್ಯವಾದುದು’ ಎಂದರು.

ನನಗೆ ಕಲಾಕೃತಿಗಳು ಇಷ್ಟ. ಹಾಗಾಗಿ ಕೆಲವು ದೃಶ್ಯಗಳು ನನಗೆ ಪೇಂಟಿಂಗ್‌ಗಳಂತೆಯೇ ತೋರಿದವು. ಅವು ನಮ್ಮನ್ನು ಸದಾ ಕಾಡುವಂಥವು ಎಂದು ವಿವರಿಸುವ ಅವರು, ಚಿತ್ರವು ಒಟ್ಟೂ ಅಭಿವ್ಯಕ್ತಿಯಲ್ಲಿ ಶಕ್ತಿಯುತವಾಗಿದೆ. ಗಿರೀಶ್‌ ಬರೀ ಚಿತ್ರ ನಿರ್ದೇಶಕರಲ್ಲ ; ಜತೆಗೆ ಚಿಂತಕರೂ ಸಹ. ಅವರ ಚಿಂತನೆಯ ಕ್ರಮ ಈ ಚಿತ್ರದಲ್ಲಿ ಅಭಿವ್ಯಕ್ತಗೊಳ್ಳುತ್ತದೆ ಎಂದು ವಿಶ್ಲೇಷಿಸಿದರು.

ಒಳ್ಳೆಯ ಕಥೆಯ ಎರಡು ಭಾಗ
ಒಂದು ಒಳ್ಳೆಯ ಕಥೆಯ ಎರಡು ಭಾಗಗಳಿವೆ ಈ ಚಿತ್ರದಲ್ಲಿ. ಮೊದಲನೆ ಭಾಗ ಹಳ್ಳಿಯ ಬದುಕು, ಅಲ್ಲಿಯ ಒಬ್ಬ ಶ್ರಮಪಟ್ಟು ಓದುತ್ತಿರುವ ಬಾಲಕ, ಟೀಚರ್‌, ನಗರಕ್ಕೆ ಹೋಗಬೇಕೆಂಬ ಹಂಬಲಗಳು ಇತ್ಯಾದಿ. ಹಾಗೆಯೇ ಮತ್ತೂಂದು ಭಾಗದಲ್ಲಿ ನಗರದ ಬದುಕು, ಹಳ್ಳಿಯಿಂದ ನಗರಕ್ಕೆ ಓಡಿ ಬಂದು ಸಣ್ಣದೊಂದು ವ್ಯಾಪಾರ ಮಾಡುವ ಯುವಕ ಇತ್ಯಾದಿ ಪಾತ್ರಗಳು. ನನಗೆ ಎರಡನೇ ಭಾಗಕ್ಕಿಂತ ಮೊದಲನೇ ಭಾಗ ಬಹಳ ಇಷ್ಟವಾಯಿತು. ಮೊದಲ ಪಾತ್ರದ ಕೆಲವು ದೃಶ್ಯಗಳು ಇಟಲಿಯಲ್ಲಿನ ನವೋದಯ ಕಾಲದ ಪೇಂಟಿಂಗ್‌ಗಳನ್ನು ನೆನಪಿಸಿದವು.

ಗಿರೀಶರ ಹಲವು ಚಿತ್ರಗಳನ್ನು ನೋಡಿದ್ದೇನೆ. ಅವರ ಘಟಶ್ರಾದ್ಧ ಚಿತ್ರವು ಭಾರತದ ಬಗೆಗೆ ನನ್ನಲ್ಲಿ ಕುತೂಹಲ ಮೂಡಿಸಿತು. ಆನಂತರದ ಅವರ ಚಿತ್ರಗಳಾದ ದ್ವೀಪ, ಹಸೀನಾ ಇತ್ಯಾದಿ ಬಹಳ ಇಷ್ಟವಾದವು. ಭಾರತದಲ್ಲಿ ಸತ್ಯಜಿತ್‌ ರೇ ಬಳಿಕ ಅತ್ಯಂತ ಪ್ರಮುಖವಾದ ಚಿತ್ರ ನಿರ್ದೇಶಕ ಗಿರೀಶ್‌ ಕಾಸರವಳ್ಳಿ ಎಂಬುದು ನನ್ನ ಅಭಿಪ್ರಾಯ.

ಜಗತ್ತಿಗೆ ಕರ್ನಾಟಕದ ಸಂಸ್ಕೃತಿ, ಪರಂಪರೆಯನ್ನು ತೆಗೆದಿಟ್ಟವರು ಗಿರೀಶ್‌. ತಮ್ಮ ಚಿತ್ರದ ಮೂಲಕ ಜಗತ್ತಿನ ಸಿನಿಮಾ ಪ್ರೇಕ್ಷಕರಿಗೆ ಕರ್ನಾಟಕವನ್ನು, ಭಾರತವನ್ನು ಪರಿಚಯಿಸಿದವರು. ಜಾಗತಿಕವಾಗಿ ಎಲ್ಲರಿಗೂ ತಲುಪುವಂಥ ಮಾನವೀಯ ನೆಲೆಯ ಕಥಾವಸ್ತುಗಳನ್ನೇ ತಮ್ಮ ಚಿತ್ರಗಳಿಗೆ ಆಯ್ದುಕೊಳ್ಳುವುದು ಅವರ ಮತ್ತೂಂದು ವಿಶಿಷ್ಟತೆ.

ಸಮಕಾಲೀನ ವಿಷಯಗಳಿಗೆ ಅವರು ಸ್ಪಂದಿಸುವ ಮತ್ತು ತೆರೆಯ ಮೇಲೆ ತರುವ ಇಡೀ ಬೌದ್ಧಿಕ ಪ್ರಕ್ರಿಯೆ ಎಲ್ಲೂ ಶುಷ್ಕವೆನಿಸುವುದಿಲ್ಲ. ಆಯ್ಕೆ ಮಾಡಿಕೊಂಡ ಕಥಾವಸ್ತು ಒಂದಕ್ಕಿಂತ ಒಂದು ಭಿನ್ನ. ಸಾಮಾಜಿಕ ಸಮಸ್ಯೆಗಳನ್ನು ಕೈಗೆತ್ತಿಕೊಂಡು ಅದನ್ನು ತಮ್ಮ ಚಿತ್ರದ ಮೂಲಕ ಬಿತ್ತರಿಸುತ್ತಾ ತಮ್ಮೊಳಗಿನ ಸಾಮಾಜಿಕ ಕಾಳಜಿಯನ್ನು ಪ್ರಚುರಪಡಿಸುವ ಪ್ರಾಮಾಣಿಕ ಪ್ರಯತ್ನ ಅವರ ಪ್ರತಿ ಚಿತ್ರದಲ್ಲೂ ಕಾಣ ಸಿಗುತ್ತದೆ.

ಅವರ ಸಿನಿಮಾ ಭಾಷೆ ಸರಳ ಮತ್ತು ಸೂಕ್ಷ್ಮ. ವಾಸ್ತವಿಕತೆಯತ್ತ ಸಾಗುವ ಅವರ ನೆಲೆಯೂ ಬಹಳ ಶಕ್ತಿಯುತವಾದುದು. ಪ್ರತಿ ಸಮಸ್ಯೆಯಲ್ಲಿನ ಮಾನವೀಯ ಮುಖವನ್ನು ಸ್ವತಃ ಕಾಣುವ ಹಾಗೂ ಉಳಿದವರಿಗೂ ತೋರಿಸಲೆತ್ನಿಸುವ ಅವರ ಪ್ರಯತ್ನವೇ ಖುಷಿ ಕೊಡುವಂಥದ್ದು.

ಗಿರೀಶ್‌ ಕಾಸರವಳ್ಳಿಯವರ ಹೊಸ ಚಿತ್ರ ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ ಕವಿ ಜಯಂತ ಕಾಯ್ಕಿಣಿಯವರ ಸಣ್ಣ ಕಥೆ ಹಾಲಿನ ಮೀಸೆ ಆಧರಿಸಿ ರೂಪಿಸಿದ್ದು. ಇದರ ನಿರ್ಮಾಪಕರು ಶಿವಕುಮಾರ್‌. ಒಂಬತ್ತು ವರ್ಷಗಳ ಬಳಿಕ ಗಿರೀಶರು ಈ ಸಿನಿಮಾ ರೂಪಿಸಿದ್ದಾರೆ. ‘ಕೂರ್ಮಾವತಾರ’ದ ಬಳಿಕ ಕೆಲವು ಇತರೆ ಯೋಜನೆಗಳಲ್ಲಿ ಗಿರೀಶರು ತೊಡಗಿಕೊಂಡಿದ್ದರು.

ಟಾಪ್ ನ್ಯೂಸ್

Rohit Sharma spoke about team selection for T20 World Cup

T20 WC; ‘ಎಲ್ಲವೂ ಸುಳ್ಳು…’: ತಂಡದ ಆಯ್ಕೆ ಬಗ್ಗೆ ಮಹತ್ವದ ಅಪ್ಡೇಟ್ ನೀಡಿದ ರೋಹಿತ್ ಶರ್ಮಾ

EVM VVPAT case:  ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯತೆ ಇರಬೇಕು: ಆಯೋಗಕ್ಕೆ ಸುಪ್ರೀಂ

EVM VVPAT case:  ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯತೆ ಇರಬೇಕು: ಆಯೋಗಕ್ಕೆ ಸುಪ್ರೀಂ

kejriwal 2

Diabetes ಇದ್ದರೂ ಕೇಜ್ರಿವಾಲ್ ಸಿಹಿ ಹೆಚ್ಚೆಚ್ಚು ತಿನ್ನುತ್ತಿದ್ದಾರೆ!: ಕೋರ್ಟ್ ಗೆ ಇಡಿ

Devon Conway ruled out of IPL 2024

CSK; ಐಪಿಎಲ್ ನಿಂದ ಹೊರಬಿದ್ದ ಕಾನ್ವೆ; ಚೆನ್ನೈ ಪಾಳಯಕ್ಕೆ ಇಂಗ್ಲೆಂಡ್ ವೇಗಿ ಸೇರ್ಪಡೆ

1—-wewewqe

Kalaburagi;ಆನೆ ಪ್ರತಿಮೆ ಏರಿ ನಾಮಪತ್ರ ಸಲ್ಲಿಸಲು ಬಂದ ಹುಚ್ಚಪ್ಪ

raj k shilpa

ED; ರಾಜ್ ಕುಂದ್ರಾ ಅವರ 97 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ

LokSabha Election; ಕಾಂಗ್ರೆಸ್ ಪರ ನಟ ದರ್ಶನ್ ಪ್ರಚಾರಕ್ಕೆ ಕುಮಾರಸ್ವಾಮಿ ಪ್ರತಿಕ್ರಿಯೆ

LokSabha Election; ಕಾಂಗ್ರೆಸ್ ಪರ ನಟ ದರ್ಶನ್ ಪ್ರಚಾರಕ್ಕೆ ಕುಮಾರಸ್ವಾಮಿ ಪ್ರತಿಕ್ರಿಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

DIRECTORS-FILM-BAZAR

ಡೈರೆಕ್ಟರ‍್ಸ್‌ ಫಿಲಂ ಬಜಾರ್‌ಗೆ ಚಿತ್ರೋತ್ಸವದಲ್ಲಿ ಮೆಚ್ಚುಗೆ

Anant-Nag

ಅನಂತ್‌ನಾಗ್‌ “ಮಿಲಿಟರಿ’ ಕನಸು

film-bazaar

ಫಿಲಂ ಬಜಾರ್‌ಗೆ ಮೆಚ್ಚುಗೆ

talaq

ಅಸಹಾಯಕ ಮಹಿಳೆಯ ಮೌಲ್ಯಯುತ ಚಿತ್ರ

kiffi-min

ಎರಡು ಸಂದರ್ಭಗಳ ಕಥೆಗಳನ್ನು ತೆರೆಗೆ ತರುವ ಪ್ರಯತ್ನ: ಗಿರೀಶ್

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Rohit Sharma spoke about team selection for T20 World Cup

T20 WC; ‘ಎಲ್ಲವೂ ಸುಳ್ಳು…’: ತಂಡದ ಆಯ್ಕೆ ಬಗ್ಗೆ ಮಹತ್ವದ ಅಪ್ಡೇಟ್ ನೀಡಿದ ರೋಹಿತ್ ಶರ್ಮಾ

EVM VVPAT case:  ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯತೆ ಇರಬೇಕು: ಆಯೋಗಕ್ಕೆ ಸುಪ್ರೀಂ

EVM VVPAT case:  ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯತೆ ಇರಬೇಕು: ಆಯೋಗಕ್ಕೆ ಸುಪ್ರೀಂ

kejriwal 2

Diabetes ಇದ್ದರೂ ಕೇಜ್ರಿವಾಲ್ ಸಿಹಿ ಹೆಚ್ಚೆಚ್ಚು ತಿನ್ನುತ್ತಿದ್ದಾರೆ!: ಕೋರ್ಟ್ ಗೆ ಇಡಿ

Devon Conway ruled out of IPL 2024

CSK; ಐಪಿಎಲ್ ನಿಂದ ಹೊರಬಿದ್ದ ಕಾನ್ವೆ; ಚೆನ್ನೈ ಪಾಳಯಕ್ಕೆ ಇಂಗ್ಲೆಂಡ್ ವೇಗಿ ಸೇರ್ಪಡೆ

1—-wewewqe

Kalaburagi;ಆನೆ ಪ್ರತಿಮೆ ಏರಿ ನಾಮಪತ್ರ ಸಲ್ಲಿಸಲು ಬಂದ ಹುಚ್ಚಪ್ಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.