ಜಾತ್ರೆಯಲ್ಲಿನ ಒಂದು “ಚಾಕೋಬಾರ್ ಕಥೆ”


Team Udayavani, Nov 13, 2019, 5:17 PM IST

Ice-cream

ಆವಾಗೆಲ್ಲಾ ಊರಲ್ಲಿ ಜಾತ್ರೆ ಅಂದ್ರೆ ಅದೇನೋ ಸಂಭ್ರಮ. ನನ್ನ ಅಮ್ಮನ ಊರಲ್ಲಿ ಜಾತ್ರೆ ಮಾರ್ಚ್ ತಿಂಗಳಲ್ಲಿ. ಹಾಗಾಗಿ ರಜಾ ತಗೊಂಡು ಅಲ್ಲಿಗೆ ಹೋಗಿದ್ದೆ. ಜಾತ್ರೆ ಅಂದ ಮೇಲೆ ಸಂತೆಗಳು ,ಐಸ್ ಕ್ರೀಮ್ ಗಾಡಿಗಳನ್ನು ನೋಡೋದೇ ಒಂದು ಮಜಾ. ನಾನು ಜಾತ್ರೆಗಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದು ಇದನ್ನೇ. ದೇವಸ್ಥಾನಕ್ಕೆ ಹೋಗುವಾಗ ಮೊದಲು ಸ್ವಾಗತಿಸುವುದೇ ತರಹೇವಾರಿ ಅಂಗಡಿಗಳು. ನನ್ನ ಕಣ್ಣುಗಳು ಮನಸ್ಸು ಎರಡು ಸಹ ಅದರ ಮೇಲೆ.

ಆದ್ರೆ ದೇವರ ದರ್ಶನ ಆಗದೆ ಏನೊಂದು ಸಿಗಲಾರದು ಅಂತ ಅಮ್ಮನ ಅಪ್ಪಣೆ. ಅಬ್ಬಾ , ಮತ್ತೆ ಆದರೂ ಸಿಗುತ್ತಲ್ಲ ಅನ್ನೋ ಬಲವಾದ ನಂಬಿಕೆ. ಒಳಗೆ ಹೋದರು ಮನಸ್ಸೆಲ್ಲಾ ಹೊರಗೆ. ಯಾವಾಗ ಆ ಸುಂದರ ಬಳೆಗಳನ್ನು ತೊಡುತ್ತೇನೆ, ಯಾವಾಗ ತಂಪು ಐಸ್ ಕ್ರೀಂ ಹೊಟ್ಟೆ ಸೇರುತ್ತೆ ಅಂತ ಚಿಂತೆ. ದೇವರಲ್ಲಿ ಸಹ ಇದೇ ಪ್ರಾರ್ಥನೆ.

ಸರಿ, ದೇವರ ದರ್ಶನ ಆಯ್ತು. ಹೊರ ಬಂದಿದ್ದೆ ತಡ ಶುರುವಾಯಿತು ನನ್ನ ಬೇಡಿಕೆಗಳು. ಸರ, ಕ್ಲಿಪ್, ಬಳೆ, ಕಿವಿಯೋಲೆ, ಚಪ್ಪಲಿ ಮತ್ತೆ ಕೊನೆಗೆ ಐಸ್ ಕ್ರೀಂ. ಕೇಳಿದ್ದರಲ್ಲಿ ಕೆಲವನ್ನು ಅಮ್ಮ ಕೊಡಿಸಿದರು. ಇನ್ನು ಕೆಲವು ತಾತ ಕೊಡಿಸಿದರು. ಸರಿ, ಮನೆಗ್ ಹೋಗೋ ಸಮಯವಾಯ್ತು. ಇದಕ್ಕೆ ಕಾಯುತ್ತಿದ್ದೆ ನಾನು. ಯಾಕಂದ್ರೆ ಮಾವ ಚಾಕೋಬಾರ್ ಕೊಡಿಸ್ತೀನಿ ಅಂದಿದ್ರು.

ಐಸ್ ಕ್ರೀಂ ಗಾಡಿ ಹತ್ತಿರ ತಲುಪಿದ್ದೆ ತಡ ಬಾಯಲ್ಲಿ ನೀರು ಸುರಿಯೋಕೆ ಶುರು ಆಯ್ತು. ಅಂತೂ ನನ್ ಕೈಗೆ ಚಾಕೋಬಾರ್ ಸಿಕ್ತು.  ತಿನ್ನೋಕೆ ಅಂತ ಹೊರಟೆ. ಆದ್ರೆ ಅಜ್ಜಿ ಬಿಡಲಿಲ್ಲ. ನಡು ರಸ್ತೆಯಲ್ಲಿ ಬೇಡಮ್ಮ ಮನೆಗೆ ಹೋಗಿ ತಿನ್ನುವಂತೆ ಅಂದ್ರು. ಸರಿ ನಡಿಯೋಕೆ ರಾತ್ರಿ ಬೇರೆ. ಅದಕ್ಕೆ ಮಾವ ರಿಕ್ಷಾ ಮಾಡಿದ್ರು. ನನ್ ಚಾಕೋಬಾರ್ ಅಜ್ಜಿ ಚೀಲ ಸೇರಿತ್ತು. ಯಾವಾಗ ಮನೆ ತಲುಪುತ್ತೇನೆ ಅನ್ನೋ ಆತುರ.

ನನ್ನ ಕಷ್ಟಕಾಲ.. ರಿಕ್ಷಾ ಸಿಗೋವಾಗ್ಲೆ, ತಡ ಆಗಿತ್ತು ಮನೆ ತಲುಪಿದಾಗ ಅರ್ಧಗಂಟೆ ಆಗಿತ್ತು. ಇನ್ನೇಕೆ ತಡ ಚಾಕೋಬಾರ್  ತಿಂತಿನಿ ಅಂತ ಅಜ್ಜಿ ಹತ್ತಿರ ಹೇಳಿದೆ ಅವರು ಚೀಲಕ್ಕೆ ಕೈ ಹಾಕಿ ಪ್ಯಾಕೆಟ್ ಹೊರತೆಗೆದರು.

ದಪ್ಪಕ್ಕಿದ್ದ ಪ್ಯಾಕೆಟ್ ತೆಳು ಆಗಿತ್ತು. ಆಗ್ಲೇ ನಂಗೆ ಏನೋ ಸಂಶಯ ಶುರುವಾಗಿತ್ತು. ನೋಡಿದ್ರೆ ಚಾಕೋಬಾರ್ ಪೂರ್ತಿ ಕರಗಿ ಕಡ್ಡಿ ಮಾತ್ರ ಉಳಿದಿತ್ತು. ನನ್ನ ಕಣ್ಣಲ್ಲಿ ನೀರು ಅಜ್ಜಿ ಮುಖದಲ್ಲಿ

ತಪ್ಪಿತಸ್ಥ ಭಾವ . ಪರಿಪರಿಯಾಗಿ ನನ್ನಲ್ಲಿ ಕ್ಷಮೆ ಕೇಳಿದರು. ತುಂಬಾನೇ ನೊಂದುಕೊಂಡರು .ಎಲ್ಲವೂ ತನ್ನಿಂದಾಗಿ ಆಯ್ತು ಎಂದು , ನೂರು ಬಾರಿ ಹೇಳಿದ್ರು. ನನ್ನಮ್ಮ ನನ್ನ ಸಮಾಧಾನ ಪಡಿಸದೆ, ಅವರ ಅಮ್ಮನನ್ನು ಸಮಾಧಾನ ಮಾಡ್ತಾ ಇದ್ದರು. ನನಗಂತೂ ರಾತ್ರಿ  ಆಗಿದ್ದರಿಂದ ಮತ್ತು ಸಂತೆ ತಿರುಗಿ ದಣಿ ವಾಗಿದ್ದರಿಂದ, ಬಹುಬೇಗನೆ ನಿದ್ರಾದೇವಿ ಆವರಿಸಿದ್ದಳು. ಆದ್ದರಿಂದ ಅತ್ತು ರಂಪ ಮಾಡೋಕೆ ಆಗಲಿಲ್ಲ.

ಇವೆಲ್ಲ ಚಿಕ್ಕವಯಸ್ಸಿನ ಸಂಗತಿಗಳು..ಇವಾಗಲು ಸಹ ಐಸ್ಕ್ರೀಮ್ ಗಾಡಿ ಎಲ್ಲೇ ನೋಡಿದ್ರೂ ಅಜ್ಜಿ ಮತ್ತು ಕರಗಿಹೋದ ಚಾಕೋಬಾರ್ ನೆನಪಾಗುತ್ತೆ. ತುಟಿಯಲ್ಲಿ ಕಿರುನಗೆಯೊಂದು ಮೂಡುತ್ತೆ

ತೇಜಸ್ವಿನಿ ಆರ್. ಕೆ

ಎಸ್ ಡಿ ಎಂ ಕಾಲೇಜು, ಉಜಿರೆ

 

ಟಾಪ್ ನ್ಯೂಸ್

baba-ramdev

Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

ಅಶ್ಲೀಲ ವಿಡಿಯೋ ಮಾದರಿಯಲ್ಲಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಕ್ಕೆ ಮಹಿಳೆಯನ್ನು ಕೊಂದ ಟೆಕಿ

ಅಶ್ಲೀಲ ವಿಡಿಯೋ ಮಾದರಿಯಲ್ಲಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಕ್ಕೆ ಮಹಿಳೆಯನ್ನು ಕೊಂದ ಟೆಕಿ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

1-aaaa

Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್‌ ನಲ್ಲಿ ಬಂಧನ

1-qqwqe

Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್‌ ಗೆಲುವು ಕಾಣುವಾಸೆ..

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

April 17ರಂದು ಶ್ರೀರಾಮ ನವಮಿ: ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

Rama Navami 2024: April 17ರಂದು ಶ್ರೀರಾಮ ನವಮಿ- ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

Ram Ayodhya

Rama Navami 2024: ನವಮಿಗೆ ಬಾಲಕರಾಮನ ಹಣೆಗೆ ಸೂರ್ಯ ತಿಲಕ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-BVR-1

Congress vs BJP; ಬ್ರಹ್ಮಾವರದಲ್ಲಿ ಶಕ್ತಿ ಪ್ರದರ್ಶನದ ವೇದಿಕೆ!

1-y-a

Shikaripur; ಸಂಭ್ರಮದ ಹುಚ್ಚರಾಯಸ್ವಾಮಿ ಬ್ರಹ್ಮ ರಥೋತ್ಸವ:ಯಡಿಯೂರಪ್ಪ ಕುಟುಂಬ ಭಾಗಿ

baba-ramdev

Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ

Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ

Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.