ಮಾವಿನ ವಾಟೆ, ಮರದಲಿ ಕೋಟೆ… ಮತ್ತೆ ಬರಲಾರವೇ ಆ ಕ್ಷಣಗಳು?


Team Udayavani, Nov 13, 2019, 7:04 PM IST

Child-04

“ಕಪ್ಪೆ ಕರ ಕರ, ತುಪ್ಪ ಜಲಿ ಜಲಿ

ಮಾವಿನ ವಾಟೆ, ಮರದಲಿ ಕೋಟೆ“…ಅಂದು ಎಳೆ ಹೃದಯಗಳನ್ನು  ತಲುಪಿದ್ದ ಈ ಮುದ್ದಾದ ಸಾಲುಗಳು ಇಂದಿಗೂ ಅಚ್ಚಳಿಯದೆ ಉಳಿದಿವೆ ಅಲ್ವಾ ಗೆಳೆಯರೆ?!  ಬಾಲ್ಯದಲ್ಲಿ ಕಳೆದ ಆ ಸುಂದರ ಕ್ಷಣಗಳಿಗಾಗಿ ಮನ ಹಂಬಲಿಸುತ್ತಿದೆ. ಮತ್ತೆ ಬರಲಾರವೇ ಆ ಕ್ಷಣಗಳು?!

ಬಾಲ್ಯಕಾಲಕ್ಕಂತೂ ಮರಳಲಾರೆ. ಆದರೆ ಆ ಸಿಹಿ ನೆನಪುಗಳು ನನ್ನೊಂದಿಗಿವೆ. ನಾನು ಮನದಲ್ಲೇ ಬಾಲ್ಯಲೋಕದ ಕದ ತಟ್ಟಿದೆ. ಎಲ್ಲಾ ನೆನಪುಗಳು ಕಣ್ಮುಂದೆ ಕುಣಿಯುತ್ತಾ ಬಂದವು.

ಹಠಮಾರಿಯಾಗಿದ್ದ ನಾನು ಅಮ್ಮನ ಕೈಯಿಂದ ಸದಾ ಪೆಟ್ಟು ತಿನ್ನುತ್ತಿದ್ದೆ. ಆದರೆ ಶಾಲೆಯಲ್ಲಿ ಗುರುಗಳ ವಿಧೇಯ ಶಿಷ್ಯೆ! ನಾನು ಬಾಲ್ಯದಲ್ಲಿ ಕಲಿತ ಜೀವನ ಪಾಠಗಳನ್ನು ಎಂದಿಗೂ ಮರೆಯಲಾರೆ.  ಉತ್ತರ ತಪ್ಪಾಯಿತೆಂದು ೧೦೦ ಸಲ ನನ್ನ ಕೈಯಿಂದ  ಬರೆಯಿಸಿದ ಅಮ್ಮನ ಆ ‘ಹಿಟ್ಲರ್’ ನಡೆಯೇ ಈಗ ಮುದ್ದಾದ ಬರವಣಿಗೆಗೆ ಬುನಾದಿಯಾಯಿತು. ಆಂಗ್ಲ ವ್ಯಾಕರಣದ ತರಗತಿಯಲ್ಲಿ ಕಿವಿ ಹಿಂಡಿ ಕಲಿಸುತ್ತಿದ್ದ ಗುರುಗಳ ಕೃಪೆಯಿಂದ ಈಗ ಆತ್ಮವಿಶ್ವಾಸದಿಂದ ಎಲ್ಲರೆದುರು ಮಾತನಾಡಬಲ್ಲೆ. ಇಂತಹ ಶಿಕ್ಷಕರನ್ನು ಪಡೆದ ನಾನೇ ಧನ್ಯ! ನನ್ನ ಎಲ್ಲಾ ಪ್ರಶ್ನೆಗಳಿಗೆ ಅವರಲ್ಲಿ ಉತ್ತರ ಇತ್ತು. ಬದುಕಿನ ಹೊಸ ಸಾಧನೆಗಳಿಗೆ ಪ್ರೇರಣೆ ಸಿಕ್ಕಿದ್ದೇ ಅವರಿಂದ.

ಬಾಲ್ಯದ ಬಹುಪಾಲು ಸಮಯವನ್ನು ನಾನು ಕಥೆ ಪುಸ್ತಕಗಳೊಂದಿಗೆ ಕಳೆಯುತ್ತಿದ್ದೆ. ಈಗಲೂ ಸಮಯ ಸಿಕ್ಕಾಗ ಓದುತ್ತೇನೆ. ಬಾಲ್ಯದಲ್ಲಿ ಆಡುತ್ತಿದ್ದ ಆಟ, ಕೇಳುತ್ತಿದ್ದ ಸಂಗೀತ, ನೋಡುತ್ತಿದ್ದ ಕಾರ್ಟೂನ್  ಈಗಲೂ ನನ್ನ ಪ್ರಿಯ ಸಂಗತಿಗಳಾಗಿಯೇ ಉಳಿದಿವೆ.

ಬಾಲ್ಯದಲ್ಲಿ ನಾ ಮಾಡಿದ ಕಪಿಚೇಷ್ಠೆಗಳು  ಹಲವು. ಅದಕ್ಕೆ ಸಾಥ್ ಕೊಡುತ್ತಿದ್ದದ್ದು ನನ್ನ ಕಪಿಸೇನೆ!  “ಗೆಳೆತನದ ಸುವಿಶಾಲ ಆಲದಡಿ ಪಸರಿಸಿಹ ತಣ್ಣೆಳಲ ತಂಪಿನಲಿ ತಂಗಿರುವೆನು” ಎಂಬ ಚನ್ನವೀರ ಕಣವಿ ಅವರ ಸಾಲುಗಳನ್ನು ಕೇಳುತ್ತಿದ್ದಂತೆ ನನ್ನೆಲ್ಲಾ ಬಾಲ್ಯದ ಗೆಳೆಯರ ಮುಖಗಳು ಕಣ್ಮುಂದೆ ಬರುತ್ತವೆ. ನಾವು ಮಾಡುತ್ತಿದ್ದ ಚೇಷ್ಟೆಗಳಿಂದ ಶ್ವಾನಗಳೂ ಸೇರಿದಂತೆ ಹಲವು ಅಪಾಯಗಳು ಬೆನ್ನಟ್ಟುತ್ತಿದ್ದವು. ಅಂದ ಹಾಗೆ ನಾಯಿಗಳನ್ನು ಕಂಡರೆ ನನಗೆ ಒಂದು ರೀತಿಯ ಗೌರವ ( ಭಯ)!

ಬಾಲ್ಯಕಾಲದ ನೆನಪಿನ ಸಮುದ್ರದಲ್ಲಿ ಮುಳುಗೇಳುವ ಖುಷಿಯೇ ಬೇರೆ! “ಕಾಲೇಜು ಹುಡುಗಿಯಾದರೂ ಮಕ್ಕಳಾಟಿಕೆ ಬಿಟ್ಟಿಲ್ಲ” ಎಂಬ ಅಮ್ಮನ ನಿಂದನೆ ನನಗೆ ಹೊಗಳಿಕೆಯಂತೆ ಅನಿಸುತ್ತದೆ. ಮತ್ತೆ ಮಗುವಾಗುವಾಸೆ! ಸಾಧ್ಯವೇ?! ಇರಲಿ ಗೆಳೆಯರೇ… ನಾವೆಷ್ಟು ದೊಡ್ಡ ವ್ಯಕ್ತಿಗಳಾದರೂ ಬಾಲ್ಯವನ್ನು ಮರೆಯದಿರೋಣ ಏನಂತೀರಿ?!!

 *ನಯನ, ತೃತೀಯ ಬಿಎಸ್ಸಿ

 ಎಂಜಿಎಂ ಕಾಲೇಜು,ಉಡುಪಿ

ಟಾಪ್ ನ್ಯೂಸ್

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ

1—eewqewq

World’s largest ಅನಕೊಂಡ ಅನಾ ಜೂಲಿಯಾ ಸಾವು; ಆಗಿದ್ದೇನು?

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

1-asdasdad

Pralhad Joshi ವಿರುದ್ದ ಸಿಡಿದೆದ್ದ ದಿಂಗಾಲೇಶ್ವರ ಶ್ರಿಗಳಿಗೆ ವೀರಶೈವ ಮಹಾಸಭಾ ಬೆಂಬಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

World Theatre Day 2024: ರಂಗಭೂಮಿ ಕಲೆ-ಯುದ್ಧ ಮತ್ತು ಶಾಂತಿ ಪರಸ್ಪರ ವಿರುದ್ಧ ಧ್ರುವ

World Theatre Day 2024: ರಂಗಭೂಮಿ ಕಲೆ-ಯುದ್ಧ ಮತ್ತು ಶಾಂತಿ ಪರಸ್ಪರ ವಿರುದ್ಧ ಧ್ರುವ

ಡೌಟೇ ಬೇಡ, ಜೋಡೆತ್ತುಗಳ ಹಾಗೆ ನಾನು, ಅನಂತ ಹೆಗಡೆ ಇಬ್ಬರೂ ಕೆಲಸ ಮಾಡುತ್ತೇವೆ…

ಡೌಟೇ ಬೇಡ, ಜೋಡೆತ್ತುಗಳ ಹಾಗೆ ನಾನು, ಅನಂತ ಹೆಗಡೆ ಇಬ್ಬರೂ ಕೆಲಸ ಮಾಡುತ್ತೇವೆ…

Book Review;ವಿಶಿಷ್ಟ ರೂಪಕ ಶೈಲಿಯಿಂದ ಚಿತ್ರ ರಸಿಕರ ಮನಗೆದ್ದ ಕಾಸರವಳ್ಳಿಯ “ಬಿಂಬ ಬಿಂಬನ”

Book Review;ವಿಶಿಷ್ಟ ರೂಪಕ ಶೈಲಿಯಿಂದ ಚಿತ್ರ ರಸಿಕರ ಮನಗೆದ್ದ ಕಾಸರವಳ್ಳಿಯ “ಬಿಂಬ ಬಿಂಬನ”

World Water Day: ಜುಳು ಜುಳು ಸದ್ದೇಕೆ ಉರಿ ಮೌನ

World Water Day: ಜುಳು ಜುಳು ಸದ್ದೇಕೆ ಉರಿ ಮೌನ

ಪ್ರೊ| ಕು.ಶಿ.: ಜ್ಞಾನಕಾಶಿಯಲ್ಲೊಬ್ಬ ಫ‌ಕೀರ

ಪ್ರೊ| ಕು.ಶಿ.: ಜ್ಞಾನಕಾಶಿಯಲ್ಲೊಬ್ಬ ಫ‌ಕೀರ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Mandya: ಬಿಜೆಪಿ ಮುಖಂಡರಿಗೆ ವೇದಿಕೆ ಬಿಟ್ಟು ಕೆಳಗೆ ಕುಳಿತ ಮಂಡ್ಯ ದಳಪತಿಗಳು!

Mandya: ಬಿಜೆಪಿ ಮುಖಂಡರಿಗೆ ವೇದಿಕೆ ಬಿಟ್ಟು ಕೆಳಗೆ ಕುಳಿತ ಮಂಡ್ಯ ದಳಪತಿಗಳು!

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

29

Hassan Lok sabha Constituency: ಪ್ರಜ್ವಲ್‌ ರೇವಣ್ಣ ನಾಮಪತ್ರ ಸಲ್ಲಿಕೆ

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Bike thief: ಬಜಪೆ ಪೊಲೀಸರಿಂದ ಅಂತರ್‌ ಜಿಲ್ಲಾ ಬೈಕ್‌ ಕಳ್ಳನ ಬಂಧನ

Bike thief: ಬಜಪೆ ಪೊಲೀಸರಿಂದ ಅಂತರ್‌ ಜಿಲ್ಲಾ ಬೈಕ್‌ ಕಳ್ಳನ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.