ಪಾತ್ರವನ್ನು ಆವಾಹಿಸಿಕೊಳ್ಳುವವನೇ ನೈಜ ಕಲಾವಿದ


Team Udayavani, Sep 18, 2021, 10:22 AM IST

hjghkhjmng

ಉಡುಪಿ : ನೀರು ತಾನಿರುವ ಪಾತ್ರೆಯ ಆಕಾರವನ್ನು ತಾಳುವಂತೆ ತನ್ನ ವ್ಯಕ್ತಿತ್ವವನ್ನು ಮರೆತು ಪಾತ್ರವನ್ನು ಆವಾಹಿಸಿಕೊಳ್ಳುವುದೇ ಕಲಾವಿದರ ನೈಜ ಯಶಸ್ಸು ಎಂದು ಕನ್ನಡ ಚಿತ್ರರಂಗದ ಹೆಸರಾಂತ ನಟ ಅನಂತ್‌ನಾಗ್‌ ವಿಶ್ಲೇಷಿಸಿದರು. ಅವರು ಶುಕ್ರವಾರ “ಉದಯವಾಣಿ’ ಕಚೇರಿಯಲ್ಲಿ ಹಮ್ಮಿಕೊಂಡ ಸಂವಾದದಲ್ಲಿ ಪಾಲ್ಗೊಂಡು ಅಭಿಪ್ರಾಯ ಗಳನ್ನು ಹಂಚಿಕೊಂಡರು.

ಅನಂತರ ಅವರು ಉದಯವಾಣಿ. ಕಾಮ್‌ನ ಫೇಸ್‌ಬುಕ್‌ ಲೈವ್‌ನಲ್ಲೂ ಪಾಲ್ಗೊಂಡರು. ಕಲಾವಿದ ನೀರಿನಂತೆ ಇರಬೇಕು. ಯಾವುದೇ ಪಾತ್ರೆಯಲ್ಲಿ ಹಾಕಿದರೂ ಅದರ ಆಕಾರಕ್ಕೆ ಬದಲಾಗುವ ಗುಣವನ್ನು ಹೊಂದಿರಬೇಕು. ಅಭಿನಯಕ್ಕೆ ಕಾಯಾ ವಾಚಾ ಮನಸಾ ಸಮರ್ಪಣೆಗೊಂಡಾಗ ಮಾತ್ರ ಯಾವುದೇ ಪಾತ್ರಕ್ಕೆ ನ್ಯಾಯ ಒದಗಿಸಲು ಸಾಧ್ಯ. ಇಂತಹ ಪಾತ್ರಗಳು ಜನರಲ್ಲಿ ಬೆರೆತು ಹೋಗುತ್ತವೆ. ಪ್ರಾರಂಭದಲ್ಲಿ ರಂಗಭೂಮಿ ಪ್ರವೇಶಿಸಿದ ನಾನು 50ಕ್ಕೂ ಅಧಿಕ ನಾಟಕಗಳಲ್ಲಿ ಅಭಿನಯಿಸಿದ್ದೆ ಎಂದರು.

ಆಧ್ಯಾತ್ಮದ ಒಲವು : ಯತಿಗಳು ಮೊದಲು ಪ್ರಾಪಂಚಿಕರಾಗಿದ್ದು, ಬಳಿಕ ಪಾರ ಮಾರ್ಥಿಕದ ಕಡೆಗೆ ಸೆಳೆಯಲ್ಪಡುತ್ತಾರೆ.  ನಾನು ಮಾತ್ರ ಪಾರಮಾರ್ಥಿಕ ಪರಿಸರದಲ್ಲಿ ಬೆಳೆದರೂ ಪ್ರಾಪಂಚಿಕಕ್ಕೆ ಬಂದೆ. ನಾನು ಬಾಲ್ಯವನ್ನು ಕಳೆದುದು ಕಾಞಂಗಾಡ್‌ನ‌ ಆನಂದಾಶ್ರಮದಲ್ಲಿ. ಅಲ್ಲಿ ದೇವರ ಭಜನೆ, ಜಪ, ಧ್ಯಾನ, ಸೇವೆ ಮಾಡುತ್ತಿದ್ದೆ. ಆಶ್ರಮದಲ್ಲಿ ಮೂರ್ತಿ ಪೂಜೆ ಇರಲಿಲ್ಲ. ಆದರೆ ನಾಡಿನ ಎಲ್ಲ ಸಂತರ ಭಾವಚಿತ್ರಗಳಿದ್ದವು. ಇದರಿಂದ ಬಾಲ್ಯದಿಂದಲೇ ಆಧ್ಯಾತ್ಮಿಕತೆ ಮೈಗೂಡಿತ್ತು. ತಂದೆಗೆ ನಾನು ವೈದ್ಯ ಅಥವಾ ಎಂಜಿನಿಯರ್‌ ಆಗಬೇಕು ಎನ್ನುವ ಆಸೆ ಇತ್ತು. ಆದರೆ ನನಗೆ ಒಲಿದಿರುವುದು ನಟನೆ ಎಂದರು.

ಹುಲಿವೇಷದ ನಂಟು : ಉಡುಪಿಗೆ ಬರುವಾಗ ನನಗೆ ಆರೂವರೆ ವರ್ಷ. ಕಿನ್ನಿಮೂಲ್ಕಿ ಶಂಕರ ರಾಯರ ಮನೆಯಲ್ಲಿ ಅಕ್ಕ ಮನೋರಮಾ, ಶ್ಯಾಮಲಾ, ಶೈಲಾ, ನಾನು ಇದ್ದೆವು. ನನ್ನ ತಮ್ಮ ಶಂಕರನಾಗ್‌ ಇಲ್ಲೇ ಹುಟ್ಟಿದ್ದು. ಹಳೆಯ ಉಡುಪಿಗೂ ಇಂದಿನ ಉಡುಪಿಗೂ ಸಾಕಷ್ಟು ವ್ಯತ್ಯಾಸವಿದೆ. ಕೃಷ್ಣಾಷ್ಟಮಿಯಲ್ಲಿ ಹುಲಿವೇಷ, ಕ್ರಿಸ್ಮಸ್‌ ವೇಳೆ ಕ್ಯಾರೊಲ್‌ ಹಾಡುವುದು, ನೃತ್ಯ ಮಾಡುತ್ತಿದ್ದೆ ಎಂದು ಅನಂತನಾಗ್‌ ನೆನಪುಗಳನ್ನು ಹಂಚಿಕೊಂಡರು.

ಹಾಸ್ಯ ಪಾತ್ರಗಳತ್ತ ಒಲವು : ವೈಯಕ್ತಿಕವಾಗಿ ನನಗೆ ಹಾಸ್ಯಭರಿತ ಪಾತ್ರಗಳಲ್ಲಿ ಒಲವಿದೆ. ನಮ್ಮ ಮಾತುಗಳು ಜನರನ್ನು ನಗಿಸುತ್ತವೆ. ಹಾಸ್ಯಪಾತ್ರಗಳಲ್ಲಿ ಹಲವು ವಿಧಗಳಿವೆ. ಹಾಸ್ಯವೇ ಸ್ವ-ಭಾವವಾಗಿರುವ ಪಾತ್ರಗಳು ನನಗೆ ಇಷ್ಟ. ಚಿತ್ರರಂಗಕ್ಕೆ ಪ್ರವೇಶ ಪಡೆದ ಪ್ರಾರಂಭದ ವರ್ಷಗಳಲ್ಲಿ ಕಾಲ ಹೆಚ್ಚು ಯೋಚನೆ ಮಾಡದೆ ಚಿತ್ರಗಳನ್ನು ಒಪ್ಪಿಕೊಳ್ಳುತ್ತಿದ್ದೆ. ಅನಂತರ ಸಮಾಜಕ್ಕೆ ಸಂದೇಶ ನೀಡುವ ಮತ್ತು ಜನಾಭಿರುಚಿ ಚಿತ್ರಗಳನ್ನು ಒಪ್ಪಿಕೊಳ್ಳಲಾರಂಭಿಸಿದೆ. ಇಂದಿಗೂ ಮುಖ್ಯ ಪಾತ್ರಗಳನ್ನು ಆಧರಿಸಿದ ಚಿತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದೇನೆ ಎಂದು ಹೇಳಿದರು.

ಶಂಕರ್‌ ಬಹಳ ಚತುರ : ಶಂಕರನಾಗ್‌ ನನಗಿಂತ ಆರು ವರ್ಷ ಚಿಕ್ಕವನು. ಆಶ್ರಮದ ಸಂಸ್ಕಾರ ಮತ್ತು ಸಂಸ್ಕೃತಿ ಅವನಲ್ಲಿ ಇತ್ತು. ಓದಿನಲ್ಲಿ ತುಂಬಾ ಚುರುಕು. ಅವನನ್ನು ನೋಡಿಕೊಳ್ಳುವ ಸಂಪೂರ್ಣ ಜವಾಬ್ದಾರಿ ನನ್ನ ಮೇಲಿತ್ತು. ಶಂಕರ್‌ಗೆ ಶಾಲೆಗಳಲ್ಲಿ ಆಯೋಜಿಸುತ್ತಿದ್ದ ಏಕಪಾತ್ರಾಭಿನಯ, ನಾಟಕಗಳಲ್ಲಿ ಬಹುಮಾನ ಸಿಗುತ್ತಿತ್ತು. ಕ್ರಮೇಣವಾಗಿ ರಂಗಭೂಮಿ ಪ್ರವೇಶಿಸಿದ. ಅನಂತರ ಚಿತ್ರರಂಗಕ್ಕೆ ಪ್ರವೇಶಿಸಿ ವಿವಿಧ ಚಿತ್ರಗಳಲ್ಲಿ ನಟಿಸಿ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದ. ಇದರ ನಡುವೆ ಮಾಲ್ಗುಡಿ ಡೇಸ್‌, ಜತೆಗೆ ಹಲವು ಯೋಜನೆಗಳಿದ್ದವು.  ದೇವರ ಇಚ್ಛೆ, 35ನೇ ವರ್ಷಕ್ಕೆ ಅವನನ್ನು ದೇವರು ಕರೆಸಿಕೊಂಡರು ಎಂದರು ಅನಂತನಾಗ್‌.

 ಸಿನೆಮಾಕ್ಕೆ ಸವಾಲು, ದೇಸೀ ಒಟಿಟಿ ಅಗತ್ಯ : ಪ್ರಸ್ತುತ ಕೊರೊನಾ ಕಾಲಘಟ್ಟದಲ್ಲಿ 18 ತಿಂಗಳುಗಳಿಂದ ಚಿತ್ರರಂಗ ಬಂದ್‌ ಆಗಿದೆ. ಚಿತ್ರ ಮಂದಿರಗಳು ತುಂಬುತ್ತಿಲ್ಲ. ಪ್ರಸ್ತುತ ಒಟಿಟಿ ಹಾವಳಿಯಿಂದ ಸೆನ್ಸಾರ್‌ ಮಾಡದ ಚಿತ್ರಗಳು ರಾಜಾರೋಷವಾಗಿ ಬಿಡುಗಡೆಯಾಗುತ್ತಿವೆ. ನಮ್ಮ ಸಂಸ್ಕೃತಿ ಮತ್ತು ಸಂಸ್ಕಾರಗಳನ್ನು ಪ್ರತಿಬಿಂಬಿಸುವ ದೊಡ್ಡ ಸವಾಲು ಎಲ್ಲರ ಮುಂದೆ ಇದೆ. ಕೊರೊನಾದಿಂದಾಗಿ ಚಿತ್ರಗಳಿಗೆ ಮಾರುಕಟ್ಟೆ ಒದಗಿಸುವುದು ಕಷ್ಟವಾಗುತ್ತಿದೆ.

ವಿದೇಶಿಗರ ನೆಟ್ ಫ್ಲಿಕ್ಸ್‌ನಂತಹ ಒಟಿಟಿಗಳ ಬದಲು ನಮ್ಮದೇ ದೇಶ ಅಥವಾ ರಾಜ್ಯದ ಒಟಿಟಿ ವೇದಿಕೆ ಪ್ರಾರಂಭವಾಗಬೇಕಿದೆ. ಸರಕಾರಗಳು ಅಥವಾ ಖಾಸಗಿಯವರು ಯಾ ಸಂಯುಕ್ತವಾಗಿ ಇದಕ್ಕೆ ಮನಸ್ಸು ಮಾಡಬೇಕಿದೆ. 1970ರಿಂದ ಇದುವರೆಗೆ ಚಿತ್ರರಂಗ ಹಂತ ಹಂತವಾಗಿ ಬದಲಾವಣೆಯಾಗುತ್ತಲೇ ಇದೆ.

ಚಿತ್ರ ಎನ್ನುವುದು ಮನೋರಂಜನೆಯ ಜತೆಗೆ ಜನರಿಗೆ ಮಾಹಿತಿ ಮತ್ತು ಅರಿವು ಮೂಡಿಸುವ ಕೆಲಸ ಮಾಡಬೇಕು. ಕೇವಲ ಮನೋರಂಜನೆಗೆ ಸೀಮಿತಗೊಂಡದ ಚಿತ್ರ ಪ್ರತೀ ಬಾರಿ ಯಶಸ್ವಿಯಾಗಬೇಕು ಎಂದೇನಿಲ್ಲ. ಈಗ ಸವಾಲುಗಳ ಜತೆಗೆ ಹೊಸ ಪ್ರತಿಭೆಗಳಿಗೆ ಸಿನೆಮಾ ರಂಗದಲ್ಲಿ ಸಾಕಷ್ಟು ಅವಕಾಶಗಳು ತೆರೆದುಕೊಳ್ಳುತ್ತಿವೆ. ಯಾವ ಚಿತ್ರ ಯಶಸ್ವಿಯಾಗುತ್ತದೆ, ಯಾವುದು ಸೋಲುತ್ತದೆ ಎಂದು ಊಹಿಸುವುದು ಯಾರಿಗೂ ಸಾಧ್ಯವಿಲ್ಲ. ಇದು ಸತ್ವಪರೀಕ್ಷೆಯ ಕಾಲ ಎಂದರು.

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Usire Usire: ಕೈ ಕೊಟ್ಟ ನಿರ್ದೇಶಕ; ನಿರ್ಮಾಪಕ ಕಂಗಾಲು

Usire Usire: ಕೈ ಕೊಟ್ಟ ನಿರ್ದೇಶಕ; ನಿರ್ಮಾಪಕ ಕಂಗಾಲು

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

O2

O2: ತೆರೆಗೆ ಬಂತು ಓ2; ಚಿತ್ರದ ಮೇಲೆ ಆಶಿಕಾ ನಿರೀಕ್ಷೆ

nalkane ayama kannada movie

Sandalwood; ‘ನಾಲ್ಕನೇ ಆಯಾಮ’ ಮೇಲೆ ಗೌತಮ್‌ ಕನಸು: ಇಂದು ತೆರೆಗೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.