ಪುನೀತ್‌ – ಸೂರಿ ಕಾಂಬಿನೇಶನ್‌ನಲ್ಲಿ ಹೊಸ ಚಿತ್ರ


Team Udayavani, Oct 15, 2018, 11:36 AM IST

puneth-suri.jpg

ನಿರ್ದೇಶಕ ಸೂರಿ ಹಾಗೂ ಪುನೀತ್‌ ರಾಜ್‌ಕುಮಾರ್‌ ಕಾಂಬಿನೇಶನ್‌ನಲ್ಲಿ ಸಿನಿಮಾ ಆರಂಭವಾಗಲಿದೆ ಎಂದರೆ ಆ ಚಿತ್ರದ ಬಗ್ಗೆ ಮುಹೂರ್ತ ದಿನದಿಂದಲೇ ಕುತೂಹಲ ಹೆಚ್ಚಿರುತ್ತದೆ. ಅದಕ್ಕೆ ಕಾರಣ ಆ ಜೋಡಿಯ ಹಿಟ್‌ ಸಿನಿಮಾಗಳು. “ಜಾಕಿ’, “ಅಣ್ಣಾ ಬಾಂಡ್‌’, “ದೊಡ್ಮನೆ ಹುಡುಗ’ ಚಿತ್ರಗಳ ಮೂಲಕ ಅಭಿಮಾನಿಗಳನ್ನು ರಂಜಿಸಿರುವ ಈ ಜೋಡಿ ಈಗ ಮತ್ತೂಮ್ಮೆ ಒಟ್ಟಾಗುವ ಸೂಚನೆ ಸಿಕ್ಕಿದೆ.

ಈ ಬಾರಿ “ಜಾಕಿ’ ತರಹದ ಔಟ್‌ ಅಂಡ್‌ ಔಟ್‌ ಕಮರ್ಷಿಯಲ್‌ ಸಿನಿಮಾವನ್ನು ಕೊಡುವ ಉತ್ಸಾಹದಲ್ಲಿದೆ ಈ ಜೋಡಿ ಎಂಬ ಸುದ್ದಿ ಗಾಂಧಿನಗರದಲ್ಲಿ ಓಡಾಡುತ್ತಿದೆ. ಹೌದು, ಸೂರಿ ಹಾಗೂ ಪುನೀತ್‌ ರಾಜ್‌ಕುಮಾರ್‌ ಕಾಂಬಿನೇಶನ್‌ನಲ್ಲಿ ಮತ್ತೂಂದು ಸಿನಿಮಾ ಆರಂಭವಾಗುವ ಸಾಧ್ಯತೆ ಇದೆ. ಸದ್ಯ ಪುನೀತ್‌ರಾಜ್‌ಕುಮಾರ್‌ “ನಟ ಸಾರ್ವಭೌಮ’ ಚಿತ್ರದಲ್ಲಿ ಬಿಝಿಯಾದರೆ, ಸೂರಿ “ಪಾಪ್‌ಕಾರ್ನ್ ಮಂಕಿ ಟೈಗರ್‌’ ಚಿತ್ರದಲ್ಲಿ ತೊಡಗಿದ್ದಾರೆ.

ಇಬ್ಬರು ಕೂಡಾ ತಮ್ಮ ಚಿತ್ರೀಕರಣವನ್ನು ಮುಗಿಸಿಕೊಂಡು ಹೊಸ ಸಿನಿಮಾಕ್ಕಾಗಿ ಸೇರಲಿದ್ದಾರೆನ್ನಲಾಗಿದೆ. ಅಂದಹಾಗೆ, ಇದು ಪುನೀತ್‌ರಾಜಕುಮಾರ್‌ ಅವರ 30ನೇ ಸಿನಿಮಾವಾಗಲಿದೆ. ಈ ಬಗ್ಗೆ “ಉದಯವಾಣಿ’ಯೊಂದಿಗೆ ಮಾತನಾಡಿದ ನಿರ್ದೇಶಕ ಸೂರಿ, “ಪುನೀತ್‌ ಅವರ ಜೊತೆ ಸಿನಿಮಾ ಮಾಡುವ ಆಸೆ ಯಾವತ್ತಿಗೂ ಇದೆ. ಅವರು ನನಗೆ ತುಂಬಾ ಇಷ್ಟದ ನಟ. ಪಾತ್ರಕ್ಕೆ ಹೇಗೆ ಬೇಕೋ ಹಾಗೆ ಅವರು ಹೊಂದಿಕೊಳ್ಳುತ್ತಾರೆ.

ನಿರ್ದೇಶಕ ಏನು ಕನಸು ಕಂಡಿರುತ್ತಾನೋ ಅದನ್ನು ಪುನೀತ್‌ ಅವರಲ್ಲಿ ತೆಗೆಯಬಹುದು. “ಟಗರು-2′ ಡಿಸ್ಕಶನ್‌ ಸಮಯದಲ್ಲೇ ಪುನೀತ್‌ ಅವರಿಗೆ ಸಿನಿಮಾ ಮಾಡುವ ಕುರಿತು ಒಂದು ಸುತ್ತಿನ ಮಾತುಕತೆಯಾಗಿದೆ. “ಜಾಕಿ’ ತರಹದ ಒಂದು ಪಾತ್ರ ನನ್ನ ಕಲ್ಪನೆಯಲ್ಲಿದೆ. ಅದನ್ನಿಟ್ಟುಕೊಂಡು ಮಾಡುವ ಕನಸಿದೆ’ ಎನ್ನುವ ಮೂಲಕ ಮುಂದೆ ಸಿನಿಮಾ ಸಿನಿಮಾ ಮಾಡುವ ಸುಳಿವು ಬಿಟ್ಟುಕೊಡುತ್ತಾರೆ ಸೂರಿ. 

ಪಾಪ್‌ಕಾರ್ನ್ನಲ್ಲಿ ಸೂರಿಗೆ ಮಗು ಸವಾಲು: ಸದ್ಯ ಸೂರಿ “ಪಾಪ್‌ಕಾರ್ನ್ ಮಂಕಿ ಟೈಗರ್‌’ನಲ್ಲಿ ಬಿಝಿ. ಕಥೆಯಲ್ಲಿ ಒಂದು ವರ್ಷದೊಳಗಿನ ಮಗು ಕೂಡಾ ಪ್ರಮುಖ ಪಾತ್ರ ವಹಿಸುವುದರಿಂದ ಸೂರಿ ಆ ಮಗುವಿನ ದೃಶ್ಯಗಳನ್ನು ಚಿತ್ರೀಕರಿಸಿಕೊಳ್ಳುತ್ತಿದ್ದಾರೆ.

“ಮಗು ಬೆಳೆದು ಬಿಡುತ್ತದೆ ಎಂದು ನಾವು ಮೊದಲು ಮಗುವಿನ ದೃಶ್ಯಗಳನ್ನು ಚಿತ್ರೀಕರಿಸುತ್ತಿದ್ದೇವೆ. ತುಂಬಾ ಸವಾಲಿನ ಕೆಲಸವದು. ಏಕೆಂದರೆ ಆ ಪುಟ್ಟ ಮಗು ಎದುರು ಸ್ಕ್ರಿಪ್ಟ್ ವರ್ಕ್‌ ಆಗೋದಿಲ್ಲ. ಅದು ನಗುವಾಗ, ಅಳುವಾಗ ನಾವು ಚಿತ್ರೀಕರಣ ಮಾಡಬೇಕು’ ಎಂದು ಅನುಭವ ಬಿಚ್ಚಿಡುತ್ತಾರೆ ಸೂರಿ.

ಪುನೀತ್‌- ಸಂತೋಷ್‌ ಚಿತ್ರ ಜ್ವಾಲಾಮುಖಿ?: ಪುನೀತ್‌ರಾಜಕುಮಾರ್‌ ಹಾಗೂ ಸಂತೋಷ್‌ ಆನಂದರಾಮ್‌ ಕಾಂಬಿನೇಶನ್‌ನಲ್ಲಿ ಬರುತ್ತಿರುವ ಹೊಸ ಚಿತ್ರದ ಶೀರ್ಷಿಕೆ ನವೆಂಬರ್‌ 1 ರಂದು ಬಿಡುಗಡೆಯಾಗಲಿದೆ. ಈ ನಡುವೆಯೇ ಆ ಸಿನಿಮಾ ಕುರಿತು ಮತ್ತೂಂದು ಹೊಸ ಟೈಟಲ್‌ ಕೇಳಿಬರುತ್ತಿದೆ. ಅದು “ಜ್ವಾಲಾಮುಖಿ’.

ಪುನೀತ್‌ ಅವರ 29ನೇ ಚಿತ್ರಕ್ಕೆ “ಜ್ವಾಲಾಮುಖಿ’ ಎಂದು ಟೈಟಲ್‌ ಇಡಲಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಹಿಂದೆ “ಪರಶುರಾಮ್‌’, “ದೇವತಾ ಮನುಷ್ಯ’ ಹೆಸರುಗಳು ಕೇಳಿಬಂದುವು. ಈಗ “ಜ್ವಾಲಾಮುಖಿ’. ಡಾ.ರಾಜ್‌ಕುಮಾರ್‌ ಅವರು 1985ರಲ್ಲಿ ನಟಿಸಿದ ಸಿನಿಮಾವಿದು. ಈಗ ಆ ಟೈಟಲ್‌ನಡಿ ಪುನೀತ್‌ ನಟಿಸುತ್ತಾರೆನ್ನಲಾಗಿದೆ. ಎಲ್ಲದಕ್ಕೂ ನ.1 ರಂದು ಸ್ಪಷ್ಟತೆ ಸಿಗಲಿದೆ. 

ಟಾಪ್ ನ್ಯೂಸ್

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Usire Usire: ಕೈ ಕೊಟ್ಟ ನಿರ್ದೇಶಕ; ನಿರ್ಮಾಪಕ ಕಂಗಾಲು

Usire Usire: ಕೈ ಕೊಟ್ಟ ನಿರ್ದೇಶಕ; ನಿರ್ಮಾಪಕ ಕಂಗಾಲು

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

O2

O2: ತೆರೆಗೆ ಬಂತು ಓ2; ಚಿತ್ರದ ಮೇಲೆ ಆಶಿಕಾ ನಿರೀಕ್ಷೆ

nalkane ayama kannada movie

Sandalwood; ‘ನಾಲ್ಕನೇ ಆಯಾಮ’ ಮೇಲೆ ಗೌತಮ್‌ ಕನಸು: ಇಂದು ತೆರೆಗೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

2-aa

ಮೂಡುಬೆಳ್ಳೆ : ವೈಭವದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ

1-weew

Mudigere; ಹುಲಿ ಹತ್ಯೆ ಆರೋಪದ ಮೇಲೆ ಇಬ್ಬರ ಬಂಧನ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

1-qeqwqwe

Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.