ಹೊಸ ಗೆಟಪ್ನಲ್ಲಿ ಅಭಿಷೇಕ್
ಗೆಳೆಯನಿಗೆ ನಿಖಿಲ್ ವಿಶ್
Team Udayavani, Sep 8, 2019, 3:03 AM IST
“ಲುಕಿಂಗ್ ಶಾರ್ಪ್… ನಿನ್ನ ಮುಂದಿನ ಚಿತ್ರಕ್ಕೆ ಶುಭಾಶಯ’ ಹೀಗೆ ಶುಭಾಶಯ ಹೇಳಿದ್ದು , ನಟ ನಿಖಿಲ್ಕುಮಾರ್. ಅವರು ಹೇಳಿದ್ದು ನಟ ಅಭಿಷೇಕ್ ಅಂಬರೀಶ್ ಅವರಿಗೆ. ಹೌದು, ನಿಖಿಲ್ಕುಮಾರ್ ಅವರು ಅಭಿಷೇಕ್ ಅಂಬರೀಶ್ ಅವರಿಗೆ ಶುಭಕೋರಿದ್ದಾರೆ. ಅದಕ್ಕೆ ಕಾರಣ, ಅಭಿಷೇಕ್ ಅಂಬರೀಶ್ ತಮ್ಮ ಇನ್ಸ್ಟಾಗ್ರಾಂನಲ್ಲಿ ಹಾಕಿಕೊಂಡಿದ್ದ ಹೊಸ ಗೆಟಪ್ನ ಫೋಟೋ.
ಅಷ್ಟಕ್ಕೂ ಆ ಫೋಟೋ ಯಾವುದು ಅನ್ನುವುದಕ್ಕೆ ಕೆಳಗಿನ ಫೋಟೋ ಸಾಕ್ಷಿ. ಅಭಿಷೇಕ್ “ಅಮರ್’ ಚಿತ್ರದ ಬಳಿಕ ಯಾವ ಚಿತ್ರ ಮಾಡುತ್ತಾರೆ ಎಂಬ ಪ್ರಶ್ನೆ ಎಲ್ಲರಲ್ಲೂ ಗಿರಕಿಹೊಡೆಯುತ್ತಲೇ ಇದೆ. ಆದರೆ, ಅಭಿಷೇಕ್ ಮಾತ್ರ ಯಾವುದೇ ಸಿನಿಮಾ ಒಪ್ಪಿಕೊಂಡ ಬಗ್ಗೆ ಸ್ಪಷ್ಟಪಡಿಸಿಲ್ಲ. ಮೂಲಗಳ ಪ್ರಕಾರ ಎರಡು ಕಥೆಗಳನ್ನು ಓಕೆ ಮಾಡಿದ್ದು, ಇಷ್ಟರಲ್ಲೇ ಆ ಬಗ್ಗೆ ಮಾಹಿತಿ ಹೊರಬೀಳಲಿದೆ.
ಈ ನಡುವೆ, ಅಭಿಷೇಕ್ ಅವರು, ತಮ್ಮ ಇನ್ಸ್ಟಾಗ್ರಾಂನಲ್ಲಿ ದಪ್ಪನೆಯ ಗಡ್ಡದ ಜೊತೆಗೆ ಸಖತ್ ರಗಡ್ ಎನಿಸುವ ರೀತಿ ತಿರುವಿದ ಮೀಸೆ ಬಿಟ್ಟುಕೊಂಡಿರುವ ಫೋಟೋ ಹಾಕಿಕೊಂಡಿದ್ದರು. ಆ ಫೋಟೋ ಹಂಚಿಕೊಂಡ ಕೆಲವೇ ಗಂಟೆಗಳಲ್ಲಿ ಸಾಕಷ್ಟು ಲೈಕ್ಸ್ ಬಂದಿದೆ. ಅದೇ ಸಮಯದಲ್ಲಿ ನಿಖಿಲ್ ಕುಮಾರ್ ಕೂಡ ಆ ಫೋಟೋ ನೋಡಿ, “ಲುಕಿಂಗ್ ಶಾರ್ಪ್.. ನಿನ್ನ ಮುಂದಿನ ಚಿತ್ರಕ್ಕೆ ಶುಭಾಶಯ..’ ಎಂದು ಕಾಮೆಂಟ್ ಮಾಡಿದ್ದಾರೆ.
View this post on Instagram
ಇನ್ನು, ನಿಖಿಲ್ ಕುಮಾರ್ ಮಾಡಿರುವ ಕಾಮೆಂಟ್ಗೆ ಅಭಿಷೇಕ್ ಅಂಬರೀಶ್ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಿಖಿಲ್ ಪ್ರತಿಕ್ರಿಯೆಗೆ, “ಥ್ಯಾಂಕ್ಸ್ ಯೂ ಬಡಿ… ಅಭಿಮನ್ಯು ಪಾತ್ರದಲ್ಲಿ ನಿಜಕ್ಕೂ ಅದ್ಭುತವಾಗಿ ನಟಿಸಿದ್ದೀಯಾ. ನಿನಗೂ ಒಳ್ಳೆಯದಾಗಲಿ. ಆದಷ್ಟು ಬೇಗ ನಿನ್ನ ಬೆಳ್ಳಿತೆರೆ ಮೇಲೆ ನೋಡಲು ಇಚ್ಛಿಸುತ್ತೇನೆ’ ಎಂದಿದ್ದಾರೆ. ಎಲ್ಲಾ ಸರಿ, ಅಭಿಷೇಕ್ ಈಗ ಹೊಸ ಲುಕ್ನಲ್ಲಿ ಕಾಣಿಸಿಕೊಂಡಿರುವ ಉದ್ದೇಶ ಏನು ಎಂಬ ಪ್ರಶ್ನೆ ಸಹಜವಾಗಿಯೇ ಇದೆ.
ಆದರೂ, ಅವರು ಮುಂದಿನ ಚಿತ್ರದಲ್ಲಿ ಪಕ್ಕಾ ಮಾಸ್ ಪಾತ್ರದಲ್ಲಿ ಮಿಂಚಲಿದ್ದಾರೆ ಎಂಬ ನಿರೀಕ್ಷೆಯಂತೂ ಇದೆ. ಅದೇನೆ ಇರಲಿ, ಮಂಡ್ಯ ಲೋಕಸಭೆ ಚುನಾವಣೆ ನಂತರ ಅಭಿಷೇಕ್ ಮತ್ತು ನಿಖಿಲ್ ಕುಮಾರ್ ಎಲ್ಲೂ ಒಟ್ಟಿಗೆ ಕಾಣಿಸಿಕೊಂಡಿಲ್ಲ. ಆದರೆ ಇಬ್ಬರ ನಡುವೆ ಅದೇ ಗೆಳೆತನವಿದೆ ಎಂಬುದನ್ನು ಸಾಮಾಜಿಕ ತಾಣಗಳಲ್ಲಿ ಹೇಳಲಾಗಿತ್ತು. ಅದೀಗ ಪುನಃ ಸಾಬೀತಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Drama: ಪ್ರೇಕ್ಷಕರ ಮನಗೆದ್ದ “ಸೀತಾರಾಮ ಚರಿತಾ”
Puttur: ಶ್ರೀ ಮಹಾಲಿಂಗೇಶ್ವರ ದೇವರ ಅವಭೃಥ ಸವಾರಿ
Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ
Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್
Belagavi; ಕಾಂಗ್ರೆಸ್ ಸರ್ಕಾರದ ಓಲೈಕೆಯಿಂದ ಜಿಹಾದಿ ಕೃತ್ಯಗಳು ಹೆಚ್ಚುತ್ತಿದೆ: ಶೆಟ್ಟರ್