ಗೆದ್ದ ಖುಷಿಯಲ್ಲಿ ಆಕ್ಟ್ 1978
Team Udayavani, Nov 27, 2020, 3:25 PM IST
ಕಳೆದ ವಾರ ತೆರೆಕಂಡಿದ್ದ “ಆಕ್ಟ್-1978′ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಚಿತ್ರ ಬಿಡುಗಡೆಯಾದ ಬಹುತೇಕ ಸಿಂಗಲ್ ಸ್ಕ್ರೀನ್ ಮತ್ತು ಮಲ್ಟಿಪ್ಲೆಕ್ಸ್ಗಳಲ್ಲಿ ಹೌಸ್ಫುಲ್ ಪ್ರದರ್ಶನಕಾಣುತ್ತಿದೆ. ಇದೇ ಖುಷಿಯಲ್ಲಿರುವಚಿತ್ರತಂಡ, ತಮ್ಮ ಚಿತ್ರದ ಬಿಡುಗಡೆಯ ಬಳಿಕ ನಡೆದ ಬೆಳವಣಿಗೆಗಳ ಬಗ್ಗೆ ನೀಡಲು ಮಾಧ್ಯಮಗಳ ಮುಂದೆ ಬಂದಿತ್ತು.
ಮೊದಲಿಗೆ ಮಾತನಾಡಿದ ನಿರ್ದೇಶಕ ಮಂಸೋರೆ, “ನಾವು ಸಿನಿಮಾ ರಿಲೀಸ್ ಮಾಡಬೇಕೆಂದು ಹೊರಟಾಗ ಒಂದಿಷ್ಟು ಸ್ನೇಹಿತರು ಈ ರಿಸ್ಕ್ ಬೇಕಿತ್ತಾ ಎನ್ನುತ್ತಿದ್ದರು. ಆದರೆ ನಿರ್ಮಾಪಕರು ನಮಗೆ ಬೆಂಬಲವಾಗಿ ನಿಂತು, ನಮಗೆಲ್ಲ ಧೈರ್ಯ ತುಂಬಿದರು. ಈಗ ಸಿನಿಮಾ ಸಕ್ಸಸ್ ಆಗಿದೆ. ಒಳ್ಳೆ ಕಂಟೆಂಟ್ ಸಿನಿಮಾ ಬಂದರೆ ಜನ ಯಾವತ್ತೂ ಕೈಬಿಡುವುದಿಲ್ಲ ಎಂಬುದು ಮತ್ತೂಮ್ಮೆ ಸಾಬೀತಾಗಿದೆ. ನಮ್ಮ ಸಿನಿಮಾದಲ್ಲಿ ಯಾವುದೇ ಸ್ಟಾರ್ ಇಲ್ಲ, ಆದ್ರೆ ಈಗ ಎಲ್ಲಾ ಸ್ಟಾರ್ ನಮ್ಮ ಸಿನಿಮಾಕ್ಕೆ ಸಪೋರ್ಟ್ ಮಾಡ್ತಿದ್ದಾರೆ. ಪುನೀತ್, ಶಿವಣ್ಣ, ಸುದೀಪ್, ದರ್ಶನ್, ಸತೀಶ್ ಸೇರಿದಂತೆ ಎಲ್ಲರೂ ಸಿನಿಮಾ ಚೆನ್ನಾಗಿದೆ ಎಂದಿದ್ದಾರೆ. ಇಡೀಕನ್ನಡ ಇಂಡಸ್ಟ್ರಿ ನಮಗೆ ಬೆಂಬಲವಾಗಿ ನಿಂತಿದೆ. ಫಸ್ಟ್ ಡೇ ಜನರಿಗೆ ಸ್ವಲ್ಪ ಭಯ ಇತ್ತು. ಯಾವಾಗ ಸಿನಿಮಾದ ಬಗ್ಗೆ ಒಳ್ಳೇ ವಿಮರ್ಶೆ ಬರೋದಕ್ಕೆ ಶುರುವಾಯ್ತೋ ಆಗ ಆಡಿಯನ್ಸ್ ತಾವಾಗಿಯೇ ಥಿಯೇಟರ್ಗೆ ಬಂದರು.ಕನ್ನಡ ಮಾತ್ರವಲ್ಲದೆ ಹಿಂದಿ, ತೆಲುಗು, ತಮಿಳು ಇಂಡಸ್ಟ್ರಿಕೂಡ ನಮ್ಮ ಸಿನಿಮಾದ ರಿಸಲ್ಟ್ ಏನಾಗುತ್ತೋ ಎಂದು ಎದುರು ನೋಡುತ್ತಿತ್ತು’ ಎಂದರು.
ನಿರ್ಮಾಪಕ ದೇವರಾಜ್ ಮಾತನಾಡಿ, “ನನಗಿದು ಫಸ್ಟ್ ಹಿಟ್ ಸಿನಿಮಾ, ಎಲ್ಲ ಅಂದುಕೊಂಡಂತೆ ಆಗಿದ್ದರೆ,ಕಳೆದ ಮೇ ತಿಂಗಳಲ್ಲೇ ನಮ್ಮ ಸಿನಿಮಾ ರಿಲೀಸ್ ಮಾಡಬೇಕಿತ್ತು. ಆದ್ರೆ ಕೋವಿಡ್ ಕಾರಣದಿಂದ ರಿಲೀಸ್ ಆಗಲಿಲ್ಲ. ಈಗ ರಿಸ್ಕ್ ಇಟ್ಟುಕೊಂಡೆ ಸಿನಿಮಾರಿಲೀಸ್ ಮಾಡಿದ್ದೇವೆ. ಅಂದುಕೊಂಡಂತೆ ಸಿನಿಮಾಗೆ ಒಳ್ಳೆಯ ರೆಸ್ಪಾನ್ಸ್ ಬರುತ್ತಿದೆ. ಮುಂದೆ ಬರುವವರಿಗೆ ದಾರಿ ಸಿಕ್ಕಂತಾಗಿದೆ’ ಎಂದರು.
ಹಿರಿಯ ನಟಿ ಶೃತಿ ಮಾತನಾಡಿ, “ಲಾಕ್ಡೌನ್ ನಂತರ ಒಳ್ಳೇ ಸಿನಿಮಾ ರಿಲೀಸ್ ಆಗಿದೆ. ಇಡಿ ಚಿತ್ರರಂಗವನ್ನು ಈ ಸಿನಿಮಾ ಒಟ್ಟುಗೂಡಿಸಿದೆ.ಕನ್ನಡ ಜನರಿಗೆ ಚಿತ್ರರಂಗದ ಮೇಲೆ ಎಷ್ಟು ಪ್ರೀತಿಯಿದೆ ಅನ್ನೋದನ್ನ ಈ ಸಿನಿಮಾ ತೋರಿಸಿಕೊಟ್ಟಿದೆ. ನನ್ನದು ಒಂದೇ ದಿನದ ಪಾತ್ರವಾದರೂ ತುಂಬ ತೃಪ್ತಿಕೊಟ್ಟಿದೆ. ಚಿತ್ರದಲ್ಲಿ ಅಭಿನಯಿಸಿದ್ದಕ್ಕೆ ಖುಷಿಯಾಗಿದೆ’ ಎಂದರು.
ಇದನ್ನೂ ಓದಿ :ಕೋಮಲ್ 2020 ಗೆ ಮುಹೂರ್ತ
“ಸಿನಿಮಾ ರಿಲೀಸ್ ಆದ ದಿನದಿಂದಲೂ ನಾವು ಥಿಯೇಟರ್ಗೆ ಹೋಗುತ್ತಿದ್ದೇವೆ. ಜನ ತುಂಬಾ ಉತ್ಸಾಹದಿಂದ ಸಿನಿಮಾ ನೋಡುತ್ತಿದ್ದಾರೆ. ಆರಂಭದಲ್ಲಿ ನಮಗೂ ನಿರ್ದೇಶಕರು ತುಂಬಾ ರಿಸ್ಕ್ ತೆರೆದುಕೊಳ್ಳುತ್ತಿದ್ದಾರೆ ಎನಿಸಿತ್ತು. ನಮ್ಮ ಶ್ರಮ ವ್ಯರ್ಥ ಆಗಲಿಲ್ಲ’ ಎಂದರು.
ನಟ ಸಂಚಾರಿ ವಿಜಯ್. ಹಿರಿಯನಟ ಅವಿನಾಶ್ ಮಾತನಾಡಿ, “ಈ ಸಿನಿಮಾದಲ್ಲಿ ಕಥೆಯೇ ಹೀರೋ. ಥಿಯೇಟರ್ಗಳು ಓಪನ್ ಆಗಿ ತಿಂಗಳೇ ಆಗ್ತಾ ಬಂತು. ಸಿನಿಮಾ ರಿಲೀಸ್ ಮಾಡಲು ಯಾರೂ ಮುಂದೆ ಬರ್ತಾ ಇರಲಿಲ್ಲ. ಎಲ್ಲ ನೀನು ಹೋಗು, ನಾನು ಹೋಗು ಎನ್ನುತ್ತಿದ್ದರು. ಬೆಕ್ಕಿಗೆ ಘಂಟೆಕಟ್ಟೊರು ಯಾರು? ಎಂಬ ಪ್ರಶ್ನೆ ಎದುರಾಗಿತ್ತು. ಅಂತಾ ಟೈಮ್ನಲ್ಲಿ ಈ ನಿರ್ಮಾಪಕರು ಬೆಕ್ಕಿಗೆ ಘಂಟೆ ಕಟ್ಟಿದ್ದಾರೆ. ಸಿನಿಮಾ ಇಂಡಸ್ಟ್ರಿಗೆ ಒಂದು ಹೊಸ ಚೈತನ್ಯ ತುಂಬಿದ್ದಾರೆ. ನಿರೀಕ್ಷೆಗೂ ಮೀರಿದ ಸಪೋರ್ಟ್ ನಮ್ಮ ಚಿತ್ರಕ್ಕೆ ಸಿಗುತ್ತಿದೆ’ ಎಂದರು.
ಬೆಂಜಮಿನ್ ಆಗಿ ರಾಘುಗೆ ಮೆಚ್ಚುಗೆ :
ಆಕ್ಟ್ 1978 ಚಿತ್ರ ನೋಡಿದವರಿಗೆ ಅಲ್ಲೊಂದು ಪಾತ್ರ ಗಮನ ಸೆಳೆಯುತ್ತದೆ. ಅದು ಬೆಂಜಮಿನ್ ಪಾತ್ರ.ಸೀರಿಯಸ್ ವಾತಾವರಣದ ನಡುವೆ ಆಗಾಗ ತಮ್ಮ ಡೈಲಾಗ್, ಮ್ಯಾನರೀಸಂ ಮೂಲಕ ಗಮನ ಸೆಳೆಯುವ ಬೆಂಜಮಿನ್ ಪಾತ್ರದಲ್ಲಿ ಕಾಣಿಸಿಕೊಂಡಿರೋದು ರಾಘು ಶಿವಮೊಗ್ಗ. ಚೂರಿಕಟ್ಟೆ ಸಿನಿಮಾನಿರ್ದೇಶಿಸಿ ಮೆಚ್ಚುಗೆ ಪಡೆದಿದ್ದ ರಾಘು ಈಗ ನಟನೆಯತ್ತ ಮುಖಮಾಡಿದ್ದಾರೆ. ಆಕ್ಟ್ 1978 ನೋಡಿದವರಿಂದ ರಾಘು ಅವರಿಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಜೊತೆಗೆ ಹೊಸ ಸಿನಿಮಾಗಳ ಆಫರ್ ಕೂಡಾ ಬರುತ್ತಿವೆ. ಈಗಾಗಲೇ ಮತ್ತೂಂದು ಹೊಸಸಿನಿಮಾದಲ್ಲಿ ನಟಿಸುತ್ತಿದ್ದಾರೆ. “ನನಗೆ ಯಾವುದೇ ಪಾತ್ರವಾದರೂ ಮಾಡಲು ಸಿದ್ಧ. ಆದರೆ, ಅದರಲ್ಲಿ ವಿಭಿನ್ನತೆಇರಬೇಕು. ಆಕ್ಟ್ 1978 ಚಿತ್ರದ ನನ್ನ ಪಾತ್ರದ ಬಗ್ಗೆಮೆಚ್ಚುಗೆ ವ್ಯಕ್ತವಾಗುತ್ತಿದೆ. ಮುಂದೆ ನಟನೆಯತ್ತ ಹೆಚ್ಚು ಫೋಕಸ್ ಮಾಡುವ ಎಂದಿದ್ದೇನೆ’ ಎನ್ನುವುದು ರಾಘು ಮಾತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ವಸಂತ ಕಾಲ ಬಂದಾಗ…ತಾಪಮಾನ ಏರಿಕೆ- ಭಾರತದಲ್ಲಿ ವಸಂತ ಋತು ಕಣ್ಮರೆ!
Pan India: ಯಶ್ ʼಟಾಕ್ಸಿಕ್ʼ ಸಿನಿಮಾದ ಪ್ರಮುಖ ಪಾತ್ರದಲ್ಲಿ ಶ್ರುತಿ ಹಾಸನ್ ನಟನೆ – ವರದಿ
ಪೊಲೀಸರ ಭರ್ಜರಿ ಕಾರ್ಯಾಚರಣೆ: ದಾಖಲೆ ಇಲ್ಲದೇ ಕಾರಿನಲ್ಲಿ ಸಾಗಿಸುತ್ತಿದ್ದ 2.93 ಕೋಟಿ ಜಪ್ತಿ
Kushtagi: ವಸತಿ ನಿಲಯದ ಅವ್ಯವಸ್ಥೆ; ವಿದ್ಯಾರ್ಥಿಗಳಿಂದ ಪ್ರತಿಭಟನೆ
Bengaluru:ನಗರ್ತಪೇಟೆಯಲ್ಲಿ ಬಿಜೆಪಿ ಪ್ರತಿಭಟನೆಯ ಕಿಚ್ಚು; ಕ್ರಮದ ಭರವಸೆ, ಪ್ರತಿಭಟನೆ ವಾಪಸ್