ತಮಿಳುನಾಡಿನ ಶನಿದೇವರ ದರ್ಶನ ಪಡೆದ ನಟ ದರ್ಶನ್
Team Udayavani, Jul 24, 2021, 6:27 PM IST
ಚೆನ್ನೈ : ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಪಾಂಡಿಚೆರಿಯಲ್ಲಿರುವ ತಿರುನಲ್ಲಾರ್ ನಲ್ಲಿರುವ ಶನಿದೇವರ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಮಾಡಿಸಿದ್ದಾರೆ.
ದರ್ಶನ್ ಅವರತ್ತ ಒಂದಿಲ್ಲೊಂದು ವಿವಾದಗಳು ಹರಿದು ಬರುತ್ತಿವೆ. ಲಾಕ್ ಡೌನ್ ತೆರವಾಗಿ ಶೂಟಿಂಗ್ ನಲ್ಲಿ ಪಾಲ್ಗೊಳ್ಳಬೇಕೆನ್ನುವಷ್ಟರಲ್ಲಿ 25 ಕೋಟಿ ರೂ. ಸಾಲಕ್ಕೆ ಶ್ಯೂರಿಟಿ ಪ್ರಕರಣ ಬೆಳಕಿಗೆ ಬಂತು. ಇದಕ್ಕೆ ಸ್ವತಃ ದರ್ಶನ್ ಅವರೇ ಅಂತ್ಯ ಹೇಳುವ ಪ್ರಯತ್ನ ಮಾಡಿದರು. ಇದಾದ ಬಳಿಕ ಮೈಸೂರಿನ ಹೋಟೆಲ್ ನಲ್ಲಿ ದಲಿತ ವೇಟರ್ ಮೇಲೆ ದರ್ಶನ್ ಹಲ್ಲೆ ಮಾಡಿದ್ದಾರೆ ಎಂದು ಪತ್ರಕರ್ತ ಇಂದ್ರಜಿತ್ ಲಂಕೇಶ್ ಗಂಭೀರ ಆರೋಪ ಮಾಡಿದರು.
ಇಂದ್ರಜಿತ್ ಲಂಕೇಶ್ ಹಾಗೂ ದರ್ಶನ್ ಅವರ ನಡುವಿನ ಮಾತಿನ ಚಕಮಕಿ ಸಭ್ಯ ಭಾಷೆಯನ್ನು ಮೀರುವಂತಾಯಿತು. ಲಂಕೇಶ್ ವಿರುದ್ಧ ಆಕ್ರೋಶದಿಂದ ಮಾತನಾಡುತ್ತಿದ್ದ ಸಂದರ್ಭದಲ್ಲಿ ನಿರ್ಮಾಪಕ ಉಮಾಪತಿ ಹಾಗೂ ನಿರ್ದೇಶಕ ಜೋಗಿ ಪ್ರೇಮ್ ಅವರ ಹೆಸರು ಕೇಳಿ ಬಂತು. ದರ್ಶನ್ ಅವರು ಪ್ರೇಮ್ ಏನ್ ದೊಡ್ಡ ಪುಡುಂಗ್ ನಾ ? ಎಂದು ನುಡಿದಿದ್ದು ಮತ್ತೊಂದು ವಿವಾದಕ್ಕೆ ಕಾರಣವಾಯ್ತು.
ಹೀಗೆ ಸಾಲು ಸಾಲು ವಿವಾದಗಳು ಬೆನ್ನು ಬಿದ್ದಿದ್ದರಿಂದ ನೆಮ್ಮದಿ ಪಡೆಯೆಂದು ಸ್ನೇಹಿತರೊಂದಿಗೆ ದರ್ಶನ್ ತಮಿಳು ನಾಡಿಗೆ ಹೋಗಿದ್ದಾರೆ. ಅಲ್ಲಿರುವ ಶನಿದೇವರ ದರ್ಶನ ಪಡೆದು ವಿಶೇಷ ಪೂಜೆಯಲ್ಲಿ ಪಾಲ್ಗೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ