ತೊಂದರೆಯಾಗುವಂತಹ ಬಂದ್ ಬೇಡ: ನಟ ಯಶ್
Team Udayavani, Dec 26, 2021, 9:08 AM IST
ಬೆಳಗಾವಿಯಲ್ಲಿ ಎಂಇಎಸ್ ಪುಂಡಾಟ, ಸ್ವತಂತ್ರ ಹೋರಾಟಗಾರರ ಪ್ರತಿಮೆಗಳಿಗೆ ಮಸಿ ಬಳಿದಿರುವ ಪ್ರಕರಣವನ್ನು ಖಂಡಿಸಿ ಕನ್ನಡಪರ ಸಂಘಟನೆಗಳು ಇದೇ ಡಿ. 31ರ ಶುಕ್ರವಾರ ಕರ್ನಾಟಕ ಬಂದ್ ಗೆ ಕರೆ ನೀಡಿವೆ. ಡಿ. 31ರಂದು ಕರ್ನಾಟಕದಲ್ಲಿ ಬಹುತೇಕ ವ್ಯಾಪಾರ, ವಹಿವಾಟು, ಸಂಚಾರ ಮತ್ತಿತರ ಚಟುವಟಿಕೆಗಳು ಬಂದ್ ಆಗಲಿವೆ ಎನ್ನಲಾಗುತ್ತಿದೆ. ಚಿತ್ರರಂಗವು ಬಂದ್ ಗೆ ನೈತಿಕ ಬೆಂಬಲ ನೀಡಿದ್ದು, ಶೂಟಿಂಗ್, ಚಿತ್ರಪ್ರದರ್ಶನ ಎಂದಿನಂತೆ ಮುಂದುವರಿಯಲಿದೆ.
ಡಿ.31ರಂದು ಕರ್ನಾಟಕ ಬಂದ್ ಬಗ್ಗೆ ಪ್ರತಿಕ್ರಿಯಿಸಿರುವ ನಟ ರಾಕಿಂಗ್ ಸ್ಟಾರ್ ಯಶ್, “ಜನ ಸಾಮಾನ್ಯರಿಗೆ ತೊಂದರೆ ಆಗುವಂತೆ ಹಾಗೂ ನಮಗೆ ನಾವೇ ನಷ್ಟ ಮಾಡಿಕೊಂಡು ಇನ್ನೊಬ್ಬರ ಮೇಲೆ ಪ್ರತಿಭಟನೆ ಮಾಡಬಾರದು ಎಂಬುದು ನನ್ನ ವೈಯಕ್ತಿಕ ಅನಿಸಿಕೆ. ಬೇರೆಯವರ ಅನಿಸಿಕೆ ಬೇರೆ ಇರಬಹುದು. ಮಿಕ್ಕಂತೆ ಬಂದ್ ಕುರಿತು ದೊಡ್ಡವರು ಏನು ನಿರ್ಧಾರ ಮಾಡುತ್ತಾರೋ, ಮಾಡಲಿ’ ಎಂದಿದ್ದಾರೆ.
ಇದನ್ನೂ ಓದಿ:ಸ್ಮೃತಿ ಇರಾನಿ ಮಗಳ ನಿಶ್ಚಿತಾರ್ಥ: ಫೋಟೊ ಶೇರ್ ಮಾಡಿದ ಕೇಂದ್ರ ಸಚಿವೆ