ಮದುವೆಯಾದರೇನು? ಮಕ್ಕಳಾದರೇನು?;ಸಿಂಧು ನೇರ ಮಾತು


Team Udayavani, Mar 27, 2018, 3:16 PM IST

Sindhu-Lokanath-(11).jpg

ಸಿಂಧು ಲೋಕನಾಥ್‌ಗೆ ಮದುವೆಯಾಗಿದ್ದಾರೆಂದು ಗೊತ್ತಾಗಿದ್ದು, ಅವರ ಮದುವೆ ಫೋಟೋ ಓಡಾಡಿದಾಗಲೇ. ಆ ಮಟ್ಟಿಗೆ ಸಿಂಧು ಸದ್ದಿಲ್ಲದೇ ಮದುವೆಯಾಗಿದ್ದರು. ತಮ್ಮ ಕುಟುಂಬ ವರ್ಗ ಹಾಗೂ ಆಪ್ತೆಷ್ಟರನ್ನಷ್ಟೇ ಕರೆದು ಮದುವೆಯಾಗಿದ್ದ ಸಿಂಧು ಅವರ ಸಿನಿಮಾವೊಂದು ಈಗ ಬಿಡುಗಡೆಯಾಗುತ್ತಿದೆ. ಅದು “ಹೀಗೊಂದು ದಿನ’. ಚಿತ್ರ ಈ ವಾರ ಬಿಡುಗಡೆಯಾಗುತ್ತಿದ್ದು, ಈ ಸಂದರ್ಭದಲ್ಲಿ ಸಿಂಧು ಲೋಕನಾಥ್‌ ಚಿಟ್‌ಚಾಟ್‌ನಲ್ಲಿ ಮಾತನಾಡಿದ್ದಾರೆ …

* ಮದುವೆಯಾಗಿದ್ದೀರಿ. ಹೇಗಿದೆ ಲೈಫ್?
– ಆರಾಮವಾಗಿದೆ. ಮದುವೆಯ ನಂತರ ದೊಡ್ಡ ಬದಲಾವಣೆಯೇನೂ ಆಗಿಲ್ಲ. ಆಗ ಹೇಗಿದ್ದೆನೋ ಈಗಲೂ ಹಾಗೇ ಇದ್ದೇನೆ. ಸದ್ಯಕ್ಕೆ “ಹೀಗೊಂದು ದಿನ’ ಬಿಡುಗಡೆಯ ಹಂತಕ್ಕೆ ಬಂದಿದೆ. ಅದು ಬಿಟ್ಟರೆ “ಕಾಣದಂತೆ ಮಾಯವಾದನೋ’ ಸಿನಿಮಾ ಬಹುತೇಕ ಚಿತ್ರೀಕರಣ ಮುಗಿದು ಹೋಗಿದೆ.

* ನಿಮ್ಮ ಮದುವೆ ಮೊದಲೇ ಪ್ಲ್ರಾನ್‌ ಆಗಿತ್ತಾ ಅಥವಾ ದಿಢೀರ್‌ ಆಗಿ ಆಯಿತಾ?
– ಒಂಥರಾ ದಿಢೀರ್‌ ಆಗಿ ಆಯಿತು ಎಂದರೂ ತಪ್ಪಲ್ಲ. ವಯಸ್ಸಿಗೆ ಬಂದ ಹೆಣ್ಣು ಮಕ್ಕಳನ್ನು ಮದುವೆ ಮಾಡಿಕೊಡಬೇಕು ಎಂಬ ಟೆನ್ಶನ್‌ ಅಪ್ಪ-ಅಮ್ಮನಿಗೆ ಇರುತ್ತದೆ. ಅದೇ ರೀತಿ ನಮ್ಮ ಅಪ್ಪ-ಅಮ್ಮ ಕೂಡಾ ನನ್ನ ಮದುವೆ ಬಗ್ಗೆ ಕನಸು ಕಂಡಿದ್ದರು. ಅದರಂತೆ ಹುಡುಗ ನೋಡಿ ಮದುವೆ ಮಾಡಿದರು. 

* ಮದುವೆ ನಂತರ ಸಿನಿಮಾ ಮಾಡಬಾರದೆಂದೇನಾದರೂ ಇದ್ಯಾ?
– ಆ ತರಹದ ಯಾವ ಕಟ್ಟುಪಾಡು ಇಲ್ಲ. ಹಿಂದೆಯೂ ಸಿನಿಮಾ ಮಾಡಿದ್ದೆ, ಮುಂದೆಯೂ ಮಾಡುತ್ತೇನೆ. ಆ ವಿಚಾರದಲ್ಲಿ ಯಾರೂ ಇಂಟರ್‌ಫಿಯರ್‌ ಆಗಲ್ಲ. ಸಾಕಷ್ಟು ಅವಕಾಶಗಳು ಬರುತ್ತಿವೆ. ಒಂದಷ್ಟು ಮಹಿಳಾ ಪ್ರಧಾನ ಚಿತ್ರಗಳು ಬರುತ್ತಿವೆ. ಮಾಡಿದ್ದನ್ನೇ ಮಾಡೋದು ಬೇಡ ಎಂದು ನಾನು ಯಾವುದನ್ನೂ ಒಪ್ಪಿಕೊಂಡಿಲ್ಲ.

* ಮದುವೆಯಾದ ನಂತರ ನಟಿಯರಿಗೆ ಬರುವ ಅವಕಾಶದಲ್ಲಿ ಸಾಕಷ್ಟು ಬದಲಾವಣೆಯಾಗುತ್ತದೆ ಎಂಬ ಮಾತಿದೆಯಲ್ಲ. ಹೌದಾ?
– ಗೊತ್ತಿಲ್ಲ. ನನಗೆ ಸಾಕಷ್ಟು ಅವಕಾಶಗಳು ಬರುತ್ತಿವೆ. ಮುಖ್ಯವಾಗಿ ಮದುವೆಯಾದ ನಂತರ ಆ ಪಾತ್ರ ಮಾಡಬಾರದು, ಈ ಪಾತ್ರ ಮಾಡಬಾರದು ಎಂಬುದನ್ನು ಯಾವ ನಟಿಯೂ ಹೇಳಿರಲ್ಲ. ಚಿತ್ರರಂಗವೇ ಆ ತರಹ ಭಾವಿಸಿಕೊಂಡಿರೋದು. ಇವರು ಮದುವೆ ಆಗಿಬಿಟ್ಟಿದ್ದಾರೆ, ಇವರ ಬಳಿ ಹೋಗಬಾರದು ಎಂದು. ಅದು ತಪ್ಪು. ಪಾತ್ರಕ್ಕೆ ಹೊಂದಿಕೆಯಾದರೆ ಮದುವೆಯಾದರೇನು, ಮಕ್ಕಳಾದರೇನು? ನಾನು ಆ ವಾದವನ್ನು ಒಪ್ಪೋದಿಲ್ಲ.

* ಸಿನಿಮಾ ಬಿಟ್ಟು ಬೇರೇನು ನಡೀತಾ ಇದೆ?
 - ಒಂದು ಶಾರ್ಟ್‌ ಫಿಲಂ ಮಾಡಿದ್ದೇನೆ. “ಐಯಾಮ್‌ 30′ ಎಂಬ ಶಾರ್ಟ್‌ ಫಿಲಂಗೆ ನಾನೇ ಕಥೆ ಬರೆದು, ನಟಿಸಿ-ನಿರ್ಮಿಸಿದ್ದೇನೆ. ಹುಡುಗಿಯರಿಗೆ 25 ದಾಟಿದ ನಂತರ ಮನೆಯಲ್ಲಿ ಮದುವೆ ವಿಚಾರದಲ್ಲಿ ಎಷ್ಟು ಒತ್ತಡ ಹಾಕುತ್ತಾರೆ ಎಂಬ ಅಂಶವನ್ನಿಟ್ಟುಕೊಂಡು ಕಥೆ ಮಾಡಿದ್ದೇನೆ.

* “ಹೀಗೊಂದು ದಿನ’ ಬಗ್ಗೆ ಹೇಳಿ?
– ಹೊಸ ಕಾನ್ಸೆಪ್ಟ್ ನ ಸಿನಿಮಾವಿದು. ಒಂದು ದಿನದಲ್ಲಿ ಏನೆಲ್ಲಾ ಆಗುತ್ತದೆ ಎಂಬ ಅಂಶದೊಂದಿಗೆ ಸಿನಿಮಾ ಸಾಗುತ್ತದೆ. ಯಾವುದೋ ಒಂದು ಕೆಲಸಕ್ಕೆ ಹೊರಟಾಗ ಏನೆಲ್ಲಾ ವಿಘ್ನಗಳು ಎದುರಾಗುತ್ತವೆ ಮತ್ತು ಅವೆಲ್ಲವನ್ನು ದಾಟಿ ಹೇಗೆ ತನ್ನ ಗುರಿ ಮುಟ್ಟುತ್ತಾಳೆ ಎಂಬ ಪಾತ್ರ ನನ್ನದು. ಬೆಳಗ್ಗೆ 6 ರಿಂದ 8 ಗಂಟೆಯೊಳಗೆ ನಡೆಯುವ ಕಥೆಯಿದು. 

ಟಾಪ್ ನ್ಯೂಸ್

Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್

Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್

Bengaluru: ನಕಲಿ ಭೂ ದಾಖಲೆಗಳ ಸಲ್ಲಿಸಿ 22 ಬ್ಯಾಂಕಲ್ಲಿ 10 ಕೋಟಿ ಸಾಲ!

Bengaluru: ನಕಲಿ ಭೂ ದಾಖಲೆಗಳ ಸಲ್ಲಿಸಿ 22 ಬ್ಯಾಂಕಲ್ಲಿ 10 ಕೋಟಿ ಸಾಲ!

Dharwad; ನೇಹಾ ಕೊಲೆ ಮಾಡಿದ ನನ್ನ ಮಗನಿಗೆ ಕಠಿಣ ಶಿಕ್ಷೆಯಾಗಲಿ: ಫಯಾಜ್ ತಾಯಿ ಆಗ್ರಹ

Dharwad; ನೇಹಾ ಕೊಲೆ ಮಾಡಿದ ನನ್ನ ಮಗನಿಗೆ ಕಠಿಣ ಶಿಕ್ಷೆಯಾಗಲಿ: ಫಯಾಜ್ ತಾಯಿ ಆಗ್ರಹ

gayi

Davanagere; ಗಾಯಿತ್ರಿ ಸಿದ್ದೇಶ್ವರ್‌ ಅಂತಿಮ ನಾಮಪತ್ರ ಸಲ್ಲಿಕೆ; ಭರ್ಜರಿ ಮೆರವಣಿಗೆ

4-shirva

Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Boat Capsizes In Odisha’s Mahanadi River

Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Usire Usire: ಕೈ ಕೊಟ್ಟ ನಿರ್ದೇಶಕ; ನಿರ್ಮಾಪಕ ಕಂಗಾಲು

Usire Usire: ಕೈ ಕೊಟ್ಟ ನಿರ್ದೇಶಕ; ನಿರ್ಮಾಪಕ ಕಂಗಾಲು

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

O2

O2: ತೆರೆಗೆ ಬಂತು ಓ2; ಚಿತ್ರದ ಮೇಲೆ ಆಶಿಕಾ ನಿರೀಕ್ಷೆ

nalkane ayama kannada movie

Sandalwood; ‘ನಾಲ್ಕನೇ ಆಯಾಮ’ ಮೇಲೆ ಗೌತಮ್‌ ಕನಸು: ಇಂದು ತೆರೆಗೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್

Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್

5-karkala

Congress: ಉತ್ಸಾಹದ ಉತ್ತುಂಗದಲ್ಲಿ ಕಾಂಗ್ರೆಸ್‌; ಕಾರ್ಕಳದಲ್ಲಿ ಜೆಪಿ ಪಡೆ ದಿಟ್ಟ ನಡೆ

Fraud: ರೈಸ್‌ ಪುಲ್ಲಿಂಗ್‌ ಹೆಸರಿನಲ್ಲಿ ವಂಚನೆಗೆ ಯತ್ನ; 3 ಸೆರೆ, 69.79 ಲಕ್ಷ ವಶ

Fraud: ರೈಸ್‌ ಪುಲ್ಲಿಂಗ್‌ ಹೆಸರಿನಲ್ಲಿ ವಂಚನೆಗೆ ಯತ್ನ; 3 ಸೆರೆ, 69.79 ಲಕ್ಷ ವಶ

Crime: ಸ್ನೇಹಿತನನ್ನೇ ಕೊಲೆ ಮಾಡಿದ್ದ ನಾಲ್ವರು ಆರೋಪಿಗಳ ಸೆರೆ

Crime: ಸ್ನೇಹಿತನನ್ನೇ ಕೊಲೆ ಮಾಡಿದ್ದ ನಾಲ್ವರು ಆರೋಪಿಗಳ ಸೆರೆ

Bengaluru: ನಕಲಿ ಭೂ ದಾಖಲೆಗಳ ಸಲ್ಲಿಸಿ 22 ಬ್ಯಾಂಕಲ್ಲಿ 10 ಕೋಟಿ ಸಾಲ!

Bengaluru: ನಕಲಿ ಭೂ ದಾಖಲೆಗಳ ಸಲ್ಲಿಸಿ 22 ಬ್ಯಾಂಕಲ್ಲಿ 10 ಕೋಟಿ ಸಾಲ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.