ಸಾಲು ಸಾಲು ಸಿನ್ಮಾಗಳಲ್ಲಿ ಅದಿತಿ
ದಾವಣಗೆರೆ ಹುಡುಗಿಯ ನ್ಯೂ ಲುಕ್
Team Udayavani, Sep 30, 2019, 4:04 AM IST
ನಟಿ ಅದಿತಿ ಪ್ರಭುದೇವ ಸದ್ಯದ ಮಟ್ಟಿಗೆ ಗಾಂಧಿನಗರಿಗರ ಹಾಟ್ ಫೇವರೇಟ್. ಹೌದು, ಬೆರಳೆಣಿಕೆ ವರ್ಷದಲ್ಲೇ ಈ ನಟಿ ಸಾಲು ಸಾಲು ಚಿತ್ರಗಳಲ್ಲಿ ನಟಿಸುವ ಮೂಲಕ ಬಿಝಿ ನಟಿ ಎನಿಸಿಕೊಂಡಿದ್ದಾರೆ. ಅದು ಎಷ್ಟರಮಟ್ಟಿಗೆ ಅಂದರೆ, ಕೇವಲ ಎರಡೇ ವರ್ಷದಲ್ಲಿ 12 ಚಿತ್ರಗಳಲ್ಲಿ ಅವಕಾಶ ಪಡೆದಿರುವುದು. ಸಾಮಾನ್ಯವಾಗಿ ನಟಿಯರು ವರ್ಷಕ್ಕೆ ಒಂದು ಅಥವಾ ಎರಡು ಹೆಚ್ಚೆಂದರೆ, ಮೂರು ಚಿತ್ರಗಳಲ್ಲಿ ನಟಿಸಬಹುದು.
ಆದರೆ, ಅದಿತಿ ಮಾತ್ರ ವರ್ಷಕ್ಕೆ ನಾಲ್ಕು, ಐದು ಚಿತ್ರಗಳಲ್ಲಿ ನಟಿಸುವ ಮೂಲಕ ಮೆಲ್ಲನೆ ಗಾಂಧಿನಗರದಲ್ಲಿ ಗಟ್ಟಿನೆಲೆ ಕಾಣುವ ಮುನ್ಸೂಚನೆ ನೀಡಿದ್ದಾರೆ. ಹಾಗೆ ನೋಡಿದರೆ, ಅದಿತಿ ಅದೃಷ್ಟದ ನಟಿ ಎಂದೇ ಹೇಳಬಹುದು. ತನ್ನ ಮೊದಲ ಚಿತ್ರದಲ್ಲೇ ಅಜೇಯ್ರಾವ್ ಜೊತೆಗೆ ತೆರೆ ಹಂಚಿಕೊಂಡರು. “ಧೈರ್ಯಂ’ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ಅದಿತಿ, ಅಲ್ಲಿಂದ ಹಿಂದಿರುಗಿ ನೋಡದೆ, ಸಾಲು ಸಾಲು ಚಿತ್ರಗಳಲ್ಲಿ ಬಿಝಿಯಾದರು.
ಹೊಸಬರ ಜೊತೆ “ಬಜಾರ್’, “ಆಪರೇಷನ್ ನಕ್ಷತ್ರ’ ಚಿತ್ರ ಮಾಡಿದರು. ಆ ಬಳಿಕ ಚಿರಂಜೀವಿ ಸರ್ಜಾ ಜೊತೆಗೆ “ಸಿಂಗ’, ಜಗ್ಗೇಶ್ ಜೊತೆಯಲ್ಲಿ “ತೋತಾಪುರಿ’ ಮತ್ತು “ತೋತಾಪುರಿ-2′ ಚಿತ್ರದಲ್ಲಿ ಕಾಣಿಸಿಕೊಂಡರು. ದಯಾಳ್ ಪದ್ಮನಾಭ್ ನಿರ್ದೇಶನದ “ರಂಗನಾಯಕಿ’, “ಬ್ರಹ್ಮಚಾರಿ’,”ದಿಲ್ಮಾರ್’, “ಒಂಬತ್ತನೇ ದಿಕ್ಕು’,”ಗಾಳಿಪಟ -2′ ಹಾಗು “ಕುಸ್ತಿ’ ಚಿತ್ರಗಳಲ್ಲಿ ಅದಿತಿ ನಾಯಕಿ. ಈ ಪೈಕಿ ಮೂರು ಚಿತ್ರಗಳು ಬಿಡುಗಡೆಯಾಗಿದ್ದು, ಸದ್ಯಕ್ಕೆ ಬಿಡುಗಡೆಗೆ ಉಳಿದ ಚಿತ್ರಗಳು ಸಿದ್ಧತೆಯಲ್ಲಿವೆ. ಉಳಿದ ಒಂದಷ್ಟು ಚಿತ್ರಗಳು ಚಿತ್ರೀಕರಣದಲ್ಲಿವೆ.
ಇದಕ್ಕೂ ಮೊದಲು ಕಿರುತೆರೆಯಲ್ಲಿದ್ದ ಅದಿತಿ ಪ್ರಭುದೇವ, “ಗುಂಡ್ಯಾನ ಹೆಂಡ್ತಿ’ ಹಾಗೂ “ನಾಗ ಕನ್ನಿಕೆ’ ಧಾರಾವಾಹಿಗಳಲ್ಲಿ ನಟಿಸಿದ್ದರು. ಯಾವಾಗ ಬೆಳ್ಳಿತೆರೆ ಪ್ರವೇಶಿಸಿದರೋ, ಒಂದಾದ ಮೇಲೊಂದರಂತೆ ಸಿನಿಮಾ ಒಪ್ಪಿಕೊಂಡಿದ್ದಾರೆ. ಇತ್ತೀಚೆಗೆ ಅದಿತಿ ಒಂದಷ್ಟು ಫೋಟೋಶೂಟ್ ಮಾಡಿಸಿದ್ದು, ಆ ಹೊಸ ಲುಕ್ನಲ್ಲಿ ಅದಿತಿ ಹೀಗೆ ಕಾಣಿಸಿಕೊಂಡಿದ್ದಾರೆ. ಆ ಹೊಸ ಫೋಟೋಶೂಟ್ನ ನ್ಯೂ ಲುಕ್ ಇಲ್ಲಿದೆ.
— Aditi Prabhudeva (@aditiprabhudeva) September 23, 2019
— Aditi Prabhudeva (@aditiprabhudeva) September 29, 2019
— Aditi Prabhudeva (@aditiprabhudeva) September 27, 2019
— Aditi Prabhudeva (@aditiprabhudeva) September 25, 2019
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kannada Cinema; ಹೊಸ ಚಿತ್ರದಲ್ಲಿ ಖಡಕ್ ಪೊಲೀಸ್ ಆದ ನೆನಪಿರಲಿ ಪ್ರೇಮ್
ʼದುರ್ಗಿʼಯಾಗಿ ಚಂದನವನಕ್ಕೆ ಕಾಲಿಟ್ಟ ಕಾಲಿವುಡ್ ಬೆಡಗಿ: ಡಾಲಿ ಜೊತೆ ರೊಮ್ಯಾನ್ಸ್
Harshika Poonachha ದಂಪತಿ ಮೇಲೆ ಹಲ್ಲೆ; ಇಬ್ಬರ ವಿರುದ್ಧ ಕೇಸ್ ದಾಖಲು
Kannada Cinema; ‘ರಾಮರಸ’ ಹಿಂದೆ ಗುರು ಆ್ಯಂಡ್ ಟೀಂ
ಮೈಸೂರಲ್ಲಿ ‘ಬಘೀರ’ ಶೂಟಿಂಗ್ ವೇಳೆ ನಟ ಶ್ರೀಮುರುಳಿಗೆ ಗಾಯ; ಆಸ್ಪತ್ರೆಗೆ ದಾಖಲು
MUST WATCH
ಹೊಸ ಸೇರ್ಪಡೆ
IPL 2024; ಚಹಲ್ 200 ವಿಕೆಟ್ಗಳ ಕಮಾಲ್; ಈ ಸಾಧನೆಗೈದ ಮೊದಲ ಬೌಲರ್
Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!
Daily Horoscope; ಉದ್ಯೋಗಸ್ಥರಿಗೆ ಹಿತಶತ್ರುಗಳ ಕಾಟ.ಶನಿ ಅನುಗ್ರಹ ಪ್ರಾಪ್ತಿಯ ಸಮಯ
Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!
Loksabha election; ಕಾಂಗ್ರೆಸ್ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ