ಐಶ್ವರ್ಯ ಸಿಂಧೋಗಿ ಸೆಕೆಂಡ್ ಇನ್ನಿಂಗ್ಸ್
Team Udayavani, Nov 5, 2017, 11:19 AM IST
ನಿಮಗೆ ಐಶ್ವರ್ಯ ಸಿಂಧೋಗಿ ನೆನಪಿರಬೇಕು. ಗೊತ್ತಾಗದಿದ್ದರೆ, ಹಾಗೊಮ್ಮೆ “ಸಿಂಹಾದ್ರಿ’, “ಜಾಕ್ಸನ್’ ಮತ್ತು “ಸಪ್ನೊಂಕಿ ರಾಣಿ’ ಚಿತ್ರಗಳನ್ನು ನೆನಪಿಸಿಕೊಳ್ಳಿ. ಈಗಿಲ್ಲಿ ಹೇಳುತ್ತಿರೋದು ಅದೇ ಹುಡುಗಿ ಬಗ್ಗೆ. ಇಷ್ಟಕ್ಕೂ ಈಗೇಕೆ ಐಶ್ವರ್ಯ ಸಿಂಧೋಗಿ ವಿಷಯ ಅಂತೀರಾ? ಒಂದು ಗ್ಯಾಪ್ ಬಳಿಕ ಐಶ್ವರ್ಯ ಸಿಂಧೋಗಿ ಪುನಃ ಗಾಂಧಿನಗರದಲ್ಲಿ ಕಾಣಿಸಿಕೊಂಡಿದ್ದಾರೆ. ಅದು “ಸಂಯುಕ್ತ 2′ ಚಿತ್ರದ ಮೂಲಕ. ಈ ಸಿನಿಮಾ ಈಗ ಎರಡು ಕಾರಣಕ್ಕೆ ಸುದ್ದಿಯಾಗುತ್ತಿದೆ.
ಶಿವರಾಜ್ಕುಮಾರ್ ಅಭಿನಯದಲ್ಲಿ ಮೂಡಿಬಂದಿದ್ದ “ಸಂಯುಕ್ತ’ ದೊಡ್ಡ ಯಶಸ್ಸು ಪಡೆದಿತ್ತು. ಈಗ “ಸಂಯುಕ್ತ 2′ ಹೆಸರಲ್ಲಿ ಹೊಸ ರೀತಿಯಲ್ಲಿ ಈ ಚಿತ್ರ ಮೂಡಿಬರುತ್ತಿದೆ. ಇದು ಒಂದು ಕಾರಣವಾದರೆ, ಈ ಸಿನ್ಮಾ ಮೂಲಕ ನಟಿ ಐಶ್ವರ್ಯ ಸಿಂಧೋಗಿ ಪುನಃ ಗಾಂಧಿನಗರಕ್ಕೆ ಕಾಲಿಡುತ್ತಿದ್ದಾರೆ. ಆ ಕುರಿತು ಒಂದು ರೌಂಡಪ್. ಅಪ್ಪಟ ಕನ್ನಡತಿಯಾಗಿರುವ ಐಶ್ವರ್ಯ ಸಿನಿಮಾ ರಂಗಕ್ಕೆ ಎಂಟ್ರಿಯಾಗಿದ್ದೇ ಆಕಸ್ಮಿಕ.
ಅವರು ಈ ಕ್ಷೇತ್ರಕ್ಕೆ ಬರಿ¤àನಿ ಅಂತ ಯಾವತ್ತೂ ಅಂದುಕೊಂಡಿರಲಿಲ್ಲ. ಕಾಲೇಜ್ ದಿನಗಳಲ್ಲಿ ಡ್ಯಾನ್ಸು ಮಾಡೋದು ಬಿಟ್ಟರೆ, ಬೇರೇನೂ ಗೊತ್ತಿರಲಿಲ್ಲ. ಕೆಲ ಫ್ಯಾಷನ್ಶೋಗಳಿಗೆ ಕೋರಿಯಾಗ್ರಫಿ ಮಾಡಿಕೊಂಡಿದ್ದ ಅವರಿಗೆ ಪಿಯುಸಿ ಓದುವ ಸಂದರ್ಭದಲ್ಲೇ ಅವಕಾಶ ಹುಡುಕಿ ಬಂತು. ಬಂದ ಸಿನಿಮಾ ಅವಕಾಶ ಒಪ್ಪಿ ಹೋಗುವುದೋ, ಬಿಡುವುದೋ ಎಂಬ ಗೊಂದಲದ ನಡುವೆಯೇ ಅವರು ಹುಡುಕಿ ಬಂದ ಅವಕಾಶವನ್ನು ಕಣ್ಣಿಗೊತ್ತಿಕೊಂಡರು.
ಅಲ್ಲಿಂದ ಅವರ ಸಿನಿಜರ್ನಿ ಶುರುವಾಗಿ ಈಗ “ಸಂಯುಕ್ತ 2′ ಚಿತ್ರದವರೆಗೆ ನಿಂತಿದೆ. ಐಶ್ವರ್ಯ “ಸಂಯುಕ್ತ 2′ ಚಿತ್ರದಲ್ಲಿ ಇಬ್ಬರು ನಾಯಕಿಯರ ಪೈಕಿ ಅವರೂ ಒಬ್ಬ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಇಬ್ಬರು ನಾಯಕಿಯರಿದ್ದರೂ ಅವರದು ಇಲ್ಲಿ ವಿಶೇಷ ಪಾತ್ರ. ಅದರಲ್ಲಿ ಏನೆಲ್ಲಾ ವಿಶೇಷತೆ ಇದೆ ಎಂಬುದಕ್ಕೆ ಚಿತ್ರ ಬಿಡುಗಡೆ ಆಗುವವರೆಗೆ ಕಾಯಬೇಕು. ಇನ್ನು, “ಸಂಯುಕ್ತ 2′ ತಮಗೊಂದು ಹೊಸ ಇಮೇಜ್ ಕೊಡುತ್ತೆ ಎಂಬ ಅದಮ್ಯ ನಂಬಿಕೆ ಅವರಿಗಿದೆ.
ಕಾರಣ, ನಿರ್ದೇಶಕ ಅಭಿರಾಮ್ ಅವರು ಹೆಣೆದ ಕಥೆ ಹಾಗು ಪಾತ್ರವಂತೆ. “ನಿರ್ಮಾಪಕ ಡಾ.ಮಂಜುನಾಥ್ ಅವರು ಸಿನಿಮಾಗೆ ಏನೇನು ಬೇಕೋ ಅದೆಲ್ಲವನ್ನೂ ಇಲ್ಲಿ ಕೊಟ್ಟಿರುವುದರಿಂದ ಚಿತ್ರ ನಿರೀಕ್ಷೆ ಮೀರಿ ಮೂಡಿ ಬಂದಿದೆ. ಒಂದು ಸಿನಿಮಾವನ್ನು ಪ್ರೀತಿಯಿಂದ ಮಾಡಿದರೆ, ಅದರ ಔಟ್ಪುಟ್ ಎಷ್ಟೊಂದು ಚೆನ್ನಾಗಿ ಬರುತ್ತೆ ಎಂಬುದಕ್ಕೆ “ಸಂಯುಕ್ತ 2′ ಸಾಕ್ಷಿ. ಇಲ್ಲಿ ಒಳ್ಳೆಯ ತಂಡ ಇದ್ದುದರಿಂದ ಎಲ್ಲವೂ ನೀಟ್ ಆಗಿ ಮೂಡಿಬಂದಿದೆ. ವಿಶೇಷವಾಗಿ, ಇಲ್ಲಿ ರವಿಚಂದ್ರ ಅವರು ಎಲ್ಲಾ ಹಾಡುಗಳು ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ ಎನ್ನುವುದು ಐಶ್ವರ್ಯ ಮಾತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ
ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್ ಶೆಟ್ಟಿ ಬೆಳ್ಳಾರೆ
ಮೂಡುಬೆಳ್ಳೆ ಶ್ರೀಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ, ಶ್ರೀ ಸೂರ್ಯನಾರಾಯಣ ದೇಗುಲ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
LS Polls: ರಾಜ್ಯದ ಜನರಿಗೆ ಈಶ್ವರಪ್ಪ ಸ್ಪರ್ಧೆ ವಿಷಯ ಈಗ ಖಚಿತ: ಈಶ್ವರಪ್ಪ