ಅಂಬರೀಶ್‌ ಅಗಲಿ ಇಂದಿಗೆ ಒಂದು ವರ್ಷ

ಅಭಿಮಾನಿಗಳಲ್ಲಿ ಮಾಸದ ಅಭಿಮಾನದ ಹರ್ಷ

Team Udayavani, Nov 24, 2019, 6:04 AM IST

Ambareesh

ಅಭಿಮಾನಿಗಳ ಪಾಲಿನ ಪ್ರೀತಿಯ ರೆಬೆಲ್‌ಸ್ಟಾರ್‌, ಮಂಡ್ಯದ ಗಂಡು, ಕನ್ನಡ ಚಿತ್ರರಂಗದ ಟ್ರಬಲ್‌ ಶೂಟರ್‌, ಸಹಾಯ ಬೇಡಿ ಬಂದವರ ಪಾಲಿಗೆ ಕರ್ಣ ಎನಿಸಿಕೊಂಡಿದ್ದು ಅಂಬರೀಶ್‌ ಅಗಲಿ ಇಂದಿಗೆ ಒಂದು ವರುಷ. 2018 ನವೆಂಬರ್‌ 24ರಂದು ರಾತ್ರಿ ಬರಸಿಡಿಲಿನಂತೆ ಕೇಳಿಬಂದ “ಅಂಬರೀಶ್‌ ಇನ್ನಿಲ್ಲ’ ಪದ ಅಂಬಿ ಅಭಿಮಾನಿ ಬಳಗಕ್ಕೆ ದೊಡ್ಡ ಶಾಕ್‌ ನೀಡಿತು. ಅಭಿಮಾನಿಗಳಿಗೆ ಅದನ್ನು ಅರಗಿಸಿಕೊಳ್ಳಲು ಸಾಧ್ಯವಾಗಲೇ ಇಲ್ಲ. ಅದಕ್ಕೆ ಕಾರಣ ಅಂಬರೀಶ್‌ ಅವರ ವ್ಯಕ್ತಿತ್ವ.

ಅಂಬರೀಶ್‌ ಅವರ ಮೇಲೆ ಇಡೀ ಚಿತ್ರರಂಗ, ಅಭಿಮಾನಿ ವರ್ಗ ಇಟ್ಟ ಪ್ರೀತಿ ಆ ತರಹದ್ದು. ಈ ತರಹದ ಒಂದು ಪ್ರೀತಿ ಎಲ್ಲರಿಗೂ ಸಿಗೋದಿಲ್ಲ. ಅದನ್ನು ಸಂಪಾದಿಸೋದು ಕೂಡಾ ಸುಲಭವಲ್ಲ. ಅಂತಹ ಒಂದು ಅಪರೂಪದ ಪ್ರೀತಿ, ಅಭಿಮಾನವನ್ನು ಸಂಪಾದಿಸಿದವರು ಅಂಬರೀಶ್‌. ಅಂಬರೀಶ್‌ ಅವರು ಆಗಾಗ ಒಂದು ಮಾತು ಹೇಳುತ್ತಿದ್ದರು, “ಅಭಿಮಾನಿಗಳು ಪ್ರೀತಿ ಕೊಟ್ಟಿದ್ದಾರೆ. ಆ ಪ್ರೀತಿಯನ್ನು ಕೊನೆತನಕ ಉಳಿಸಿಕೊಂಡು ಹೋದರೆ ಸಾಕು’ ಎಂದು.

ಅಂಬರೀಶ್‌ ಅವರು ಸಂಪಾದಿಸಿದ ಪ್ರೀತಿ ಹಾಗೂ ಅವರು ಅದನ್ನು ಉಳಿಸಿಕೊಂಡ ರೀತಿ ಅವರ ಅಂತಿಮಯಾತ್ರೆಯಲ್ಲಿ ಸಾಬೀತಾಗಿದ್ದನ್ನು ಇಡೀ ಜನತೆ ನೋಡಿದ್ದಾರೆ. ಅಂಬರೀಶ್‌ ದೈಹಿಕವಾಗಿ ಇಲ್ಲದೇ ಇರಬಹುದು. ಆದರೆ, ಪ್ರತಿಯೊಬ್ಬ ಅಭಿಮಾನಿ, ಸಿನಿಮಾ ಪ್ರೇಮಿಯಲ್ಲೂ ಇಂದಿಗೂ ಜೀವಂತವಾಗಿದ್ದಾರೆ. ಅಂಬರೀಶ್‌ ಬದುಕಿದ ರೀತಿಯೇ ಹಾಗೆ. ತನಗೆ ಅನಿಸಿದ್ದನ್ನು ನೇರವಾಗಿ ಹೇಳುತ್ತಾ, ಎಲ್ಲರೊಂದಿಗೆ ಖುಷಿಯಿಂದ ಬೆರೆಯುತ್ತಾ ಜೀವನವನ್ನು ಕಳೆದ ಅಂಬರೀಶ್‌, ಎಲ್ಲಾ ಜನರೇಶನ್‌ಗಳಿಗೂ ಇಷ್ಟವಾಗಲು ಕಾರಣ ಅವರ ಒಂದು ಪ್ರಮುಖ ಗುಣ.

ನೀವು ಸೂಕ್ಷ್ಮವಾಗಿ ಗಮನಿಸಿದರೆ ಅಂಬರೀಶ್‌ ಅವರ ಒಂದು ಅಪರೂಪದ ದೊಡ್ಡಗುಣ ಎದ್ದು ಕಾಣುತ್ತದೆ. ಅದು ಎಲ್ಲಾ ಜನರೇಶನ್‌ನ ನಟರೊಂದಿಗೆ ನಟಿಸುತ್ತಾ ಅವರಿಗೆ ಪ್ರೋತ್ಸಾಹ ನೀಡುತ್ತಾ ಬಂದಿರೋದು. ಡಾ.ರಾಜ್‌ಕುಮಾರ್‌ ಜೊತೆಗೆ ನಟಿಸಿರುವುದರಿಂದ ಹಿಡಿದು ಇತ್ತೀಚೆಗೆ ಚಿತ್ರರಂಗಕ್ಕೆ ಬಂದ ಪಂಕಜ್‌, ರಾಜಕಾರಣಿ ಚಲುವರಾಯ ಸ್ವಾಮಿ ಪುತ್ರ ಸಚಿನ್‌ ಜೊತೆಗೆ ನಟಿಸಿದ ಕನ್ನಡ ಏಕೈಕ ಸ್ಟಾರ್‌ ನಟ ಎಂದರೆ ಅದು ಅಂಬರೀಶ್‌.

ಐದು ಜನರೇಶನ್‌ ಜೊತೆಗೆ ನಟನೆ: ಅಂಬರೀಶ್‌ ಕನ್ನಡ ಚಿತ್ರರಂಗದ ಮೊದಲ ಆ್ಯಂಗ್ರಿಯಂಗ್‌ ಮ್ಯಾನ್‌, ರೆಬೆಲ್‌ಸ್ಟಾರ್‌, ಸ್ನೇಹಜೀವಿ, ದಾನಶೂರ ಕರ್ಣ ಹೇಗೋ ಅದೇ ರೀತಿ ದಕ್ಷಿಣ ಭಾರತದ ಚಿತ್ರರಂಗದಲ್ಲೇ ಒಬ್ಬ ಅಪರೂಪದ ನಟ ಕೂಡ. ಅದಕ್ಕೆ ಕಾರಣ ಅಂಬರೀಶ್‌ ನಡೆದುಕೊಂಡು ಬಂದ ರೀತಿ. ಡಾ.ರಾಜ್‌ಕುಮಾರ್‌ರಿಂದ ಹಿಡಿದು ಅಂಬರೀಶ್‌ ತಮ್ಮ ಜನರೇಶನ್‌ನ ನಟರ ಚಿತ್ರಗಳಲ್ಲಿ ನಟಿಸಿದ್ದಲ್ಲದೇ, ತಮ್ಮ ನಂತರದ ಬಹುತೇಕ ಎಲ್ಲಾ ನಟರ ಜೊತೆ ನಟಿಸಿದ ದಕ್ಷಿಣ ಭಾರತದ ಏಕೈಕ ಸ್ಟಾರ್‌ ನಟ.

ಡಾ.ರಾಜ್‌ಕುಮಾರ್‌, ವಿಷ್ಣುವರ್ಧನ್‌, ರವಿಚಂದ್ರನ್‌, ಅನಂತ್‌ನಾಗ್‌, ಶಂಕರ್‌ನಾಗ್‌ರಿಂದ ಹಿಡಿದು ನಂತರದ ಪ್ರಭಾಕರ್‌, ಅರ್ಜುನ್‌ ಸರ್ಜಾ, ಶಿವರಾಜಕುಮಾರ್‌, ಜಗ್ಗೇಶ್‌, ಆ ನಂತರದ ಉಪೇಂದ್ರ, ಸುದೀಪ್‌, ಪುನೀತ್‌, ದರ್ಶನ್‌, ಯಶ್‌, ಚಿರಂಜೀವಿ ಸರ್ಜಾ ಚಿತ್ರಗಳಲ್ಲೂ ಅಂಬರೀಶ್‌ ನಟಿಸಿದ್ದಲ್ಲದೇ ಹೊಸದಾಗಿ ಚಿತ್ರರಂಗಕ್ಕೆ ಹೀರೋಗಳಾಗಿ ಎಂಟ್ರಿಕೊಟ್ಟ ಪಂಕಜ್‌, ಸಚಿನ್‌ ಸೇರಿದಂತೆ ಇನ್ನು ಹಲವು ಯುವ ನಟರ ಚಿತ್ರಗಳಲ್ಲಿ ಕಾಣಿಸಿಕೊಂಡ ಅಪರೂಪದ ನಟ. ದಕ್ಷಿಣ ಭಾರತದ ಯಾವ ಸ್ಟಾರ್‌ ನಟರಲ್ಲೂ ಸಿಗದಂತಹ ಒಂದು ವಿಶಿಷ್ಟತೆ ಅಂಬರೀಶ್‌ ಅವರ ವ್ಯಕ್ತಿತ್ವದಲ್ಲಿದೆ. ಐದು ಜನರೇಶನ್‌ನ ನಟರ ಜೊತೆ ನಟಿಸಿದ ಕೆಲವೇ ಕೆಲವು ನಟರಲ್ಲಿ ಅಂಬರೀಶ್‌ ಕೂಡಾ ಒಬ್ಬರಾಗಿದ್ದಾರೆ.

ಅಂಬಿ ಇಲ್ಲದ ಮೇಲೆ
* ಕನ್ನಡದ ಯಾವುದೇ ಸಿನಿಮಾ ಇರಲಿ, ಪ್ರೀತಿಯಿಂದ ಆಹ್ವಾನಿಸಿದರೆ ಸಾಕು, ಅಲ್ಲಿ ಅಂಬರೀಶ್‌ ಹಾಜರಿ ಇರುತ್ತಿತ್ತು. ಹಾಗೆ ಕಳೆದ ವರ್ಷ “ಕೆಜಿಎಫ್’ ಚಿತ್ರದ ಪ್ಯಾನ್‌ ಇಂಡಿಯಾ ಪತ್ರಿಕಾಗೋಷ್ಠಿಯಲ್ಲಿ ಅಂಬರೀಶ್‌ ಕಾಣಿಸಿಕೊಳ್ಳುವ ಮೂಲಕ ಆ ಚಿತ್ರದ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡಿದ್ದರು. ಅಷ್ಟೇ ಅಲ್ಲ, ಇಡೀ ಚಿತ್ರತಂಡಕ್ಕೆ ಜೊತೆ ಇರುವುದಾಗಿಯೇ ಭರವಸೆ ಕೊಟ್ಟಿದ್ದರು. ಆದರೆ, ಆ ಚಿತ್ರ ನೋಡಬೇಕೆಂಬ ಅವರ ಆಸೆ ಹಾಗೆಯೇ ಉಳಿದುಕೊಂಡಿತು.

* ತಮ್ಮ ಪುತ್ರ ಅಭಿಷೇಕ್‌ ಅಭಿನಯದ ಮೊದಲ ಸಿನಿಮಾ “ಅಮರ್‌’ ಮೇಲೆ ಸಾಕಷ್ಟು ನಿರೀಕ್ಷೆ ಅವರಿಗಿತ್ತು. ಅನಾರೋಗ್ಯದಲ್ಲೂ “ಅಮರ್‌’ ಚಿತ್ರದ ಕೆಲ ದೃಶ್ಯಗಳನ್ನು ನೋಡಿ ಖುಷಿಪಟ್ಟಿದ್ದರು. ಆ ಸಿನಿಮಾ ನೋಡಬೇಕು ಅಂತಂದುಕೊಂಡಿದ್ದರೂ, ಅದು ಸಾಧ್ಯವಾಗಲೇ ಇಲ್ಲ.

* ಅವರ ಪತ್ನಿ ಸುಮಲತಾ ಅಂಬರೀಶ್‌ ಅವರು ಅಭಿಮಾನಿಗಳ ಸ್ವಾಭಿಮಾನದ ಪ್ರೀತಿಯನ್ನು ಅಭಿಮಾನದಿಂದಲೇ ಗೌರವಿಸಿ ಮಂಡ್ಯ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಿ ಜಯಗಳಿಸಿದರು. ಅಂಬರೀಶ್‌ ಮೇಲಿನ ಅಭಿಮಾನಕ್ಕೆ ಆ ಭರ್ಜರಿ ಗೆಲುವು ಕೂಡ ಸಾಕ್ಷಿಯಾಯಿತು.

* ಕನ್ನಡ ಚಿತ್ರರಂಗದ ಟ್ರಬಲ್‌ ಶೂಟರ್‌ ಎಂರೇ ಕರೆಸಿಕೊಂಡಿದ್ದ ಅಂಬಿ ಸಾಕಷ್ಟು ಸಮಸ್ಯೆಗಳನ್ನು ಬಗೆಹರಿಸಿದವರು. ಈ ವರ್ಷ ಕನ್ನಡ ಚಿತ್ರರಂಗದ ಇಬ್ಬರು ಸ್ಟಾರ್‌ ನಟರ ಮುಸುಕಿನ ಗುದ್ದಾಟ ನಡೆದಿರುವುದು ಗೊತ್ತೇ ಇದೆ. ಅಂಬರೀಶ್‌ ಇದ್ದಿದ್ದರೆ ಈ ಗುದ್ದಾಟ ಅಷ್ಟೊಂದು ಸದ್ದು ಮಾಡುತ್ತಿರಲಿಲ್ಲ. ಇಬ್ಬರು ಸ್ಟಾರ್‌ ನಟರಿಗೂ ಆತ್ಮೀಯರಾಗಿದ್ದ ಅವರು ಆ ವಿವಾದವನ್ನು ಬಗೆಹರಿಸುತ್ತಿದ್ದರು.

* ಇನ್ನು, “ಮುನಿರತ್ನ ಕುರುಕ್ಷೇತ್ರ’ ಚಿತ್ರದಲ್ಲಿ ಭೀಷ್ಮರಾಗಿ ನಟಿಸಿದ್ದ ಅಂಬರೀಶ್‌, ಆ ಚಿತ್ರವನ್ನು ನೋಡುವ ಬಯಕೆ ವ್ಯಕ್ತಪಡಿಸಿದ್ದರು. ಒಮ್ಮೆ, “ಕುರುಕ್ಷೇತ್ರ’ ನನ್ನ ಕೊನೆಯ ಚಿತ್ರ ಅಂತಾನೂ ಹೇಳಿಕೊಂಡಿದ್ದರು. ಯಾವ ಕ್ಷಣದಲ್ಲಿ ಹೇಳಿದ್ದರೋ, ಅವರ ಆ ಮಾತು ಕೂಡ ನಿಜವಾಗಿಬಿಟ್ಟಿತು. ಆ ಚಿತ್ರದ ಭೀಷ್ಮ ಪಾತ್ರದಲ್ಲಿ ಅಂಬರೀಶ್‌ ಅವರಿಗವರೇ ಸಾಟಿಯಾಗಿದ್ದರು.

* ಈಗ ದರ್ಶನ್‌ ನಾಯಕರಾಗಿರುವ ಮತ್ತೂಂದು ಐತಿಹಾಸಿಕ ಸಿನಿಮಾ “ಗಂಡುಗಲಿ ವೀರ ಮದಕರಿನಾಯಕ’ ಚಿತ್ರ ಸೆಟ್ಟೇರುವ ತಯಾರಿಯಲ್ಲಿದೆ. ಅಂಬರೀಶ್‌ ಅವರು ಒಂದು ವೇಳೆ ಇದ್ದಿದ್ದರೆ, ಈ ಚಿತ್ರದಲ್ಲಿ ಒಂದು ಪ್ರಮುಖ ಪಾತ್ರ ಮಾಡುತ್ತಿದ್ದರೇನೋ? ಆದರೆ, ಅಂಬರೀಶ್‌ ಇಲ್ಲ ಎಂಬ ಭಾವನೆ ಯಾರಿಗೂ ಇಲ್ಲ ಅಂದುಕೊಂಡೇ, ಆ ಚಿತ್ರ ಮಾಡಲಾಗುತ್ತಿದೆ.

* ಅಂಬರೀಶ್‌ ವ್ಯಕ್ತಿತ್ವವೇ ಹಾಗೆ. ಯಾರೇ ಬಂದು ಪ್ರೀತಿಯಿಂದ ಆಹ್ವಾನಿಸಿದರೆ, ಸಾಕು, ಅದು ಹೊಸಬರ,ಹಳಬರ ಚಿತ್ರ ಅಂತ ಹಿಂದೆ ಮುಂದೆ ನೋಡದೆ, ಆ ಚಿತ್ರಗಳ ಆಡಿಯೋ ಬಿಡುಗಡೆ, ಟ್ರೇಲರ್‌ ಬಿಡುಗಡೆ ಸೇರಿದಂತೆ ಇತ್ಯಾದಿ ಕಾರ್ಯಕ್ರಮಗಳಿಗೆ ಹೋಗಿ, ಚಿತ್ರತಂಡದ ಬೆನ್ನುತಟ್ಟುತ್ತಿದ್ದರು. ಈ ಒಂದು ವರ್ಷದಲ್ಲಿ ಸಾಕಷ್ಟು ಕಾರ್ಯಕ್ರಮಗಳಿಗೆ ಅಂಬಿ ಸಾಕ್ಷಿಯಾಗುತ್ತಿದ್ದರು.

ಟಾಪ್ ನ್ಯೂಸ್

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

1-wqqwqwe

West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

2-hubli

Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ

Udupi: ಅನುಮತಿಯಿಲ್ಲದೆ ಪೋಸ್ಟರ್‌ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್

Udupi: ಅನುಮತಿಯಿಲ್ಲದೆ ಪೋಸ್ಟರ್‌ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್

Amit Shah: 2024ರ ಚುನಾವಣೆಯಲ್ಲಿ ಎನ್‌ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ

Amit Shah: 2024ರ ಚುನಾವಣೆಯಲ್ಲಿ ಎನ್‌ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ

11

ಕ್ರಿಕೆಟ್‌ ಬಗ್ಗೆ ಕಿಂಚಿತ್ತೂ ಜ್ಞಾನವಿಲ್ಲದ ವ್ಯಕ್ತಿಗೆ ಡ್ರೀಮ್‌11ನಲ್ಲಿ ಒಲಿಯಿತು 1.5 ಕೋಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

nenapirali prem as police in new movie

Kannada Cinema; ಹೊಸ ಚಿತ್ರದಲ್ಲಿ ಖಡಕ್ ಪೊಲೀಸ್ ಆದ ನೆನಪಿರಲಿ ಪ್ರೇಮ್

ʼದುರ್ಗಿʼಯಾಗಿ ಚಂದನವನಕ್ಕೆ ಕಾಲಿಟ್ಟ ಕಾಲಿವುಡ್‌ ಬೆಡಗಿ: ಡಾಲಿ ಜೊತೆ ರೊಮ್ಯಾನ್ಸ್

ʼದುರ್ಗಿʼಯಾಗಿ ಚಂದನವನಕ್ಕೆ ಕಾಲಿಟ್ಟ ಕಾಲಿವುಡ್‌ ಬೆಡಗಿ: ಡಾಲಿ ಜೊತೆ ರೊಮ್ಯಾನ್ಸ್

Harshika Poonachha ದಂಪತಿ ಮೇಲೆ ಹಲ್ಲೆ; ಇಬ್ಬರ ವಿರುದ್ಧ ಕೇಸ್‌ ದಾಖಲು

Harshika Poonachha ದಂಪತಿ ಮೇಲೆ ಹಲ್ಲೆ; ಇಬ್ಬರ ವಿರುದ್ಧ ಕೇಸ್‌ ದಾಖಲು

ramarasa kannada movie

Kannada Cinema; ‘ರಾಮರಸ’ ಹಿಂದೆ ಗುರು ಆ್ಯಂಡ್‌ ಟೀಂ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

3-

Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ

1-wqqwqwe

West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

2-hubli

Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.