“ಬಜಾರಿ ಹುಡುಗಿ’ ಗೆಟಪ್‌ನಲ್ಲಿ ಅಮೃತಾ

ಲವ್‌ ಮಾಕ್ಟೇಲ್‌, ಪಾಪ್‌ಕಾರ್ನ್ ನಂತರ ಶಿವಾರ್ಜುನ ಮೇಲೆ ನಿರೀಕ್ಷೆ

Team Udayavani, Mar 12, 2020, 7:04 AM IST

AMRUTHA

“2020 ನನ್ನ ಪಾಲಿಗೆ ಲಕ್ಕಿ ಈಯರ್‌. ಜನವರಿಯಿಂದ ಇಲ್ಲಿಯವರೆಗೆ ಮೂರು ತಿಂಗಳಲ್ಲಿ ಮೂರು ಸಿನಿಮಾ ರಿಲೀಸ್‌ ಆಗ್ತಿದೆ. ಇನ್ನೂ ಎರಡು-ಮೂರು ಸಿನಿಮಾಗಳು ರೆಡಿಯಿದ್ದು, ಅವುಗಳು ಕೂಡ ಇನ್ನು ಮೂರು-ನಾಲ್ಕು ತಿಂಗಳಲ್ಲಿ ರಿಲೀಸ್‌ ಆಗಬಹುದು. ನಿಜಕ್ಕೂ ಹೀಗೆ ಒಂದರ ಹಿಂದೊಂದು ಸಿನಿಮಾ ರಿಲೀಸ್‌ ಆಗುತ್ತೆ, ಆಡಿಯನ್ಸ್‌, ಇಂಡಸ್ಟ್ರಿ ಎಲ್ಲರೂ ನನ್ನ ಇಷ್ಟರ ಮಟ್ಟಿಗೆ ಗುರುತಿಸುತ್ತಾರೆ ಅಂಥ ಅಂದುಕೊಂಡೇ ಇರಲಿಲ್ಲ.

ಹೋಟೆಲ್‌, ಮಾಲ್‌ ಎಲ್ಲಿಗೇ ಹೋದ್ರು ಜನ ನನ್ನನ್ನು ಗುರುತಿಸಿ ಮಾತನಾಡಿಸುತ್ತಿದ್ದಾರೆ. ಈ ವಿಷಯದಲ್ಲಿ ತುಂಬ ಎಕ್ಸೈಟ್‌ ಆಗಿದ್ದೇನೆ…’ ಹೀಗೆ ಹೇಳುತ್ತಾ ಮಾತಿಗಿಳಿದವರು ಅಮೃತಾ ಅಯ್ಯಂಗಾರ್‌. ಅಂದಹಾಗೆ, ಅಮೃತಾ ಅವರ ಇಂಥದ್ದೊಂದು ಖುಷಿಗೆ ಕಾರಣವಾಗಿರುವುದು, ಅವರು ಅಭಿನಯಿಸಿರುವ ಚಿತ್ರಗಳು ಒಂದರ ಹಿಂದೊಂದು ಬಿಡುಗಡೆಯಾಗಿ ಹಿಟ್‌ ಲೀಸ್ಟ್‌ಗೆ ಸೇರುತ್ತಿರುವುದು. ಈ ವರ್ಷದ ಮೊದಲು ಅಮೃತಾ ಅಯ್ಯಂಗಾರ್‌ ಅಭಿನಯಿಸಿದ್ದ “ಲವ್‌ ಮಾಕ್ಟೇಲ್‌’ ಚಿತ್ರ ತೆರೆಕಂಡಿತ್ತು.

ಅದಾದ ಬಳಿಕ ಧನಂಜಯ್‌ ಅಭಿನಯದ “ಪಾಪ್‌ಕಾರ್ನ್ ಮಂಕಿ ಟೈಗರ್‌’ ಚಿತ್ರ ಬಿಡುಗಡೆಯಾಗಿತ್ತು. ಇಲ್ಲಿಯವರೆಗೆ ಬಿಡುಗಡೆಯಾದ “ಲವ್‌ ಮಾಕ್ಟೇಲ್‌’ ಮತ್ತು “ಪಾಪ್‌ಕಾರ್ನ್ ಮಂಕಿ ಟೈಗರ್‌’ ಎರಡೂ ಚಿತ್ರಗಳೂ ಬಾಕ್ಸಾಫೀಸ್‌ನಲ್ಲಿ ಒಂದಷ್ಟು ಸದ್ದು ಮಾಡಿ, ಹಿಟ್‌ ಲೀಸ್ಟ್‌ ಸೇರಿದ್ದು, ಈ ವಾರ ರಿಲೀಸ್‌ ಆಗುತ್ತಿರುವ “ಶಿವಾರ್ಜುನ’ ಕೂಡ ಅದೇ ಲೀಸ್ಟ್‌ಗೆ ಸೇರಲಿದೆ ಎಂಬ ವಿಶ್ವಾಸ ಅಮೃತಾ ಅವರದ್ದು.

ಇನ್ನು ಇಂದು ತೆರೆಕಾಣುತ್ತಿರುವ “ಶಿವಾರ್ಜುನ’ ಚಿತ್ರದಲ್ಲಿ ಅಮೃತಾ ಅಯ್ಯಂಗಾರ್‌ ಅವರದ್ದು ಒಂಥರಾ ಬಜಾರಿಯ ಪಾತ್ರವಂತೆ. ಅವರೇ ಹೇಳುವಂತೆ, “ಇದೊಂಥರ ಮಂಜುಳಾ ಅವರು ಮಾಡುತ್ತಿದ್ದ, ಗಂಡುಬೀರಿ -ಬಜಾರಿ ಥರದ ಹಳ್ಳಿ ಹುಡುಗಿ ಪಾತ್ರ. ಲಂಗ-ದಾವಣಿ ಹಾಕಿಕೊಂಡು, ಯಾರಿಗೂ ಕೇರ್‌ ಮಾಡದೆ ಆರಾಮಾಗಿ ಓಡಾಡಿಕೊಂಡಿರುತ್ತೇನೆ. ಊರೆಲ್ಲ ಸುತ್ತಾಡುತ್ತೇನೆ, ಬೋರಾದ್ರೆ ರಸ್ತೆಯಲ್ಲೇ ಆರಾಮಾಗಿ ಕೂತು ಬೀಡುತ್ತೇನೆ.

ಬೀಡಿ ಸೇದುತ್ತೇನೆ, ಜಗಳ ಮಾಡುತ್ತೇನೆ. ಈ ಥರ ಇರುವಂಥ ಪಾತ್ರ. ಹೊಸಥರದ ಪಾತ್ರಗಳನ್ನು ಮಾಡಬೇಕು ಅಂಥ ಬಯಸುತ್ತಿದ್ದಾಗ ಸಿಕ್ಕ ಪಾತ್ರವಿದು. ಆಡಿಯನ್ಸ್‌ಗೆ ನನ್ನ ಪಾತ್ರ ಒಂದಷ್ಟು ಮಜಾ ಕೊಡುತ್ತದೆ’ ಎನ್ನುತ್ತಾರೆ ಅಮೃತಾ ಅಯ್ಯಂಗಾರ್‌. “ನನಗೆ ಒಂದೇ ಥರದ ಪಾತ್ರಗಳನ್ನು ಮಾಡೋದು ಅಂದ್ರೆ ಬೋರ್‌. ಒಬ್ಬ ನಟಿಯಾಗಿ ಬೇರೆ ಬೇರೆ ಥರದ ಪಾತ್ರಗಳನ್ನು ಮಾಡಬೇಕು ಅನ್ನೋ ಆಸೆಯಿದೆ. ಇವತ್ತು ಎಷ್ಟೋ ಜನಕ್ಕೆ ನನ್ನ ಹೆಸರೇ ಗೊತ್ತಿಲ್ಲ.

ಆದ್ರೆ ಜನ ನನ್ನನ್ನು ಎಲ್ಲೇ ನೋಡಿದ್ರೂ, ನಾನು ಮಾಡಿದ ಪಾತ್ರದ ಹೆಸರು ಹೇಳಿ ನನ್ನನ್ನು ಗುರುತಿಸಿ, ಕರೆಯುತ್ತಾರೆ. ಪಾತ್ರವಾಗಿ ಗುರುತಿಸುವುದನ್ನು ಕಂಡಾಗ ಆ ಪಾತ್ರಕ್ಕೆ ನಾನು ನ್ಯಾಯ ಕೊಟ್ಟಿದ್ದೇನೆ ಅಂಥ ಖುಷಿಯಾಗುತ್ತಿದೆ’ ಎನ್ನುವುದು ಅಮೃತಾ ಮಾತು. “ಈಗಾಗಲೇ ರಿಲೀಸ್‌ ಆಗಿರುವ “ಲವ್‌ ಮಾಕ್ಟೇಲ್‌’ ನನಗೊಂದು ಮೋಟಿವೇಶನ್‌ ಕೊಟ್ಟಂಥ ಸಿನಿಮಾ. “ಪಾಪ್‌ ಕಾರ್ನ್ ಮಂಕಿ ಟೈಗರ್‌’ ಇಂಡಸ್ಟ್ರಿಯಲ್ಲಿ ಗುರುತಿಸುವಂತೆ ಮಾಡಿದ ಸಿನಿಮಾ.

ಈಗ ರಿಲೀಸ್‌ ಆಗುತ್ತಿರುವ “ಶಿವಾರ್ಜುನ’ ವೃತ್ತಿಪರತೆ ತೋರಿಸಿಕೊಟ್ಟಂಥ ಸಿನಿಮಾ’ ಅನ್ನೋದು ಅಮೃತಾ ಮಾತು. ಒಟ್ಟಾರೆ ಸಾಲು ಸಾಲು ಚಿತ್ರಗಳಲ್ಲಿ ಪ್ರೇಕ್ಷಕರ ಮುಂದೆ ಬರುತ್ತಿರುವ ಅಮೃತಾ ಅಯ್ಯಂಗಾರ್‌, ಮುಂದಿನ ದಿನಗಳಲ್ಲಿ ಧನಂಜಯ್‌ ಅವರೊಂದಿಗೆ “ಬಡವ ರಾಸ್ಕಲ್‌’ ಮತ್ತು ಶೀತಲ್‌ ಶೆಟ್ಟಿ ನಿರ್ದೇಶನದ ಇನ್ನೂ ಹೆಸರಿಡ ಚಿತ್ರವೊಂದರಲ್ಲಿ ಮತ್ತೂಂದು ವಿಭಿನ್ನ ಪಾತ್ರದ ಮೂಲಕ ದರ್ಶನ ಕೊಡುವ ತಯಾರಿಯಲ್ಲಿದ್ದಾರೆ.

ಟಾಪ್ ನ್ಯೂಸ್

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

We Are The Bad Boys song from Vidyarthi Vidyarthiniyare

Kannada Cinema; ಬ್ಯಾಡ್‌ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.