ಸುಳ್ಳು ಸುದ್ದಿಗೆ ಗರಂ
Team Udayavani, Apr 7, 2020, 10:48 AM IST
ಕನ್ನಡದ ಜೊತೆಗೆ ತಮಿಳು, ತೆಲುಗು, ಹಿಂದಿ ಅಂತ ವಿವಿಧ ಭಾಷೆಯ ಚಿತ್ರರಂಗಗಳಲ್ಲಿ ಬ್ಯುಸಿ ಆಗಿರುವ ನಟಿ ಶ್ರದ್ಧಾ ಶ್ರೀನಾಥ್. ಇದರಿಂದಾಗಿ ಶ್ರದ್ಧಾ ಬೇರೆ ಬೇರೆ ಕಡೆಗಳಿಗೆ ವಿಮಾನ ಪ್ರಯಾಣ ಮಾಡುತ್ತಿರುತ್ತಾರೆ. ಆದರೆ ಇದನ್ನೇ ಗಮನದಲ್ಲಿಟ್ಟುಕೊಂಡು ಶ್ರದ್ಧಾ ಬಗ್ಗೆ ಇಲ್ಲಸಲ್ಲದ ವದಂತಿ, ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರಂತೆ.
ಹೌದು, ಕಳೆದ ಕೆಲ ದಿನಗಳಿಂದ, ಕೋವಿಡ್ 19 ಪೀಡಿತರು ಇದ್ದ ವಿಮಾನದಲ್ಲಿ ಶ್ರದ್ಧಾ ಪ್ರಯಾಣ ಮಾಡಿದ್ದರಿಂದ ಅಧಿಕಾರಿಗಳು ಅವರ ಮನೆಗೆ ಭೇಟಿ ನೀಡಿ, ಅವರನ್ನು 14 ದಿನ ಹೋಮ್ ಕ್ವಾರಂಟೈನ್ ಮಾಡಿದ್ದಾರೆ ಎಂದೆಲ್ಲ ಸುದ್ದಿ ಹರಿದಾಡುತ್ತಿತ್ತು. ಆದರೆ ಈಗ ಇದೆಲ್ಲದಕ್ಕೂ ಶ್ರದ್ದಾ ಶ್ರೀನಾಥ್ ಖಡಕ್ ಆಗಿ ಉತ್ತರ ನೀಡಿದ್ದಾರೆ.
ನಾನು ಸಿನಿಮಾ ಕೆಲಸಗಳಿಗೆ ಮಾ. 12 ಮತ್ತು ಮಾ. 15ರಂದು ಹೈದರಾಬಾದ್ ಮತ್ತು ಚೆನ್ನೈ ತೆರಳಿದ್ದೆ. ಅಂದಹಾಗೆ, ನಾನು ಪ್ರಯಾಣ ಮಾಡಿದ ಯಾವುದೇ ವಿಮಾನದಲ್ಲೂ ಕೊರೊನಾ ಪೀಡಿತರು ಇರಲಿಲ್ಲ. ಅಲ್ಲದೆ, ಕರ್ನಾಟಕದ ಯಾವುದೇ ಆರೋಗ್ಯ ಅಧಿಕಾರಿಗಳು ನಮ್ಮ ಮನೆಗೆ ಬಂದಿಲ್ಲ. ಜೊತೆಗೆ ನನಗೆ ಸೆಲ್ಫ್ ಐಸೋಲೇಷನ್ ಮಾಡುವಂತೆ ಅಧಿಕಾರಿಗಳು ಸೂಚಿಸಿಲ್ಲ ಎಂದಿದ್ದಾರೆ. ಅಷ್ಟಕ್ಕೆ ಸುಮ್ಮನಾಗದ ಶ್ರದ್ದಾ, ತಮಗೆ ತಾವೇ ಐಸೋಲೇಷನ್ ಮಾಡಿಕೊಂಡಿದ್ದಾರೆ. ನನ್ನ ಸಂಬಂಧಿ ವೈದ್ಯರೊಬ್ಬರ ಸಲಹೆ ಮೇರೆಗೆ ನಾನು ಸ್ವಯಂ ಐಸೋಲೇಟ್ ಆಗಿದ್ದೆ.
ಮುನ್ನೆಚ್ಚರಿಕಾ ದೃಷ್ಟಿಯಿಂದ ಈ ರೀತಿ ಮಾಡಿದೆ. ಎಲ್ಲರೂ ಹುಷಾರಾಗಿರಿ. ವೈರಸ್ ಮತ್ತು ತಪ್ಪು ಮಾಹಿತಿಯನ್ನು ಹರಡದಿರಿ. ಎರಡೂ ಕೂಡ ಅಪಾಯಕಾರಿ’ ಎಂದಿದ್ದಾರೆ ಶ್ರದ್ಧಾ ಶ್ರೀನಾಥ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ
Crime: ಗುದದ್ವಾರಕ್ಕೆ ಗಾಳಿ: ಸ್ನೇಹಿತನ ದುರ್ಮರಣ: ಕೃತ್ಯವೆಸಗಿದಾತನ ಬಂಧನ
Bidar; ಪತ್ನಿಯ ಅನೈತಿಕ ಸಂಬಂಧಕ್ಕೆ ಮನನೊಂದು ನೀರಿನ ಟ್ಯಾಂಕ್ ಗೆ ಬಿದ್ದು ಪತಿ ಆತ್ಮಹತ್ಯೆ
Gobi Manchurian ಬ್ಯಾನ್ ಎಫೆಕ್ಟ್: ಚಾಟ್ಸ್ ಮಾರಾಟ ಕುಸಿತ
Book Brahma ಸ್ವಾತಂತ್ರ್ಯೋತ್ಸವ ಕಥಾ ಸ್ಪರ್ಧೆ, ಕಾದಂಬರಿ ಪುರಸ್ಕಾರ- 2024: ವಿವರಗಳು