ಅನುಕ್ತ: ಯಶೋಧೆಯ ಸಖ ಹೀರೋ ಆದ ಕಥೆ!
Team Udayavani, Jan 27, 2019, 9:49 AM IST
ಯಶೋಧೆ ಧಾರಾವಾಹಿಯ ನಾಯಕನಾಗಿ ಮನೆ ಮಾತಾಗಿದ್ದವರು ಕಾರ್ತಿಕ್ ಅತ್ತಾವರ. ಇವರು ಅಪ್ಪಟ ತುಳುನಾಡ ಹುಡುಗ. ಈ ಹಿಂದೆ ರಿಕ್ಷಾ ಡ್ರೈವರ್ ಎಂಬ ತುಳು ಚಿತ್ರದ ಮೂಲಕವೇ ಕಾರ್ತಿಕ್ ನಟನಾಗಿ ಹೊರ ಹೊಮ್ಮಿದ್ದರು. ಆದರೆ ಅವರ ಆಸೆಗಳೇ ಬೇರೆಯದ್ದಿದ್ದವು.
ಅನುಕ್ತ ಚಿತ್ರಕ್ಕೆ ಥ್ರಿಲ್ಲರ್ ಶೈಲಿಯ ಕಥೆ ಬರೆದಿದ್ದು ಇದೇ ಕಾರ್ತಿಕ್ ಅತ್ತಾವರ ಎಂಬುದು ನಿಜವಾದ ವಿಶೇಷ ಮತ್ತು ಅಚ್ಚರಿ. ಬಹುಶಃ ಅವರೂ ತುಳು ನಾಡಿನವರೇ ಆದ್ದರಿಂದ ಆ ಮಣ್ಣಿನ ಘಮಲಿನ ಕಥೆಯನ್ನೇ ಹೆಣೆದಿದ್ದಾರೆ. ಆದರೆ ಈ ಕಥೆ ಬರೆಯುವಾಗ ಅವರಲ್ಲಿ ಇದೊಂದು ಒಳ್ಳೆ ಚಿತ್ರವಾಗಬೇಕೆಂಬ ಬಯಕೆ ಇತ್ತೇ ಹೊರತು ತಾನು ನಾಯಕನಾಗ ಬೇಕೆಂಬ ಯಾವ ಇರಾದೆಯೂ ಇರಲಿಲ್ಲವಂತೆ.
ಕಡೆಗೆ ಅಶ್ವತ್ಥ್ ಸ್ಯಾಮುಯಲ್ ನಿರ್ದೇಶನ ಮಾಡಲು ತಯಾರಾಗಿ, ಹರೀರ್ಶ ಬಂಗೇರ ನಿರ್ಮಾಣ ಮಾಡಲು ಮುಂದಾಗಿದ್ದರು. ಇದಕ್ಕೆ ಅನುಕ್ತ ಎಂಬ ಹೆಸರು ಫಿಕ್ಸಾಗಿ ಸಂಗೀತ ಭಟ್ ನಾಯಕಿಯಾಗಿಯೂ ಆಯ್ಕೆಯಾಗಿದ್ದರು. ಆದರೆ ನಾಯಕ ಯಾರೆಂಬ ಪ್ರಶ್ನೆ ಮಾತ್ರ ಹಾಗೆಯೇ ಉಳಿದುಕೊಂಡಿತ್ತು. ಕಡೆಗೆ ತಾವೇ ಆ ಪಾತ್ರಕ್ಕೆ ಸೂಕ್ತ ಎಂಬ ಅಭಿಪ್ರಾಯ ಚಿತ್ರ ತಂಡದಿಂದ ಬಂದಾಗ ಕಾರ್ತಿಕ್ ಅನಿರೀಕ್ಷಿತವಾಗಿ ನಾಯಕನಾಗಿ ನಟಿಸಿದ್ದರಂತೆ.
ಆದರೆ, ಅನುಕ್ತ ಚಿತ್ರದ ಮೂಲಕ ಕಾರ್ತಿಕ್ ನಾಯಕನಾಗಿ ನೆಲೆಗೊಳ್ಳೋದು ಖಚಿತ ಎಂಬಂತಿದೆ. ಯಶೋಧೆ ಧಾರಾವಾಹಿಯ ಮೂಲಕ ಕಿರುತೆರೆ ಪ್ರೇಕ್ಷಕರ ಮನ ಗೆದ್ದಿದ್ದ ಕಾತರ್ಿಕ್ ಇದೀಗ ಹಿರಿತೆರೆಗೂ ಲಗ್ಗೆಯಿಡಲು ತಯಾರಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ