ಅನುಪಮಾ, ಸಾಯಿಪಲ್ಲವಿ ಹಿಂದೆ ಮದಗಜ ತಂಡ

ನಾಯಕಿ ಹುಡುಕಾಟದಲ್ಲಿ ಚಿತ್ರತಂಡ ಬಿಝಿ

Team Udayavani, Apr 14, 2019, 3:00 AM IST

madagaja

ಶ್ರೀಮುರಳಿ ಅಭಿನಯಿಸಲಿರುವ “ಮದಗಜ’ ಚಿತ್ರ ಶುರುವಿಗೆ ಮುನ್ನವೇ ಸಾಕಷ್ಟು ಸುದ್ದಿ ಮಾಡಿರುವುದು ಗೊತ್ತೇ ಇದೆ. ಈಗ ಹೊಸ ಸುದ್ದಿ ಏನಪ್ಪಾ ಅಂದರೆ, ನಿರ್ದೇಶಕ ಎಸ್‌.ಮಹೇಶ್‌ಕುಮಾರ್‌ ಶ್ರೀಮುರಳಿ ಅವರಿಗೆ ನಾಯಕಿ ಹುಡುಕಾಟದಲ್ಲಿ ಸಿಕ್ಕಾಪಟ್ಟೆ ತಲೆಕೆಡಿಸಿಕೊಂಡಂತಿದೆ. ಚಿತ್ರದಲ್ಲಿ ನಾಯಕಿಯದು ಕ್ಲಾಸ್‌ ಆಗಿರುವ ಪಾತ್ರ.

ಅದರಲ್ಲೂ ಮುದ್ದಾಗಿರುವ ಹುಡುಗಿಯೇ ಬೇಕು. ಹಾಗಾಗಿ ಸಾಕಷ್ಟು ಕಡೆ ಹುಡುಕಾಟ ನಡೆಸಿದ ನಿರ್ದೇಶಕರು, ಈಗ ಅನುಪಮಾ ಪರಮೇಶ್ವರನ್‌ ಮತ್ತು ಸಾಯಿ ಪಲ್ಲವಿ ಕಡೆ ಮುಖ ಮಾಡಿದ್ದಾರೆ. “ನಟಸಾರ್ವಭೌಮ’ ಚಿತ್ರದಲ್ಲಿ ನಟಿಸಿದ್ದ ಅನುಪಮಾ ಪರಮೇಶ್ವರನ್‌ ಅವರನ್ನು ಈಗಾಗಲೇ ಸಂಪರ್ಕಿಸಿರುವ ನಿರ್ದೇಶಕರು ಕಥೆಯ ಒನ್‌ಲೈನ್‌ ಹೇಳಿದ್ದಾರೆ.

ಇಷ್ಟಪಟ್ಟಿರುವ ಅನುಪಮಾ, ಸದ್ಯಕ್ಕೆ ಬಿಜಿ. ಅವರಿಗೆ ಡೇಟ್ಸ್‌ನದ್ದೇ ಸಮಸ್ಯೆ. ಯಾವುದಕ್ಕೂ ಅವರಿಂದ ಉತ್ತರ ಬಂದಿಲ್ಲ. ಒಂದು ವೇಳೆ ಅನುಪಮಾ ಗ್ರೀನ್‌ ಸಿಗ್ನಲ್‌ ಕೊಟ್ಟರೆ ಅವರೇ “ಮದಗಜ’ ಚಿತ್ರಕ್ಕೆ ನಾಯಕಿ. ಒಂದು ವೇಳೆ ಡೇಟ್‌ ಸಮಸ್ಯೆಯಿಂದ ಅವರು ಸಿಗದೇ ಇದ್ದರೆ, ಸಾಯಿಪಲ್ಲವಿ ಅವರು ಬರುವ ಸಾಧ್ಯತೆಯೂ ಇದೆ ಎಂಬುದು ಚಿತ್ರತಂಡದ ಮಾತು.

“ಮದಗಜ’ ಚಿತ್ರದ ಪಾತ್ರಕ್ಕೆ ಸಾಯಿಪಲ್ಲವಿ ಅವರೂ ಸರಿಹೊಂದುತ್ತಾರೆ ಎಂಬ ಕಾರಣಕ್ಕೆ ನಿರ್ದೇಶಕರು ಅವರನ್ನು ಕೇಳಿದ್ದಾರೆ. ಒಟ್ಟಾರೆ, ಈ ಇಬ್ಬರು ನಾಯಕಿಯರ ಪೈಕಿ ಯಾರು ಸಿಕ್ಕರೂ “ಮದಗಜ’ ಚಿತ್ರದಲ್ಲಿ ನಾಯಕಿಯಾಗಲಿದ್ದಾರೆ. ಒಂದು ವೇಳೆ ಇಬ್ಬರೂ ಸಿಗದೇ ಇದ್ದರೆ, ಮತ್ತೆ ಕನ್ನಡದ ಹುಡುಗಿಯತ್ತ ಮುಖ ಮಾಡಿದರೂ ಅಚ್ಚರಿ ಇಲ್ಲ.

ಈ ಚಿತ್ರದಲ್ಲಿ ಶ್ರೀಮುರಳಿ ಅವರ ಗೆಟಪ್‌ ತುಂಬಾ ಹೊಸದಾಗಿರಲಿದೆ ಎನ್ನುವ ನಿರ್ದೇಶಕರು, ಅವರ ಹೇರ್‌ಸ್ಟೈಲ್‌ ಎಲ್ಲವೂ ಚೇಂಜ್‌ ಆಗಿರಲಿದ್ದು, ಇಲ್ಲಿಯವರೆಗೆ ನೋಡಿದ ಶ್ರೀಮುರಳಿ ಅವರಿಗೂ, “ಮದಗಜ’ ಚಿತ್ರದ ಶ್ರೀಮುರಳಿ ಅವರಿಗೂ ಸಾಕಷ್ಟು ವ್ಯತ್ಯಾಸ ಇರಲಿದೆ ಎಂಬುದು ಅವರ ಮಾತು. ಸದ್ಯಕ್ಕೆ “ಮದಗಜ’ ಚಿತ್ರವನ್ನು ಮೂರು ಹಂತದಲ್ಲಿ ಚಿತ್ರೀಕರಿಸಲು ನಿರ್ದೇಶಕರು ಯೋಚಿಸಿದ್ದಾರೆ.

ಶೇ.30 ರಷ್ಟು ಭಾಗದ ಚಿತ್ರೀಕರಣ ವಿದೇಶದಲ್ಲೇ ನಡೆಯಲಿದೆ. ಅಲ್ಲೊಂದು ಭರ್ಜರಿ ಫೈಟು, ಎಂಟು ಸೀನು, ಹಾಡು ಇರಲಿದೆ. ವಿಶೇಷವೆಂದರೆ, ವಿದೇಶಿ ನೆಲದಲ್ಲಿ ಗೂಳಿ ಫೈಟ್‌ವೊಂದನ್ನು ಭರ್ಜರಿಯಾಗಿ ಚಿತ್ರಿಸುವ ಯೋಚನೆ ನಿರ್ದೇಶಕರಿಗಿದೆಯಂತೆ.

ಈಗಾಗಲೇ ಅದಕ್ಕೆಲ್ಲಾ ತಯಾರಿಯೂ ನಡೆಸಿರುವ ಅವರು, ಅಲ್ಲಿ ಗೂಳಿಗಳ ಜಂಪಿಂಗ್‌ ನಡುವೆ ಹೀರೋ ಇಂಟ್ರೋಡಕ್ಷನ್‌ ಸೀನ್‌ ಶೂಟ್‌ ಮಾಡಲಾಗುತ್ತದೆ. ಆ ಬಳಿಕ ಬೆಂಗಳೂರು, ರಾಮೋಜಿ ಫಿಲ್ಮ್ಸಿಟಿಯಲ್ಲಿ ಚಿತ್ರೀಕರಿಸಲಾಗುವುದು ಎನ್ನುವುದು ಮಹೇಶ್‌ ಕೊಡುವ ವಿವರ. ಜೂನ್‌ ಮೊದಲ ವಾರದಲ್ಲಿ “ಮದಗಜ’ ಚಿತ್ರ ಶುರುವಾಗಲಿದೆ ಎನ್ನುತ್ತಾರೆ.

ಟಾಪ್ ನ್ಯೂಸ್

1-qwwqeqw

Thirthahalli;ಮಳೆಯ ಅಬ್ಬರಕ್ಕೆ ಮೊದಲ ಬಲಿ: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

13

Politics: ಸಿದ್ದರಾಮಯ್ಯ ಸರಕಾರ ಬಂದ ಬಳಿಕ ಮುಸ್ಲಿಂ ಮೂಲಭೂತವಾದಿಗಳು ಹೆಚ್ಚಳ; ಅಶೋಕ್‌

1-qeqeqwe

Congress ಸರ್ಕಾರ ಪತನ ದೇವೇಗೌಡರ ಭ್ರಮೆ: ಸಿದ್ದರಾಮಯ್ಯ ವಾಗ್ದಾಳಿ

1-aaa-1

Rain; ರಾಜ್ಯದ ವಿವಿಧೆಡೆ ಸಿಡಿಲಬ್ಬರದ ಮಳೆ; ಕುಷ್ಟಗಿಯಲ್ಲಿ ರೈತ ಬಲಿ, ಅಪಾರ ನಷ್ಟ

1-weewqewqe

LS Election; ದಿಂಗಾಲೇಶ್ವರ ಶ್ರೀ ಕೋಟ್ಯಧಿಪತಿ: 3 ಅಪರಾಧ ಪ್ರಕರಣಗಳು ಇವೆ

crime (2)

Bengaluru: ಪಾರ್ಕ್ ನಲ್ಲಿ ಹಾಡಹಗಲೇ ಜೋಡಿಯ ಬರ್ಬರ ಹತ್ಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!

Actor Dwarakish: ಸಕಲ ಗೌರವಗಳೊಂದಿಗೆ ನಟ ದ್ವಾರಕೀಶ್‌ ಅಂತ್ಯಕ್ರಿಯೆ

Actor Dwarakish: ಸಕಲ ಗೌರವಗಳೊಂದಿಗೆ ನಟ ದ್ವಾರಕೀಶ್‌ ಅಂತ್ಯಕ್ರಿಯೆ

choo mantar kannada movie

Sharan; ಮೇ 10ಕ್ಕೆ ‘ಛೂ ಮಂತರ್‌’ ತೆರೆಗೆ ಸಿದ್ಧ

aditya;s kangaroo movie

Aditya; ಟ್ರೇಲರ್ ನಲ್ಲಿ ‘ಕಾಂಗರೂ’ ದರ್ಶನ; ಮೇ.3ರಂದು ತೆರೆಗೆ

Dwarakish: ಕನ್ನಡದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್‌ ವಿಧಿವಶ

Dwarakish: ಕನ್ನಡದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್‌ ವಿಧಿವಶ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

CN Ashwath Narayan: ಕಾಂಗ್ರೆಸ್‌ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ

CN Ashwath Narayan: ಕಾಂಗ್ರೆಸ್‌ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ

1-qwwqeqw

Thirthahalli;ಮಳೆಯ ಅಬ್ಬರಕ್ಕೆ ಮೊದಲ ಬಲಿ: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

accident

Bramavara; ಹೆದ್ದಾರಿಯಲ್ಲಿ ಭೀಕರ ಅಪಘಾತ: ಲಾರಿಗೆ ಸಿಲುಕಿ ಬೈಕ್ ಸವಾರ ದುರ್ಮರಣ

D. K. Shivakumar: ಡಿಕೆಶಿ ರಕ್ಷಿಸಲೆಂದೇ ಸಿಬಿಐಗೆ ನೀಡಿದ್ದ ಅನುಮತಿ ವಾಪಸ್‌

D. K. Shivakumar: ಡಿಕೆಶಿ ರಕ್ಷಿಸಲೆಂದೇ ಸಿಬಿಐಗೆ ನೀಡಿದ್ದ ಅನುಮತಿ ವಾಪಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.