ಆರೋಹಣ ಚಿತ್ರೀಕರಣ ಪೂರ್ಣ
Team Udayavani, Jan 28, 2018, 11:38 AM IST
ಹೊಸಬರೇ ಸೇರಿ ಮಾಡಿರುವ “ಆರೋಹಣ’ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ. ಈಗ ಚಿತ್ರ ಬಿಡುಗಡೆಯ ತಯಾರಿ ಮಾಡಿಕೊಳ್ಳುತ್ತಿದೆ. ನಾಗತಿಹಳ್ಳಿ ಚಂದ್ರಶೇಖರ್ ಹಾಗು ನಾಗಾಭರಣರಂತಹ ಹಿರಿಯ ನಿರ್ದೇಶಕರ ಬಳಿ ಕೆಲಸ ಮಾಡಿರುವ ಶ್ರೀಧರ್ ಶೆಟ್ಟಿ ಅವರ ಮೊದಲ ನಿರ್ದೇಶನದ ಚಿತ್ರವಿದು.
ಇದೊಂದು ಹಳ್ಳಿಯಲ್ಲಿ ನಡೆಯುವ ತಂದೆ-ಮಗನ ಕಥೆ ಹೊಂದಿದೆ. ಹಳ್ಳಿ ಪಂಚಾಯ್ತಿ ರಾಜಕೀಯ ಹಾಗೂ ಪ್ರೇಮ ಪ್ರಕರಣದಂತಹ ವಿಷಯಗಳನ್ನು ಈ ಚಿತ್ರದಲ್ಲಿ ಹೇಳಲಾಗಿದೆ. ಬೆಂಗಳೂರು ಅಲ್ಲದೆ, ನೈಸ್ ರಸ್ತೆಯಲ್ಲಿನ ಮಂಗನಹಳ್ಳಿ ಸುತ್ತ ಮುತ್ತ ಈ ಚಿತ್ರದ ಚಿತ್ರೀಕರಣ ನಡೆಸಲಾಗಿದೆ.
ಶ್ರೀಧರ್ ಶೆಟ್ಟಿ ಅವರೇ ಈ ಚಿತ್ರದ ಕಥೆ, ಚಿತ್ರಕತೆ ಹಾಗೂ ಸಂಭಾಷಣೆಯನ್ನು ಬರೆದಿದ್ದಾರೆ. ಚಿತ್ರದಲ್ಲಿ ಮೂರು ಹಾಡುಗಳಿವೆ. ಮಲ್ಲಿಕಾರ್ಜುನ ಪ್ರೊಡಕ್ಷನ್ಸ್ ಬ್ಯಾನರ್ನಲ್ಲಿ ಸುಶೀಲ್ ಕುಮಾರ್ ನಿರ್ಮಿಸುತ್ತಿರುವ ಈಚಿತ್ರಕ್ಕೆ ಕೆ. ವೈ. ಶಿವಪುತ್ರ ಛಾಯಾಗ್ರಹಣವಿದೆ.
ಉತ್ತಮ್ರಾಜ್ ಆರ್ ಎನ್, ರಾಹುಲ್ ರಾಘವನ್ ಸಂಗೀತ ನೀಡಿದ್ದಾರೆ. ಕೆ.ಕಲ್ಯಾಣ್, ಶ್ರೀಧರ್ ಶೆಟ್ಟಿ ಗೀತೆ ರಚಿಸಿದ್ದಾರೆ. ಜಗ್ಗು ನೃತ್ಯ ನಿರ್ದೇಶನವಿದೆ. ವೈಲೆಂಟ್ ವೇಲು ಸಾಹಸ ಮಾಡಿದ್ದಾರೆ. ದುರ್ಗಾ ಪಿ. ಎಸ್. ಸಂಕಲನವಿದೆ. ಸುಶೀಲ್ ಕುಮಾರ್ ರೋಹಿತ್ ಶೆಟ್ಟಿ, ಪ್ರೀತಿ, ಶ್ರೀಧರ್ ಶೆಟ್ಟಿ, ರುದ್ರೇಗೌಡ, ಉಮೇಶ್ ಪುಂಗ, ಧೀಕ್ಷಾ, ಮೈತ್ರಿ, ರವಿ, ಆಶಾ, ಮಣಿ ಇತರರು ನಟಿಸಿದ್ದಾರೆ.