ಪ್ರೇಕ್ಷಕನ ಕಣ್ಣಲ್ಲಿ ಸಿನಿ ಕನಸು

ಥಿಯೇಟರ್‌ ಮುಂದೆ ಮತ್ತೆ ಕುಣಿಯೋದು ಯಾವಾಗ ...

Team Udayavani, Apr 18, 2020, 9:39 AM IST

ಪ್ರೇಕ್ಷಕನ ಕಣ್ಣಲ್ಲಿ ಸಿನಿ ಕನಸು

ಯಾವಾಗ ಗುರು ಸಿನಿಮಾ ನೋಡೋದು, ನಮ್‌ ಬಾಸ್‌ ಕಟೌಟ್‌ ಮುಂದೆ ಜೈಕಾರ ಹಾಕಿ ಕುಣಿಯೋದು, ಇಂಟ್ರೊಡಕ್ಷನ್‌ಗೆ ಹೂ ಬಿಸಾಕಿ, ಥಿಯೇಟರ್‌ ಪರದೆ ಮುಂದೆ ಬಿಂದಾಸ್‌ ಆಗಿ ಕುಣಿಯೋದು ಯಾವಾಗ … ಇಂತಹ ಹತ್ತಾರು ಪ್ರಶ್ನೆಗಳು ಅಪ್ಪಟ ಸಿನಿಮಾ ಪ್ರೇಮಿಯನ್ನು ಕಾಡುತ್ತಿದೆ.

ಸಿನಿಮಾ ರಂಗವೇ ಹಾಗೆ. ಅಲ್ಲಿ ಸದಾ ಚಟುವಟಿಕೆ ಇದ್ದರಷ್ಟೇ ಜೀವಂತಿಕೆ. ಅದರಲ್ಲೂ ಸಿನಿಮಾ ಬಿಡುಗಡೆಯ ವಾರವೆಂದರೆ ಸಿನಿಮಾ ಪ್ರೇಮಿಗಳಿಗೆ ಅಚ್ಚುಮೆಚ್ಚು. ಶುಕ್ರವಾರ ಬಂತೆಂದರೆ ಅದೊಂದು ಹಬ್ಬ. ಅದರಲ್ಲೂ ಸ್ಟಾರ್‌ ಸಿನಿಮಾ ಬಿಡುಗಡೆಯಾಗುವುದಾದರೆ ಆ ಸಂಭ್ರಮ ದುಪ್ಪಟ್ಟು. ಒಂದು ಕಡೆ ಫ‌ಸ್ಟ್‌ ಡೇ ಫ‌ಸ್ಟ್‌ ಶೋ ನೋಡಬೇಕೆಂಬ ತುಡಿತ, ಇನ್ನೊಂದು ಕಡೆ ಥಿಯೇಟರ್‌ ಮುಂದೆ ಸಂಭ್ರಮಿಸುವ ಹಂಬಲ. ಆದರೆ, ಕಳೆದ ಒಂದು ತಿಂಗಳಿನಿಂದ ಚಿತ್ರರಂಗ ಸ್ತಬ್ಧವಾಗಿದೆ. ಸಿನಿಮಾದ ಯಾವುದೇ ಚಟುವಟಿಕೆಗಳು ನಡೆಯುತ್ತಿಲ್ಲ. ಸಿನಿಮಾ ಪ್ರೇಕ್ಷಕ ಸಹಜವಾಗಿಯೇ ಬೇಸರಗೊಂಡಿದ್ದಾನೆ. ವಾರ ವಾರ ಹೊಸ ಸಿನಿಮಾಗಳನ್ನು ಕಣ್ತುಂಬಿಕೊಳ್ಳುತ್ತಿದ್ದ ಪ್ರೇಕ್ಷಕನಿಗೆ ಈಗ ಯಾವ ಹೊಸ ಸಿನಿಮಾವೂ ಇಲ್ಲ. ಚಿತ್ರಮಂದಿರ ಮುಂದಿನ ಆ ಕಲರ್‌ ಫ‌ುಲ್‌ ವಾತಾವರಣವೂ ಇಲ್ಲ.

ಇವತ್ತು ಡಿಜಿಟಲ್‌ ಮಾಧ್ಯಮಗಳಲ್ಲಿ ಸಾಕಷ್ಟು ಸಿನಿಮಾಳು ಇವೆ. ಆದರೆ, ಗಾಂಧಿನಗರದ ಅಪ್ಪಟ ಸಿನಿಮಾ ಪ್ರೇಮಿಗೆ ಈ ಡಿಜಿಟಲ್‌ ಮಾಧ್ಯಮಗಳು ಅಷ್ಟಾಗಿ ಒಗ್ಗುವುದಿಲ್ಲ. ಅತನಿಗೆ ಏನಿದ್ದರೂ ಚಿತ್ರಮಂದಿರದ ಮುಂದಿನ ಸಂಭ್ರಮವೇ ಹೆಚ್ಚು ಖುಷಿ ನೀಡುತ್ತದೆ. ಈ ಸಂಭ್ರಮ ಮತ್ತೆ ಮರುಕಳಿಸಲಿ ಎಂಬ ಪ್ರಾರ್ಥನೆ ನಿಜವಾದ ಸಿನಿಮಾ ಪ್ರೇಮಿಯದ್ದು. ಪ್ರತಿ ಶುಕ್ರವಾರ ಸಿನಿಮಾ ಬಿಡುಗಡೆಯಾದಾಗ ಎರಡು ವರ್ಗ ಕಾತರದಿಂದ ಕಾಯುತ್ತದೆ. ಸ್ಟಾರ್ ಹಾಗೂ ಹೊಸಬರು. ಅದರಲ್ಲೂ ಹೊಸಬರ ಚಿಂತೆ, ಲೆಕ್ಕಾಚಾರ ಸ್ವಲ್ಪ ಹೆಚ್ಚೇ ಇರುತ್ತದೆ. ಎಷ್ಟೇ ದೊಡ್ಡ ಸ್ಟಾರ್‌ ಆದರೂ ತನ್ನ ಸಿನಿಮಾ ರಿಲೀಸ್‌ ದಿನ ಸಣ್ಣದೊಂದು ಚಡಪಡಿಕೆ, ಆತಂಕ ಇದ್ದೇ ಇರುತ್ತದೆ. ಸಿನಿಮಾ ಏನಾಗುತ್ತದೋ, ಅಭಿಮಾನಿಗಳು ಹೇಗೆ ಸ್ವೀಕರಿಸುತ್ತಾರೋ ಎಂಬ ಚಡಪಡಿಕೆ ಸಹಜ. ಹಾಗಂತ ಒಬ್ಬ ಸ್ಟಾರ್‌ ನಟನ ಒಂದು ಸಿನಿಮಾ ಸೋತ ಕೂಡಲೇ ಆತನ ಕೆರಿ ಯರ್‌ ಮೇಲೆ ಅದು ದೊಡ್ಡ ಪ್ರಭಾವ ಬೀರೋದಿಲ್ಲ. ಇದು ಸ್ಟಾರ್‌ ನಟರ ಕಥೆಯಾದರೆ ಹೊಸಬರಿಗೆ ತಮ್ಮ ಸಿನಿಮಾ ಬಿಡುಗಡೆಯ ದಿನ ಅದೊಂದು ಅಗ್ನಿಪರೀಕ್ಷೆಯಾಗಿರುತ್ತದೆ.

ಸಿನಿಮಾ ಗೆದ್ದೆರೆ ಅಥವಾ ಮೆಚ್ಚುಗೆ ಪಡೆದರಷ್ಟೇ ಅವರಿಗೆ ಭವಿಷ್ಯ. ಇಲ್ಲವಾದರೆ ಬಂದ ದಾರಿಯಲ್ಲೇ ವಾಪಾಸ್‌ ಹೋಗ ಬೇಕಾದ ಪರಿಸ್ಥಿತಿ. ಅದೆಷ್ಟೋ ಹೊಸಬರು ಫ‌ಸ್ಟ್‌ ಡೇ ಫ‌ಸ್ಟ್‌ ಶೋ ಮುಗಿಸಿಕೊಂಡು ಹೊರ ಬರುವ ಪ್ರೇಕ್ಷಕರ ಅಭಿಪ್ರಾಯ, ವಿಮರ್ಶೆಯ ನಿರೀಕ್ಷೆಯಲ್ಲಿರುತ್ತಾರೆ. ಆದರೆ  ಕೋವಿಡ್ 19 ಎಫೆಕ್ಟ್ನಿಂದಾಗಿ ಹೊಸಬರು, ಸ್ಟಾರ್‌ಗಳು ಇಬ್ಬರೂ ಒಟ್ಟಿಗೆ ಭಯಪಡುವಂತಾಗಿದೆ. ಮತ್ತೆ ಸಿನಿಮಾ ಪ್ರದರ್ಶನ ಯಾವಾಗ ಆರಂಭವಾಗುತ್ತದೆ ಎಂದು ಎದುರು ನೋಡುವಂತಾಗಿದೆ.  ಚಿತ್ರ ರಂಗ ಮತ್ತೆ ಮೊದಲಿನಂತಾಗಲೂ ಸಾಕಷ್ಟು ಸಮಯವೇ ಬೇಕಾಗಬಹುದು. ಕೋವಿಡ್ 19 ಮಹಾಮಾರಿ ಮಾಯವಾಗಿ ಜನ ಭಯ ಬಿಟ್ಟು ಸಿನಿಮಾ ಎಂಜಾಯ್‌ ಮಾಡಿದಾಗ ಮಾತ್ರ ಚಿತ್ರರಂಗ ಮತ್ತೆ ಕಲರ್‌ ಫ‌ುಲ್‌ ಆಗಲಿದೆ. ಪ್ರೇಕ್ಷಕನ ಶಿಳ್ಳೆ, ಕುಣಿತ ಚಿತ್ರಮಂದಿರ ಮುಂದೆ ಮರುಕಳಿಸಲಿದೆ.

ಟಾಪ್ ನ್ಯೂಸ್

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Usire Usire: ಕೈ ಕೊಟ್ಟ ನಿರ್ದೇಶಕ; ನಿರ್ಮಾಪಕ ಕಂಗಾಲು

Usire Usire: ಕೈ ಕೊಟ್ಟ ನಿರ್ದೇಶಕ; ನಿರ್ಮಾಪಕ ಕಂಗಾಲು

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

O2

O2: ತೆರೆಗೆ ಬಂತು ಓ2; ಚಿತ್ರದ ಮೇಲೆ ಆಶಿಕಾ ನಿರೀಕ್ಷೆ

nalkane ayama kannada movie

Sandalwood; ‘ನಾಲ್ಕನೇ ಆಯಾಮ’ ಮೇಲೆ ಗೌತಮ್‌ ಕನಸು: ಇಂದು ತೆರೆಗೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-weew

Mudigere; ಹುಲಿ ಹತ್ಯೆ ಆರೋಪದ ಮೇಲೆ ಇಬ್ಬರ ಬಂಧನ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

1-qeqwqwe

Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

1-aaa

Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.