ʼರಾಜಕುಮಾರ’ ಸಿನಿಮಾ ಉಚಿತ ಪ್ರದರ್ಶನ
Team Udayavani, Nov 1, 2021, 5:13 PM IST
ಮಧುಗಿರಿ: ಪವರ್ಸ್ಟಾರ್ ಪುನೀತ್ ರಾಜಕುಮಾರ್ ಅವರ ಅಕಾಲಿಕ ನಿಧನದಿಂದ ಹಲವಾರು ಅಭಿಮಾನಿ ಗಳಿಗೆ ಮಾನಸಿಕ ನೋವಾಗಿದೆ. ಅವರ ನೆನಪಿಗಾಗಿ ಪಟ್ಟಣದ ಶಂಕರ್ ಚಿತ್ರಮಂದಿರದಲ್ಲಿ ಸೋಮವಾರದಿಂದ- ಗುರುವಾರದವರೆಗೂ ಉಚಿತವಾಗಿ ಚಿತ್ರ ಪ್ರದರ್ಶನ ನಡೆಸಲಾಗುವುದೆಂದು ಕನ್ನಡ ಗಡಿನಾಡು ರಕ್ಷಣಾ ವೇದಿಕೆ ಅಧ್ಯಕ್ಷ ಕೇಬಲ್ ಸುಬ್ಬು ತಿಳಿಸಿದರು.
ಈ ಕುರಿತು ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿದಿನ 4 ಪ್ರದರ್ಶನಗಳಿದ್ದು, 4 ದಿನ ಚಿತ್ರ ಪ್ರದರ್ಶನ ಇರಲಿದೆ. ಪುನೀತ್ ರಾಜಕುಮಾರ್ ಚಿತ್ರದಲ್ಲಿ ಮಾತ್ರ ನಾಯಕರಾಗದೆ, ಜಿನ ಜೀವನದಲ್ಲೂ ನಮ್ಮ ಈ ಸಮಾಜದ ನಾಯಕ ರಾಗಿದ್ದಾರೆ.
ಇದನ್ನೂ ಓದಿ;- ಗೋವಾ: ನರಕಾಸುರನ ದಹನಕ್ಕೆ ಭರ್ಜರಿ ಸಿದ್ದತೆ
ಅದಕ್ಕೆ ಅವರ ಜನಸೇವೆಯೇ ಸಾಕ್ಷಿಯಾಗಿದ್ದು, ಅವರು ನಮ್ಮೆಲ್ಲರ ಮನದಲ್ಲಿ ಅಮರರಾಗಿದ್ದಾರೆ. ಅವರ ಗುಣಗಳನ್ನು ಯುವ ಜನತೆ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದರು. ತಾಲೂಕು ರಾಜಕುಮಾರ್ ಅಭಿಮಾನಿ ಬಳಗದ ಅಧ್ಯಕ್ಷ ಸೈಯದ್ ಕರೀಂ, ಪುರಸಭಾ ಸದಸ್ಯ ಮಂಜುನಾಥಾಚಾರ್, ಮುಖಂಡರಾದ ರಾಮು, ಅನಂತ ನಾರಾಯಣಬಾಬು, ಸುಧೀರ್, ಶಿವಕುಮಾರ್, ರಾಘವೇಂದ್ರ, ನಾಗೇಂದ್ರ ಹಾಗೂ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ
Movie Review: ಆಡು ಜೀವಿದಂ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Delhi Police: ಮಾರುತಿ ಸ್ವಿಫ್ಟ್ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!
BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ