ಬ್ಯಾಕ್ ಟು ಬ್ಯಾಕ್ ಶಿವಣ್ಣ
ಏಪ್ರಿಲ್ನಲ್ಲಿ ಕವಚ ಬಂತು ಮೇಯಲ್ಲಿ ರುಸ್ತುಂ ಬರುತ್ತೆ ...
Team Udayavani, Apr 10, 2019, 3:00 AM IST
ಶಿವರಾಜಕುಮಾರ್ ಅಭಿನಯದ “ಕವಚ’ ಚಿತ್ರ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಭಾವನಾತ್ಮಕ ಸಂಬಂಧಗಳ ಸುತ್ತ ಸುತ್ತುವ ಈ ಸಿನಿಮಾವನ್ನು ಫ್ಯಾಮಿಲಿ ಆಡಿಯನ್ಸ್ ಇಷ್ಟಪಟ್ಟಿದ್ದಾರೆ. ಈಗ ಮಾಸ್ ಆಡಿಯನ್ಸ್ಗಾಗಿ ಶಿವಣ್ಣ ಅವರ ಮತ್ತೂಂದು ಸಿನಿಮಾ ರೆಡಿಯಾಗಿದೆ.
ಅದು “ರುಸ್ತುಂ’. ಸಾಹಸ ನಿರ್ದೇಶಕ ರವಿವರ್ಮ ನಿರ್ದೇಶನದ ಚೊಚ್ಚಲ ಚಿತ್ರ “ರುಸ್ತುಂ’ ಈಗ ತನ್ನೆಲ್ಲಾ ಕೆಲಸ ಕಾರ್ಯಗಳನ್ನು ಮುಗಿಸಿ ಬಿಡುಗಡೆಯ ಹಂತಕ್ಕೆ ಬಂದಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಮೇ ಕೊನೆಯ ವಾರದಲ್ಲಿ “ರುಸ್ತುಂ’ ತೆರೆಗೆ ಬರಲಿದೆ.
ಒಂದು ವೇಳೆ ಮೇಯಲ್ಲಿ “ರುಸ್ತುಂ’ ತೆರೆಕಂಡರೆ ಒಂದು ತಿಂಗಳ ಅಂತರದಲ್ಲಿ ಶಿವರಾಜಕುಮಾರ್ ಅವರ ಎರಡು ಚಿತ್ರಗಳು ತೆರೆಕಂಡಂತಾಗುತ್ತವೆ. “ರುಸ್ತುಂ’ ಚಿತ್ರ ಫೋಟೋಗಳು ಈಗಾಗಲೇ ಇದೊಂದು ಔಟ್ ಅಂಡ್ ಔಟ್ ಮಾಸ್ ಸಿನಿಮಾ ಎಂಬುದನ್ನು ಸಾಬೀತು ಮಾಡಿವೆ.
ಖಡಕ್ ಲುಕ್ನಲ್ಲಿರುವ ಪೊಲೀಸ್ ಅಧಿಕಾರಿಯಾಗಿ ಶಿವರಾಜಕುಮಾರ್ ಕಾಣಿಸಿಕೊಂಡಿದ್ದಾರೆ. ಜೊತೆಗೆ ಬಾಲಿವುಡ್ನ ವಿವೇಕ್ ಒಬೆರಾಯ್ ಕೂಡಾ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ರಚಿತಾ ರಾಮ್, ಶ್ರದ್ಧಾ ಶ್ರೀನಾಥ್, ಮಯೂರಿ ಸೇರಿದಂತೆ ಅನೇಕರು ನಟಿಸಿದ್ದಾರೆ.
ಚಿತ್ರದ ಟ್ರೇಲರ್ ಏಪ್ರಿಲ್ 14ಕ್ಕೆ ಬಿಡುಗಡೆಯಾಗಲಿದೆ. ಸಾಹಸ ನಿರ್ದೇಶಕ ರವಿವರ್ಮ ಅವರ ನಿರ್ದೇಶನದ ಸಿನಿಮಾ “ರುಸ್ತುಂ’ ಆಗಿರುವುದರಿಂದ ಸಹಜವಾಗಿಯೇ ಹೈವೋಲ್ಟೆಜ್ ಆ್ಯಕ್ಷನ್ ಇರಬಹುದೆಂಬ ನಿರೀಕ್ಷೆ ಮಾಸ್ ಪ್ರಿಯರದು.
ಸದ್ಯ ಶಿವರಾಜಕುಮಾರ್ ಅವರು “ಆನಂದ್’ ಚಿತ್ರದಲ್ಲಿ ನಟಿಸುತ್ತಿದ್ದು, ಆ ಚಿತ್ರವನ್ನು ಆಗಸ್ಟ 9 ರಂದು ತೆರೆಕಾಣಿಸುವ ಉದ್ದೇಶ ಚಿತ್ರತಂಡಕ್ಕಿದೆಯಂತೆ. ಈ ನಡುವೆಯೇ ಸುದೀಪ್ ಅವರ “ಪೈಲ್ವಾನ್’ ಚಿತ್ರ ಕೂಡಾ ಆಗಸ್ಟ್ 09 ರಂದು ಬಿಡುಗಡೆಯಾಗುವ ಸಾಧ್ಯತೆ ಇದೆ.
ಈ ಬಗ್ಗೆ ಟ್ವೀಟ್ ಮಾಡಿರುವ ನಿರ್ದೇಶಕ ಕೃಷ್ಣ, “ವರಮಹಾಲಕ್ಷ್ಮೀ ಹಬ್ಬಕ್ಕೆ ಚಿತ್ರ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ. ಈ ಮೂಲಕ ಮತ್ತೂಮ್ಮೆ ಎರಡು ಸ್ಟಾರ್ ಸಿನಿಮಾಗಳು ಮುಖಾಮುಖೀಯಾಗುತ್ತಾ ಎಂಬ ಪ್ರಶ್ನೆ ಎದ್ದಿದೆ. ಈ ನಡುವೆಯೇ ಮುರಳಿ ನಟಿಸಿರುವ “ಭರಾಟೆ’ ಕೂಡಾ ಆಗಸ್ಟ್ನಲ್ಲಿ ತೆರೆಕಾಣಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Politics: ಟಿಕೆಟ್ ಹಂಚಿಕೆ ಮರುಪರಿಶೀಲಿಸಿ ಎಂದ ವೀಣಾ ಬೆಂಬಲಿಗರಿಗೆ ಸಿಎಂ ತಿರುಗೇಟು
Sullia;ಕೂಜಿಮಲೆ ಪ್ರದೇಶದಲ್ಲಿ ಕಾಣಿಸಿಕೊಂಡಾಕೆ ನಕ್ಸಲ್ ಅಲ್ಲ: ರಾಜಸ್ಥಾನಿ ಮಹಿಳೆ !
Kolkata Raiders ಕೋಚ್ ಬಗ್ಗೆ ಆಟಗಾರ ಡೇವಿಡ್ ವೀಸ್ ಆರೋಪ
India ಆರ್ಥಿಕ ಬೆಳವಣಿಗೆಗೆ ಅನವಶ್ಯಕ ಪ್ರಚಾರ: ರಾಜನ್ ಹೇಳಿಕೆಗೆ ಆಕ್ರೋಶ
North Karnataka; ಹಲವು ಜಿಲ್ಲೆಗಳಲ್ಲಿ ಎರಡು ದಿನ ಉಷ್ಣ ಅಲೆ ಸಾಧ್ಯತೆ